Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮಹಾಶಿವರಾತ್ರಿ ಹಬ್ಬದ ಉಪವಾಸದಲ್ಲಿ ಸವಿಯೋಕೆ ಇಲ್ಲಿದೆ ಸಬ್ಬಕ್ಕಿ ಕಿಚಡಿ: ಥಟ್ ಅಂತ ಸಿದ್ದ ಮಾಡಬಹುದು!
ಮಹಾಶಿವರಾತ್ರಿ ಹತ್ತಿರವಾಗಿದೆ. ಈ ದಿನ ಶಿವನಿಗೆ ವಿಶೇಷ ಪೂಜೆ ಮಾಡುವುದು, ನೈವೇದ್ಯ, ಜಾಗರಣೆ, ಪೂಜೆಗಳ ಮಾಡುವುದು ನೋಡಬಹುದು. ಹಾಗೆ ಈ ದಿನ ಉಪವಾಸ ಮಾಡಿದ್ರೆ ಹಲವು ಕಷ್ಟಗಳು ನಿವಾರಣೆಯಾಗಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಬಹುತೇಕರು ಈ ದಿನದಂದು ಉಪವಾಸವಿದ್ದು ಪೂಜೆ ಮಾಡುತ್ತಾರೆ, ಈ ಮೂಲಕ ಶಿವನ ಆಶೀರ್ವಾದ ಪಡೆಯಲು ಹಲವು ರೀತಿ ಪೂಜೆ ಮಾಡುತ್ತಾರೆ.
ಇನ್ನು ಉಪವಾಸವಿದ್ದು, ಪೂಜೆ ಸಲ್ಲಿಸುವಾಗ ಹಾಗೆ ಉಪವಾಸ ಸಮಯದಲ್ಲಿ ಯಾವುದಾದರು ಖಾದ್ಯ ಸವಿಯಲು ನೀಡುವುದು ಸಾಮಾನ್ಯ. ಕೆಲವರು ಪೂರ್ಣ ಪ್ರಮಾಣದಲ್ಲಿ ಉಪವಾಸ ಮಾಡುತ್ತಾರೆ, ಆದ್ರೆ ಮತ್ತೆ ಕೆಲವರು ಕೆಲವು ಉಪಹಾರ ಸೇವಿಸುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಹಾಕದೆಯೇ ಮಾಡುವ ರೆಸಿಪಿಯನ್ನು ಸವಿಯುವುದು ನೋಡಬಹುದು.

ಹೀಗಾಗಿ ಈ ಶಿವರಾತ್ರಿಯಂದು ನಾವು ಸಾಬುದಾನಿ ಕಿಚಡಿ ಮಾಡಿ ಸವಿಯುವ ಕುರಿತು ತಿಳಿಯೋಣ. ಈ ಕಿಚಡಿಗೆ ನೀವು ಈರುಳ್ಳಿ, ಬೆಳ್ಳುಳ್ಳಿ ಯಾವುದನ್ನು ಬಳಸುವ ಅಗತ್ಯವಿಲ್ಲ. ಹಾಗೆ ಉಪವಾಸದ ಸಮಯದಲ್ಲಿ ಸವಿಯಲು ಇದು ಬಹಳ ರುಚಿಕರವಾಗಲಿದೆ. ಹಾಗಾದ್ರೆ ಈ ಸಾಬುದಾನಿ ಕಿಚಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸಾಬುದಾನಿ ಕಿಚಡಿ ಮಾಡಲು ಬೇಕಾಗುವ ವಸ್ತುಗಳು
- ಸಬುದಾನಿ ಅಥವಾ ಸಬ್ಬಕ್ಕಿ - 1 ಕಪ್
- ಸಾಸಿವೆ - 1/4 ಟೀಸ್ಪೂನ್
- ಜೀರಿಗೆ- 1/4 ಟೀಸ್ಪೂನ್
- ನೆಲ ಗಡಲೆ - 2 ಟೀಸ್ಪೂನ್
- ಹಸಿ ಮೆಣಸಿನಕಾಯಿ - 3
- ಕರಿಬೇವು - 2 ಟೀಸ್ಪೂನ್
- ಆಲೂಗಡ್ಡೆ
- ನಿಂಬೆ - 1/2
- ಕೊತ್ತಂಬರಿ ಸೊಪ್ಪು
