Latest Updates
-
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಚಳಿಗೆ ಅಮೃತದಂತಹ ರುಚಿಯ ಶುಂಠಿ ನಿಂಬೆ ಸೂಪ್! ಒಮ್ಮೆ ಹೀಗೆ ಮಾಡಿ ನೋಡಿ.. ಈ ರುಚಿ ಜನ್ಮದಲ್ಲಿ ಮರೆಯಲ್ಲ!
ಅಮೃತದಂತಹ ರುಚಿ ನೀಡುವ ಸೂಪ್! ಆರೋಗ್ಯಕ್ಕೂ ಸೈ, ರುಚಿಗೂ ಜೈ.. ಜೀರ್ಣಶಕ್ತಿ ಹೆಚ್ಚಿಸುವ ಸ್ಪೆಷಲ್ ರೆಸಿಪಿ. ಹೌದು, ದಕ್ಷಿಣ ಭಾರತೀಯರ ಅಡುಗೆಯಲ್ಲಿ ಸಾರು ಅಥವಾ ರಸಂಗೆ ವಿಶೇಷ ಸ್ಥಾನವಿದೆ. ಎಷ್ಟೇ ಬಗೆಯ ಭಕ್ಷ್ಯಗಳಿದ್ದರೂ, ಊಟದ ಕೊನೆಯಲ್ಲಿ ಸಾರು-ಅನ್ನ ಇದ್ದರಷ್ಟೇ ಪೂರ್ಣ ಕರದೊರಕುತ್ತದೆ ಎಂಬುದು ಹಲವರ ಅನುಭವ. ಸಾಮಾನ್ಯವಾಗಿ ಹುಣಸೆಹಣ್ಣು ಅಥವಾ ಟೊಮೆಟೊ ಬಳಸಿ ಸಾರು ತಯಾರಿಸಲಾಗುತ್ತದೆ.
ಆದರೆ, ಹುಣಸೆಹಣ್ಣಿನ ಬದಲು ಶುಂಠಿ ಮತ್ತು ನಿಂಬೆಹಣ್ಣನ್ನು ಪ್ರಮುಖವಾಗಿ ಬಳಸುವ 'ಅಲ್ಲಂ ನಿಮ್ಮಕಾಯ ಚಾರು' (Allam Nimmakaya Charu) ಕೇವಲ ರುಚಿಗೆ ಮಾತ್ರವಲ್ಲದೆ, ಆರೋಗ್ಯಕ್ಕೂ ಹೆಚ್ಚು ಪ್ರಯೋಜನಕಾರಿ. ಇದರ ಅದ್ಭುತ ರುಚಿ ಹಾಗೂ ಔಷಧೀಯ ಗುಣಗಳನ್ನು ಪರಿಗಣಿಸಿ, ಇದನ್ನು 'ಅಮೃತ'ಕ್ಕೆ ಹೋಲಿಸುವುದು ಅತಿಶಯೋಕ್ತಿಯಾಗಲಾರದು.

ಶೀತ, ಕೆಮ್ಮು ಹಾಗೂ ಗಂಟಲು ನೋವು
ಈ ಶುಂಠಿ-ಲಿಂಬೆ ಸಾರು (Ginger Lemon Saaru Recipe) ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ವಿಶೇಷವಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾದ ಶೀತ, ಕೆಮ್ಮು ಹಾಗೂ ಗಂಟಲು ನೋವಿಗೆ ಇದು ಅತ್ಯುತ್ತಮ ಪರಿಹಾರ. ಇದನ್ನು 'ರಾಮಬಾಣ' ಎಂದರೂ ತಪ್ಪಾಗಲಾರದು.
ಜ್ವರದಿಂದ ಬಾಯಿ ರುಚಿ ಕಳೆದುಕೊಂಡು ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಕಾಡಿದರೆ, ಈ ಸಾರನ್ನು ಸೇವಿಸುವುದರಿಂದ ತಕ್ಷಣವೇ ಆರಾಮ ದೊರೆಯುತ್ತದೆ. ಶುಂಠಿಯು ರೋಗನಿರೋಧಕ ಶಕ್ತಿ ಹೆಚ್ಚಿಸಿದರೆ, ನಿಂಬೆರಸವು ವಿಟಮಿನ್ 'ಸಿ' ಪೂರೈಸುತ್ತದೆ.
ಈ ಸಾರು ತಯಾರಿಸಲು ಅಗತ್ಯ ಸಾಮಗ್ರಿಗಳು
• ತೊಗರಿಬೇಳೆ (ಬೇಳೆ ನೀರು ಮಾತ್ರ ಬಳಸಬಹುದು)
• ಜಜ್ಜಿದ ಅಥವಾ ತುರಿದ ಶುಂಠಿ
• ನಿಂಬೆಹಣ್ಣು
• ಸೀಳಿದ ಹಸಿಮೆಣಸಿನಕಾಯಿ
• ನೀರು
• ಅರಿಶಿನ
• ರುಚಿಗೆ ತಕ್ಕಷ್ಟು ಉಪ್ಪು
• ಕೊತ್ತಂಬರಿ ಸೊಪ್ಪು
• ಕರಿಬೇವು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
• ತುಪ್ಪ
• ಸಾಸಿವೆ
• ಜೀರಿಗೆ
• ಒಣ ಮೆಣಸಿನಕಾಯಿ
• ಇಂಗು
ಈ ಸಾರು ತಯಾರಿಸುವ ವಿಧಾನ
- ಮೊದಲು ತೊಗರಿಬೇಳೆಯನ್ನು ಮೃದುವಾಗಿ ಬೇಯಿಸಿ, ಹದಮಾಡಿ ನೀರು ಸೇರಿಸಿ ಬೇಳೆ ನೀರು ಸಿದ್ಧಪಡಿಸಿಕೊಳ್ಳಿ. ಬೇಳೆ ನೀರು ಬಳಸುವುದರಿಂದ ಸಾರಿಗೆ ಉತ್ತಮ ದಪ್ಪ ಮತ್ತು ಹೆಚ್ಚು ರುಚಿ ದೊರೆಯುತ್ತದೆ.
