Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಇಡೀ ದೇಹವನ್ನು ಕೂಲ್ ಮಾಡಿ, ಪಾದದ ಉರಿ ಕಡಿಮೆ ಮಾಡುವ ಜ್ಯೂಸ್ ಇದು! ಮನೆಯಲ್ಲೇ ಮಾಡಿ!
ಬೇಸಿಗೆಯ ಈ ಸಮಯದಲ್ಲಿ ನಿಮ್ಮ ದೇಹವು ಸಮತೋಲನ ಕಾಪಾಡಿಕೊಳ್ಳುವುದು ಬಹಳ ಉತ್ತಮ. ಅದ್ರಲ್ಲೂ ನಿಮ್ಮ ದೇಹದ ಉಷ್ಣಾಂಶವನ್ನು ಒಂದೇ ರೀತಿ ಕಾಪಾಡಿಕೊಳ್ಳಬೇಕಾಗುತ್ತದೆ. ಈ ಬೇಸಿಗೆಯ ಸಮಯದಲ್ಲಿ ಹಲವರಿಗೆ ಬಿಸಿಲಿನ ಕಾರಣಕ್ಕೆ ಒಂದಿಷ್ಟು ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಅದ್ರಲ್ಲೂ ನಿಮಗೆ ಪಾದ, ಹಸ್ತವು ಉರಿಯಾಗುವುದು ಸಹ ದೊಡ್ಡ ಸಮಸ್ಯೆ ಆಗಿರಬಹುದು.
ರಾತ್ರಿ ಮಲಗಿದ ಸಮಯದಲ್ಲಿ ಪಾದ ಉರಿಬರುವ ಕಾರಣ ಹಲವರಿಗೆ ನಿದ್ರೆ ಮಾಡುವುದು ಕಷ್ಟವಾಗುತ್ತೆ. ಹಾಗೆ ದಿನದ ಕೆಲಸಗಳ ಮಾಡುವಾಗಲು ಪಾದ ಉರಿ ಹಾಗೆ ಹಸ್ತ ಉರಿ ಬರುವ ಕಾರಣದಿಂದ ಕಿರಿಕಿರಿ ಅನುಭವಿಸಬೇಕಾಗುತ್ತೆ. ಅದ್ರಲ್ಲೂ ಬಿಸಿಲಿನಲ್ಲಿ ಇಲ್ಲವೆ ಹೊರಗೆ ಓಡಾಟದ ಮೂಲಕ ಅವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇಂತಹ ಸಮಯದಲ್ಲಿ ಅವರು ಕೈಗಳಿಗೆ ಅಥವಾ ಪಾದಗಳಿವೆ ನೀರು ಹಾಕಿಕೊಳ್ಳುವುದು, ಐಸ್ ವಾಟರ್ನಿಂದ ತೊಳೆಯುವುದು, ಕೆಲವು ಕ್ರೀಮ್ ಹಚ್ಚಿಕೊಳ್ಳುವುದು ನೋಡಬಹುದು. ಇದೆಲ್ಲವೂ ತಾತ್ಕಾಲಿಕ ಪರಿಹಾರವಾಗಿರಬಹುದು. ಆದ್ರೆ ನಾವಿಂದು ಪಾದ ಉರಿ ಸೇರಿ ದೇಹದ ಉಷ್ಣಾಂಶವು ತಂಪಾಗಿಡಲು ಯಾವ ರೀತಿಯ ಜ್ಯೂಸ್ ಅನ್ನು ಮಾಡಿ ಕುಡಿಯಬೇಕು? ಇದಕ್ಕೆ ಸುಲಭದ ಪರಿಹಾರವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ದೇಹದ ಉಷ್ಣಾಂಶ ಸಮತೋಲನದಲ್ಲಿರುವ ಹಾಗೆ ನಿಮ್ಮ ತಂಪಾಗಿಡುವ ಈ ಜ್ಯೂಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿ ನಾವಿಲ್ಲಿ ನೋಡೋಣ.
ದೇಹ ತಂಪಾಗಿಡುವ ಈ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸೋಂಪುಕಾಳು
- ಕಲ್ಲು ಸಕ್ಕರೆ
- ಬಾದಾಮಿ ಕಾಳು
ದೇಹ ತಂಪಾಗಿಡುವ ಈ ಜ್ಯೂಸ್ ಮಾಡುವ ವಿಧಾನವೇನು?
