Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಗರ್ಭಪಾತ ತರಬಹುದೇ ಆರೋಗ್ಯಕ್ಕೆ ಅಪಾಯ?

ಗರ್ಭಪಾತವಾದಾಗ ಗಮನಿಸಬೇಕಾದ ಅಂಶಗಳು:
* ಗರ್ಭಪಾತ ಉಂಟಾದಾಗ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆಯಿಲ್ಲ. ಈ ಸಮಯದಲ್ಲಿ ತುಂಬಾ ವಿಶ್ರಾಂತಿ ತೆಗೆದುಕೊಳ್ಳಬೇಕು. ಆದರೆ ವಿಪರೀತ ರಕ್ತಸ್ರಾವ ಉಂಟಾದರೆ ಆಸ್ಪತ್ರೆಗೆ ಹೋಗಬೇಕು.
* ಆದರೆ ಕೆಲವರಿಗೆ ಗರ್ಭಿಣಿಯಾಗಿದ್ದಾಗ ಸ್ವಲ್ಪ ರಕ್ತಸ್ರಾವ ಉಂಟಾಗಬಹುದು. ಅದಕ್ಕಾಗಿ ಭಯ ಪಡಬೇಕಾಗಿಲ್ಲ. ತುಂಬಾ ರಕ್ತ ಸ್ರಾವ ಉಂಟಾದರೆ ಮಾತ್ರ ವೈದ್ಯರನ್ನು ಕೂಡಲೇ ಕಾಣಬೇಕು.
* ಅಬಾರ್ಷನ್ ಪಿಲ್ಸ್ ಸೇವಿಸಿ ಅಬಾರ್ಷನ್ ಆದರೆ ಅಥವಾ ಗರ್ಭಪಾತವಾದಾಗ ಕೆಲವೊಮ್ಮೆ ಭ್ರೂಣವು ಸಂಪೂರ್ಣವಾಗಿ ಹೋಗುವುದಿಲ್ಲ. ಈ ಭ್ರೂಣ ಗರ್ಭಕೋಶದಲ್ಲಿ ಹಾಗೇ ಉಳಿದುಕೊಂಡರೆ ಗರ್ಭಕೋಶದ ಆರೋಗ್ಯಕ್ಕೆ ಅಪಾಯ. ಆದ್ದರಿಂದ ಗರ್ಭಪಾತ ಆದರೆ ಸತ್ತ ಭ್ರೂಣದ ಅಂಶ ಹೊಟ್ಟೆಯಲ್ಲಿ ಉಳಿದಿಲ್ಲ ಅನ್ನುವುದನ್ನು ವೈದ್ಯರನ್ನು ಕಂಡು ಖಚಿತಪಡಿಸಿಕೊಳ್ಳಬೇಕು.
*ಗರ್ಭಪಾತವಾಗಿ ವಿಪರೀತ ರಕ್ತಸ್ರಾವವಾದರೆ ರಕ್ತಹೀನತೆ ಉಂಟಾಗಬಹುದು. ಆದ್ದರಿಂದ ಗರ್ಭಪಾತವಾದಾಗ ದೇಹದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬಾರದು.
* ಗರ್ಭಪಾತವಾದ ನಂತರ ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ನೀಡಬೇಕು. ಗರ್ಭಪಾತವಾದ ಕೆಲವು ವಾರಗಳವರೆಗೆ ಸಂಗಾತಿ ಜೊತೆ ಸೇರಬಾರದು.
* ಗರ್ಭಪಾತವಾದ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳಾದ ಆಸ್ಪಿರಿನ್ (aspirin), ಐಬೂಫ್ರೊಫೆನ್(ibuprofen) ಮುಂತಾದ ಮಾತ್ರೆಗಳನ್ನು ಸೇವಿಸಬಾರದು. ಈ ಮಾತ್ರೆಗಳು ಮಿತಿಮಿರಿದ ರಕ್ತಸ್ರಾವಕ್ಕೆ ಕಾರಣವಾಗುವುದು ಅಲ್ಲದೆ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಉಂಟು ಮಾಡುತ್ತದೆ.
* ಗರ್ಭಪಾತ ಉಂಟಾದಾದೆ ದೈಹಿಕ ನೋವು ಕೆಲವೇ ವಾರಗಳಲ್ಲಿ ಕಡಿಮೆಯಾಗುತ್ತದೆ. ಅದರೆ ಮಾನಸಿಕ ನೋವು ತುಂಬಾ ಇರುವುದರಿಂದ ಈ ಸಮಯದಲ್ಲಿ ಮನೆಯವರು ಅವರಿಗೆ ಮಾನಸಿಕ ಅರೋಗ್ಯ ತುಂಬಬೇಕು.



Click it and Unblock the Notifications