Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಹಾಶಿವರಾತ್ರಿಗೆ ಮಾಡಿ ಕಡ್ಲೆ ತಂಬಿಟ್ಟು: ಬಹಳ ಸುಲಭದ ಸಿಹಿ ತಿಂಡಿ ಇದು!
ಶಿವರಾತ್ರಿ ಹಬ್ಬ ಆಗಮಿಸಿದೆ. ಶಿವನ ಆಶೀರ್ವಾದ ಪಡೆಯಲು ಈ ಸಮಯದಲ್ಲಿ ದೇವಾಲಯ ಭೇಟಿ ಮಾಡುವುದು, ಮನೆಯಲ್ಲಿ ಶಿವನ ಪೂಜೆ ಮಾಡುವುದು ಸಾಮಾನ್ಯ. ಈ ವಿಶೇಷ ಸಂದರ್ಭದಲ್ಲಿ ಶಿವನಿಗೆ ವಿಶೇಷ ಪೂಜೆಯಿಂದ ನಿಮಗೆ ಅದೃಷ್ಟ ಒಲಿಯಲಿದೆ. ಹಾಗೆ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವ ಸಮಯವೂ ಇದಾಗುತ್ತದೆ. ಹಾಗೆ ಈ ಹಬ್ಬದ ಸಮಯದಲ್ಲಿ ನಾವು ವಿಶೇಷ ರೀತಿಯಲ್ಲಿ ಮಾಡುವಂತಹ ತಂಬಿಟ್ಟು ಮಾಡುವ ಕುರಿತು ತಿಳಿಯೋಣ. ಅದ್ರಲ್ಲೂ ಹಬ್ಬಕ್ಕೆ ಮಾಡುವ ವಿಭಿನ್ನ ರುಚಿಯ ಕಡ್ಲೆ ತಂಬಿಟ್ಟು ಮಾಡೋದು ಹೇಗೆ ಅನ್ನೋದು ನಿಮಗೆ ಗೊತ್ತಾ?
ನೀವು ಸಹ ಅಂಗಡಿಗಳಲ್ಲಿ ಸಿಗುವ ವಿವಿಧ ಬಗೆಯ ತಂಬಿಟ್ಟು ಉಂಡೆಯನ್ನು ಸವಿದಿರುತ್ತೀರಿ. ಅದ್ರಲ್ಲೂ ಹಬ್ಬಗಳಲ್ಲಿ ನೀವು ಮನೆಯಲ್ಲೂ ಮಾಡಿ ಸವಿದಿರುತ್ತೀರಿ. ಉತ್ತರ ಕರ್ನಾಟಕ ಭಾಗದಲ್ಲಿ ಈ ತಂಬಿಟ್ಟು ಉಂಡೆ ಬಹಳ ಫೇಮಸ್ ಖಾದ್ಯಗಳಲ್ಲಿ ಒಂದು. ಯಾವುದೇ ಹಬ್ಬವಾಗಿದ್ದರೂ ಈ ತಂಬಿಟ್ಟು ಉಂಡೆ ಮಾಡಿ ಸವಿದಿರುತ್ತಾರೆ. ಹಾಗೆ ಬಗೆ ಬಗೆಯ ತಂಬಿಟ್ಟು ಸವಿಯೋದು ಸಹ ಇದೆ.
