Latest Updates
-
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ!
ಅಕಾಲಿಕ ಮಳೆಯಿಂದ ಕಾಡುವ ನೆಗಡಿ, ಕೆಮ್ಮಿಗೆ ಒಣ ಶುಂಠಿ ಕಷಾಯ
ಕೆಲವು ಕಡೆ ರಣ ಬಿಸಿಲು, ಇನ್ನು ಕೆಲವು ಕಡೆ ಮಳೆ ಬಂದು ಇಳೆ ತಂಪಾಗಿದೆ. ಮಳೆಯೇನೋ ಬಂದು ತಂಪು ಅನಿಸಿದೆ, ಆದರೆ ಅಕಾಲಿಕ ಮಳೆಯಿಂದ ಕೆಲವರಿಗೆ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ಶುರುವಾಗಿದೆ. ಈ ರೀತಿ ಸಾಮಾನ್ಯ ಶೀತ- ಕೆಮ್ಮಿಗೆ ಒಂದು ಕಷಾಯ ಕುಡಿದರೆ ಸಾಕು, ಶೀತ-ಕೆಮ್ಮು ಬಂದ ದಾರಿಗೆ ಸುಂಕವಿಲ್ಲದಂತೆ ಮರಳುತ್ತದೆ, ಅದರಲ್ಲೂ ಈ ಒಣ ಶುಂಠಿ ಇದೆಯೆಲ್ಲಾ ಇಂಥ ಸಮಸ್ಯೆಗೆ ರಾಮಬಾಣವಿದ್ದಂತೆ, ಬನ್ನಿ ಈ ಕಷಾಯದ ರೆಸಿಪಿ ತಿಳಿಯೋಣ:

Recipe By: Reena TK
Recipe Type: Home Remedies
Serves: 1
-
ಬೇಕಾಗುವ ಸಾಮಗ್ರಿ
ಒಣ ಶುಂಠಿ 1/4 ಚಮಚ
ಕಾಳು ಮೆಣಸು 1/4 ಚಮಚ
ಜೀರಿಗೆ 1/4 ಚಮಚ
ಲವಂಗ 1
ಏಲಕ್ಕಿ 1
ಬೆಲ್ಲ 2 ಚಮಚ
5 ತುಳಸಿ ಎಲೆ
ಅಮೃತ್ತ ಬಳ್ಳಿ ಚಿಕ್ಕ ತುಂಡು (Optional)
ನೀರು ಒಂದು ಕಪ್
-
ಮಾಡುವ ವಿಧಾನ
* ಒಂದು ಪಾತ್ರೆಗೆ ಒಂದು ಕಪ್ ನೀರು ಹಾಕಿ ಅದಕ್ಕೆ ಉಳಿದ ಸಾಮಗ್ರಿ ಹಾಕಿ ಕುದಿಸಿ.
* ಒಂದು ಕಪ್ ನೀರು ಚೆನ್ನಾಗಿ ಕುದಿ ಬಂದು ಅರ್ಧ ಕಪ್ಗೆ ಬರುವಷ್ಟು ಹೊತ್ತು ಕುದಿಸಿ.
* ಬೇಕಿದ್ದರೆ ಸ್ವಲ್ಪ ಅರಿಶಿಣ ಕೂಡ ಸೇರಿಸಬಹುದು, ಇದು ಗಂಟಲು ಕೆರೆತ ಕಡಿಮೆ ಮಾಡುವುದು.
* ನಂತರ ಉರಿಯಿಂದ ಇಳಿಸಿ ಕುಡಿಯುವ ಬಿಸಿ ಇರುವಾಗ ಈ ಕಷಾಯ ಹೀರಿ.
* ಈ ಕಷಾಯ ದಿನದಲ್ಲಿ ಎರಡು ಲೋಟ ಕುಡಿದರೆ ಸಾಕು ಕೆಮ್ಮು, ಶೀತ ಕಡಿಮೆಯಾಗುವುದು.
- ಒಣ ಶುಂಠಿ ಇಲ್ಲದಿದ್ದರೆ ಹಸಿ ಶುಂಠಿ ಬಳಸಬಹುದು



Click it and Unblock the Notifications