Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಗರ್ಭಪಾತ ತರಬಹುದೇ ಆರೋಗ್ಯಕ್ಕೆ ಅಪಾಯ?

ಗರ್ಭಪಾತವಾದಾಗ ಗಮನಿಸಬೇಕಾದ ಅಂಶಗಳು:
* ಗರ್ಭಪಾತ ಉಂಟಾದಾಗ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆಯಿಲ್ಲ. ಈ ಸಮಯದಲ್ಲಿ ತುಂಬಾ ವಿಶ್ರಾಂತಿ ತೆಗೆದುಕೊಳ್ಳಬೇಕು. ಆದರೆ ವಿಪರೀತ ರಕ್ತಸ್ರಾವ ಉಂಟಾದರೆ ಆಸ್ಪತ್ರೆಗೆ ಹೋಗಬೇಕು.
* ಆದರೆ ಕೆಲವರಿಗೆ ಗರ್ಭಿಣಿಯಾಗಿದ್ದಾಗ ಸ್ವಲ್ಪ ರಕ್ತಸ್ರಾವ ಉಂಟಾಗಬಹುದು. ಅದಕ್ಕಾಗಿ ಭಯ ಪಡಬೇಕಾಗಿಲ್ಲ. ತುಂಬಾ ರಕ್ತ ಸ್ರಾವ ಉಂಟಾದರೆ ಮಾತ್ರ ವೈದ್ಯರನ್ನು ಕೂಡಲೇ ಕಾಣಬೇಕು.
* ಅಬಾರ್ಷನ್ ಪಿಲ್ಸ್ ಸೇವಿಸಿ ಅಬಾರ್ಷನ್ ಆದರೆ ಅಥವಾ ಗರ್ಭಪಾತವಾದಾಗ ಕೆಲವೊಮ್ಮೆ ಭ್ರೂಣವು ಸಂಪೂರ್ಣವಾಗಿ ಹೋಗುವುದಿಲ್ಲ. ಈ ಭ್ರೂಣ ಗರ್ಭಕೋಶದಲ್ಲಿ ಹಾಗೇ ಉಳಿದುಕೊಂಡರೆ ಗರ್ಭಕೋಶದ ಆರೋಗ್ಯಕ್ಕೆ ಅಪಾಯ. ಆದ್ದರಿಂದ ಗರ್ಭಪಾತ ಆದರೆ ಸತ್ತ ಭ್ರೂಣದ ಅಂಶ ಹೊಟ್ಟೆಯಲ್ಲಿ ಉಳಿದಿಲ್ಲ ಅನ್ನುವುದನ್ನು ವೈದ್ಯರನ್ನು ಕಂಡು ಖಚಿತಪಡಿಸಿಕೊಳ್ಳಬೇಕು.
*ಗರ್ಭಪಾತವಾಗಿ ವಿಪರೀತ ರಕ್ತಸ್ರಾವವಾದರೆ ರಕ್ತಹೀನತೆ ಉಂಟಾಗಬಹುದು. ಆದ್ದರಿಂದ ಗರ್ಭಪಾತವಾದಾಗ ದೇಹದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬಾರದು.
* ಗರ್ಭಪಾತವಾದ ನಂತರ ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ನೀಡಬೇಕು. ಗರ್ಭಪಾತವಾದ ಕೆಲವು ವಾರಗಳವರೆಗೆ ಸಂಗಾತಿ ಜೊತೆ ಸೇರಬಾರದು.
* ಗರ್ಭಪಾತವಾದ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳಾದ ಆಸ್ಪಿರಿನ್ (aspirin), ಐಬೂಫ್ರೊಫೆನ್(ibuprofen) ಮುಂತಾದ ಮಾತ್ರೆಗಳನ್ನು ಸೇವಿಸಬಾರದು. ಈ ಮಾತ್ರೆಗಳು ಮಿತಿಮಿರಿದ ರಕ್ತಸ್ರಾವಕ್ಕೆ ಕಾರಣವಾಗುವುದು ಅಲ್ಲದೆ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಉಂಟು ಮಾಡುತ್ತದೆ.
* ಗರ್ಭಪಾತ ಉಂಟಾದಾದೆ ದೈಹಿಕ ನೋವು ಕೆಲವೇ ವಾರಗಳಲ್ಲಿ ಕಡಿಮೆಯಾಗುತ್ತದೆ. ಅದರೆ ಮಾನಸಿಕ ನೋವು ತುಂಬಾ ಇರುವುದರಿಂದ ಈ ಸಮಯದಲ್ಲಿ ಮನೆಯವರು ಅವರಿಗೆ ಮಾನಸಿಕ ಅರೋಗ್ಯ ತುಂಬಬೇಕು.



Click it and Unblock the Notifications









