Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಬಾಳೆದಿಂಡು ಹಾಗೂ ಬಾಳೆಹೂ ಹಾಕಿ ಮಾಡುವ ಪಲ್ಯ:ಕಿಡ್ನಿ ಸ್ಟೋನ್ ಹೋಗಲಾಡಿಸಲು ತುಂಬಾ ಒಳ್ಳೆಯದು
ಬಾಳೆಹೂವು ಹಾಗೂ ಬಾಳೆದಿಂಡು ಮಿಕ್ಸ್ ಮಾಡಿ ಮಾಡುವ ಪಲ್ಯದ ರೆಸಿಪಿ, ಇವುಗಳು ತುಂಬಾ ಟೇಸ್ಟ್ ಆಗಿರುತ್ತದೆ, ಅಲ್ಲದೆ ರುಚಿಯೂ ಸೂಪರ್ ಆಗಿರುತ್ತದೆ, ಇದೊಂದು ಸಿಂಪಲ್ ರೆಸಿಪಿ, ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಬಾಳೆದಿಂಡು 1 ಚಿಕ್ಕ ಪೀಸ್
ಬಾಳೆಹೂ 1
ಈರುಳ್ಳಿ 1
ಹಸಿ ಮೆಣಸು 2-3
ಎಣ್ಣೆ 2 ಚಮಚ
ಸ್ವಲ್ಪ ಕರಿಬೇವು
ಸ್ವಲ್ಪ ಸಾಸಿವೆ
ತೆಂಗಿನ ತುರಿ ಅಥವಾ 2 ಮೊಟ್ಟೆ
ಮಾಡುವ ವಿಧಾನ:
- ಬಾಳೆದಿಂಡು ಹಾಗೂ ಹೂವನ್ನು ಚಿಕ್ಕದಾಗಿ ಕತ್ತರಿಸಿ(ತುಂಬಾ ಚಿಕ್ಕದಾಗಿ ಕತ್ತರಿಸಬೇಕು)
- ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ನೀರು ಹಾಕಿಡಿ, ಅದರ ಕರೆ ಹೋಗಬೇಕು.
- ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
- ನಂತರ ಸಾಸಿವೆ ಹಾಕಿ
- ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ
- ನಂತರ ಈರುಳ್ಳಿ ಹಾಕಿ, ಹಸಿ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿ
- ಈಗ ಕತ್ತರಿಸಿಟ್ಟ ಬಾಳೆಹೂವು ಹಾಗೂ ಬಾಳೆದಿಂಡು ಹಾಕಿ ಹಾಕಿ ಮಿಕ್ಸ್ ಮಾಡಿ
- ನಂತರ ಸ್ವಲ್ಪ ನೀರು ಹಾಕಿ ಬೇಯಿಸಿ
- ನೀರು ಡ್ರೈಯಾಗುವವರೆಗೆ ಬೇಯಿಸಿ
- ನೀರು ಆವಿಯಾದ ಮೇಲೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ
- ನೀವು ತೆಂಗಿನತುರಿ ಬದಲಿಗೆ ಮೊಟ್ಟೆ ಹಾಕಿ ಮಿಕ್ಸ್ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.
- ಈ ಪಲ್ಯ ಸೇವನೆಯ ಪ್ರಯೋಜನಗಳು
- ದೇಹವನ್ನು ಡಿಟಾ್ಸ್ ಮಾಡುತ್ತದೆ: ಇದಲ್ಲಿರುವ ನಾರಿನಂಶ ಹೊಟ್ಟೆಯನ್ನು ಡಿಟಾಕ್ಸ್ ಮಾಡಿ ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಕಾರಿ. ಹೊಟ್ಟೆ ಶುದ್ಧವಾಗಿದ್ದರೆ ಒಟ್ಟು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ: ಈ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ, ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿಯಾಗಿದೆ.
ಕಿಡ್ನಿ ಸ್ಟೋನ್ ಹೊರ ಹಾಕಲು ಸಹಾಯ ಮಾಡುತ್ತದೆ: ಯಾರಿಗೆ ಕಿಡ್ನಿಸ್ಟೋನ್ ಸಮಸ್ಯೆ ಇದೆಯೋ ಅವರು ತಮ್ಮ ಆಹಾರಕ್ರಮದಲ್ಲಿ ಈ ಆಹಾರ ಸೇರಿಸಿದರೆ ತುಂಬಾ ಒಳ್ಳೆಯ ಪ್ರಯೋಜನ ಪಡೆಯಬಹುದು, ಮೂತ್ರದ ಮೂಲಕ ಕಿಡ್ನಿ ಸ್ಟೋನ್ ಹಾಕುತ್ತೆ, ಆರೋಗ್ಯ ವೃದ್ದಿಸಲು ತುಂಬಾನೇ ಸಹಕಾರಿಯಾಗಿದೆ. ಚಿಕ್ಕ ಕಿಡ್ನಿ ಸ್ಟೋನ್ ಯಾವುದೇ ಔಷಧಿ ತೆಗೆದುಕೊಳ್ಳದೆ ಈ ಆಹಾರ ಹೊರಹಾಕುತ್ತೆ, ಹಾಗಾಗಿ ಇಂಥ ಆಹಾರ ನಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಕಿಡ್ನಿ ಸ್ಟೋನ್ ತಡೆಗಟ್ಟಲು ಸಹಕಾರಿಯಾಗಿದೆ.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ: ಬಾಳೆದಿಂಡು ಹಾಗೂ ಹೂವು ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿಯಾಗಿದೆ.
ಮಧುಮೇಹಿಗಳಿಗೂ ತುಂಬಾ ಒಳ್ಳೆಯದು: ಈ ಬಾಳೆದಿಂಡು ಹಾಗೂ ಅದರ ಹೂವು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿರುವುದರಿಂದ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.



Click it and Unblock the Notifications