Latest Updates
-
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ!
ರಾಯರ ಮಠದ ಘಮ ಘಮಿಸುವ ತಿಳಿಸಾರು ಮಾಡಿ! ಎಷ್ಟು ಸುಲಭ ಮಾಡೋದು ಗೊತ್ತಾ?
ನೀವು ಊಟದೊಂದಿಗೆ ಹಲವು ರೀತಿಯ ಸಾಂಬಾರ್, ರಸಂ ಮಾಡಿ ಸವಿದಿರುತ್ತೀರಿ. ಹಾಗೆ ನೀವು ರಸಂ ಇಷ್ಟಪಡುವ ಮಂದಿಯಾಗಿದ್ದರೆ ನೀವು ಯಾವಾಗಲು ಊಟದೊಂದಿಗೆ ರುಚಿ ರುಚಿಯ ರಸಂ ಮಾಡಿ ಸವಿಯುವುದು ನೋಡಬಹುದು. ಹಾಗೆ ನಾವು ದೇವಾಲಯಗಳಲ್ಲಿ ಸವಿಯುವ ರಸಂ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಏಕೆಂದರೆ ದೇವಾಲಯದಲ್ಲಿ ನೀಡುವ ರಸಂ ಅದ್ಭುತ ರುಚಿಯಲ್ಲಿರಲಿದೆ.
ನಾವು ಕೂಡ ದೇವಸ್ಥಾನದ ರುಚಿಯಲ್ಲಿ ಈ ರಸಂ ಸವಿಯಲು ಇಷ್ಟಪಟ್ಟು ಅದನ್ನು ಮನೆಯಲ್ಲೇ ಮಾಡಿ ಸವಿಯಲು ಮುಂದಾಗಿರುತ್ತೇವೆ. ಆದ್ರೆ ನಾವಿಂದು ರಾಯರ ಮಠದಲ್ಲಿ ನೀಡುವಂತಹ ರುಚಿ ರುಚಿಯ ತಿಳಿಸಾರು ಮಾಡುವ ಕುರಿತು ತಿಳಿದುಕೊಳ್ಳೋಣ. ಯಾವುದೇ ರಾಯರ ಮಠದಲ್ಲಿ ನೀವು ಊಟ ಸವಿದರೆ ಅಲ್ಲಿ ರುಚಿ ರುಚಿಯ ತಿಳಿಸಾರು ಸವಿದಿರುತ್ತೀರಿ.

ಈ ರುಚಿಯಲ್ಲಿ ಮನೆಯಲ್ಲೂ ಕೂಡ ತಿಳಿ ಸಾರು ಮಾಡಿ ಸವಿಯಬಹುದು. ಹಾಗಾದ್ರೆ ಈ ತಿಳಿಸಾರು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ತಿಳಿಸಾರು ಮಾಡಿದ್ರೆ ಮನೆಮಂದಿ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ರಾಯರ ಮಠದಲ್ಲಿನ ತಿಳಿಸಾರು ಘಮ ಘಮ ಎನ್ನುವ ರುಚಿ ನೀಡುತ್ತೆ.
ಹಾಗಾದ್ರೆ ಈ ಬೇಳೆ ತಿಳಿಸಾರು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದಕೊಳ್ಳೋಣ.
ರಾಯರ ಮಠದ ತಿಳಿ ಸಾರು ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ತೊಗರಿ ಬೇಳೆ
- ಅರಶಿಣ
- ಎಣ್ಣೆ
- ಸಾಸಿವೆ
- ಜೀರಿಗೆ
- ಇಂಗು ಕರಿಬೇವು
- ಒಣ ಮೆಣಸು
- ಕಾಳು ಮೆಣಸು ಮೆಂತ್ಯ
- ಧನಿಯಾ ಕಾಳು
- ಉಪ್ಪು
- ಹುಣಸೆ ಹುಳಿ
- ಬೆಲ್ಲ
ರಾಯರ ಮಠದ ತಿಳಿ ಸಾರು ಮಾಡುವುದು ಹೇಗೆ?
ಮೊದಲು ಅರ್ಧ ಕಪ್ ತೊಗರಿ ಬೇಳೆ ತೆಗೆದುಕೊಂಡು ತೊಳೆದು ಅನ್ನು ಕುಕ್ಕರ್ಗೆ ಹಾಕಿ ಬೇಳೆಯ 2 ಪಟ್ಟು ನೀರು, ಅರಶಿಣ, ಎಣ್ಣೆ ಹಾಕಿಕೊಂಡು ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ನಂತರ ಮತ್ತೆ 3 ಕಪ್ ನೀರು ಹಾಕಿಕೊಂಡು ಕುದಿಯಲು ಬಿಡಿ.
ಈಗ ಬಾಣಲೆಯನ್ನ ಒಲೆ ಮೇಲೆ ಇಟ್ಟು ಅದಕ್ಕೆ ಒಣ ಮೆಣಸು, ಧನಿಯಾ ಕಾಳು, ಜೀರಿಗೆ, ಸಾಸಿವೆ, ಮೆಂತ್ಯ ಕಾಳು ಅರ್ಧ ಚಮಚ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. 2 ನಿಮಿಷ ಹುರಿದು ಒಲೆ ಆಫ್ ಮಾಡಿ ತಣ್ಣಗಾಲು ಬಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
ಇನ್ನೊಂದು ಕಡೆ ಬೇಳೆಯನ್ನು ಕುದಿ ಬರಲು ಬಿಡಿ. ಅದಕ್ಕೆ ಉಪ್ಪು, ಚಿಕ್ಕ ಬೆಲ್ಲ, ಹುಣಸೆ ಹುಳಿಯ ನೀರು ಅಥವಾ ಪೇಸ್ಟ್ ಸಹ ಹಾಕಿಕೊಳ್ಳಬಹುದು. ಹಾಗೆ ಈಗ ರುಬ್ಬಿಕೊಂಡಿರುವ ಮಸಾಲೆಗಳ ಪುಡಿಯನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಕುದಿಬಂದ ಬಳಿಕ ಇದಕ್ಕೆ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಬಿಡಿ.
ಈಗ ಸಣ್ಣದಾಗಿ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ ಈ ತಿಳಿಸಾರಿನ ಜೊತೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ತಿಳಿಸಾರು ರೆಡಿಯಾಗಲಿದೆ. ಇದರ ಘಮ ಘಮ ಎನ್ನುವಂತಹ ರುಚಿಯು ನಿಮಗೆ ರಾಯರ ಮಟದ ತಿಳಿಸಾರನ್ನು ನೆನಪಿಸಲಿದೆ. ಒಮ್ಮೆ ಸವಿದರೆ ನೀವು ಪತ್ತೆ ಮತ್ತೆ ಮಾಡಿ ಸವಿಯೋದು ಖಚಿತ.



Click it and Unblock the Notifications