Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಅಧ್ಯಯನ ವರದಿ: ಎದೆಹಾಲು ಮಗುವಿಗೆ ಅಮೃತ ಸಮಾನ
ತಾಯಿಯ ಎದೆಹಾಲು ಕೆಲವೊಂದು ಸೋಂಕುಗಳೊಂದಿಗೆ ಹೋರಾಡುವ ದಿವ್ಯ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದು ಸಂರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಇದನ್ನು "ಪ್ಯಾಸೀವ್ ಇಮ್ಯುನಿಟಿ" ಎಂಬುದಾಗಿ ಕರೆಯಲಾಗಿದೆ.
ತಾಯಿಯ ಎದೆಹಾಲು ಅಮೃತ ಸಮಾನ ಎಂಬ ಮಾತಿದೆ. ಜನಿಸಿದ ಮಗುವಿಗೆ ಈ ಎದೆಹಾಲು ಮೊದಲ ಆಹಾರವಾಗಿದ್ದು
ಹಲವಾರು ರೋಗಗಳಿಂದ ಕಂದಮ್ಮನನ್ನು ಕಾಪಾಡುವ ದಿವ್ಯ ಅಮೃತ ಔಷಧ ಎಂದೆನಿಸಿದೆ. ಟಿಬಿಯಂತಹ ಕಾಯಿಲೆಗೆ ಹೇಗೆ ಲಸಿಕೆಗಳು ಅಥವಾ ಚುಚ್ಚುಮದ್ದು ಕೆಲಸ ಮಾಡುತ್ತದೆ ಅಂತೆಯೇ ಎದೆಹಾಲು ಕೂಡ ಎಂಬುದಾಗಿ ಹೊಸ ಸಂಶೋಧನೆಯೊಂದು ತಿಳಿಸಿದೆ.

ಕೆಲವೊಂದು ಲಸಿಕೆಗಳನ್ನು ಕಂದಮ್ಮನಿಗೆ ನೀಡಲಾಗುವುದಿಲ್ಲ ಅಂತೆಯೇ ಇದು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬುದಾಗಿ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಪ್ರೊಫೆಸರ್ ಅಮೇ ವಾಕರ್ ತಿಳಿಸಿದ್ದಾರೆ. ತಾಯಿಗೆ ಲಸಿಕೆಗಳನ್ನು ನೀಡಿ ಅಥವಾ ಆಕೆ ಗರ್ಭಿಣಿಯಾಗುವುದಕ್ಕೆ ಮುನ್ನ ಆಕೆಯ ಲಸಿಕೆಯನ್ನು ವರ್ಧಿಸಿದಲ್ಲಿ ಈ ರೋಗನಿರೋಧಕವು ಕೋಶಗಳಿಗೆ ವರ್ಗಾವಣೆಗೊಂಡು ಮಗುವಿಗೆ ಹಾಲುಣಿಸುವಾಗ ಮಗುವುದು ಪೂರ್ವದಲ್ಲೇ ಸಂರಕ್ಷಿತವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದವರು ನುಡಿದಿದ್ದಾರೆ.
ತಾಯಿಯ ಎದೆಹಾಲು ಕೆಲವೊಂದು ಸೋಂಕುಗಳೊಂದಿಗೆ ಹೋರಾಡುವ ದಿವ್ಯ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದು
ಸಂರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಇದನ್ನು "ಪ್ಯಾಸೀವ್ ಇಮ್ಯುನಿಟಿ" ಎಂಬುದಾಗಿ ಕರೆಯಲಾಗಿದೆ. ಮಗುವಿನಲ್ಲೂ
ರೋಗನಿರೋಧಕ ಸಾಮರ್ಥ್ಯವನ್ನು ತುಂಬುವಲ್ಲಿ ಎದೆಹಾಲಿನಲ್ಲಿರುವ ಅಂಶಗಳು ಸಹಕಾರಿಯಾಗಿದೆ ಎಂಬುದಾಗಿ
ಸಂಶೋಧನೆಯು ತಿಳಿಸಿದೆ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು
ಎದೆಹಾಲಿನಲ್ಲಿರುವ ನಿರ್ದಿಷ್ಟ ರೋಗನಿರೋಧಕ ಕೋಶಗಳು ಮಗುವಿನ ಕರುಳಿನ ಗೋಡೆಯನ್ನು ಬೇಧಿಸಿ ರೋಗನಿರೋಧಕ ಅಂಗವಾದ ಥೈಮಸ್ ಅನ್ನು ಪ್ರವೇಶಿಸುತ್ತದೆ. ತದನಂತರ ಈ ಕೋಶಗಳು ಬೆಳವಣಿಗೆಯನ್ನು ಕಂಡುಕೊಳ್ಳುತ್ತವೆ.
ವಿಜ್ಞಾನಿಗಳು ಈ ಸಂಶೋಧನೆಯನ್ನು ಕೈಗೊಳ್ಳಲು ಇಲಿಯನ್ನು ಬಳಸಿಕೊಂಡಿದ್ದು ಮಗುವಿನ ದೇಹದಲ್ಲಿ ಹಾಲಿನ ಕೋಶಗಳು ಅವಶ್ಯಕವಾಗಿವೆ ಎಂಬುದನ್ನು ಇದು ತಿಳಿಯಪಡಿಸಿದೆ. ಈ ಸಂಶೋಧನೆಯು ತಾಯಿಯನ್ನು ವ್ಯಾಸಿನೇಟ್ ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದು ಇದರಿಂದ ಮಗುವಿಗೂ ವ್ಯಾಸಿನೇಶನ್ (ಚುಚ್ಚುಮದ್ದು) ಶಕ್ತಿ ದೊರೆಯುತ್ತದೆ ಎಂಬುದು ತಿಳಿದು ಬಂದಿದೆ. ಎದೆ ಹಾಲು vs ಬಾಟಲಿ ಹಾಲು, ಮಗುವಿಗೆ ಯಾರು ಹಿತವರು?
ನೇರವಾಗಿ ಮಗುವಿಗೆ ಚುಚ್ಚುಮದ್ದು ನೀಡುವುದರಿಂದ ಕೂಡ ಟಿಬಿಗೆ ಸೂಕ್ತ ಉಪಚಾರ ದೊರೆತಿಲ್ಲದೇ ಇರುವುದು ಕಂಡುಬಂದಿದೆ. ಆದರೆ ತಾಯಿಗೆ ವ್ಯಾಸಿನೇಶನ್ ಮಾಡುವುದು ಮಗುವಿಗೆ ಎಲ್ಲಾ ರೀತಿಯಲ್ಲೂ ಸಂರಕ್ಷಣೆಯನ್ನು ನೀಡುತ್ತದೆ. ಎದೆ ಹಾಲನ್ನು ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು ಎದೆ ಹಾಲನ್ನು ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು ಚುಚ್ಚು ಮದ್ದು ಮಾಡಿದ ತಾಯಿಯು ಮಗುವಿಗೆ ನಿತ್ಯವೂ ಹಾಲುಣಿಸುವುದರಿಂದ ಮಗುವಿನ ರೋಗನಿರೋಧಕ ಶಕ್ತಿಯನ್ನು ಟಿಬಿಗೆ ವಿರುದ್ಧವಾಗಿ ಬೆಳೆಸಲು ಸಹಾಯಕವಾಗುತ್ತದೆ ಎಂಬುದಾಗಿ ವಾಕರ್ ತಿಳಿಸಿದ್ದಾರೆ.



Click it and Unblock the Notifications


