Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕಾಳು ಮೆಣಸಿನ ರಸಂ ರೆಸಿಪಿ: ಈ ರಸಂ ಕುಡಿದರೆ ಕೆಮ್ಮು, ಶೀತ ಓಡಿ ಹೋಗುತ್ತೆ ನೋಡಿ
ಮಳೆಗಾಲ ಜೊತೆಗೆ ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ, ಈ ಸಮಯದಲ್ಲಿ 'ನೀವು ಆರೋಗ್ಯಕ್ಕಾಗಿ ಕಡೆಗೆ ಗಮನಹರಿಸುವುದು ಒಳ್ಳೆಯದು. ಕಷಾಯ, ರಸಂ, ಕಾಳು ಮೆಣಸಿನ ರಸಂ ಇವೆಲ್ಲಾ ಕೆಮ್ಮು, ಗಂಟಲು ಕೆರೆತ, ಶೀತ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಇಲ್ಲಿ ಕಾಳು ಮೆಣಸಿನ ರಸಂ ಹಾಗೂ ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
ಕಾಳು ಮೆಣಸು 2 ಚಮಚ (ತುಂಬಾ ಖಾರ ಇಷ್ಟಪಡುವುದಾದರೆ ಒಂದು ಚಮಚ ಕೂಡ ಹೆಚ್ಚು
ಬಳಸಬಹುದು)
ಚಮಚ ಜೀರಿಗೆ
ಹಣ್ಣಾದ ಟೊಮೆಟೊ 2-3
2 ಬೆಳ್ಳುಳ್ಳಿ
ಸ್ವಲ್ಪ ಸಾಸಿವೆ
2 ಒಣ ಮೆಣಸು
1 ಚಮಚ ಜೀರಿಗೆ
ಸ್ವಲ್ಪ ಕರಿಬೇವು
ಸ್ವಲ್ಪ ಹುಣಸೆಹಣ್ಣು
ನೀರು
1/2 ಕಪ್ ಬೇಳೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಎಣ್ಣೆ 1 ಚಮಚ
ಉಪ್ಪು
ಕಾಳು ಮೆಣಸಿನ ರಸಂ ಮಾಡುವ ವಿಧಾನ
ನೀವು ಕಾಳು ಮೆಣಸು ಸ್ವಲ್ಪ ಹುರಿದು ನಂತರ ಕುಟ್ಟಿ ಪುಡಿ ಮಾಡಿ, ಬೆಳ್ಳುಳ್ಳಿ
ಕೂಡ ಅಷ್ಟೇ ಜಜ್ಜಿ, ಜೀರಿಗೆ ಕೂಡ ರೋಸ್ಟ್ ಮಾಡಿ ಪುಡಿ ಮಾಡಿ.
ನೀವು ಟೊಮೆಟೊವನ್ನು ನೀರಿನಲ್ಲಿ ಹಾಕಿ ಬೇಯಿಸಿ
ನಂತರ ಅದನ್ನು ಸಿಪ್ಪೆ ಸುಲಿದು ಒಂದು ಬೌಲ್ಗೆ ಹಾಕಿ ಮ್ಯಾಶ್ ಮಾಡಿ
ಈಗ ನೀವು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ , ಸಾಸಿವೆ
ಚಟ್ ಪಟ್ ಶಬ್ದ ಮಾಡುವಾಗ ಜಜ್ಜಿದ ಕಾಳು ಮೆಣಸು, ಒಣಮೆಣಸು, ಬೆಳ್ಳುಳ್ಳಿ,
ಜೀರಿಗೆ ಹಾಕಿ ಟೊಮೆಟೊ ಪೇಸ್ಟ್ ಹಾಕಿ, ನಂತರ, ಉಪ್ಪು, ಅರಿಶಿಣ ಹಾಕಿ ಸ್ವಲ್ಪ
ನೀರು ಸೇರಿಸಿ ಕುದಿಸಿ, ಚೆನ್ನಾಗಿ ಕುದಿ ಬಂದಾಗ ಅದಕ್ಕೆ ಕೊತ್ತಂಬರಿ ಸೊಪ್ಪಿನಿಮದ
ಅಲಂಕರಿಸಿದರೆ ಕಾಳು ಮೆಣಸಿನ ರಸಂ ರೆಡಿ.
ಬೇಳೆ ಹಾಕಿ ಮಾಡುವ ಕಾಳು ಮೆಣಸಿನ ಸಾರು
ನೀವು ಬೇಳೆ ಮತ್ತು ಟೊಮೆಟೊಗೆ ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ,
ಬೆಳ್ಳುಳ್ಳಿ, ಕಾಳು ಮೆಣಸು, ಜೀರಿಗೆ ಪುಡಿ ಎಲ್ಲಾ ರೋಸ್ಟ್ ಮಾಡಿ ಜಜ್ಜಿ ಹಾಕಿ
ಬೇಯಿಸಿ
ನಂತರ ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ
ಸೇರಿಸಿ, ಬಳಿಕ ಈ ಬೇಯಿಸಿದ ರಂಸ ಹಾಕಿ ಸ್ವಲ್ಪ ಅರಿಶಿಣ ಪುಡಿ, ಕಾಶ್ಮೀರಿ ಖಾರದ
ಪುಡಿ ಸೇರಿಸಿ ಕುದಿಸಿದರೆ ಕಾಳು ಮೆಣಸಿನ ಸಾರು ರೆಡಿ. ರೆಡಿಯಾದ ಸಾರಿಗೆ ಸ್ವಲ್ಪ
ಕೊತ್ತಂಬರಿ ಸೊಪ್ಪು ಉದುರಿಸಿ ಸರ್ವ್ ಮಾಡಿ.
ಈ ರಸಮ ನೀವು ಹಾಗೆಯೇ ಸೇವಿಸಬಹುದು ಅಥವಾ ಅನ್ನದ ಜೊತೆ ಹಾಕಿ ತಿನ್ನಬಹುದು. ಇದರ ಸೇವನೆ ಮಾಡುವುದರಿಂದ ಶೀತ, ಕೆಮ್ಮು, ಗಂಟಲು ಕೆರೆತ ಕಡಿಮೆಯಾಗುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಹಾಗಾಗಿ ಮಳೆಗಾಲಕ್ಕೆ , ಚಳಿಗಾಲಕ್ಕೆ ಈ ರೆಸಿಪಿ ತುಂಬಾನೇ ಒಳ್ಳೆಯದು.
ಅಲ್ಲದೆ ಈ ರಸಂ ಸೇವನೆ ಜೀರ್ಣಕ್ರಿಯೂ ತುಂಬಾನೇ ಒಳ್ಳೆಯದು.



Click it and Unblock the Notifications