Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಹುರುಳಿಕಾಳಿನ ಚಟ್ನಿ: ಸಿಂಪಲ್ ರೆಸಿಪಿ, ಆದರೆ ರುಚಿ ಸಿಂಪಲ್ ಅಲ್ವೇ ಅಲ್ಲ
ನೀವು ಹುರುಳಿಕಾಳಿನ ಚಟ್ನಿ ಮಾಡಿದ್ದೀರಾ, ಇಲ್ಲಾಂದ್ರೆ ಟ್ರೈ ಮಾಡಿ ನೋಡಿ, ಸೂಪರ್ ರುಚಿಯಾಗಿರುತ್ತೆ, ಅಲ್ಲದೆ ಈ ಚಟ್ನಿಯಿಂದ ಆರೋಗ್ಯಕ್ಕೂ ಅಷ್ಟೊಂದು ಪ್ರಯೋಜನಗಳಿವೆ. ಈ ಚಟ್ನಿ ರೆಸಿಪಿ ಸಿಂಪಲ್ ಆದರೆ ಟೇಸ್ಟ್ ಅಲ್ಲ ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಕಪ್ ತೆಂಗಿನ ತುರಿ
1/4ಕಪ್ ಹುರುಳಿಕಾಳು
(ಹುರುಳಿಕಾಳನ್ನು ನೀವು ತೊಳೆದು ಒಣಗಿಸಿ ಇಟ್ಟಿರಿ)
ಸ್ವಲ್ಪ ಹುಣಸೆ ಹಣ್ಣು (ಹುಣಸೆಹಣ್ಣಿನ ಬೀಜದ ಗಾತ್ರದಷ್ಟು ಎರಡು ಸಲ ಹಾಕಿದರೆ
ಸಾಕಾಗುತ್ತೆ)
3-4 ಹಸಿ ಮೆಣಸು
1 ಈರುಳ್ಳಿ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ
ನೀವು ಹುರುಳಿಕಾಳನ್ನು ಒಂದು ತವಾದಲ್ಲಿ ಹಾಕಿ ರೋಸ್ಟ್ ಮಾಡಿ,ಹುರುಳಿ ಕಾಳು
ಹುರಿದಾಗ ಒಳ್ಳೆಯ ಸುವಾಸನೆ ಬರುತ್ತದೆ ಅಲ್ಲಿಯವರೆಗೆ ರೋಸ್ಟ್ ಮಾಡಿ.
ಈಗ ಅದನ್ನು ಮಿಕ್ಸಿ ಜಾರ್ಗೆ ಸೇರಿಸಿ
ತೆಂಗಿನ ತುರಿ, ಹುಣಸೆಹಣ್ಣು, ಉಪ್ಪು, ಮೆಣಸು ಹಾಕಿ ರುಬ್ಬಿ
ನಂತರ ಒಗ್ಗರಣೆ ಹಾಕಿದರೆ ಹುರುಳಿಕಾಳಿನ ಚಟ್ನಿ ರೆಡಿ.
ಇತರ ಸಲಹೆ
ಹುರುಳಿಕಾಳಿನ ಚಟ್ನಿಗೆ ನೀವು ಹಸಿ ಮೆಣಸು ಬದಲಿಗೆ ಒಣ ಮೆಣಸು ಹಾಕಬಹುದು.
ಈ ಚಟ್ನಿ ಗಂಜಿ ಅಥವಾ ಅನ್ನಕ್ಕೆ ತರಿತರಿ ರುಬ್ಬಿದರೆ ಚೆನ್ನಾಗಿರುತ್ತದೆ.
ದೋಸೆ, ಇಡ್ಲಿಗೆ ನುಣ್ಣನೆ ರುಬ್ಬಿ
ಹುರುಳಿಕಾಳಿನ ಪ್ರಯೋಜನಗಳು
ಹುರುಳಿಕಾಳಿಗೆ ಮಧುಮೇಹ ನಿಯಂತ್ರಿಸುವ ಶಕ್ತಿ ಇದೆ
ಇದು ಕಾರ್ಬೋಹೈಡ್ರೇಟ್ ನಿಧಾನವಾಗಿ ಜೀರ್ಣವಾಗುವಂತೆ ಮಾಡುತ್ತದೆ, ಇದರಿಂದ
ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ.
ಇದರಲ್ಲಿ Antioxidants ಅಧಿಕವಿದೆ: ಇದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ
ಹೆಚ್ಚಿಸಲು ತುಂಬಾನೇ ಸಹಕಾರಿ.
ಮೂತ್ರ ಚೆನ್ನಾಗಿ ಹೋಗಲು ಸಹಾಯ ಮಾಡುತ್ತದೆ: ವಾರಕ್ಕೆ ಎರಡು ಬಾರಿಯಾದರೂ
ಹುರುಳಿಕಾಳು ಸೇವಿಸಬೇಕು, ಇದು ಮೂತ್ರದ ಮೂಲಕ ಕಶ್ಮಲವನ್ನು ಹೊರ ಹಾಕಲು ಸಹಾಯ
ಮಾಡುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ.
ಅಸ್ತಮಾ ರೋಗಿಗಳಿಗೆ ಒಳ್ಳೆಯದು: ಹುರುಳಿಕಾಳು ಅಸ್ತಮಾ ರೋಗಿಗಳಿಗೆ ತುಂಬಾನೇ
ಪ್ರಯೋಜನಕಾರಿ, ಇದು ಉಸಿರಟದ ತೊಂದರೆ ಉಂಟಾಗದಂತೆ ತಡೆಗಟ್ಟಲು ಸಹಾಯ
ಮಾಡುತ್ತದೆ.



Click it and Unblock the Notifications