Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಈ ಹವಾಮಾನದಿಂದಾಗಿ ಕಾಡುವ ಶೀತ-ಗಂಟಲು ನೋವಿಗೆ ರಾಮಬಾಣ ಈ ಕಷಾಯ
ಚಳಿಗಾಲದಲ್ಲಿ ಚಂಡಾಮಾರುತ ಪ್ರಭಾವದಿಂದಾಗಿ ಮಳೆಗಾಲದಲ್ಲಿ ಸುರಿಯುವಂತೆ ಮಳೆ ಬೀಳಲಾರಂಭಿಸಿದೆ, ರಾಜ್ಯದ ಹಲವು ಜಿಲ್ಲೆಗಳ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವಾತಾವರಣದಲ್ಲಿನ ಬದಲಾವಣೆ ನಮ್ಮನ್ನು ಬೇಗನೆ ಕಾಯಿಲೆ ಬೀಳಿಸುತ್ತದೆ, ಶೀತ,ಕೆಮ್ಮು, ಜ್ವರ ಈ ಬಗೆಯ ಸಮಸ್ಯೆ ಕಾಡುವುದು ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಕಡೆಗೆ ಗಮನಹರಿಸಬೇಕು. ಕಷಾಯ ಈ ಬಗೆಯ ಸಾಮಾನ್ಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಇದು ಚಳಿಗಾಲ ಕೂಡ ಹೌದು, ಈ ಕಷಾಯ ಚಳಿಯಿಂದಲೂ ನಿಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ, ಬನ್ನಿ ಆ ಕಷಾಯ ಮಾಡುವುದು ಹೇಗೆ ಎಂದು ನೋಡೋಣ:

2 ಚಮಚ ಕೊತ್ತಂಬರಿ ಬೀಜ
1/4 ಚಮಚ ಜೀರಿಗೆ
8-10 ಕಾಳು ಮೆಣಸು
1/ 2 ಚಮಚ ಸೋಂಪು
5-6 ಎಸಳು ಬೆಳ್ಳುಳ್ಳಿ
ಸ್ವಲ್ಪ ಶುಂಠಿ 1/ 2 ಚಮಚ ಅರಿಶಿಣ
ತುಳಸಿ ಎಲೆ 3-4
ಸ್ವಲ್ಪ ಬೆಲ್ಲ
1 ಲೋಟ ಹಾಲು ಅಥವಾ ನೀರು
ಮಾಡುವ ವಿಧಾನ
ನೀವು ಮೊದಲಿಗೆ ಕಷಾಯ ಪುಡಿ ರೆಡಿ ಮಾಡಿ
ಸೋಂಪು, ಜೀರಿಗೆ , ಕಾಳು ಮೆಣಸು, ಕೊತ್ತಂಬರಿ ಬೀಜ ಎಲ್ಲವನ್ನು ರೋಸ್ಟ್ ಮಾಡಿ
ಈಗ ಅವುಗಳನ್ನು ಪುಡಿ ಮಾಡಿ
ಬಳಿಕ ಇದನ್ನು ಹಾಲು ಅಥವಾ ನೀರಿಗೆ ಸೇರಿಸಿ, ಹಾಲಾದಾದರೆ 1 ಲೋಟ ಹಾಲು,
ಒಂದೂವರೆಲೋಟ ನೀರು ಸೇರಿಸಿ, ಇಲ್ಲದಿದ್ದರೆ 2-3 ಲೋಟ ನೀರು ಹಾಕಬಹುದು
ಈಗ ತುಳಸಿ, ಬೆಳ್ಳುಳ್ಳ, ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ.
ನೀವು ಹಾಲು ಸೇರಿಸುವುದಾದರೆ ಕಡಿಮೆ ಉರಿಯಲ್ಲಿ ಕುದಿಸಿ
ನಂತರ ಕಷಾಯವನ್ನು ಬಿಸಿ ಬಿಸಿಯಾಗಿ ಸವಿಯಿರಿ
ಈಕಷಾಯ ಕೆಮ್ಮು, ಶೀತ, ಜ್ವರ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ. ಇದನ್ನು
ದಿನದಲ್ಲಿ ಎರಡು ಹೊತ್ತು ಸೇವಿಸಬಹುದು. '
ಚಳಿಗಾಲದಲ್ಲಿ ಆಗಾಗ ಮಾಡಿ ಕುಡಿಯುವುದು ಒಳ್ಳೆಯದು.
ಈ ಕಷಾಯ ಕೂಡ ಟ್ರೈ ಮಾಡಬಹುದು
ಬೇಕಾಗುವ ಸಾಮಗ್ರಿ
1/2ಕಪ್ ಕೊತ್ತಂಬರಿ ಬೀಜ
1/4 ಕಪ್ ಜೀರಿಗೆ
1 ಚಮಚ ಮೆಂತೆ
2 ಚಮಚ ಕಾಳುಮೆಣಸು
1 ನಟ್ಮಗ್
ಸ್ವಲ್ಪ ಶುಂಠಿ (ಒಣ ಶುಂಠಿ)
3-4 ಏಲಕ್ಕಿ
2 ಲವಂಗ
ಮಾಡುವ ವಿಧಾನ
- ನೀವು ಕೊತ್ತಂಬರಿ ಬೀಜವನ್ನು ರೋಸ್ಟ್ ಮಾಡಿ
- ಅದೇ ರೀತಿ ಜೀರಿಗೆ , ಕಾಳು ಮೆಣಸು, ಸೋಂಪು
- ಏಲಕ್ಕಿ, ಲವಂಗ, ಚಕ್ಕೆ ಇವುಗಳನ್ನು ಸ್ವಲ್ಪ ರೋಸ್ಟ್ ಮಾಡಿ
- ಈಗ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಡಿ
- ಈಗ ಈ ಕಷಾಯ ಪುಡಿಯನ್ನು 1/ 2 ಚಮಚ ತೆಗೆದು ಬಿಸಿ ನೀರು ಅಥವಾ ಹಾಲಿನ ಜೊತೆ ಮಿಕ್ಸ್ ಮಾಡಿ ಸವಿಯಿರಿ
ಕಷಾಯವನ್ನು ನೀವು ಮಲಗುವ ಅರ್ಧ ಗಂಟೆಯ ಮುನ್ನ ತೆಗೆದುಕೊಳ್ಳಿ
ಬೆಳಗ್ಗೆ ಟೀ ಬದಲಿಗೆ ಇದನ್ನು ಸೇವಿಸಬಹುದು.
ಸೂಚನೆ: ಕಷಾಯವನ್ನು ಹೆಚ್ಚು ಬಳಸಬೇಡಿ, ದಿನದಲ್ಲಿ ಒಂದು ಅಥವಾ ಎರಡು ಲೋಟ ಸೇವಿಸಿ.



Click it and Unblock the Notifications