Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಹುರುಳಿಕಾಳಿನ ಚಟ್ನಿ: ಸಿಂಪಲ್ ರೆಸಿಪಿ, ಆದರೆ ರುಚಿ ಸಿಂಪಲ್ ಅಲ್ವೇ ಅಲ್ಲ
ನೀವು ಹುರುಳಿಕಾಳಿನ ಚಟ್ನಿ ಮಾಡಿದ್ದೀರಾ, ಇಲ್ಲಾಂದ್ರೆ ಟ್ರೈ ಮಾಡಿ ನೋಡಿ, ಸೂಪರ್ ರುಚಿಯಾಗಿರುತ್ತೆ, ಅಲ್ಲದೆ ಈ ಚಟ್ನಿಯಿಂದ ಆರೋಗ್ಯಕ್ಕೂ ಅಷ್ಟೊಂದು ಪ್ರಯೋಜನಗಳಿವೆ. ಈ ಚಟ್ನಿ ರೆಸಿಪಿ ಸಿಂಪಲ್ ಆದರೆ ಟೇಸ್ಟ್ ಅಲ್ಲ ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಕಪ್ ತೆಂಗಿನ ತುರಿ
1/4ಕಪ್ ಹುರುಳಿಕಾಳು
(ಹುರುಳಿಕಾಳನ್ನು ನೀವು ತೊಳೆದು ಒಣಗಿಸಿ ಇಟ್ಟಿರಿ)
ಸ್ವಲ್ಪ ಹುಣಸೆ ಹಣ್ಣು (ಹುಣಸೆಹಣ್ಣಿನ ಬೀಜದ ಗಾತ್ರದಷ್ಟು ಎರಡು ಸಲ ಹಾಕಿದರೆ
ಸಾಕಾಗುತ್ತೆ)
3-4 ಹಸಿ ಮೆಣಸು
1 ಈರುಳ್ಳಿ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ
ನೀವು ಹುರುಳಿಕಾಳನ್ನು ಒಂದು ತವಾದಲ್ಲಿ ಹಾಕಿ ರೋಸ್ಟ್ ಮಾಡಿ,ಹುರುಳಿ ಕಾಳು
ಹುರಿದಾಗ ಒಳ್ಳೆಯ ಸುವಾಸನೆ ಬರುತ್ತದೆ ಅಲ್ಲಿಯವರೆಗೆ ರೋಸ್ಟ್ ಮಾಡಿ.
ಈಗ ಅದನ್ನು ಮಿಕ್ಸಿ ಜಾರ್ಗೆ ಸೇರಿಸಿ
ತೆಂಗಿನ ತುರಿ, ಹುಣಸೆಹಣ್ಣು, ಉಪ್ಪು, ಮೆಣಸು ಹಾಕಿ ರುಬ್ಬಿ
ನಂತರ ಒಗ್ಗರಣೆ ಹಾಕಿದರೆ ಹುರುಳಿಕಾಳಿನ ಚಟ್ನಿ ರೆಡಿ.
ಇತರ ಸಲಹೆ
ಹುರುಳಿಕಾಳಿನ ಚಟ್ನಿಗೆ ನೀವು ಹಸಿ ಮೆಣಸು ಬದಲಿಗೆ ಒಣ ಮೆಣಸು ಹಾಕಬಹುದು.
ಈ ಚಟ್ನಿ ಗಂಜಿ ಅಥವಾ ಅನ್ನಕ್ಕೆ ತರಿತರಿ ರುಬ್ಬಿದರೆ ಚೆನ್ನಾಗಿರುತ್ತದೆ.
ದೋಸೆ, ಇಡ್ಲಿಗೆ ನುಣ್ಣನೆ ರುಬ್ಬಿ
ಹುರುಳಿಕಾಳಿನ ಪ್ರಯೋಜನಗಳು
ಹುರುಳಿಕಾಳಿಗೆ ಮಧುಮೇಹ ನಿಯಂತ್ರಿಸುವ ಶಕ್ತಿ ಇದೆ
ಇದು ಕಾರ್ಬೋಹೈಡ್ರೇಟ್ ನಿಧಾನವಾಗಿ ಜೀರ್ಣವಾಗುವಂತೆ ಮಾಡುತ್ತದೆ, ಇದರಿಂದ
ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ.
ಇದರಲ್ಲಿ Antioxidants ಅಧಿಕವಿದೆ: ಇದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ
ಹೆಚ್ಚಿಸಲು ತುಂಬಾನೇ ಸಹಕಾರಿ.
ಮೂತ್ರ ಚೆನ್ನಾಗಿ ಹೋಗಲು ಸಹಾಯ ಮಾಡುತ್ತದೆ: ವಾರಕ್ಕೆ ಎರಡು ಬಾರಿಯಾದರೂ
ಹುರುಳಿಕಾಳು ಸೇವಿಸಬೇಕು, ಇದು ಮೂತ್ರದ ಮೂಲಕ ಕಶ್ಮಲವನ್ನು ಹೊರ ಹಾಕಲು ಸಹಾಯ
ಮಾಡುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ.
ಅಸ್ತಮಾ ರೋಗಿಗಳಿಗೆ ಒಳ್ಳೆಯದು: ಹುರುಳಿಕಾಳು ಅಸ್ತಮಾ ರೋಗಿಗಳಿಗೆ ತುಂಬಾನೇ
ಪ್ರಯೋಜನಕಾರಿ, ಇದು ಉಸಿರಟದ ತೊಂದರೆ ಉಂಟಾಗದಂತೆ ತಡೆಗಟ್ಟಲು ಸಹಾಯ
ಮಾಡುತ್ತದೆ.



Click it and Unblock the Notifications