Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೆಂಗಿನಕಾಯಿ ಬೆಲೆ ಹೆಚ್ಚಾಗಿದ್ಯಾ? ಕಾಯಿ ಬಳಸದೆ ಮಾಡುವ ಸಾಂಬಾರ್ ಇದು..!!
ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದರ ದಿಢೀರ್ ಏರಿಕೆಯಾಗಿದೆ. ಒಂದೊಂದು ಕಾಯಿಯ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಅದರಲ್ಲೂ ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಈ ತೆಂಗಿನಕಾಯಿಯ ದರ ದುಪ್ಪಟ್ಟಾಗಿದೆ. ಸಣ್ಣ ತೆಂಗಿನಕಾಯಿಯಿಂದ ಹಿಡಿದು ದೊಡ್ಡ ತೆಂಗಿನಕಾಯಿ ಕೂಡ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ಫಸಲು ಇಳಿಮುಖ ಆಗಿರುವು ದಿಢೀರ್ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
ಇನ್ನು ತೆಂಗಿನಕಾಯಿ ಇಲ್ಲದೆ ಅಡುಗೆ ಕೆಲಸಗಳು ಮುಕ್ತಾಯ ಆಗೋದಿಲ್ಲ. ಸಾಂಬಾರ್ಗೆ, ಸಾರು, ಚಟ್ನಿ, ಪಲ್ಯ ಹೀಗೆ ಎಲ್ಲಾ ಖಾದ್ಯಕ್ಕೂ ತೆಂಗಿನಕಾಯಿ ಬಹಳ ಮುಖ್ಯ. ಅಡುಗೆ ರುಚಿ ಹೆಚ್ಚಿಸುವುದು ಕೂಡ ಇದೇ ತೆಂಗಿನಕಾಯಿ. ಆದ್ರೆ ನಿತ್ಯ ತೆಂಗಿನಕಾಯಿ ಬಳಸಿ ಸಾಂಬಾರ್, ಸಾರು ಮಾಡುವುದು ಈಗ ದುಬಾರಿಯಾಗುತ್ತಿದೆ. ಹಾಗಾದ್ರೆ ತೆಂಗಿನಕಾಯಿ ಬಳಸದೆಯೇ ಸಾರು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿಯೋಣ.

ಕಾಯಿ ಬಳಸದೆಯೂ ಅದ್ಭುತ ರುಚಿಯ ಸಾರು ಮಾಡಬಹುದು. ಇದು ಅನ್ನದ ಜೊತೆಗೆ ಸವಿಯಲು ಅದ್ಭುತವಾಗಿರುತ್ತೆ. ಹಾಗಾದ್ರೆ ಕಾಯಿ ಬಳಸದೆಯೇ ಸಾರು ಮಾಡುವುದು ಹೇಗೆ? ಈ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ಹಾಕದೆ ಸಾರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸೀಮೆ ಬದನೆಕಾಯಿ
- ಟೊಮೆಟೋ
- ತೊಗರಿ ಬೇಳೆ
- ಸಾಸಿವೆ
- ಜೀರಿಗೆ
- ಅರಶಿಣ
- ಸಾಂಬಾರ್ ಪುಡಿ
- ಖಾರದ ಪುಡಿ
- ಕರಿಬೇವು
- ಎಣ್ಣೆ
- ಉಪ್ಪು
- ಬೆಲ್ಲ
ತೆಂಗಿನಕಾಯಿ ಹಾಕದೆ ಸಾರು ಮಾಡುವ ವಿಧಾನವೇನು?
ಮೊದಲು ಸೀಮೆ ಬದನೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಸನ್ಣದಾಗಿ ಹೆಚ್ಚಿಕೊಳ್ಳಿ. ಹಾಗೆ ತೊಗರಿ ಬೇಳೆಯನ್ನು ಕೂಡ ತೊಳೆದುಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಸೀಮೆ ಬದನೆ, ತೊಗರಿ ಬೇಳೆ, ನೀರು, ಟೊಮೆಟೋ, ಅರಶಿಣ, ಉಪ್ಪು ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ 5 ಸೀಟಿ ಹೊಡೆಯಲು ಬಿಡಿ.
5 ಸೀಟಿ ಬಳಿಕ ಕುಕ್ಕರ್ ಮುಚ್ಚಳ ತೆಗದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಟೊಮೆಟೋ ಇಡಿಯಾಗಿದ್ದರೆ ಅದನ್ನು ಸ್ವಲ್ಪ ಪುಡಿ ಮಾಡುವಂತೆ ತಿರುಗಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ ಎಣ್ಣೆ ಕಾದ ಬಳಿಕ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸು, ಕರಿವೇವು, ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ಉರಿಯನ್ನು ಸಣ್ಣದಾಗಿ ಇಟ್ಟು ಇದಕ್ಕೆ ಸಾಂಬಾರ್ ಪುಡಿ ಹಾಗೂ ಖಾರದ ಪುಡಿ ಕೂಡ ಹಾಕಿ 30 ಸೆಕೆಂಡ್ಗಳ ಕಾಲ ಫ್ರೈ ಮಾಡಿ.
ಈಗ ಸ್ವಲ್ಪ ನಿಂಬೆ ರಸವನ್ನು ಇದಕ್ಕೆ ಹಾಕಿ ಕುದಿಯಲು ಬಿಡಿ. ಇದು ಕುದಿಯಲು ಆರಂಭಿಸಿದಾಗ ಕುಕ್ಕರ್ನಲ್ಲಿರುವ ಬೇಳೆ ತರಕಾರಿಯನ್ನು ಇದಕ್ಕೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿ ಬರಲು ಬಿಡಿ. ಕೊನೆಯಲ್ಲಿ ಸಣ್ಣ ಉಂಡೆಯ ಬೆಲ್ಲ ಹಾಕಿಕೊಳ್ಳಬಹುದು. ಹಾಗೆ ಕೊತ್ತಂಬರಿ ಸೊಪ್ಪು ಹಾಕಿ ಒಂದು ಕುದಿಬಂದ ಬಳಿಕ ಇಳಿಸಿಕೊಳ್ಳಿ. ಇಷ್ಟಾದರೆ ಕಾಯಿ ಬಳಸದೆ ಮಾಡುವ ಅದ್ಭುತ ಸಾರು ರೆಡಿಯಾಗುತ್ತೆ. ನೀವು ಕೂಡ ಈ ರೆಸಿಪಿಯನ್ನು ಮಾಡಿ.



Click it and Unblock the Notifications