- ತುಪ್ಪ
- ರುಚಿಗೆ ಉಪ್ಪು
ಸಬ್ಬಕ್ಕಿ ಕಿಚಡಿ ಮಾಡುವುದು ಹೇಗೆ
ಮೊದಲು ಸಬ್ಬಕ್ಕಿಯನ್ನು ತೊಳೆದು ಅನಂತಗರ ಮುಳುಗುವಷ್ಟು ನೀರು ಹಾಕಿ ನೆನೆಸಿಡಬೇಕು. 2 ಗಂಟೆಯಾದರು ಇದನ್ನು ನೆನೆಸಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಿ ಅನಂತರ ಸಾಸಿವೆ, ಜೀರಿಗೆ, ಕಡಲೆ ಬೀಜ ಹಾಕಿ ಫ್ರೈ ಮಾಡಿ. 1 ನಿಮಿಷ ಬಿಟ್ಟು ಇದಕ್ಕೆ ಹಸಿ ಮೆಣಸು, ಕರಿಬೇವು ಸಹ ಹಾಕಿಕೊಳ್ಳಿ.
ಈಗ ಇದಕ್ಕೆ ನೆನೆಸಿಟ್ಟುಕೊಂಡಿದ್ದ ಸಬ್ಬಕ್ಕಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಒಂದು ಬೇಯಿಸಿದ ಆಲೂಗಡ್ಡೆಯ ಕೂಡ ಹಾಕಿಕೊಳ್ಳಿ. ನಂತರ ಉಪ್ಪು ಹಾಕಿ ಮಿಕ್ಸ್ ಮಾಡುತ್ತಾ ಇರಬೇಕು. ಇದು ಬೇಯಲು 3ರಿಂದ 4 ನಿಮಿಷ ತೆಗೆದುಕೊಳ್ಳುತ್ತದೆ. ಈಗ ಹುರಿದುಕೊಂಡ ಕಡಲೆ ಬೀಜವನ್ನು ಮಿಕ್ಸಿ ಜಾರ್ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
ನಂತರ ಈ ಕಡಲೆ ಪುಡಿಯನ್ನು ಈ ಸಬ್ಬಕ್ಕಿಗೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೇಯಲು ಬಿಡಿ. ಹಾಗೆ ಕೊನೆಯಲ್ಲಿ ನಿಂಬೆ ರಸವನ್ನು ಹಿಂಡಿಕೊಂಡು ಕೊತ್ತಂಬರಿ ಸೊಪ್ಪು ಹಾಕಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಸಬ್ಬಕ್ಕಿ ಕಿಚಡಿ ಸಿದ್ದವಾಗುತ್ತೆ. ಉಪವಾಸದ ಸಮಯದಲ್ಲಿ ಥಟ್ ಎಂದು ಮಾಡಿ ಸವಿಯಲು ಇದು ಬಹಳ ಮುಖ್ಯ.
ಕೆಲವು ಅನಾರೋಗ್ಯ ಇರುವವರು ದಿನವಿಡಿ ಉಪವಾಸ ಮಾಡಲು ಆಗುವುದಿಲ್ಲ ಅಂತವರು ಈ ಸಬ್ಬಕ್ಕಿಯ ಕಿಚಡಿ ಮಾಡಿ ಸವಿಯಬಹುದು. ನೀವು ಕೂಡ ಈ ವಿಶೇಷ ಖಾದ್ಯವನ್ನು ಶಿವರಾತ್ರಿಯ ಸಮಯದಲ್ಲಿ ಮಾಡಿ ಸವಿದು ನೋಡಿ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ. ಈರುಳ್ಳಿ, ಬೆಳ್ಳುಳ್ಳಿ ಸೇರಿ ಹಲವು ಮಸಾಲೆಗಳಿಂದ ಮುಕ್ತವಾಗಿರಲಿದೆ.



Click it and Unblock the Notifications