Latest Updates
-
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್
ಬೇಸಿಗೆಯಲ್ಲಿ ದೇಹಕ್ಕೆ ತಂಪು, ಆರೋಗ್ಯಕ್ಕೆ ಪುಷ್ಠಿ ಈ ರಾಗಿ ಅಂಬಳಿ: ಹೀಗೆ ಮಾಡಿದರೆ ಸೂಪರ್ ಟೇಸ್ಟ್
Recipes
oi-Reena TK
Posted By: Reena TK
ಬೇಸಿಗೆಯಲ್ಲಿ ಪ್ರತಿದಿನ ಮನೆಯಲ್ಲಿ ಮಾಡಲೇಬೇಕಾದ ಪಾನೀಯ ರಾಗಿ ಅಂಬಳಿ, ರಾಗಿ ಅಂಬಳಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ, ಹೊಟ್ಟೆಗೆ ತುಂಬಾನೇ ತಂಪು , ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ರಾಗಿ ಅಂಬಳಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ರಾಗಿ ಅಂಬಳಿ
ಅರ್ಧ ಲೀಟರ್ ಮೊಸರು
2 ಲೀಟರ್ ನೀರು
2 ಈರುಳ್ಳಿ
2 ಹಸಿ ಮೆಣಸು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ಅರ್ಧ ಲೀಟರ್ ಮೊಸರಿಗೆ ಅರ್ಧ ಲೀಟರ್ ನೀರು ಹಾಕಿ ಕಲೆಸಿ
- ನಂತರ ಸೌಟ್ನಿಂದ ತಿರುಗಿಸುತ್ತಾ ಕಲೆಸಿ
- ರಾಗಿ ಅಂಬಳಿ ಮಾಡುವುದು ಹೇಗೆ?
- ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
- ಹೀಗೆ ಕಲೆಸುವಾಗ ರಾಗಿ ಗಂಟು-ಗಂಟಾಗಿ ಇರಬಾರದು, ಚೆನ್ನಾಗಿ ಕಲೆಸಿ
- ನಂತರ ನೀವು ಒಂದೂವರೆ ಕಪ್ ನೀರನ್ನು ಹಾಕಿ ಕುದಿಸಿ, ನೀರು ಕುದಿ ಬರಲು ಪ್ರಾರಂಭಿಸಿದಾಗ ಮಿಕ್ಸ್ ಮಾಡಿಟ್ಟ ಹಿಟ್ಟು ಹಾಕಿ ಕಲೆಸಿ, ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ
- ರಾಗಿ ಮಾಲ್ಟ್ ರೀತಿಯಾದಾಗ ಉರಿ ಆಫ್ ಮಾಡಿ, ರಾಗಿ ತಣ್ಣಗಾದ ಮೇಲೆ ಅದಕ್ಕೆ ಮೊಸರಿಗೆ ನೀರು ಹಾಕಿ ಮಿಕ್ಸ್ ಮಾಡಿ ಮಾಡಿದ ಮಜ್ಜಿಗೆಯನ್ನು ಸೇರಿಸಿ ಮತ್ತೆ ಕಲೆಸಿ.
- ನಂತರ ಇದನ್ನು ಮಣ್ಣಿನ ಗ್ಲಾಸ್ಗೆ ಸುರಿಯಿರಿ
- ನಂತರ ಚಿಕ್ಕದಾಗಿ ಕತ್ತರಿಸಿಟ್ಟು ಈರುಳ್ಳಿ-ಹಸಿಮೆಣಸು ನೀವು ರಾಗಿ ಅಂಬಳಿ ಮೇಲೆ ಹಾಕಿ ಸರ್ವ್ ಮಾಡಿ, ಈ ರಾಗಿ ಅಂಬಳಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ.
ರಾಗಿ ಅಂಬಳಿಯ ಪ್ರಯೋಜನಗಳು
- ದೇಹಕ್ಕೆ ತುಂಬಾ ತಂಪು, ಹಾಗಾಗಿ ಬೇಸಿಗೆಯಲ್ಲಿ ದೇಹವನ್ನು ರಕ್ಷಣೆ ಮಾಡುತ್ತದೆ, ಉಷ್ಣಾಂಶ ಹೆಚ್ಚಾದಾರೆ ಉಂಟಾಗುವ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿ
- ಸುಸ್ತು ದೂರಾಗುವುದು
- ಬಾಯಾರಿಕೆ ದೂರಾಗುವುದು
- ಹಸಿವು ನಿಯಂತ್ರಿಸುತ್ತದೆ
- ರೋಗ ನಿರೋಧಕ ಶಕ್ತಿ ಹೆಚ್ಚುವುದು
- ರಕ್ತಹೀನತ ಸಮಸ್ಯೆ ತಡೆಗಟ್ಟುತ್ತದೆ
- ಮಲಬದ್ಧತೆ, ಅಜೀರ್ಣ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
- ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Comments
[ of 5 - Users]



Click it and Unblock the Notifications