Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಅಕಾಲಿಕ ಮಳೆಯಿಂದ ಕಾಡುವ ನೆಗಡಿ, ಕೆಮ್ಮಿಗೆ ಒಣ ಶುಂಠಿ ಕಷಾಯ
ಕೆಲವು ಕಡೆ ರಣ ಬಿಸಿಲು, ಇನ್ನು ಕೆಲವು ಕಡೆ ಮಳೆ ಬಂದು ಇಳೆ ತಂಪಾಗಿದೆ. ಮಳೆಯೇನೋ ಬಂದು ತಂಪು ಅನಿಸಿದೆ, ಆದರೆ ಅಕಾಲಿಕ ಮಳೆಯಿಂದ ಕೆಲವರಿಗೆ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ಶುರುವಾಗಿದೆ. ಈ ರೀತಿ ಸಾಮಾನ್ಯ ಶೀತ- ಕೆಮ್ಮಿಗೆ ಒಂದು ಕಷಾಯ ಕುಡಿದರೆ ಸಾಕು, ಶೀತ-ಕೆಮ್ಮು ಬಂದ ದಾರಿಗೆ ಸುಂಕವಿಲ್ಲದಂತೆ ಮರಳುತ್ತದೆ, ಅದರಲ್ಲೂ ಈ ಒಣ ಶುಂಠಿ ಇದೆಯೆಲ್ಲಾ ಇಂಥ ಸಮಸ್ಯೆಗೆ ರಾಮಬಾಣವಿದ್ದಂತೆ, ಬನ್ನಿ ಈ ಕಷಾಯದ ರೆಸಿಪಿ ತಿಳಿಯೋಣ:

Recipe By: Reena TK
Recipe Type: Home Remedies
Serves: 1
-
ಬೇಕಾಗುವ ಸಾಮಗ್ರಿ
ಒಣ ಶುಂಠಿ 1/4 ಚಮಚ
ಕಾಳು ಮೆಣಸು 1/4 ಚಮಚ
ಜೀರಿಗೆ 1/4 ಚಮಚ
ಲವಂಗ 1
ಏಲಕ್ಕಿ 1
ಬೆಲ್ಲ 2 ಚಮಚ
5 ತುಳಸಿ ಎಲೆ
ಅಮೃತ್ತ ಬಳ್ಳಿ ಚಿಕ್ಕ ತುಂಡು (Optional)
ನೀರು ಒಂದು ಕಪ್
-
ಮಾಡುವ ವಿಧಾನ
* ಒಂದು ಪಾತ್ರೆಗೆ ಒಂದು ಕಪ್ ನೀರು ಹಾಕಿ ಅದಕ್ಕೆ ಉಳಿದ ಸಾಮಗ್ರಿ ಹಾಕಿ ಕುದಿಸಿ.
* ಒಂದು ಕಪ್ ನೀರು ಚೆನ್ನಾಗಿ ಕುದಿ ಬಂದು ಅರ್ಧ ಕಪ್ಗೆ ಬರುವಷ್ಟು ಹೊತ್ತು ಕುದಿಸಿ.
* ಬೇಕಿದ್ದರೆ ಸ್ವಲ್ಪ ಅರಿಶಿಣ ಕೂಡ ಸೇರಿಸಬಹುದು, ಇದು ಗಂಟಲು ಕೆರೆತ ಕಡಿಮೆ ಮಾಡುವುದು.
* ನಂತರ ಉರಿಯಿಂದ ಇಳಿಸಿ ಕುಡಿಯುವ ಬಿಸಿ ಇರುವಾಗ ಈ ಕಷಾಯ ಹೀರಿ.
* ಈ ಕಷಾಯ ದಿನದಲ್ಲಿ ಎರಡು ಲೋಟ ಕುಡಿದರೆ ಸಾಕು ಕೆಮ್ಮು, ಶೀತ ಕಡಿಮೆಯಾಗುವುದು.
- ಒಣ ಶುಂಠಿ ಇಲ್ಲದಿದ್ದರೆ ಹಸಿ ಶುಂಠಿ ಬಳಸಬಹುದು



Click it and Unblock the Notifications