Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಈ ಹವಾಮಾನದಿಂದಾಗಿ ಕಾಡುವ ಶೀತ-ಗಂಟಲು ನೋವಿಗೆ ರಾಮಬಾಣ ಈ ಕಷಾಯ
ಚಳಿಗಾಲದಲ್ಲಿ ಚಂಡಾಮಾರುತ ಪ್ರಭಾವದಿಂದಾಗಿ ಮಳೆಗಾಲದಲ್ಲಿ ಸುರಿಯುವಂತೆ ಮಳೆ ಬೀಳಲಾರಂಭಿಸಿದೆ, ರಾಜ್ಯದ ಹಲವು ಜಿಲ್ಲೆಗಳ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವಾತಾವರಣದಲ್ಲಿನ ಬದಲಾವಣೆ ನಮ್ಮನ್ನು ಬೇಗನೆ ಕಾಯಿಲೆ ಬೀಳಿಸುತ್ತದೆ, ಶೀತ,ಕೆಮ್ಮು, ಜ್ವರ ಈ ಬಗೆಯ ಸಮಸ್ಯೆ ಕಾಡುವುದು ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಕಡೆಗೆ ಗಮನಹರಿಸಬೇಕು. ಕಷಾಯ ಈ ಬಗೆಯ ಸಾಮಾನ್ಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಇದು ಚಳಿಗಾಲ ಕೂಡ ಹೌದು, ಈ ಕಷಾಯ ಚಳಿಯಿಂದಲೂ ನಿಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ, ಬನ್ನಿ ಆ ಕಷಾಯ ಮಾಡುವುದು ಹೇಗೆ ಎಂದು ನೋಡೋಣ:

2 ಚಮಚ ಕೊತ್ತಂಬರಿ ಬೀಜ
1/4 ಚಮಚ ಜೀರಿಗೆ
8-10 ಕಾಳು ಮೆಣಸು
1/ 2 ಚಮಚ ಸೋಂಪು
5-6 ಎಸಳು ಬೆಳ್ಳುಳ್ಳಿ
ಸ್ವಲ್ಪ ಶುಂಠಿ 1/ 2 ಚಮಚ ಅರಿಶಿಣ
ತುಳಸಿ ಎಲೆ 3-4
ಸ್ವಲ್ಪ ಬೆಲ್ಲ
1 ಲೋಟ ಹಾಲು ಅಥವಾ ನೀರು
ಮಾಡುವ ವಿಧಾನ
ನೀವು ಮೊದಲಿಗೆ ಕಷಾಯ ಪುಡಿ ರೆಡಿ ಮಾಡಿ
ಸೋಂಪು, ಜೀರಿಗೆ , ಕಾಳು ಮೆಣಸು, ಕೊತ್ತಂಬರಿ ಬೀಜ ಎಲ್ಲವನ್ನು ರೋಸ್ಟ್ ಮಾಡಿ
ಈಗ ಅವುಗಳನ್ನು ಪುಡಿ ಮಾಡಿ
ಬಳಿಕ ಇದನ್ನು ಹಾಲು ಅಥವಾ ನೀರಿಗೆ ಸೇರಿಸಿ, ಹಾಲಾದಾದರೆ 1 ಲೋಟ ಹಾಲು,
ಒಂದೂವರೆಲೋಟ ನೀರು ಸೇರಿಸಿ, ಇಲ್ಲದಿದ್ದರೆ 2-3 ಲೋಟ ನೀರು ಹಾಕಬಹುದು
ಈಗ ತುಳಸಿ, ಬೆಳ್ಳುಳ್ಳ, ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ.
ನೀವು ಹಾಲು ಸೇರಿಸುವುದಾದರೆ ಕಡಿಮೆ ಉರಿಯಲ್ಲಿ ಕುದಿಸಿ
ನಂತರ ಕಷಾಯವನ್ನು ಬಿಸಿ ಬಿಸಿಯಾಗಿ ಸವಿಯಿರಿ
ಈಕಷಾಯ ಕೆಮ್ಮು, ಶೀತ, ಜ್ವರ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ. ಇದನ್ನು
ದಿನದಲ್ಲಿ ಎರಡು ಹೊತ್ತು ಸೇವಿಸಬಹುದು. '
ಚಳಿಗಾಲದಲ್ಲಿ ಆಗಾಗ ಮಾಡಿ ಕುಡಿಯುವುದು ಒಳ್ಳೆಯದು.
ಈ ಕಷಾಯ ಕೂಡ ಟ್ರೈ ಮಾಡಬಹುದು
ಬೇಕಾಗುವ ಸಾಮಗ್ರಿ
1/2ಕಪ್ ಕೊತ್ತಂಬರಿ ಬೀಜ
1/4 ಕಪ್ ಜೀರಿಗೆ
1 ಚಮಚ ಮೆಂತೆ
2 ಚಮಚ ಕಾಳುಮೆಣಸು
1 ನಟ್ಮಗ್
ಸ್ವಲ್ಪ ಶುಂಠಿ (ಒಣ ಶುಂಠಿ)
3-4 ಏಲಕ್ಕಿ
2 ಲವಂಗ
ಮಾಡುವ ವಿಧಾನ
- ನೀವು ಕೊತ್ತಂಬರಿ ಬೀಜವನ್ನು ರೋಸ್ಟ್ ಮಾಡಿ
- ಅದೇ ರೀತಿ ಜೀರಿಗೆ , ಕಾಳು ಮೆಣಸು, ಸೋಂಪು
- ಏಲಕ್ಕಿ, ಲವಂಗ, ಚಕ್ಕೆ ಇವುಗಳನ್ನು ಸ್ವಲ್ಪ ರೋಸ್ಟ್ ಮಾಡಿ
- ಈಗ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಡಿ
- ಈಗ ಈ ಕಷಾಯ ಪುಡಿಯನ್ನು 1/ 2 ಚಮಚ ತೆಗೆದು ಬಿಸಿ ನೀರು ಅಥವಾ ಹಾಲಿನ ಜೊತೆ ಮಿಕ್ಸ್ ಮಾಡಿ ಸವಿಯಿರಿ
ಕಷಾಯವನ್ನು ನೀವು ಮಲಗುವ ಅರ್ಧ ಗಂಟೆಯ ಮುನ್ನ ತೆಗೆದುಕೊಳ್ಳಿ
ಬೆಳಗ್ಗೆ ಟೀ ಬದಲಿಗೆ ಇದನ್ನು ಸೇವಿಸಬಹುದು.
ಸೂಚನೆ: ಕಷಾಯವನ್ನು ಹೆಚ್ಚು ಬಳಸಬೇಡಿ, ದಿನದಲ್ಲಿ ಒಂದು ಅಥವಾ ಎರಡು ಲೋಟ ಸೇವಿಸಿ.



Click it and Unblock the Notifications