Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸನ್ನಡತೆಯ ಮಕ್ಕಳು ಬಯಸುವ ದಂಪತಿ ಯಾವ ದಿನಗಳಲ್ಲಿ ಒಂದಾಗಬಾರದು?
ಸನಾತನ ಧರ್ಮದಲ್ಲಿ ಯೋಗ್ಯ ಗುಣದ ಮಕ್ಕಳನ್ನು ಪಡೆಯುವುದರ ಬಗ್ಗೆಯೂ ಹೇಳಲಾಗಿದೆ. ಪೋಷಕರು ತಮ್ಮ ಮಕ್ಕಳ ಗುಣ ತುಂಬಾ ಚೆನ್ನಾಗಿರಬೇಕೆಂದರೆ ಅಂದರೆ ಸನ್ನಡತೆಯ ಮಕ್ಕಳನ್ನು ಬಯಸುವುದಾದರೆ ಕೆಲವೊಂದು ದಿನಗಳಲ್ಲಿ ಗಂಡ-ಹೆಂಡತಿ ಒಂದಾಗಬಾರದು ಎಂದು ಹೇಳಲಾಗುವುದು.

ಕೆಲವೊಂದು ದಿನಗಳ ಗರ್ಭಧಾರಣೆಗೆ ಮಂಗಳಕರವಾಗಿದ್ದು, ಇನ್ನು ಕೆಲವು ಗುಣಗಳು ಅಮಂಗಳಕರವಾಗಿದೆ. ಇದರ ಬಗ್ಗೆ ಮತ್ತಷ್ಟು ವಿವರಗಳನ್ನು ನೋಡೋಣ:

ಗರ್ಭಸಂಸ್ಕಾರ
ಗರ್ಭಸಂಸ್ಕಾರದಲ್ಲಿ ಯೋಗ್ಯ ಗುಣದ ಮಕ್ಕಳನ್ನು ಪಡೆಯುವುದು ಹೇಗೆ ಎಂದು ಹೇಳಲಾಗಿದೆ. ಜೀವನ ಆತ್ಮ ಗರ್ಭದಳಗಿನ ಆತ್ಮಕ್ಕೆ ಹೊಕ್ಕಾಗಿನಿಂದ ಪ್ರಾರಂಭವಾಗುವುದು. ಮಕ್ಕಳ ಗುಣ, ಆಸೆ, ನಡತೆ ಇತರ ಗುಣಗಳು ಅವರು ಗರ್ಭದಲ್ಲಿರುವಾಗಲೇ ಬೆಳೆಯುತ್ತದೆಯಂತೆ. ಆದ್ದರಿಂದ ಗರ್ಭಿಣಿ ಮಹಿಳೆ ಸದಾ ಒಳ್ಳೆಯ ಆಲೋಚನೆಗಳನ್ನು ಮಾಡಬೇಕೆಂದು ಹೇಳುವುದು.

ಹಿಂದೂ ಧರ್ಮದಲ್ಲಿ ಸೃಷ್ಟಿಯ ಪರಿಕಲ್ಪನೆ
ಹಿಂದೂ ಶಾಸ್ತ್ರದ ಪ್ರಕಾರ ದಂಪತಿ ಒಂದು ಜೀವವನ್ನು ಸೃಷ್ಟಿಸುವ ಮುನ್ನ ತಾವು ಎಂಥ ಮಗುವಿಗೆ ಜ್ನಮ ನೀಡುವುದು ಒಳ್ಳೆಯದು ಎಂದು ಹೇಳಲಾಗಿದೆ. ಒಂದು ಮಗುವಿಗೆ ಜನ್ಮ ನೀಡುವ ಮೊದಲೇ, ತಮ್ಮ ಮಗುವಿನಲ್ಲಿ ಸನ್ನಡತೆಯ ಬಗ್ಗೆ ಯೋಚಿಸಬೇಕು. ಒಳ್ಳೆಯ ಗುಣದ, ಸನ್ನಡತೆ ಮಕ್ಕಳು ಜನಿಸಬೇಕೆಂದರೆ ಕೆಲವೊಂದು ದಿನಗಳಲ್ಲಿ ದಂಪತಿ ಒಂದಾಗಬಾರದು ಎಂದು ಹೇಳಲಾಗುವುದು.

ಶುಭ ಘಳಿಗೆಯಲ್ಲಿ ಮಗು ರೂಪತಾಳಬೇಕು
ನಾವೆಲ್ಲಾ ಮಗು ಜನಿಸುವಾಗ ಮಗು ಶುಭ ಘಳಿಗೆಯಲ್ಲಿ ಜನಿಸಬೇಕು, ಅದರ ನಕ್ಷತ್ರ ಚೆನ್ನಾಗಿರಬೇಕು ಎಂದೆಲ್ಲಾ ಬಯಸುತ್ತೇವೆ, ಆದರೆ ನಿಮಗೆ ಗೊತ್ತೇ? ಹಿಂದೂ ಧರ್ಮದಲ್ಲಿ ಗರ್ಭಧಾರಣೆಯೂ ಶುಭ ಘಳಿಗೆಯಲ್ಲಿ ಆಗಬೇಕೆಂದು ಹೇಳಲಾಗುವುದು. ಆದ್ದರಿಂದ ಸಂತಾನೋತ್ಪತ್ತಿಗಾಗಿ ಗಂಡ-ಹೆಂಡತಿ ಒಂದಾಗುವಾಗ ಒಳ್ಳೆಯ ದಿನಗಳಲ್ಲಿ ಒಂದಾಗಬೇಕು.
ಮಗುವಿನ ಭವಿಷ್ಯಕ್ಕೆ ಒಳ್ಳೆಯದು
ಶುಭ ಘಳಿಗೆಯಲ್ಲಿ ಮಗು ರೂಪುಗೊಂಡರೆ ಆ ಮಗು ಜನಿಸಿದರೆ ಒಳ್ಳೆಯ ಗುಣಗಳನ್ನು ಹೊಂದಿರುವುದು ಮಾತ್ರವಲ್ಲ ಆ ಮಗುವಿನ ಭವಿಷ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುವುದು.

