Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರ್ಭಪಾತ ತರಬಹುದೇ ಆರೋಗ್ಯಕ್ಕೆ ಅಪಾಯ?

ಗರ್ಭಪಾತವಾದಾಗ ಗಮನಿಸಬೇಕಾದ ಅಂಶಗಳು:
* ಗರ್ಭಪಾತ ಉಂಟಾದಾಗ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆಯಿಲ್ಲ. ಈ ಸಮಯದಲ್ಲಿ ತುಂಬಾ ವಿಶ್ರಾಂತಿ ತೆಗೆದುಕೊಳ್ಳಬೇಕು. ಆದರೆ ವಿಪರೀತ ರಕ್ತಸ್ರಾವ ಉಂಟಾದರೆ ಆಸ್ಪತ್ರೆಗೆ ಹೋಗಬೇಕು.
* ಆದರೆ ಕೆಲವರಿಗೆ ಗರ್ಭಿಣಿಯಾಗಿದ್ದಾಗ ಸ್ವಲ್ಪ ರಕ್ತಸ್ರಾವ ಉಂಟಾಗಬಹುದು. ಅದಕ್ಕಾಗಿ ಭಯ ಪಡಬೇಕಾಗಿಲ್ಲ. ತುಂಬಾ ರಕ್ತ ಸ್ರಾವ ಉಂಟಾದರೆ ಮಾತ್ರ ವೈದ್ಯರನ್ನು ಕೂಡಲೇ ಕಾಣಬೇಕು.
* ಅಬಾರ್ಷನ್ ಪಿಲ್ಸ್ ಸೇವಿಸಿ ಅಬಾರ್ಷನ್ ಆದರೆ ಅಥವಾ ಗರ್ಭಪಾತವಾದಾಗ ಕೆಲವೊಮ್ಮೆ ಭ್ರೂಣವು ಸಂಪೂರ್ಣವಾಗಿ ಹೋಗುವುದಿಲ್ಲ. ಈ ಭ್ರೂಣ ಗರ್ಭಕೋಶದಲ್ಲಿ ಹಾಗೇ ಉಳಿದುಕೊಂಡರೆ ಗರ್ಭಕೋಶದ ಆರೋಗ್ಯಕ್ಕೆ ಅಪಾಯ. ಆದ್ದರಿಂದ ಗರ್ಭಪಾತ ಆದರೆ ಸತ್ತ ಭ್ರೂಣದ ಅಂಶ ಹೊಟ್ಟೆಯಲ್ಲಿ ಉಳಿದಿಲ್ಲ ಅನ್ನುವುದನ್ನು ವೈದ್ಯರನ್ನು ಕಂಡು ಖಚಿತಪಡಿಸಿಕೊಳ್ಳಬೇಕು.
*ಗರ್ಭಪಾತವಾಗಿ ವಿಪರೀತ ರಕ್ತಸ್ರಾವವಾದರೆ ರಕ್ತಹೀನತೆ ಉಂಟಾಗಬಹುದು. ಆದ್ದರಿಂದ ಗರ್ಭಪಾತವಾದಾಗ ದೇಹದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬಾರದು.
* ಗರ್ಭಪಾತವಾದ ನಂತರ ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ನೀಡಬೇಕು. ಗರ್ಭಪಾತವಾದ ಕೆಲವು ವಾರಗಳವರೆಗೆ ಸಂಗಾತಿ ಜೊತೆ ಸೇರಬಾರದು.
* ಗರ್ಭಪಾತವಾದ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳಾದ ಆಸ್ಪಿರಿನ್ (aspirin), ಐಬೂಫ್ರೊಫೆನ್(ibuprofen) ಮುಂತಾದ ಮಾತ್ರೆಗಳನ್ನು ಸೇವಿಸಬಾರದು. ಈ ಮಾತ್ರೆಗಳು ಮಿತಿಮಿರಿದ ರಕ್ತಸ್ರಾವಕ್ಕೆ ಕಾರಣವಾಗುವುದು ಅಲ್ಲದೆ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಉಂಟು ಮಾಡುತ್ತದೆ.
* ಗರ್ಭಪಾತ ಉಂಟಾದಾದೆ ದೈಹಿಕ ನೋವು ಕೆಲವೇ ವಾರಗಳಲ್ಲಿ ಕಡಿಮೆಯಾಗುತ್ತದೆ. ಅದರೆ ಮಾನಸಿಕ ನೋವು ತುಂಬಾ ಇರುವುದರಿಂದ ಈ ಸಮಯದಲ್ಲಿ ಮನೆಯವರು ಅವರಿಗೆ ಮಾನಸಿಕ ಅರೋಗ್ಯ ತುಂಬಬೇಕು.



Click it and Unblock the Notifications
