Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಬೇಸಿಗೆಯಲ್ಲಿ ದೇಹಕ್ಕೆ ತಂಪು, ಆರೋಗ್ಯಕ್ಕೆ ಪುಷ್ಠಿ ಈ ರಾಗಿ ಅಂಬಳಿ: ಹೀಗೆ ಮಾಡಿದರೆ ಸೂಪರ್ ಟೇಸ್ಟ್
Recipes
oi-Reena TK
Posted By: Reena TK
ಬೇಸಿಗೆಯಲ್ಲಿ ಪ್ರತಿದಿನ ಮನೆಯಲ್ಲಿ ಮಾಡಲೇಬೇಕಾದ ಪಾನೀಯ ರಾಗಿ ಅಂಬಳಿ, ರಾಗಿ ಅಂಬಳಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ, ಹೊಟ್ಟೆಗೆ ತುಂಬಾನೇ ತಂಪು , ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ರಾಗಿ ಅಂಬಳಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ರಾಗಿ ಅಂಬಳಿ
ಅರ್ಧ ಲೀಟರ್ ಮೊಸರು
2 ಲೀಟರ್ ನೀರು
2 ಈರುಳ್ಳಿ
2 ಹಸಿ ಮೆಣಸು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ಅರ್ಧ ಲೀಟರ್ ಮೊಸರಿಗೆ ಅರ್ಧ ಲೀಟರ್ ನೀರು ಹಾಕಿ ಕಲೆಸಿ
- ನಂತರ ಸೌಟ್ನಿಂದ ತಿರುಗಿಸುತ್ತಾ ಕಲೆಸಿ
- ರಾಗಿ ಅಂಬಳಿ ಮಾಡುವುದು ಹೇಗೆ?
- ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
- ಹೀಗೆ ಕಲೆಸುವಾಗ ರಾಗಿ ಗಂಟು-ಗಂಟಾಗಿ ಇರಬಾರದು, ಚೆನ್ನಾಗಿ ಕಲೆಸಿ
- ನಂತರ ನೀವು ಒಂದೂವರೆ ಕಪ್ ನೀರನ್ನು ಹಾಕಿ ಕುದಿಸಿ, ನೀರು ಕುದಿ ಬರಲು ಪ್ರಾರಂಭಿಸಿದಾಗ ಮಿಕ್ಸ್ ಮಾಡಿಟ್ಟ ಹಿಟ್ಟು ಹಾಕಿ ಕಲೆಸಿ, ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ
- ರಾಗಿ ಮಾಲ್ಟ್ ರೀತಿಯಾದಾಗ ಉರಿ ಆಫ್ ಮಾಡಿ, ರಾಗಿ ತಣ್ಣಗಾದ ಮೇಲೆ ಅದಕ್ಕೆ ಮೊಸರಿಗೆ ನೀರು ಹಾಕಿ ಮಿಕ್ಸ್ ಮಾಡಿ ಮಾಡಿದ ಮಜ್ಜಿಗೆಯನ್ನು ಸೇರಿಸಿ ಮತ್ತೆ ಕಲೆಸಿ.
- ನಂತರ ಇದನ್ನು ಮಣ್ಣಿನ ಗ್ಲಾಸ್ಗೆ ಸುರಿಯಿರಿ
- ನಂತರ ಚಿಕ್ಕದಾಗಿ ಕತ್ತರಿಸಿಟ್ಟು ಈರುಳ್ಳಿ-ಹಸಿಮೆಣಸು ನೀವು ರಾಗಿ ಅಂಬಳಿ ಮೇಲೆ ಹಾಕಿ ಸರ್ವ್ ಮಾಡಿ, ಈ ರಾಗಿ ಅಂಬಳಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ.
ರಾಗಿ ಅಂಬಳಿಯ ಪ್ರಯೋಜನಗಳು
- ದೇಹಕ್ಕೆ ತುಂಬಾ ತಂಪು, ಹಾಗಾಗಿ ಬೇಸಿಗೆಯಲ್ಲಿ ದೇಹವನ್ನು ರಕ್ಷಣೆ ಮಾಡುತ್ತದೆ, ಉಷ್ಣಾಂಶ ಹೆಚ್ಚಾದಾರೆ ಉಂಟಾಗುವ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿ
- ಸುಸ್ತು ದೂರಾಗುವುದು
- ಬಾಯಾರಿಕೆ ದೂರಾಗುವುದು
- ಹಸಿವು ನಿಯಂತ್ರಿಸುತ್ತದೆ
- ರೋಗ ನಿರೋಧಕ ಶಕ್ತಿ ಹೆಚ್ಚುವುದು
- ರಕ್ತಹೀನತ ಸಮಸ್ಯೆ ತಡೆಗಟ್ಟುತ್ತದೆ
- ಮಲಬದ್ಧತೆ, ಅಜೀರ್ಣ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
- ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Comments
[ of 5 - Users]



Click it and Unblock the Notifications