Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಅಕಾಲಿಕ ಮಳೆಯಿಂದ ಕಾಡುವ ನೆಗಡಿ, ಕೆಮ್ಮಿಗೆ ಒಣ ಶುಂಠಿ ಕಷಾಯ
ಕೆಲವು ಕಡೆ ರಣ ಬಿಸಿಲು, ಇನ್ನು ಕೆಲವು ಕಡೆ ಮಳೆ ಬಂದು ಇಳೆ ತಂಪಾಗಿದೆ. ಮಳೆಯೇನೋ ಬಂದು ತಂಪು ಅನಿಸಿದೆ, ಆದರೆ ಅಕಾಲಿಕ ಮಳೆಯಿಂದ ಕೆಲವರಿಗೆ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ಶುರುವಾಗಿದೆ. ಈ ರೀತಿ ಸಾಮಾನ್ಯ ಶೀತ- ಕೆಮ್ಮಿಗೆ ಒಂದು ಕಷಾಯ ಕುಡಿದರೆ ಸಾಕು, ಶೀತ-ಕೆಮ್ಮು ಬಂದ ದಾರಿಗೆ ಸುಂಕವಿಲ್ಲದಂತೆ ಮರಳುತ್ತದೆ, ಅದರಲ್ಲೂ ಈ ಒಣ ಶುಂಠಿ ಇದೆಯೆಲ್ಲಾ ಇಂಥ ಸಮಸ್ಯೆಗೆ ರಾಮಬಾಣವಿದ್ದಂತೆ, ಬನ್ನಿ ಈ ಕಷಾಯದ ರೆಸಿಪಿ ತಿಳಿಯೋಣ:

Recipe By: Reena TK
Recipe Type: Home Remedies
Serves: 1
-
ಬೇಕಾಗುವ ಸಾಮಗ್ರಿ
ಒಣ ಶುಂಠಿ 1/4 ಚಮಚ
ಕಾಳು ಮೆಣಸು 1/4 ಚಮಚ
ಜೀರಿಗೆ 1/4 ಚಮಚ
ಲವಂಗ 1
ಏಲಕ್ಕಿ 1
ಬೆಲ್ಲ 2 ಚಮಚ
5 ತುಳಸಿ ಎಲೆ
ಅಮೃತ್ತ ಬಳ್ಳಿ ಚಿಕ್ಕ ತುಂಡು (Optional)
ನೀರು ಒಂದು ಕಪ್
-
ಮಾಡುವ ವಿಧಾನ
* ಒಂದು ಪಾತ್ರೆಗೆ ಒಂದು ಕಪ್ ನೀರು ಹಾಕಿ ಅದಕ್ಕೆ ಉಳಿದ ಸಾಮಗ್ರಿ ಹಾಕಿ ಕುದಿಸಿ.
* ಒಂದು ಕಪ್ ನೀರು ಚೆನ್ನಾಗಿ ಕುದಿ ಬಂದು ಅರ್ಧ ಕಪ್ಗೆ ಬರುವಷ್ಟು ಹೊತ್ತು ಕುದಿಸಿ.
* ಬೇಕಿದ್ದರೆ ಸ್ವಲ್ಪ ಅರಿಶಿಣ ಕೂಡ ಸೇರಿಸಬಹುದು, ಇದು ಗಂಟಲು ಕೆರೆತ ಕಡಿಮೆ ಮಾಡುವುದು.
* ನಂತರ ಉರಿಯಿಂದ ಇಳಿಸಿ ಕುಡಿಯುವ ಬಿಸಿ ಇರುವಾಗ ಈ ಕಷಾಯ ಹೀರಿ.
* ಈ ಕಷಾಯ ದಿನದಲ್ಲಿ ಎರಡು ಲೋಟ ಕುಡಿದರೆ ಸಾಕು ಕೆಮ್ಮು, ಶೀತ ಕಡಿಮೆಯಾಗುವುದು.
- ಒಣ ಶುಂಠಿ ಇಲ್ಲದಿದ್ದರೆ ಹಸಿ ಶುಂಠಿ ಬಳಸಬಹುದು



Click it and Unblock the Notifications