Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನಾಲ್ಕನೇ ತಿಂಗಳಿನಲ್ಲಿ ಗರ್ಭಪಾತ : ಎಚ್ಚರಿಕೆಯ ಗಂಟೆ

ಗರ್ಭಪಾತ ಮಾಡಿ ಒಂದು ಜೀವವನ್ನು ಕೊಲ್ಲುವುದು ತಪ್ಪು. ಆದರೆ ಆ ಗರ್ಭದಿಂದ ತಾಯಿಯ ಆರೋಗ್ಯಕ್ಕೆ ಅಪಾಯ ಉಂಟಾಗುವುದಾದರೆ ಅಂತಹ ಸಂದರ್ಭದಲ್ಲಿ ಗರ್ಭಪಾತ ಮಾಡಬೇಕು.
ಗರ್ಭಿಣಿಯಾಗಿ 3 ತಿಂಗಳವರೆಗೆ ತುಂಬಾ ಎಚ್ಚರವಹಿಸಬೇಕೆಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಈ ಸಮಯದಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ನಾಲ್ಕನೇ ತಿಂಗಳಿನಿಂದ ಗರ್ಭಪಾತವಗುವ ಸಾಧ್ಯತೆ ಕಡಿಮೆ. ಆದರೆ ಕೆಲವರಿಗೆ ಅನಾರೋಗ್ಯದ ಕಾರಣದಿಂದ ಅಥವಾ ಮತ್ಯಾವುದೋ ಕಾರಣದಿಂದ ಗರ್ಭಪಾತ ಉಂಟಾಗಬಹುದು.
ಈ ರೀತಿ ಗರ್ಭಪಾತ ಉಂಟಾದರೆ ಕೂಡಲೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಹೊಟ್ಟೆಯಲ್ಲಿ ಸತ್ತಂತಹ ಭ್ರೂಣವನ್ನು ಹೊರತೆಗೆಯಬೇಕು, ಇಲ್ಲದಿದ್ದರೆ ಗರ್ಭಿಣಿಯ ಪ್ರಾಣಕ್ಕೆ ಅಪಾಯ ಉಂಟಾಗುವುದು. ಸವಿತರವರ ವಿಷಯದಲ್ಲೂ ಆದದ್ದು ಹೀಗೆಯೇ. ಸರಿಯಾದ ಚಿಕಿತ್ಸೆ ನೀಡಿ ಅವರ ಹೊಟ್ಟೆಯಲ್ಲಿ ಉಳಿದ ಭ್ರೂಣವನ್ನು ತೆಗೆದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗುತ್ತಿರಲಿಲ್ಲ.
ನಾಲ್ಕನೇ ತಿಂಗಳಿನಲ್ಲಿ ಗರ್ಭಪಾತ ಯಾವಾಗ ಉಂಟಾಗುತ್ತದೆ?
* ಗರ್ಭಿಣಿಯಾದಾಗ ಗರ್ಭಕೋಶದ ಇಕ್ಕಟ್ಟು ಭಾಗದಲ್ಲಿ ಅನೇಕ ಬದಲಾವಣೆ ಉಂಟಾಗುತ್ತದೆ. ಗರ್ಭಿಣಿಯರು ರಕ್ತ ಸ್ರಾವವಾಗುತ್ತಿದೆ ಎಂದು ಅನುಭವಾದರೆ ಕೂಡಲೇ ವೈದ್ಯರನ್ನು ಕಾಣಬೇಕು. ಇಲ್ಲದಿದ್ದರೆ ವಿಪರೀತ ರಕ್ತಸ್ರಾವ ಉಂಟಾಗಿ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಸೋಂಕು, ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅಥವಾ ಹೊಟ್ಟೆಗೆ ಏನಾದರೂ ಪೆಟ್ಟು ಬಿದ್ದರೆ ಗರ್ಭಪಾತ ಉಂಟಾಗಬಹುದು.
* ಗರ್ಭಿಣಿಯಾಗಿದ್ದಾಗ ಸ್ವಲ್ಪ ರಕ್ತ ಸ್ರಾವ ಕಂಡರು ಕೂಡಲೇ ವೈದ್ಯರನ್ನು ಕಾಣಬೇಕು.
* ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆ ನಡೆಸಬಹುದೆಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವರಿಗೆ ಲೈಂಗಿಕ ಕ್ರಿಯೆಯ ನಂತರ ರಕ್ತ ಕಂಡು ಬರುವುದು. ಈ ರೀತಿ ಕಂಡು ಬಂದರೆ ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.
ವೈದ್ಯರು ಸ್ಕ್ಯಾನ್ ಮಾಡಿ ಮಗುವಿನ ಆರೋಗ್ಯದ ಬಗ್ಗೆ ಹೇಳುತ್ತಾರೆ. ಒಂದು ವೇಳೆ ರಕ್ತಸ್ರಾವ ಕಂಡು ಕೂಡಲೇ ಚಿಕಿತ್ಸೆಯನ್ನು ಪಡೆದರೆ ಮಗುವಿಗೆ ಅಪಾಯ ಉಂಟಾಗುವ ಸಾಧ್ಯತೆ ಕಡಿಮೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ತಾಯಿ-ಮಗುವಿನ ಪ್ರಾಣಕ್ಕೂ ಅಪಾಯ ಉಂಟಾಗಬಹುದು. ಒಂದು ವೇಳೆ ಮಗುವಿನಿಂದಾಗಿ ಗರ್ಭಿಣಿಯ ಪ್ರಾಣಕ್ಕೆ ಅಪಾಯ ಉಂಟಾಗುವುದಾದರೆ ಆ ಸಂದರ್ಭದಲ್ಲಿ ಅಬಾರ್ಷನ್ ಮಾಡುವುದು ವೈದ್ಯರ ಕರ್ತವ್ಯ ಕೂಡ.



Click it and Unblock the Notifications