- ಒಂದು ಪಾತ್ರೆಯಲ್ಲಿ 2-3 ಕಪ್ ನೀರು (ಅಥವಾ ಬೇಳೆ ನೀರು) ತೆಗೆದುಕೊಂಡು, ಅದಕ್ಕೆ ಜಜ್ಜಿದ ಶುಂಠಿ, ಸೀಳಿದ ಹಸಿಮೆಣಸು, ಕರಿಬೇವು, ಅರಿಶಿನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ಶುಂಠಿ ಮತ್ತು ಮೆಣಸಿನಕಾಯಿಯ ಸಾರ ನೀರಿನಲ್ಲಿ ಚೆನ್ನಾಗಿ ಬೆರೆಯಬೇಕು.
- ಸಣ್ಣ ಪ್ಯಾನ್ನಲ್ಲಿ ತುಪ್ಪ ಬಿಸಿ ಮಾಡಿ, ಸಾಸಿವೆ, ಜೀರಿಗೆ ಮತ್ತು ಒಣಮೆಣಸಿನಕಾಯಿ ಸೇರಿಸಿ. ಸಾಸಿವೆ ಸಿಡಿದ ನಂತರ ಇಂಗು ಹಾಕಿ ತಕ್ಷಣವೇ ಸ್ಟೌವ್ ಆಫ್ ಮಾಡಿ.
- ಈ ಸಿದ್ಧ ಒಗ್ಗರಣೆಯನ್ನು ಕುದಿಯುತ್ತಿರುವ ಸಾರಿಗೆ ಸೇರಿಸಿ ಪಾತ್ರೆ ಮುಚ್ಚಿಡಿ.
- ಒಗ್ಗರಣೆ ಸೇರಿಸಿದ ಬಳಿಕ ಸಾರನ್ನು ಒಂದೆರಡು ನಿಮಿಷ ಕುದಿಸಿ ಸ್ಟೌವ್ ಆಫ್ ಮಾಡಿ. ಸಾರು ಸ್ವಲ್ಪ ಬಿಸಿ ಕಡಿಮೆಯಾದ ನಂತರ ನಿಂಬೆರಸವನ್ನು ಹಿಂಡಿ. ಸಾರು ಕುದಿಯುತ್ತಿರುವಾಗ ನಿಂಬೆರಸ ಸೇರಿಸಿದರೆ ಅದು ಕಹಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ತಣ್ಣಗಾದ ಮೇಲೆ ಸೇರಿಸುವುದು ಉತ್ತಮ.
- ಅಂತಿಮವಾಗಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿಬಿಸಿಯಾದ ಮತ್ತು ಘಮಘಮಿಸುವ ಶುಂಠಿ-ಲಿಂಬೆ ಸಾರು ಸಿದ್ಧವಾಗುತ್ತದೆ.
ಸೇವಿಸುವ ವಿಧಾನ
ಈ ಸಾರನ್ನು ಬಿಸಿ ಅನ್ನದ ಜೊತೆಗೆ ತುಪ್ಪ ಬೆರೆಸಿ ಸವಿಯಬಹುದು. ಊಟಕ್ಕೆ ಬೇಡವೆಂದಿದ್ದಲ್ಲಿ, ಇದನ್ನು ಬಿಸಿಬಿಸಿಯಾಗಿ ಗ್ಲಾಸ್ನಲ್ಲಿ 'ಸೂಪ್' ನಂತೆ ಕುಡಿಯುವುದು ಗಂಟಲಿನ ಕಿರಿಕಿರಿ ಕಡಿಮೆ ಮಾಡಿ ದೇಹಕ್ಕೆ ಚೈತನ್ಯ ನೀಡಲು ಸಹಕಾರಿ.
ಆಧುನಿಕ ಜೀವನಶೈಲಿಯಿಂದಾಗಿ ಜೀರ್ಣಕ್ರಿಯೆಯ ಸಮಸ್ಯೆಗಳು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಈ ಸಾಂಪ್ರದಾಯಿಕ 'ಅಲ್ಲಂ ನಿಮ್ಮಕಾಯ ಚಾರು' ಹೊಟ್ಟೆಗೆ ತಂಪನ್ನು ಮತ್ತು ನಾಲಿಗೆಗೆ ಹಿತವಾದ ರುಚಿಯನ್ನು ನೀಡುತ್ತದೆ. ನಿಮ್ಮ ಅಡುಗೆಮನೆಯಲ್ಲಿ ಈ ಸುಲಭ ಮತ್ತು ಆರೋಗ್ಯಕರ ರೆಸಿಪಿಯನ್ನು ಇಂದೇ ಪ್ರಯತ್ನಿಸಿ.



Click it and Unblock the Notifications