ಈ ತಂಬಿಟ್ಟನ್ನು ನೀವು ಬಹಳ ಸಮಯ ಇಟ್ಟು ಸವಿಯಬಹುದು, ಬಹುಬೇಗ ಹಾಳಾಗುವುದೂ ಇಲ್ಲ. ಹೀಗಾಗಿ ಮನೆಯಲ್ಲಿ ಒಮ್ಮೆ ಮಾಡಿಟ್ಟು ಹಲವು ದಿನಗಳ ಕಾಲ ಸವಿಯೋದು ನೋಡಬಹುದು. ಮಕ್ಕಳಿಗೂ ಇದು ಬಹಳ ಇಷ್ಟವಾಗುವ ತಿಂಡಿ. ಇದಲ್ಲದೆ ಮಾಡುವುದು ಕೂಡ ಬಹಳ ಸುಲಭ. ಹೀಗಾಗಿ ನಾವಿಂದು ಈ ಹಬ್ಬದ ಸಮಯದಲ್ಲಿ ಕೂಡ ಈ ಕಡಲೆ ತಂಬಿಟ್ಟು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಕಡ್ಲೆ ತುಂಬಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹುರಿಗಡಲೆ
- ಕಡಲೆ ಬೀಜ
- ಏಲಕ್ಕಿ
- ಎಣ್ಣೆ
- ಎಳ್ಳು
- ಬೆಲ್ಲ
ಕಡ್ಲೆ ತುಂಬಿಟ್ಟು ಮಾಡುವ ವಿಧಾನವೇನು?
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಕಪ್ ಹುರಿಗಡಲೆ ಹಾಕಿ 1 ನಿಮಿಷ ಬಿಸಿ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿ ಹುರಿಗಡಲೆಯನ್ನು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಕಾಲು ಚಮಚ ಏಲಕ್ಕಿ ಬೀಜ ಸಹ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡ ಪುಡಿಯನ್ನು ತೆಗೆದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಒಂದು ಕಪ್ ಕಡಲೆ ಬೀಜ ಹಾಕಿ ಹುರಿದುಕೊಳ್ಳಿ.
ಈಗ ಹುರಿದ ಕಾಳುಗಳಿಂದ ಸಿಪ್ಪೆ ಬೇರ್ಪಡಿಸಬೇಕು ಯಾವ ವಿಧಾನವನ್ನಾದರು ಬಳಸಿ ಚಿಪ್ಪೆ ತೆಗೆದು ಕಾಳನ್ನು ಒಡೆದುಕೊಳ್ಳಿ. ಈಗ ಈ ಕಡಲೆಯನ್ನು ಮಿಕ್ಸಿ ಜಾರ್ಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಅನಂತರ ಈ ಪುಡಿಯನ್ನು ಸಹ ಹುರಿಗಡಲೆ ಪುಡಿಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ. ಈಗ ಮತ್ತೆ ಬಾಣಲೆಗೆ ಅರ್ಧ ಕಪ್ ಬಿಳಿ ಎಳ್ಳು ಹಾಕಿ 2 ನಿಮಿಷ ಹುರಿದು ಇದನ್ನು ಸಹ ಹಿಟ್ಟಿನೊಂದಿಗೆ ಸೇರಿಸಿ ಮಿಶ್ರಣ ಮಾಡಿ.
ಈಗ 1 ಕಪ್ ಕೊಬ್ಬರಿ ತುರಿ ಹಾಕಿ ಮಿಶ್ರಣ ಮಾಡಿ. ಈಗ ಮತ್ತೆ ಬಾಣಲೆಗೆ ಒಂದೂವರೆ ಕಪ್ ಬೆಲ್ಲ ಹಾಕಿ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಚೆನ್ನಾಗಿ ಕರಗುವರೆಗೂ ತಿರುಗಿಸಿಕೊಂಡು ಬಳಿಕ ಜರಡಿ ಹಿಡಿದು ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ. ಎಷ್ಟು ಅಗತ್ಯವೋ ಅಷ್ಟು ಬೆಲ್ಲದ ನೀರು ಹಾಕಿ ಉಂಡೆ ಕಟ್ಟಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ.
ಹಿಟ್ಟು ಗಟ್ಟಿಯಾದರೆ ಮತ್ತೆ ಬೆಲ್ಲದ ನೀರು ಹಾಕಿಕೊಂಡು ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ತಂಬಿಟ್ಟು ಉಂಡೆ ಸಿದ್ದವಾಗುತ್ತೆ. ಈ ಹಬ್ಬದಲ್ಲಿ ನೀವು ಸಹ ಮಾಡಿ ಸವಿದು ನೋಡಿ.



Click it and Unblock the Notifications