ಅಶುಭ ಸಮಯದಲ್ಲಿ ಗರ್ಭಧಾರಣೆ
ಗರ್ಭ ಸಂಸ್ಕಾರ ಪ್ರಕಾರ ಅಶುಭ ಸಮಯದಲ್ಲಿ ಗರ್ಭಧಾರಣೆಯಾದರೆ ಆ ಮಕ್ಕಳ ಗುಣ-ನಡತೆ ಚೆನ್ನಾಗಿರುವುದಿಲ್ಲ, ಅಂಥ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುವುದು.

ಈ ದಿನಗಳಲ್ಲಿ ಗರ್ಭಧರಿಸುವುದು ಒಳ್ಳೆಯದಲ್ಲ
ಮಂಗಳವಾರ: ಗರ್ಭ ಸಂಸ್ಕಾರ ಪ್ರಕಾರ ಮಂಗಳವಾರ ದಂಪತಿ ಒಂದಾಗಬಾರದು, ಏಕೆಂದರೆ ಮಂಗಳವಾರ ಗರ್ಭಧಾರಣೆಗೆ ಶುಭ ದಿನವಲ್ಲ, ಏಕೆಂದರೆ ಮಂಗಳವಾರ ಮಂಗಳ ಗ್ರಹದ ಪ್ರಭಾವವಿರುತ್ತದೆ. ಈ ಸಮಯದಲ್ಲಿ ಗರ್ಭಧಾರಣೆಯಾದರೆ ಆ ಮಗುವಿನಲ್ಲಿ ಕ್ರೂರ ಗುಣವಿರುತ್ತದೆ ಎಂದು ಹೇಳಲಾಗುವುದು. ಚಿಕ್ಕ ಸಾಧನೆಗೂ ತುಂಬಾ ಕಷ್ಟಪಡಬೇಕಾಗುವುದು ಎಂದು ಹೇಳಲಾಗುವುದು.
ಶನಿವಾರ
ಶನಿವಾರ ಗರ್ಭಧಾರಣೆಗೆ ಸೂಕ್ತವಲ್ಲ ಎಂದು ಹೇಳಲಾಗುವುದು, ಏಕೆಂದರೆ ಈ ದಿನ ಶನಿಗ್ರಹದ ಪ್ರಭಾವವಿರುತ್ತದೆ, ಇದರಿಂದ ಮಗು ತುಂಬಾ ದೈಹಿಕ ತೊಂದರೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಅನುಭವಿಸುವುದು ಎಂದು ಹೇಳಲಾಗುವುದು.
ಭಾನುವಾರ
ಗರ್ಭಧಾರಣೆಗೆ ಭಾನುವಾರ ಗಂಡ-ಹೆಂಡತಿ ಒಂದಾಗಬಾರದು ಎಂದು ಹೇಳಲಾಗುವುದು. ಈ ದಿನ ಸೂರ್ಯದೇವನ ಪೂಜೆಗಷ್ಟೇ ಮೀಸಲು ಎಂದು ಹೇಳಲಾಗುವುದು. ಈ ದಿನವನ್ನು ಸೂರ್ಯದೇವನ ಆರಾಧನೆಯಲ್ಲಿ ಕಳೆಯಬೇಕು. ಈ ದಿನ ಗರ್ಭದಾರಣೆಯಾದರೆ ಮಗುವಿನಲ್ಲಿ ತುಂಬಾ ಕೋಪ, ಉರಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಅಲ್ಲದೆ ಆತ್ಮವಿಶ್ವಾಸದ ಕೊರತೆ ಇರುವುದು ಎಂದು ಹೇಳಲಾಗುವುದು.

ಗರ್ಭಧಾರಣೆಗೆ ಯಾವ ದಿನ ಶುಭ
ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಗರ್ಭಧಾರಣೆ ತುಂಬಾನೇ ಶುಭ ದಿನ ಎಂದು ಹೇಳಲಾಗುವುದು.
ಇನ್ನು ಗ್ರಹಣ, ಅಮವಾಸ್ಯೆ ಈ ದಿನಗಳಲ್ಲಿ ಕೂಡ ಮಗುವಿಗಾಗಿ ಪ್ರಯತ್ನಿಸಬಾರದು ಎಂದು ಹೇಳಲಾಗುವುದು.
ಗರ್ಭ ಸಂಸ್ಕಾರದಲ್ಲಿ ಗಂಡ ಹೆಂಡತಿ ಒಂದಾಗುವುದರ ಬಗ್ಗೆ ಈ ರೀತಿ ಹೇಳಲಾಗಿದೆ
* ಗಂಡ -ಹೆಂಡತಿ ಪರಸ್ಪರ ಒಪ್ಪಿಗೆ ಹಾಗೂ ಪ್ರೀತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು.
* ಮುಟ್ಟು, ಗರ್ಭಾವಸ್ಥೆ, ಕಾಯಿಲೆ ಇರುವಾಗ ಹಾಗೂ ತುಂಬಾ ಆಹಾರ ಸೇವಿಸಿದ ಮೇಲೆ ಒಂದಾಗಬಾರದು
* ಊಟ ಮಾಡಿದ ಎರಡು ಗಂಟೆಯ ಮೂಲಕ ಲೈಂಗಿ ಕ್ರಿಯೆಯಲ್ಲಿ ತೊಡಗಬಹುದು.



Click it and Unblock the Notifications