Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಹಾಶಿವರಾತ್ರಿಗೆ ಮಾಡಿ ಕಡ್ಲೆ ತಂಬಿಟ್ಟು: ಬಹಳ ಸುಲಭದ ಸಿಹಿ ತಿಂಡಿ ಇದು!
ಶಿವರಾತ್ರಿ ಹಬ್ಬ ಆಗಮಿಸಿದೆ. ಶಿವನ ಆಶೀರ್ವಾದ ಪಡೆಯಲು ಈ ಸಮಯದಲ್ಲಿ ದೇವಾಲಯ ಭೇಟಿ ಮಾಡುವುದು, ಮನೆಯಲ್ಲಿ ಶಿವನ ಪೂಜೆ ಮಾಡುವುದು ಸಾಮಾನ್ಯ. ಈ ವಿಶೇಷ ಸಂದರ್ಭದಲ್ಲಿ ಶಿವನಿಗೆ ವಿಶೇಷ ಪೂಜೆಯಿಂದ ನಿಮಗೆ ಅದೃಷ್ಟ ಒಲಿಯಲಿದೆ. ಹಾಗೆ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವ ಸಮಯವೂ ಇದಾಗುತ್ತದೆ. ಹಾಗೆ ಈ ಹಬ್ಬದ ಸಮಯದಲ್ಲಿ ನಾವು ವಿಶೇಷ ರೀತಿಯಲ್ಲಿ ಮಾಡುವಂತಹ ತಂಬಿಟ್ಟು ಮಾಡುವ ಕುರಿತು ತಿಳಿಯೋಣ. ಅದ್ರಲ್ಲೂ ಹಬ್ಬಕ್ಕೆ ಮಾಡುವ ವಿಭಿನ್ನ ರುಚಿಯ ಕಡ್ಲೆ ತಂಬಿಟ್ಟು ಮಾಡೋದು ಹೇಗೆ ಅನ್ನೋದು ನಿಮಗೆ ಗೊತ್ತಾ?
ನೀವು ಸಹ ಅಂಗಡಿಗಳಲ್ಲಿ ಸಿಗುವ ವಿವಿಧ ಬಗೆಯ ತಂಬಿಟ್ಟು ಉಂಡೆಯನ್ನು ಸವಿದಿರುತ್ತೀರಿ. ಅದ್ರಲ್ಲೂ ಹಬ್ಬಗಳಲ್ಲಿ ನೀವು ಮನೆಯಲ್ಲೂ ಮಾಡಿ ಸವಿದಿರುತ್ತೀರಿ. ಉತ್ತರ ಕರ್ನಾಟಕ ಭಾಗದಲ್ಲಿ ಈ ತಂಬಿಟ್ಟು ಉಂಡೆ ಬಹಳ ಫೇಮಸ್ ಖಾದ್ಯಗಳಲ್ಲಿ ಒಂದು. ಯಾವುದೇ ಹಬ್ಬವಾಗಿದ್ದರೂ ಈ ತಂಬಿಟ್ಟು ಉಂಡೆ ಮಾಡಿ ಸವಿದಿರುತ್ತಾರೆ. ಹಾಗೆ ಬಗೆ ಬಗೆಯ ತಂಬಿಟ್ಟು ಸವಿಯೋದು ಸಹ ಇದೆ.
