Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಉರಿ ಶೀತ, ಗಂಟಲು ನೋವಿಗೆ ಸುಲಭದ ಕಷಾಯ ಮಾಡಿ! 2 ನಿಮಿಷ ಸಾಕು!
ಚಳಿಗಾಲದ ಆರಂಭದಿಂದಲೂ ಹಲವು ರೀತಿ ಅನಾರೋಗ್ಯಗಳು ಕಾಡುವುದು ನೋಡಬಹುದು. ಅದ್ರಲ್ಲೂ ಶೀತ, ಕೆಮ್ಮು, ಗಂಟಲು ನೋವಿನಂತಹ ಕಾಲೋಚಿತ ಸಮಸ್ಯೆಗಳು ಈ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಚಳಿಯು ಹೆಚ್ಚಾಗಿರುವ ಪ್ರದೇಶದಲ್ಲಿ ತಲೆನೋವು, ಸಂಧಿವಾತ, ಕೀಲು ನೋವು, ಶೀತ, ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಲ್ಲಿ ಒಂದಾಗಿರಲಿದೆ.
ಹಗಲಿನಲ್ಲಿ ಮಿತಿಮೀರಿದ ಬಿಸಿಲು ಹಾಗೆ ರಾತ್ರಿ, ಬೆಳಗ್ಗೆ ಸಮಯದಲ್ಲಿನ ವಿಪರೀತ ಚಳಿಯ ವಾತಾವರಣಕ್ಕೆ ನಿಮ್ಮ ದೇಹವು ಹೊಂದಿಕೊಳ್ಳುವುದು ಕಷ್ಟವಾಗಬಹುದು, ಅದ್ರಲ್ಲೂ ಹಲವು ಬಾರಿ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಇದು ಮಕ್ಕಳು ಮತ್ತು ಹಿರಿಯರ ಸಂಖ್ಯೆಯಲ್ಲಿ ಹೆಚ್ಚಾಗಿರಲಿದೆ. ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರಲಿದ್ಯೋ ಅವರಲ್ಲಿ ಈ ಅನಾರೋಗ್ಯ ಸಮಸ್ಯೆ ಹೆಚ್ಚಾಗಿರಲಿದೆ.

ಅದ್ರಲ್ಲೂ ಈ ಚಳಿಗಾಲದ ಸಮಯದಲ್ಲಿ ಎಲ್ಲರಿಗೂ ಸಮಸ್ಯೆ ನೀಡುವುದು ಉರಿಶೀತದ ಸಮಸ್ಯೆ. ನೀವು ಬಿಸಿಲಿನಲ್ಲಿ ಹೆಚ್ಚು ಸಮಯ ಇದ್ದು ಬಳಿಕ ತಣ್ಣೀರು ಕುಡಿಯುವುದು, ಐಸ್ಕ್ರೀಮ್ ಅಥವಾ ದೇಹದ ಉಷ್ಣತೆಯಲ್ಲಿ ಏರುಪೇರು ಸಂಭವಿಸಿದಾಗ ಈ ಉರಿಶೀತ ಕಾಣಿಸಿಕೊಳ್ಳುತ್ತದೆ. ಇದು ಸಹಿಸಲಾಗದ ತಲೆನೋವು, ಕಿರಿಕಿರಿ ತರಬಹುದು. ಆದ್ರೆ ಇದನ್ನು ಮನೆಯಲ್ಲಿ ಸಿಂಪಲ್ ಕಷಾಯದ ಮೂಲಕ ನಿವಾರಣೆ ಮಾಡಿಕೊಳ್ಳಬಹುದು.
ಹಾಗಾದ್ರೆ ಉರಿಶೀತ ತಡೆಯಲು ಹೇಗೆ ಕಷಾಯ ಮಾಡಿಕೊಳ್ಳಬೇಕು? ಈ ಕಷಾಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಶುಂಠಿ ಕಾಳು ಮೆಣಸಿನ ಕಷಾಯ ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಶುಂಠಿ, ಕಾಳು ಮೆಣಸಿನ ಕಷಾಯ ಮಾಡಲು ಅಗತ್ಯ ವಸ್ತುಗಳು?
