Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಈ ಹವಾಮಾನದಿಂದಾಗಿ ಕಾಡುವ ಶೀತ-ಗಂಟಲು ನೋವಿಗೆ ರಾಮಬಾಣ ಈ ಕಷಾಯ
ಚಳಿಗಾಲದಲ್ಲಿ ಚಂಡಾಮಾರುತ ಪ್ರಭಾವದಿಂದಾಗಿ ಮಳೆಗಾಲದಲ್ಲಿ ಸುರಿಯುವಂತೆ ಮಳೆ ಬೀಳಲಾರಂಭಿಸಿದೆ, ರಾಜ್ಯದ ಹಲವು ಜಿಲ್ಲೆಗಳ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವಾತಾವರಣದಲ್ಲಿನ ಬದಲಾವಣೆ ನಮ್ಮನ್ನು ಬೇಗನೆ ಕಾಯಿಲೆ ಬೀಳಿಸುತ್ತದೆ, ಶೀತ,ಕೆಮ್ಮು, ಜ್ವರ ಈ ಬಗೆಯ ಸಮಸ್ಯೆ ಕಾಡುವುದು ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಕಡೆಗೆ ಗಮನಹರಿಸಬೇಕು. ಕಷಾಯ ಈ ಬಗೆಯ ಸಾಮಾನ್ಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಇದು ಚಳಿಗಾಲ ಕೂಡ ಹೌದು, ಈ ಕಷಾಯ ಚಳಿಯಿಂದಲೂ ನಿಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ, ಬನ್ನಿ ಆ ಕಷಾಯ ಮಾಡುವುದು ಹೇಗೆ ಎಂದು ನೋಡೋಣ:

2 ಚಮಚ ಕೊತ್ತಂಬರಿ ಬೀಜ
1/4 ಚಮಚ ಜೀರಿಗೆ
8-10 ಕಾಳು ಮೆಣಸು
1/ 2 ಚಮಚ ಸೋಂಪು
5-6 ಎಸಳು ಬೆಳ್ಳುಳ್ಳಿ
ಸ್ವಲ್ಪ ಶುಂಠಿ 1/ 2 ಚಮಚ ಅರಿಶಿಣ
ತುಳಸಿ ಎಲೆ 3-4
ಸ್ವಲ್ಪ ಬೆಲ್ಲ
1 ಲೋಟ ಹಾಲು ಅಥವಾ ನೀರು
ಮಾಡುವ ವಿಧಾನ
ನೀವು ಮೊದಲಿಗೆ ಕಷಾಯ ಪುಡಿ ರೆಡಿ ಮಾಡಿ
ಸೋಂಪು, ಜೀರಿಗೆ , ಕಾಳು ಮೆಣಸು, ಕೊತ್ತಂಬರಿ ಬೀಜ ಎಲ್ಲವನ್ನು ರೋಸ್ಟ್ ಮಾಡಿ
ಈಗ ಅವುಗಳನ್ನು ಪುಡಿ ಮಾಡಿ
ಬಳಿಕ ಇದನ್ನು ಹಾಲು ಅಥವಾ ನೀರಿಗೆ ಸೇರಿಸಿ, ಹಾಲಾದಾದರೆ 1 ಲೋಟ ಹಾಲು,
ಒಂದೂವರೆಲೋಟ ನೀರು ಸೇರಿಸಿ, ಇಲ್ಲದಿದ್ದರೆ 2-3 ಲೋಟ ನೀರು ಹಾಕಬಹುದು
ಈಗ ತುಳಸಿ, ಬೆಳ್ಳುಳ್ಳ, ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ.
ನೀವು ಹಾಲು ಸೇರಿಸುವುದಾದರೆ ಕಡಿಮೆ ಉರಿಯಲ್ಲಿ ಕುದಿಸಿ
ನಂತರ ಕಷಾಯವನ್ನು ಬಿಸಿ ಬಿಸಿಯಾಗಿ ಸವಿಯಿರಿ
ಈಕಷಾಯ ಕೆಮ್ಮು, ಶೀತ, ಜ್ವರ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ. ಇದನ್ನು
ದಿನದಲ್ಲಿ ಎರಡು ಹೊತ್ತು ಸೇವಿಸಬಹುದು. '
ಚಳಿಗಾಲದಲ್ಲಿ ಆಗಾಗ ಮಾಡಿ ಕುಡಿಯುವುದು ಒಳ್ಳೆಯದು.
ಈ ಕಷಾಯ ಕೂಡ ಟ್ರೈ ಮಾಡಬಹುದು
ಬೇಕಾಗುವ ಸಾಮಗ್ರಿ
1/2ಕಪ್ ಕೊತ್ತಂಬರಿ ಬೀಜ
1/4 ಕಪ್ ಜೀರಿಗೆ
1 ಚಮಚ ಮೆಂತೆ
2 ಚಮಚ ಕಾಳುಮೆಣಸು
1 ನಟ್ಮಗ್
ಸ್ವಲ್ಪ ಶುಂಠಿ (ಒಣ ಶುಂಠಿ)
3-4 ಏಲಕ್ಕಿ
2 ಲವಂಗ
ಮಾಡುವ ವಿಧಾನ
- ನೀವು ಕೊತ್ತಂಬರಿ ಬೀಜವನ್ನು ರೋಸ್ಟ್ ಮಾಡಿ
- ಅದೇ ರೀತಿ ಜೀರಿಗೆ , ಕಾಳು ಮೆಣಸು, ಸೋಂಪು
- ಏಲಕ್ಕಿ, ಲವಂಗ, ಚಕ್ಕೆ ಇವುಗಳನ್ನು ಸ್ವಲ್ಪ ರೋಸ್ಟ್ ಮಾಡಿ
- ಈಗ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಡಿ
- ಈಗ ಈ ಕಷಾಯ ಪುಡಿಯನ್ನು 1/ 2 ಚಮಚ ತೆಗೆದು ಬಿಸಿ ನೀರು ಅಥವಾ ಹಾಲಿನ ಜೊತೆ ಮಿಕ್ಸ್ ಮಾಡಿ ಸವಿಯಿರಿ
ಕಷಾಯವನ್ನು ನೀವು ಮಲಗುವ ಅರ್ಧ ಗಂಟೆಯ ಮುನ್ನ ತೆಗೆದುಕೊಳ್ಳಿ
ಬೆಳಗ್ಗೆ ಟೀ ಬದಲಿಗೆ ಇದನ್ನು ಸೇವಿಸಬಹುದು.
ಸೂಚನೆ: ಕಷಾಯವನ್ನು ಹೆಚ್ಚು ಬಳಸಬೇಡಿ, ದಿನದಲ್ಲಿ ಒಂದು ಅಥವಾ ಎರಡು ಲೋಟ ಸೇವಿಸಿ.



Click it and Unblock the Notifications
