Just In
- 2 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 3 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 4 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 5 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಹಾ, ಸವಿಯಲು ಬಲು ರುಚಿ 'ಆಲೂ ಸಮೋಸಾ'
ಸಂಜೆಯ ತಂಪಾದ ವಾತಾವರಣದಲ್ಲಿ ಬಿಸಿಬಿಸಿಯಾದ ಚಹಾ ಹಾಗೂ ಅದರೊಟ್ಟಿಗೆ ನಾಲಿಗೆ ಚಪ್ಪರಿಸುವಂತಹ ತಿಂಡಿಯಿದ್ದರೆ ಅದರ ಅದ್ಭುತವೇ ಬೇರೆ. ಇಂತಹ ಸುಂದರ ಅನುಭವಕ್ಕೆ ಆರೋಗ್ಯಕರ ತಿಂಡಿಯಾದರೆ ಇನ್ನಷ್ಟು ದೇಹವು ಉತ್ಸುಕವಾಗಿರುತ್ತದೆ. ನಿಜ, ಸಂಜೆಯ ಲಘು ಉಪಹಾರಕ್ಕೆ ಒಂದು ಉತ್ತಮವಾದ ತಿಂಡಿ ಆಲೂ ಸಮೋಸಾ.
ಇದರಲ್ಲಿ ಪನ್ನೀರ್, ತರಕಾರಿ ಹಾಗೂ ಇನ್ನಿತರ ಆರೋಗ್ಯಕರ ಅಂಶ ಇರುವುದರಿಂದ ರುಚಿಯೊಂದಿಗೆ ಉತ್ತಮವಾದ ಆರೈಕೆಯೂ ಸಿಗುವುದು. ಹಾಗಾದರೆ ಬನ್ನಿ ಈ ರುಚಿಕರ ತಿಂಡಿಯನ್ನು ತಯಾರಿಸುವ ವಿಧಾನವನ್ನು ಅರಿಯೋಣ...
ಬೇಕಾಗುವ ಸಾಮಾಗ್ರಿಗಳು:
* 250 ಗ್ರಾಂ ಮೈದಾ
ಹಿಟ್ಟು
* 2 ಕಪ್ ಬೇಯಿಸಿದ ಆಲೂಗಡ್ಡೆಯ ಚೂರುಗಳು
* ಹಸಿರು ಬಟಾಣಿ ಸ್ವಲ್ಪ
* ಮೆಣಸಿನ ಕಾಯಿ ಸ್ವಲ್ಪ
* ಕಡಲೇಕಾಯಿ/ಶೇಂಗಾ ಸ್ವಲ್ಪ
* ಜೀರಿಗೆ ಸ್ವಲ್ಪ
* ಗರಮ್ ಮಸಾಲ
* ಚಾಟ್ ಮಸಾಲ
* ಹುಳಿ ಪುಡಿ/ಮಾವಿನ ಹುಳಿ ಪುಡಿ
* ಜೀರಿಗೆ ಪುಡಿ
* ಉಪ್ಪು
* ಮೆಣಸಿನ ಪುಡಿ/ಖಾರ ಪುಡಿ
* ಅರಿಶಿನ
* ಓಮ್ ಕಾಳು
* ಹುರಿಯಲು ಎಣ್ಣೆ
* ಬಿಸಿ ನೀರು
* ಸಮೋಸಾ ಮಾಡಲು ತುಪ್ಪ
ವಿಧಾನ:
1. ಬೆಚ್ಚಗಿನ ನೀರಿಗೆ ತುಪ್ಪ, ಉಪ್ಪು, ಓಮ್ಕಾಳು ಒಂದು ಚಮಚ ಎಲ್ಲವನ್ನು ಸೇರಿಸಿ
ಮೃದುವಾಗಿ ಹಿಟ್ಟನ್ನು ಕಲಸಿ, 30 ನಿಮಿಷಗಳ ಕಾಲ ಬಿಡಿ.
2. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಜೀರಿಗೆಯನ್ನು ಹುರಿಯಿರಿ.
ನಂತರ ಮೆಣಸಿನ ಕಾಯಿ, ಅರಿಶಿನ, ಜೀರಿಗೆ ಪುಡಿ, ಹುಳಿ ಪುಡಿಯನ್ನು ಸೇರಿಸಿ.
3. ಆಲೂಗಡ್ಡೆ, ಹಸಿರು ಬಟಾಣಿ, ಹಸಿರು ಮೆಣಸಿನ ಕಾಯಿ, ಕಡಲೇ ಬೀಜವನ್ನು ಸೇರಿಸಿ.
ಚೆನ್ನಾಗಿ ಮಿಶ್ರಣಗೊಳಿಸಿ. ನಂತರ ಉಪ್ಪು, ಗರಮ್ ಮಸಾಲೆ, ಚಾಟ್ ಮಸಾಲೆಯನ್ನು
ಸೇರಿಸಿ ಮಿಶ್ರಣಗೊಳಿಸಿ. ಬಳಿಕ ಉರಿಯಿಂದ ಕೆಳಗಿಳಿಸಿ.
4. ಕಲಸಿಟ್ಟುಕೊಂಡ ಹಿಟ್ಟನ್ನು ಚಿಕ್ಕ ತ್ರಿಕೋನ ಆಕಾರದಲ್ಲಿ ಲಟ್ಟಿಸಿಕೊಂಡು
ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ. ನಂತರ ಬೆರಳುಗಳ ಸಹಾಯದಿಂದ ಮುಚ್ಚಿ.
5. ಹುರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿರಿ. ಕಾದ ತಕ್ಷಣ
ತ್ರಿಭುಜಾಕೃತಿಯ ಸಮೋಸವನ್ನು ಎಣ್ಣೆಯಲ್ಲಿ ಬಿಡಿ.
6. ಎಣ್ಣೆಯಲ್ಲಿ ನೊರೆಯಗುಳ್ಳೆಗಳು ಕಡಿಮೆಯಾದಂತೆ ಕಂದು ಬಣ್ಣಕ್ಕೆ
ತಿರುಗುತ್ತವೆ.
7. ಆಗ ಎಣ್ಣೆಯಿಂದ ತೆಗೆದು ಕಾಗದದ ಮೇಲೆ ಹಾಕಿ.
8. ಈಗ ಬಿಸಿ ಬಿಸಿ ಇರುವಾಗಲೇ ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್ನೊಂದಿಗೆ
ಸವಿಯಲು ನೀಡಿ.