Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಲ್ಯದಲ್ಲಿಯೇ ಮಾನಸಿಕ ಒತ್ತಡ, ತರುವುದು ಅಪಾಯ
ಚಿಕ್ಕ ಪ್ರಾಯದಲ್ಲಿಯೇ ಅಧಿಕ ