Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಈ ಟೊಮೆಟೊ-ಬೆಳ್ಳುಳ್ಳಿ ರಸಂ ಘಂ ಎಂಬ ಸುವಾಸನೆ ಜೊತೆಗೆ ಸೂಪರ್ ರುಚಿಯಾಗಿರುತ್ತದೆ
Recipes
oi-Reena TK
Posted By: Reena TK
ಈ ಟೊಮೆಟೊ ರಸಂನ ಘಂ ಎನ್ನುವ ಸುವಾಸನೆಯೇ ನಿಮ್ಮ ಹಸಿವು ಹೆಚ್ಚಿಸುತ್ತದೆ, ಇನ್ನು ಸ್ವಲ್ಪ ರುಚಿ ನೋಡಿದರೆ ಆಹಾ! ಎಂದು ಅನ್ನ ತಟ್ಟೆಯಲ್ಲಿ ಹಾಕಿರುವ ಅನ್ನ ಮುಳುಗುವಷ್ಟು ಈ ಟೊಮೆಟೊ ರಸಂ ಹಾಕಿಕೊಳ್ಳುತ್ತೀರಿ, ಅಷ್ಟೊಂದು ರುಚಿಯಾಗಿರುತ್ತದೆ. ಈ ಟೊಮೆಟೊ ಬೆಳ್ಳುಳ್ಳು ರಸಂ ಮಾಡಲು ರಸಂ ಪೌಡರ್ ಸೀಕ್ರೆಟ್ ಕೂಡ ನೀಡಿದ್ದೇವೆ, ಬನ್ನಿ ಟೊಮೆಟೊ ಬೆಳ್ಳುಳ್ಳಿ ರಸಂ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
3-4 ಟೊಮೆಟೊ
1/2 ಚಮಚ ಅರಿಶೀಣ ಪುಡಿ
2 ಬೆಳ್ಳುಳ್ಳಿ (10-15 ಎಸಳು)
ರುಚಿಗೆ ತಕ್ಕ ಉಪ್ಪು
2-3 ಕಪ್ ನೀರು
1/2 ಚಮಚ ಹುಣಸೆ ರಸ
ಚಿಕ್ಕ ತುಂಡು ಬೆಲ್ಲ
ಒಗ್ಗರಣೆಗೆ
ಎಣ್ಣೆ 1 ಚಮಚ
ಸ್ವಲ್ಪ ಸಾಸಿವೆ
1/4 ಚಮಚ ಜೀರಿಗೆ
2 ಒಣ ಮೆಣಸು (ಖಾರ ಕಡಿಮೆ ಇರುವ ಮೆಣಸು ಬಳಸಿ)
ಸ್ವಲ್ಪ ಕರಿಬೇವು
ಚಿಟಿಕೆಯಷ್ಟು ಇಂಗು
ರಸಂ ಪೌಡರ್ಗೆ
1/4 ಚಮಚ ಸೋಂಪು
8-10 ಕಾಳು ಮೆಣಸು (ಖಾರ ಕಮ್ಮಿ ಬೇಕೆಂದರೆ ಕಡಿಮೆ ಬಳಸಬಹುದು)
1/2 ಚಮಚ ಜೀರಿಗೆ
ಒಂದು ಒಣ ಮೆಣಸು
ಈ ಸಾಮಗ್ರಿ ಹುರಿದು ಪೌಡರ್ ಮಾಡಿ.
ಮಾಡುವ ವಿಧಾನ
- ಎಣ್ಣೆ ಕಾಯಿಸಿ, ಎಣ್ಣೆ ಬಿಸಿಯಾದಾಗ ಇಂಗು ಹಾಕಿ, ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ ನಂತರ ಕರಿಬೇವು ಹಾಕಿ, ಒಣ ಮೆಣಸು ಮುರಿದು ಹಾಕಿ, ಬಳಿಕ ಬೆಳ್ಳುಳ್ಳಿ ಹಾಕಿ, ಬೆಳ್ಳುಳ್ಳಿ ಫ್ರೈಯಾದಗ ಅದರಿಂದ ಸುವಾಸನೆ ಬರುತ್ತದೆ, ಆವಾಗ ಟೊಮೆಟೊ ಹಾಕಿ
- ಟೊಮೆಟೊ ಮೆತ್ತಗಾದ ಮೇಲೆ, ಅರಿಶಿಣ ಪುಡಿ, ಹುಣಸೆ ರಸ, ರುಚಿಗೆ ತಕ್ಕ ಉಪ್ಪು ಸೇರಿಸಿ
- ಬೆಲ್ಲ ಸೇರಿಸಿ, ರಸಂ ಪುಡಿ ಹಾಕಿ ಮಿಕ್ಸ್ ಮಾಡಿ
- ನಂತರ ನಿಮಗೆ ರಸಂ ಎಷ್ಟು ಬೇಕೋ ಅಷ್ಟು ನೀರು ಸೇರಿಸಿ (3-4 ಜನರಿಗೆ 2 ಕಪ್ ನೀರು ಹಾಕಿದರೆ ಸಾಕು)
- ಈಗ ಟೊಮೆಟೊ ರಸಂ 5-7 ನಿಮಿಷ ಕುದಿಸಿ, ಉಪ್ಪು ಖಾರ ಎಲ್ಲಾ ಸರಿಯಾಗಿ ಇದೆಯೇ ಎಂದು ನೋಡಿ
- ನಂತರ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ ಉರಿಯಿಂದ ಇಳಿಸಿದರೆ ಟೊಮೆಟೊ-ಬೆಳ್ಳುಳ್ಳಿ ರಸಂ ರೆಡಿ.
ಇತರ ಸಲಹೆ:
- ನೀವು ಬೇಕಿದ್ದರೆ ಈರುಳ್ಳಿ ಸೇರಿಸಬಹುದು, ಆದರೆ ಈರುಳ್ಳಿ ಸೇರಿಸದೆ ಈ ರಸಂ ಮಾಡಿದರೆ 2-3 ದಿನ ಇಡಬಹುದು.
- ಬೆಳ್ಳುಳ್ಳಿ-ಟೊಮೆಟೊ, ಕಾಳು ಮೆಣಸು ಇತರ ಮಸಾಲೆ ಸಾಮಗ್ರಿ ಇವೆಲ್ಲಾ ಗಂಟಲು ಕೆರೆತ, ಕೆಮ್ಮು ಈ ಬಗೆಯ ಸಮಸ್ಯೆ ಇದ್ದರೆ ಹೋಗಲಾಡಿಸಲು ಸಹಕಾರಿ.
- ಕೆಲ ದೇವಾಲಯದಲ್ಲಿ ನೀಡುವ ರಸಂ ಕೈ ತೊಳೆದರೂ ಅದರ ಘಂ ಎನ್ನುವ ಸುವಾಸನೆ ಹೋಗುವುದಿಲ್ಲ, ಅದರಂತೆ ಈ ರಸಂ ತಿಂದ ಮೇಲೆ ಕೈ ತೊಳೆದರೂ ಅದರ ಸುವಾಸನೆ ಹಾಗೆಯೇ ಇರುತ್ತದೆ, ಅಷ್ಟೊಂದು ಚೆನ್ನಾಗಿ ಇರುತ್ತದೆ.
- ನಿಮಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕೆಂದರೆ ಸಾಮಗ್ರಿ ಪ್ರಮಾಣ ಹೆಚ್ಚಿಸಿದರೆ ಸಾಕು, ಎಷ್ಟು ಜನರಿಗೆ ಬೇಕಾದರೂ ಈ ರಸಂ ರೆಡಿ ಮಾಡಬಹುದು.
- ನೀವು ಹಬ್ಬದ ಅಡುಗೆ ಮಾಡಿದಾಗ ಸ್ವಲ್ಪ ಇಂಗು ಕೂಡ ಸೇರಿಸಿರುವುದರಿಂದ ಅಜೀರ್ಣ ಈ ಬಗೆಯ ಸಮಸ್ಯೆಯೂ ಇರಲ್ಲ.
Comments
[ of 5 - Users]
Story first published: Tuesday, December 3, 2024, 11:38 [IST]
Other articles published on Dec 3, 2024



Click it and Unblock the Notifications