ಈ ತಂಬಿಟ್ಟನ್ನು ನೀವು ಬಹಳ ಸಮಯ ಇಟ್ಟು ಸವಿಯಬಹುದು, ಬಹುಬೇಗ ಹಾಳಾಗುವುದೂ ಇಲ್ಲ. ಹೀಗಾಗಿ ಮನೆಯಲ್ಲಿ ಒಮ್ಮೆ ಮಾಡಿಟ್ಟು ಹಲವು ದಿನಗಳ ಕಾಲ ಸವಿಯೋದು ನೋಡಬಹುದು. ಮಕ್ಕಳಿಗೂ ಇದು ಬಹಳ ಇಷ್ಟವಾಗುವ ತಿಂಡಿ. ಇದಲ್ಲದೆ ಮಾಡುವುದು ಕೂಡ ಬಹಳ ಸುಲಭ. ಹೀಗಾಗಿ ನಾವಿಂದು ಈ ಹಬ್ಬದ ಸಮಯದಲ್ಲಿ ಕೂಡ ಈ ಕಡಲೆ ತಂಬಿಟ್ಟು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಕಡ್ಲೆ ತುಂಬಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹುರಿಗಡಲೆ
- ಕಡಲೆ ಬೀಜ
- ಏಲಕ್ಕಿ
- ಎಣ್ಣೆ
- ಎಳ್ಳು
- ಬೆಲ್ಲ
ಕಡ್ಲೆ ತುಂಬಿಟ್ಟು ಮಾಡುವ ವಿಧಾನವೇನು?
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಕಪ್ ಹುರಿಗಡಲೆ ಹಾಕಿ 1 ನಿಮಿಷ ಬಿಸಿ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿ ಹುರಿಗಡಲೆಯನ್ನು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಕಾಲು ಚಮಚ ಏಲಕ್ಕಿ ಬೀಜ ಸಹ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡ ಪುಡಿಯನ್ನು ತೆಗೆದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಒಂದು ಕಪ್ ಕಡಲೆ ಬೀಜ ಹಾಕಿ ಹುರಿದುಕೊಳ್ಳಿ.
ಈಗ ಹುರಿದ ಕಾಳುಗಳಿಂದ ಸಿಪ್ಪೆ ಬೇರ್ಪಡಿಸಬೇಕು ಯಾವ ವಿಧಾನವನ್ನಾದರು ಬಳಸಿ ಚಿಪ್ಪೆ ತೆಗೆದು ಕಾಳನ್ನು ಒಡೆದುಕೊಳ್ಳಿ. ಈಗ ಈ ಕಡಲೆಯನ್ನು ಮಿಕ್ಸಿ ಜಾರ್ಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಅನಂತರ ಈ ಪುಡಿಯನ್ನು ಸಹ ಹುರಿಗಡಲೆ ಪುಡಿಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ. ಈಗ ಮತ್ತೆ ಬಾಣಲೆಗೆ ಅರ್ಧ ಕಪ್ ಬಿಳಿ ಎಳ್ಳು ಹಾಕಿ 2 ನಿಮಿಷ ಹುರಿದು ಇದನ್ನು ಸಹ ಹಿಟ್ಟಿನೊಂದಿಗೆ ಸೇರಿಸಿ ಮಿಶ್ರಣ ಮಾಡಿ.
ಈಗ 1 ಕಪ್ ಕೊಬ್ಬರಿ ತುರಿ ಹಾಕಿ ಮಿಶ್ರಣ ಮಾಡಿ. ಈಗ ಮತ್ತೆ ಬಾಣಲೆಗೆ ಒಂದೂವರೆ ಕಪ್ ಬೆಲ್ಲ ಹಾಕಿ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಚೆನ್ನಾಗಿ ಕರಗುವರೆಗೂ ತಿರುಗಿಸಿಕೊಂಡು ಬಳಿಕ ಜರಡಿ ಹಿಡಿದು ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ. ಎಷ್ಟು ಅಗತ್ಯವೋ ಅಷ್ಟು ಬೆಲ್ಲದ ನೀರು ಹಾಕಿ ಉಂಡೆ ಕಟ್ಟಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ.
ಹಿಟ್ಟು ಗಟ್ಟಿಯಾದರೆ ಮತ್ತೆ ಬೆಲ್ಲದ ನೀರು ಹಾಕಿಕೊಂಡು ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ತಂಬಿಟ್ಟು ಉಂಡೆ ಸಿದ್ದವಾಗುತ್ತೆ. ಈ ಹಬ್ಬದಲ್ಲಿ ನೀವು ಸಹ ಮಾಡಿ ಸವಿದು ನೋಡಿ.



Click it and Unblock the Notifications
