Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬೇಸಿಗೆಯಲ್ಲಿ ದೇಹಕ್ಕೆ ತಂಪು, ಆರೋಗ್ಯಕ್ಕೆ ಪುಷ್ಠಿ ಈ ರಾಗಿ ಅಂಬಳಿ: ಹೀಗೆ ಮಾಡಿದರೆ ಸೂಪರ್ ಟೇಸ್ಟ್
Recipes
oi-Reena TK
Posted By: Reena TK
ಬೇಸಿಗೆಯಲ್ಲಿ ಪ್ರತಿದಿನ ಮನೆಯಲ್ಲಿ ಮಾಡಲೇಬೇಕಾದ ಪಾನೀಯ ರಾಗಿ ಅಂಬಳಿ, ರಾಗಿ ಅಂಬಳಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ, ಹೊಟ್ಟೆಗೆ ತುಂಬಾನೇ ತಂಪು , ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ರಾಗಿ ಅಂಬಳಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ರಾಗಿ ಅಂಬಳಿ
ಅರ್ಧ ಲೀಟರ್ ಮೊಸರು
2 ಲೀಟರ್ ನೀರು
2 ಈರುಳ್ಳಿ
2 ಹಸಿ ಮೆಣಸು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ಅರ್ಧ ಲೀಟರ್ ಮೊಸರಿಗೆ ಅರ್ಧ ಲೀಟರ್ ನೀರು ಹಾಕಿ ಕಲೆಸಿ
- ನಂತರ ಸೌಟ್ನಿಂದ ತಿರುಗಿಸುತ್ತಾ ಕಲೆಸಿ
- ರಾಗಿ ಅಂಬಳಿ ಮಾಡುವುದು ಹೇಗೆ?
- ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
- ಹೀಗೆ ಕಲೆಸುವಾಗ ರಾಗಿ ಗಂಟು-ಗಂಟಾಗಿ ಇರಬಾರದು, ಚೆನ್ನಾಗಿ ಕಲೆಸಿ
- ನಂತರ ನೀವು ಒಂದೂವರೆ ಕಪ್ ನೀರನ್ನು ಹಾಕಿ ಕುದಿಸಿ, ನೀರು ಕುದಿ ಬರಲು ಪ್ರಾರಂಭಿಸಿದಾಗ ಮಿಕ್ಸ್ ಮಾಡಿಟ್ಟ ಹಿಟ್ಟು ಹಾಕಿ ಕಲೆಸಿ, ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ
- ರಾಗಿ ಮಾಲ್ಟ್ ರೀತಿಯಾದಾಗ ಉರಿ ಆಫ್ ಮಾಡಿ, ರಾಗಿ ತಣ್ಣಗಾದ ಮೇಲೆ ಅದಕ್ಕೆ ಮೊಸರಿಗೆ ನೀರು ಹಾಕಿ ಮಿಕ್ಸ್ ಮಾಡಿ ಮಾಡಿದ ಮಜ್ಜಿಗೆಯನ್ನು ಸೇರಿಸಿ ಮತ್ತೆ ಕಲೆಸಿ.
- ನಂತರ ಇದನ್ನು ಮಣ್ಣಿನ ಗ್ಲಾಸ್ಗೆ ಸುರಿಯಿರಿ
- ನಂತರ ಚಿಕ್ಕದಾಗಿ ಕತ್ತರಿಸಿಟ್ಟು ಈರುಳ್ಳಿ-ಹಸಿಮೆಣಸು ನೀವು ರಾಗಿ ಅಂಬಳಿ ಮೇಲೆ ಹಾಕಿ ಸರ್ವ್ ಮಾಡಿ, ಈ ರಾಗಿ ಅಂಬಳಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ.
ರಾಗಿ ಅಂಬಳಿಯ ಪ್ರಯೋಜನಗಳು
- ದೇಹಕ್ಕೆ ತುಂಬಾ ತಂಪು, ಹಾಗಾಗಿ ಬೇಸಿಗೆಯಲ್ಲಿ ದೇಹವನ್ನು ರಕ್ಷಣೆ ಮಾಡುತ್ತದೆ, ಉಷ್ಣಾಂಶ ಹೆಚ್ಚಾದಾರೆ ಉಂಟಾಗುವ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿ
- ಸುಸ್ತು ದೂರಾಗುವುದು
- ಬಾಯಾರಿಕೆ ದೂರಾಗುವುದು
- ಹಸಿವು ನಿಯಂತ್ರಿಸುತ್ತದೆ
- ರೋಗ ನಿರೋಧಕ ಶಕ್ತಿ ಹೆಚ್ಚುವುದು
- ರಕ್ತಹೀನತ ಸಮಸ್ಯೆ ತಡೆಗಟ್ಟುತ್ತದೆ
- ಮಲಬದ್ಧತೆ, ಅಜೀರ್ಣ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
- ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Comments
[ of 5 - Users]



Click it and Unblock the Notifications