ಮೊದಲು ಮುಕ್ಕಾಲು ಕಪ್ ಸೋಂಪು ಕಾಳನ್ನು ಒಂದು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಗರಿ ಗರಿ ಆಗುವ ಅವಶ್ಯಕತೆ ಇಲ್ಲ. ಸ್ವಲ್ಪ ಬಿಸಿಯಾದರೂ ಸಾಕು. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಅದೇ ಪಾತ್ರೆಗೆ ಬಾದಾಮಿ ಕಾಳುಗಳನ್ನು ಸಹ ಹಾಕಿಕೊಂಡು ಹುರಿದುಕೊಳ್ಳಬೇಕು. ನಂತರ ತೆಗೆದಿಟ್ಟುಕೊಳ್ಳಿ.
ಈಗ ಕಲ್ಲು ಸಕ್ಕರೆಯನ್ನ ಕುಟ್ಟಿ ಸ್ವಲ್ಪ ಪುಡಿ ಮಾಡಿಟ್ಟುಕೊಳ್ಳಿ. ಇನ್ನೊಂದು ಕಡೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದುಕೊಂಡಿದ್ದ ಎರಡು ಪದಾರ್ಥಗಳನ್ನು ಹಾಕಿ, ಹಾಗೆ ಇದಕ್ಕೆ ಕಲ್ಲು ಸಕ್ಕರೆ ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಪುಡಿಯನ್ನು ತಣ್ಣಗಾಗಲು ಒಂದು ಪ್ಲೇಟ್ಗೆ ಹಾಕಿಟ್ಟುಕೊಳ್ಳಿ.
ಈಗ ಈ ಪುಡಿಗೆ ಚಿಟಿಕೆ ಅರಶಿಣ ಹಾಕಿ ಮಿಶ್ರಣ ಮಾಡಿ. ನಂತರ ಒಂದು ಲೋಟದಲ್ಲಿ ನೀರು ತೆಗೆದುಕೊಂಡು ಅದಕ್ಕೆ ತಯಾರಿಸಿಕೊಂಡ ಈ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ ಇದನ್ನು ಕುಡಿಯಬೇಕು. ಬಿಸಿ ನೀರಿಗೆ ಹಾಕಿ ಕುಡಿಯಬೇಡಿ ಹಾಗೆ ಬಹಳ ತಂಪಿರುವ ನೀರಿನಲ್ಲೂ ಕುಡಿಯಬೇಡಿ. ಸಾಮಾನ್ಯ ನೀರಿನಲ್ಲಿ ಇದನ್ನು ಕುಡಿದುನೋಡಿ. ಇದಕ್ಕೆ ಒಂದು ನಿಂಬೆ ಹಣ್ಣಿನ ರಸ ಸಹ ಸೇರಿಸಬಹುದು, ಇದು ಸಪ್ಪೆ ಎನಿಸಿದರೆ ಬೆಲ್ಲ ಕೂಡ ಸೇರಿಸಿ ಸವಿಯಬಹುದು.
ನೀವು ಕೂಡ ಮನೆಯಲ್ಲಿ ಈ ರೀತಿ ಜ್ಯೂಸ್ ಒಮ್ಮೆ ಮಾಡಿ ಸವಿದು ನೋಡಿ. ದೇಹದ ತಂಪಾಗುವುದಲ್ಲದೆ, ಪಾದ, ಹಸ್ತದ ಉರಿ ಕಡಿಮೆಯಾಗುತ್ತದೆ. ಇದನ್ನು ಯಾವ ಸಮಯದಲ್ಲಿ ಬೇಕಾದರು ಕುಡಿಬಹುದು. ಸಂಜೆಯ ಸಮಯ ಅಥವಾ ಬೆಳಗ್ಗೆ ಉತ್ತಮವಾಗಿರಲಿದೆ. ಒಮ್ಮೆ ಇದರ ಪುಡಿ ಮಾಡಿಕೊಂಡಿದ್ದರೆ ನಿಮಗೆ ಯಾವಾಗ ಬೇಕೋ ಆವಾಗ ಸುಲಭವಾಗಿ ಜ್ಯೂಸ್ ತಯಾರಿಸಿ ಕುಡಿಯಬಹುದು.



Click it and Unblock the Notifications