Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರೋಗಗಳ ಅಡಗುದಾಣ ಹೊಟ್ಟೆಗೆ ವಿಶ್ರಾಂತಿ

ಕೆಲವರು ಈ ಉಪವಾಸಗಳನ್ನು ಹೇಗೆ ಮಾಡುತ್ತಾರೆ ಅಂತೀರಾ? ಅನ್ನಾಹಾರ ತ್ಯಜಿಸು ಉಳಿದಿದ್ದೆಲ್ಲ ಇಳಿಸು. ಅಂದರೆ, ಬೆಳಿಗ್ಗೆ ಒಗ್ಗರಣೆ ಅವಲಕ್ಕಿ, ಮಧ್ಯಾಹ್ನಕ್ಕೆ ಫಲಾಹಾರ, ಸಾಯಂಕಾಲಕ್ಕೆ ತಟ್ಟೆ ತುಂಬ ಅವರೆಕಾಳು ಉಪ್ಪಿಟ್ಟಿನ ಜೊತೆಗೆ ಒಂದು ಚಂಬು ಬಾದಾಮಿ ಹಾಲು! ಪ್ರತಿದಿನ ಅನ್ನ ಹುಳಿ ಊಟ ಮಾಡಿ ಜಡ್ಡುಗಟ್ಟಿದ ನಾಲಿಗೆಗೆ ಒಂದು ದಿನ ವೈವಿಧ್ಯಮಯ ತಿಂಡಿಗಳನ್ನು ಸವಿಯುವ ಸುಯೋಗ. ಕೆಲ ಕಟ್ಟಾ ಪುರೋಹಿತರು, ಅರ್ಚಕರು ನಿಶ್ಚಕ್ರ ಉಪವಾಸ ಅಂತಲೂ ಮಾಡುತ್ತಾರೆ. ಒಂದು ತೊಟ್ಟು ತೀರ್ಥದ ಹೊರತಾಗಿ ಏನ್ನನ್ನೂ ಸೇವಿಸುವುದಿಲ್ಲ. ಅವರವರ ಮಾನಸಿಕ ಸ್ಥಿತಿಗೆ ತಕ್ಕಂತೆ ನಾನಾಬಗೆಯ ಉಪವಾಸ ಕೈಗೊಳ್ಳುತ್ತಾರೆ.
ಕೆಲವರಿಗೆ ಉಪವಾಸ ಅಂದರೆ ಜೀವ ಬಾಯಿಗೆ ಬಂದಿರುತ್ತದೆ. ಈರುಳ್ಳಿ ಹಾಕಿದ ಉಪ್ಪಿಟ್ಟು ತಿನ್ನೋದುಂಟಾ ಅಂತ ಸೆಟೆದುಕೊಂಡು ಹೋಗಿ ಕಾಕಾನ ಹೊಟೇಲಿನಲ್ಲಿ ಎರಡು ಮಸಾಲೆ ದೋಸೆ ಹೊಟ್ಟೆಗಿಳಿಸಿ ಮನೆಯವರ ಹೊಟ್ಟೆ ಉರಿಸಿದಾಗಲೇ ಅವರಿಗೆ ಸಮಾಧಾನ. ಜಿಹ್ವಾ ಚಾಪಲ್ಯ ಇದ್ದವರಿಗೆ ಉಪವಾಸದ ಮುಖಾಂತರ ಬಾಯಿ ಕಟ್ಟಿಹಾಕುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ, ಅಂತೀರಾ?
ದೇಹದ ಯೋಗಕ್ಷೇಮದ ಬಗ್ಗೆ ಕಾಳಜಿ ಉಳ್ಳವರು ನಿಯಮಿತವಾಗಿ ಮತ್ತು ನಿಷ್ಠೆಯಿಂದ ಉಪವಾಸ ಮಾಡುವುದರಿಂದಾಗುವ ದೇಹದ ಆರೋಗ್ಯದ ಮೇಲಾಗುವ ಪರಿಣಾಮದತ್ತ ಒಂದು ನೋಟ ಹರಿಸಿದರೆ ಉತ್ತಮ. ಉಪವಾಸದಲ್ಲೂ ನಾನಾ ವಿಧಾನಗಳಿವೆ. ಅಲ್ಪಾಹಾರದ ಉಪವಾಸ, ನೀರಿನ ಉಪವಾಸ, ಜ್ಯೂಸ್ ಉಪವಾಸ. ಆರೋಗ್ಯ ತಜ್ಞರ ಅಣತಿಯಂತೆ ಉಪವಾಸ ವ್ರತವನ್ನು ಕೈಗೊಳ್ಳುವುದ ಶ್ರೇಯಸ್ಕರ. ನಾನು ತಿನ್ನುವ ಆಹಾರದ ಬಗ್ಗೆ ಒಂದು ಹಿಡಿತ ಇಟ್ಟುಕೊಳ್ಳುವುದು ಮತ್ತು ಆಹಾರ ಸೇವನೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ದೂರವಿರಿಸಲು ಉಪವಾಸಗಳನ್ನು ಕೈಗೊಳ್ಳಬಹುದು.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಎಲ್ಲರಿಗೂ ತಿಳಿದದ್ದೇ. ಎಲ್ಲ ದೈನಂದಿನ ಕೆಲಸಗಳ ನಂತರ ರಾತ್ರಿ ನಿದ್ರಿಸುವ ಹಾಗೆ ಜೀರ್ಣಕ್ರಿಯೆಗೂ ವಿಶ್ರಾಂತಿಯ ಅಗತ್ಯವಿದೆ. ತಿಳಿದಿರಲಿ, ಅನೇಕ ರೋಗಗಳಿಗೆ ಹೊಟ್ಟೆಯೇ ಅಡಗುದಾಣ. ವಿಪರೀತ ತಿನ್ನುವುದು, ದೇಹಕ್ಕೆ ಒಗ್ಗದ ಆಹಾರವನ್ನು ತಿನ್ನುವುದು, ಆಹಾರ ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತವೆ. ಜಠರದಲ್ಲಿರುವ ಜಾಗದ ಅರ್ಧಭಾಗ ಆಹಾರ, ಕಾಲು ಭಾಗ ನೀರು ಮತ್ತು ಕಾಲು ಭಾಗ ಗಾಳಿಗೆ ಮೀಸಲಿಡಬೇಕು ಅಂತಾರೆ ವೈದ್ಯರು. ಆದರೆ, ನಮಗೆ ಕಂಠದವರೆಗೂ ತಿಂದರೇನೆ ತೃಪ್ತಿ, ತಿನ್ನಿಸಿದವರಿಗೂ ತೃಪ್ತಿ.
ನೀವು ನಿಮ್ಮ ದೇಹ ಮತ್ತು ಆರೋಗ್ಯವನ್ನು ಪ್ರೀತಿಸುವಿರಾದರೆ ಆಹಾರ ಸೇವನೆ ಕ್ರಮದ ಬಗ್ಗೆ ಮತ್ತು ಉಪವಾಸದ ಬಗ್ಗೆ ಚಿಂತಿಸುವುದು ಒಳಿತು. ಆಯ್ಯೋ, ವಾಕ್ ಮಾಡಿದರಾಯಿತು, ಗ್ಯಾಸ್ ಟ್ರಬಲ್ ಶುರುವಾದರೆ ಜೆಲ್ಯುಸಿಲ್ ಸಿರಪ್ ಕುಡಿದರಾಯಿತು ಅಂತ ವಾದಿಸುವವರು ಮತ್ತೊಮ್ಮೆ ಚಿಂತಿಸಲಿ.



Click it and Unblock the Notifications
