Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಆಲೂ ಮಸಾಲೆ ತುಂಬಿದ ಮೆಣಸಿನಕಾಯಿ ಬಜ್ಜಿ ರೆಸಿಪಿ: ಟೀ ಜೊತೆ ಸವಿಯಲು ಬಲು ಟೇಸ್ಟ್
ಈ ಮಳೆಯಲ್ಲಿ ಈ ಬಜ್ಜಿ, ಬೋಂಡಾವೆಲ್ಲ ತುಂಬಾನೇ ಪ್ರಿಯವಾಗುವುದು. ಹಿರಗಡೆ ಸುರಿಯುತ್ತಿರುವ ಮಳೆ ಕೈಯಲ್ಲಿ ಬಿಸಿ ಬಿಸಿಯಾದ ಟೀ, ಜೊತೆಗೆ ಆಲೂ ಮಸಾಲೆ ತುಂಬಿದ ಈ ಮೆಣಸಿನ ಬಜ್ಜಿ ಸವಿಯುತ್ತಿದ್ದರೆ ಆ ಕ್ಷಣ ಎಲ್ಲಾ ಚಿಂತೆ ಮರೆತು ನಿಮ್ಮೆಲ್ಲಾ ಗಮನ ಬಜ್ಜಿ ಮೇಲೆಯೇ ಇರುತ್ತದೆ.
ಹೌದು ಹೊರಗಡೆ ನಿಮಗೆ ಇಂಥ ಬಜ್ಜಿ ಸಿಗಲ್ಲ ಕೊಡುವ 10, 20 ರುಪಾಯಿಗೆ ಈ ರೀತಿ ಆಲೂ ಮಸಾಲೆ ತುಂಬಿ ಕೊಟ್ಟರೆ ಲಾಭ ಕಷ್ಟ ಅಂತ ಈ ರೀತಿಯ ಬಜ್ಜಿ ಮಾಡುವುದಿಲ್ಲ, ಹಾಗಶಗಿ ಈ ರುಚಿಯ ಬಜ್ಜಿ ನೀವು ಮನೆಯಲ್ಲಿಯೇ ಮಾಡಬೇಕು.

ಬನ್ನಿ ಆಲೂ ಮಸಾಲೆ ತುಂಬಿದ ಮೆಣಸಿನಕಾಯಿ ಬಜ್ಜಿ ಮಾಡುವುದು ಹೇಗೆ ಎಂದು ನೋಡೋಣ:
ಸ್ಟೆಪ್ 1
ಬೇಕಾಗುವ ಸಾಮಗ್ರಿ
ಬೇಯಿಸಿದ ಆಲೂಗಡ್ಡೆ 2
ಈರುಳ್ಳಿ 2 (ಸಾಧಾರಣ ಗಾತ್ರದ್ದು)
1/2 ಚಮಚ ಮೆಣಸಿನ ಪುಡಿ
1/4 ಚಮಚ ಕಾಳು ಮೆಣಸಿನ ಪುಡಿ
1/4 ಚಮಚ ಅರಿಶಿಣ ಪುಡಿ
ಸ್ವಲ್ಪ ಜೀರಿಗೆ ಪುಡಿ
1/4 ಚಮಚ ಉಪ್ಪಿನ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ಟೆಪ್ 2
ಈಗ ಒಂದು ಲೋಟದಲ್ಲಿ 2 ಚಮಚ ಕಡ್ಲೆಹಿಟ್ಟು, 1 ಚಮಚ ಅಕ್ಕಿ ಹಿಟ್ಟು, ಉಪ್ಪು,
ಮೆಣಸಿನ ಪುಡಿ ನೀರು ಸೇರಿಸಿ ಮಿಕ್ಸ್ ಮಾಡಿ.
ಈಗ ನೀವು ತೊಳದಿಟ್ಟ ಬಜ್ಜಿ ಮೆಣಸು ತೆಗೆದು ಕತ್ತರಿಸಿ, ಅದರೊಳಗಡೆ ಮಿಕ್ಸ್ ಮಾಡಿಟ್ಟ ಆಲೂಗಡ್ಡೆಯನ್ನು ಚಿಕ್ಕ ರೋಲ್ ರೀತಿ ಮಾಡಿ ತುಂಬಿ
ಸ್ಟೆಪ್ 3
ಎಣ್ಣೆಯನ್ನು ಕಾಯಿಸಿ
'ನಂತರ ಮೆಣಸನ್ನು ಮೆಲ್ಲನೆ ಕಡ್ಲೆಹಿಟ್ಟು ಮಿಶ್ರಣಕ್ಕೆ ಅದ್ದಿ ಎಣ್ಣೆಯಲ್ಲಿ
ಬಿಡಿ
ನೀವು ಈ ರೀತಿ ಮೆಣಸಿನಕಾಯಿ ಬಜ್ಜಿ ಮಾಡಿ ನೋಡಿ.
ಬಿಸಿ ಬಿಸಿಯಾದ ಟೀ ಜೊತೆಗೆ ಈ ಬಿಸಿ ಬಿಸಿ ಬಜ್ಜಿ ಸವಿದರೆ ಸ್ವರ್ಗಕ್ಕೆ ಕಿಚ್ಚು
ಹಚ್ಚೆಂದ ಸರ್ವಜ್ಞ..



Click it and Unblock the Notifications