- ಶುಂಠಿ
- ಹಾಲು
- ತುಳಸಿ ಎಲೆ
- ಕಾಳು ಮೆಣಸು
- ಅರಿಶಿನ ಪುಡಿ
- ಲವಂಗ
- ಏಲಕ್ಕಿ
- ಬೆಲ್ಲ
ಶುಂಠಿ, ಕಾಳು ಮೆಣಸಿನ ಕಷಾಯ ಮಾಡುವ ಸುಲಭದ ವಿಧಾನವೇನು?
ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಒಂದು ಗ್ಲಾಸ್ ಹಾಲು ಹಾಕಿ ಬಳಿಕ ಅಷ್ಟೇ ಅಳತೆಯಲ್ಲಿ ನೀರು ಹಾಕಿಕೊಂಡು ಕುದಿಬರಲು ಬಿಡಿ. ಚೆನ್ನಾಗಿ ಕುದಿಬರುವಾಗ, 8 ತುಳಸಿ ಎಲೆ, 4 ಲವಂಗ, 6 ಕಾಳು ಮೆಣಸು, 1 ಏಲಕ್ಕಿ, 1 ಸ್ಪೂನ್ ಹೆಚ್ಚಿಕೊಂಡ ಶುಂಠಿ, ಸಣ್ಣ ಉಂಡೆ ಬೆಲ್ಲ (ಸಕ್ಕರೆ ಬಳಸಬೇಡಿ)
ಇಷ್ಟು ಪದಾರ್ಥ ಹಾಕಿಕೊಂಡು ಚೆನ್ನಾಗಿ ಕುದಿಬರಲು ಬಿಡಬೇಕು. ಹಾಗೆ ಕಾಲು ಚಮಚ ಅರಶಿಣ ಪುಡಿ ಹಾಕಿಕೊಂಡು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಬೇಕು. ಈಗ ಒಂದು ಗ್ಲಾಸ್ಗೆ ಈ ಕಷಾಯವನ್ನು ಜರಡಿ ಹಿಡಿದು ಇಟ್ಟುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಆರೋಗ್ಯಕರ ಕಷಾಯ ಸಿದ್ದವಾಗುತ್ತೆ. ಇದನ್ನು ನೀವು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಮಕ್ಕಳಿಗೆ ನೀಡುವುದಾದರೆ ಎಲ್ಲಾ ಪದಾರ್ಥಗಳನ್ನು ಅರ್ಧದಷ್ಟು ಬಳಸಿಕೊಳ್ಳಿ. ಇದು ಒಂದು ಗಂಟೆಯಲ್ಲಿ ನಿಮ್ಮ ಉರಿ ಶೀತ, ಕೆಮ್ಮು, ನೆಗಡಿ, ಗಂಟಲು ನೋವಿನಂತಹ ಸಮಸ್ಯೆಯನ್ನು ನಿವಾರಣೆ ಮಾಡಲಿದೆ. ಹಾಗೆ ಇದನ್ನು ಮಾಡಿಕೊಳ್ಳುವುದು ಸಹ ಬಹಳ ಸುಲಭವಾಗಿದೆ.
ನೀವು ಸಹ ಈ ಚಳಿಗಾಲದ ಸಮಯದಲ್ಲಿ ಯಾವುದಾದರು ಸಣ್ಣ ಪುಟ್ಟ ಅನಾರೋಗ್ಯ ಎದುರಿಸಿದ್ದರೆ ಈ ಕಷಾಯ ಮಾಡಿ ಸವಿದು ನೋಡಿ. ಸುಲಭವಾಗಿ ಅನಾರೋಗ್ಯ ನಿವಾರಣೆ ಮಾಡಬಹುದು.



Click it and Unblock the Notifications