Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
1 ಕಪ್ ಗೋಧಿ ಹಿಟ್ಟಿನಲ್ಲಿ ಶಂಕರಪಾಲಿ ಮಾಡಿ..! 15 ನಿಮಿಷದಲ್ಲಿ ತಿಂಡಿ ರೆಡಿ
ಮನೆಯಲ್ಲಿ ಮಕ್ಕಳಿಗೆ ಇಲ್ಲವೆ ಅತಿಥಿಗಳು, ಸಂಬಂಧಿಕರು ಬಂದಾಗ ಅವರಿಗೆ ಸವಿಯಲು ಕೊಡಲು ತಿಂಡಿ ಯಾವುದಾದರು ಇದ್ದರೆ ಉತ್ತಮ. ಇದಕ್ಕಾಗಿಯೇ ನೀವು ಅಂಗಡಿ, ಬೇಕರಿಯಿಂದ ಯಾವ ತಿಂಡಿ ಬೇಕಾದರು ತಂದು ಸವಿಯಲು ನೀಡಬಹುದು. ಆದರೆ ನೀವೆ ಮನೆಯಲ್ಲಿ ಮಾಡಿದ ತಿಂಡಿ ಹೇಗೆ?
ಮನೆಯಲ್ಲಿ ನೀವು ಫ್ರೀ ಇದ್ದಾಗ ಯಾವುದಾದರು ತಿಂಡಿ ಅಥವಾ ಸ್ನ್ಯಾಕ್ಸ್ ಮಾಡುವ ಉದ್ದೇಶ ನಿಮ್ಮದಾಗಿದ್ದರೆ ಶಂಕರಪಾಲಿ ಮಾಡಿ ನೋಡಿ. ಹೌದು ಬೇಕರಿಯಲ್ಲಿ ವಿವಿಧ ರೀತಿಯ ಶಂಕರಪಾಲಿ ನೀವು ನೋಡಿರುತ್ತೀರಿ. ಆದ್ರೆ ಮನೆಯಲ್ಲಿ ಗೋಧಿ ಹಿಟ್ಟು ಬಳಸಿ ಶಂಕರಪಾಲಿ ಮಾಡಿದ್ದೀರಾ?

ಗೋಧಿ ಹಿಟ್ಟಿನಲ್ಲಿ ಅದ್ಭುತ ರುಚಿಯ ಶಂಕರಪಾಲಿ ಮಾಡಬಹುದು. ಹಾಗಾದ್ರೆ ಶಂಕರಪಾಲಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಗೋಧಿ ಹಿಟ್ಟಿನ ಶಂಕರಪಾಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ತೆಗೆದುಕೊಳ್ಳುತ್ತೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶಂಕರಪಾಲಿ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು - 1 ಕಪ್
- ತುಪ್ಪ- ಕಾಲು ಕಪ್
- ಉಪ್ಪು
- ಸಕ್ಕರೆ - ಅರ್ಧ ಕಪ್
- ಏಲಕ್ಕಿ ಪುಡಿ
- ಎಣ್ಣೆ
ಗೋಧಿ ಹಿಟ್ಟಿನ ಶಂಕರಪಾಲಿ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ತೆಗೆದುಕೊಂಡು ಅದಕ್ಕೆ ಕಾಲು ಕಪ್ ಸಕ್ಕರೆ, ಕಾಲು ಕಪ್ ತುಪ್ಪ ಹಾಕಿ ಕುದಿಯಲು ಬಿಡಬೇಕು. ತಳ ಹಿಡಿಯದಂತೆ ನಿಧಾನ ಉರಿಯಲ್ಲಿ ಇಟ್ಟು ತಿರುಗಿಸುತ್ತಾ ಇರಿ. ಕಾಲು ಚಮಚ ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಕುದಿಸಿಕೊಳ್ಳಿ.
ಈಗ ಒಂದು ಬೌಲ್ನಲ್ಲಿ ಗೋಧಿ ಹಿಟ್ಟು ತೆಗೆದುಕೊಂಡು ಅದಕ್ಕೆ ಒಲೆ ಮೇಲಿರುವ ಪದಾರ್ಥವನ್ನು ಸೇರಿಸಿಕೊಳ್ಳಿ. ಬಳಿಕ ಚೆನ್ನಾಗಿ ಕಲಸಿಕೊಳ್ಳಿ. ಹೋಳಿಗೆ ಹೂರ್ಣದಂತೆ ಆಗುವವರೆಗೂ ಚೆನ್ನಾಗಿ ಕಲಸಿಕೊಳ್ಳಿ. ಚಪಾತಿ ಹಿಟ್ಟು ಅಥವಾ ಹೂರ್ಣದಂತೆ ಆಗುತ್ತದೆ. ನಂತರ ಈ ಹಿಟ್ಟನ್ನು ಚಪಾತಿ ಮಣೆಯಲ್ಲಿ ಲಟ್ಟಿಸಿಕೊಳ್ಳಿ. ದೊಡ್ಡ ರೊಟ್ಟಿಯಂತೆ ಲಟ್ಟಿಸಿಕೊಳ್ಳಿ. ನಂತರ ಅಂಚನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
ನಂತರ ನೇರವಾಗಿ ಸಾಲುಗಳ ಹಾಕಿ ಚಚೌಕವಾಗಿ ಸಣ್ಣ ಸಣ್ಣ ಚೌಕ ಬರುವಂತೆ ಕತ್ತರಿಸಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡಿ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ಬಳಿಕ ಈ ಚಚೌಕವಾದ ಸಣ್ಣ ಹಿಟ್ಟಿನ ಉಂಡೆಯನ್ನ ಎಣ್ಣೆಗೆ ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ ಸುಮಾರು 15 ನಿಮಿಷ ಕರಿಯಬೇಕು. ಆಗಾಗ ಕೈಯಾಡಿಸುತ್ತಿದ್ದರೆ ಆಯಿತು. ಇದು ಗಾಢ ಕಾಫಿ ಬಣ್ಣಕ್ಕೆ ತಿರುಗಿದರೆ ಕರಿದು ಮುಗಿದಿದೆ ಎಂದರ್ಥ. ಇಷ್ಟಾದರೆ ನಿಮ್ಮ ಮುಂದೆ ಕರಿದ ಶಂಕರಪಾಲಿ ರೆಡಿಯಾಗುತ್ತದೆ.
ನೀವು ಸಹ ಒಮ್ಮೆ ಮನೆಯಲ್ಲಿ ಫ್ರೀ ಇದ್ದಾಗ ಈ ತಿಂಡಿ ಮಾಡಿ ನೋಡಿ. ಒಂದು ಬಾಕ್ಸ್ನಲ್ಲಿ ಹಾಕಿ ಇಟ್ಟರೆ ಸುಮಾರು 1 ತಿಂಗಳ ಕಾಲ ಇಟ್ಟು ಸವಿಯಬಹುದು. ಮನೆಯಲ್ಲಿ ಟೈ ಪಾಸ್ ಮಾಡುವಾಗ, ಟಿವಿ ನೋಡುವಾಗ ಸವಿಯಲು ಸಖತ್ ರುಚಿ ನೀಡಲಿದೆ.



Click it and Unblock the Notifications