Latest Updates
-
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು!
ಮಗು ಜನಿಸಿದ ಕೂಡಲೇ ಹೊಕ್ಕಳ ಬಳ್ಳಿ ಸಂಗ್ರಹಿಸಿಟ್ಟರೆ ಈ ಪ್ರಯೋಜನಗಳಿವೆ
ನೀವು ಗರ್ಭಿಣಿಯಾಗಿದ್ದರೆ ಮಗುವಿನ ಹೊಕ್ಕಳ ಬಳ್ಳಿ ಸಂಗ್ರಹಿಸಿಡುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು, ಇದರಿಂದ ತುಂಬಾನೇ ಪ್ರಯೋಜನವಿದೆ. ಹೆಚ್ಚಿನವರು ಹೊಕ್ಕಳ ಬಳ್ಳಿ ಒಣಗಿದ ಮೇಲೆ ಅದು ಬಿದ್ದು ಹೋಗುತ್ತದೆ ಅದನ್ನು ಬಿಸಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗೆ ಜೀವ ರಕ್ಷಕವಾಗುವುದು ಈ ಹೊಕ್ಕಳ ಬಳ್ಳಿ. ಆದ್ದರಿಂದ ಸಂಗ್ರಹಿಸಿಡುವುದು ಒಳ್ಳೆಯದು. ಇದರ ಕುರಿತು ಹೆಚ್ಚಿನ ವಿವರ ನೋಡುವುದಾದರೆ

ಹೊಕ್ಕಳ ಬಳ್ಳಿ ಬ್ಯಾಂಕಿಂಗ್ ಕುರಿತು ಹೇಳುವುದಾದರೆ
ಹೊಕ್ಕಳ ಬಳ್ಳಿ ಬ್ಯಾಂಕಿಂಗ್ನಲ್ಲಿ ಸಂಗ್ರಹಿಸಿಡುವುದರಿಂದ ಕ್ಯಾನ್ಸರ್, ರೋಗನಿರೋಧ ಶಕ್ತಿ ಕಡಿಮೆ ಇರುವುದು ಹಾಗೂ ವಂಶವಾಹಿಯಾಗಿ ಬರುವ ಕೆಲವೊಂದು ಕಾಯಿಲೆಯನ್ನು ತಡೆಗಟ್ಟಲು ತುಂಬಾನೇ ಪ್ರಯೋಜನಕಾರಿಯಾಗಿದೆ. ಲುಕೆಮಿಯಾ, ತಲಾಸ್ಸೆಮಿಯಾ ಮುಂತಾದ ಕಾಯಿಲೆಯಿಂದ ವ್ಯಕ್ತಿಯನ್ನು ರಕ್ಷಣೆ ಮಾಡಲು ಹೊಕ್ಕಳ ಬಳ್ಳಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಮಗು ಹುಟ್ಟಿದ ಕೂಡಲೇ ಹೊಕ್ಕಳ ಬಳ್ಳಿಯನ್ನು ಅದಕ್ಕಾಗಿಯೇ ಇರುವ ಬ್ಯಾಂಕಿಂಗ್ನಲ್ಲಿ ಸಂಗ್ರಹಿಸಿಡುವುದರಿಂದ ಭವಿಷ್ಯದಲ್ಲಿ ಅವಶ್ಯಕ ಬಿದ್ದಾಗ ತುಂಬಾನೇ ಪ್ರಯೋಜನಕಾರಿಯಾಗಿದೆ.
ವಿಶ್ವದಲ್ಲಿ hematopoietic ಸ್ಟೆಮ್ ಸೆಲ್ ಟ್ರಾನ್ಸ್ಪ್ಲ್ಯಾಂಟ್ಗೆ ತುಂಬಾನೇ ಬೇಡಿಕೆ ಇದೆ, ಪ್ರತಿವರ್ಷ ಸುಮಾರು 90, 000 ರೋಗಿಗಳಿಗೆ ಟ್ರಾನ್ಸ್ಪ್ಲ್ಯಾಂಟ್ ಚಿಕಿತ್ಸೆ ನೀಡಲಾಗುತ್ತಿದೆ, ಹೊಕ್ಕಳ ಬಳ್ಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಚಿಕ್ಕ ಪ್ರಾಯದಲ್ಲಿ ಮಕ್ಕಳಿಗೆ ಕ್ಯಾನ್ಸರ್ ಕಾಯಿಲೆ ಬಂದರೆ ಅವರ ಜೀವ ರಕ್ಷಣೆಗೆ ಈ ಹೊಕ್ಕಳ ಬಳ್ಳಿ ಸಹಕಾರಿಯಾಗಿದೆ. ಹೊಕ್ಕಳ ಬಳ್ಳಿ ದಾನಿಗಳು ತುಂಬಾ ಕಡಿಮೆ, ಒಂದು ವೇಳೆ ಸಿಕ್ಕರೂ ಮ್ಯಾಚ್ ಹೊಂದುವುದು ಕಡಿಮೆ, ಆದ್ದರಿಂದ ಅವರದ್ದೇ ಹೊಕ್ಕಳಬಳ್ಳಿ ಸಂಗ್ರಹಿಸಿಟ್ಟರೆ ಭವಿಷ್ಯದಲ್ಲಿ ಏನಾದರೂ ಅಪಾಯ ಉಂಟಾದರೆ ಉಪಕಾರಿಯಾದೀತು.
ಹೊಕ್ಕಳ ಬಳ್ಳಿಯನ್ನು ಬ್ಯಾಂಕಿಂಗ್ ಮಾಡುವುದರಿಂದ ದೊರೆಯುವ ಪ್ರಯೋಜನಗಗಳು
1. ಹೊಕ್ಕಳ ಬಳ್ಳಿ ರಕ್ತವನ್ನು ಮಗು ಜನಿಸಿದ ಕೂಡಲೇ ಸಂಗ್ರಹಿಸಿ ನಂತರ ಸಂಗ್ರಹಿಸಿ ಇಡಲಾಗುವುದು. ಇದನ್ನು ಕುಟುಂಬದಲ್ಲಿ ಯಾರಿಗಾದರೂ ಸಮಸ್ಯೆಯಾದಗಲೂ ಬಳಸಿಕೊಳ್ಳಬಹುದು. ಏಕೆಂದರೆ ಮ್ಯಾಚ್ ಆಗುವ ಸಾಧ್ಯತೆ ಹೆಚ್ಚು.
2. ಮ್ಯಾಚ್ ಹುಡುಕುವುದು ಕಷ್ಟವಾಗಲ್ಲ: ಹೊಕ್ಕಳ ಬಳ್ಳಿ ರಕ್ತವನ್ನು ಸಂಗ್ರಹಿಸಿಡುವುದರಿಂದ ಅಗ್ಯತಬಿದ್ದಾಗ ಸುಲಭದಲ್ಲಿ ಬಳಸಿಕೊಳ್ಳಬಹುದು. ದಾನಿಗಳನ್ನು ಹುಡುಕಿದರೆ ಸಿಗುವುದು ತುಂಬಾನೇ ಕಷ್ಟ. ಸಾವಿನ ಸಂಖ್ಯೆ ಕುಗ್ಗಿಸುತ್ತದೆ: ಅಸ್ಥಿ ಮಜ್ಜೆ ಟ್ರಾನ್ಸ್ಪ್ಲ್ಯಾಂಟ್ ಚಿಕಿತ್ಸೆಯಲ್ಲಿ ಇದು ಸಹಾಯವಾಗುವುದು. ಇದರಿಂದ ಜೀವ ಉಳಿಸಿಕೊಳ್ಳಲು ಸಾಧ್ಯವಾಗುವುದು.



Click it and Unblock the Notifications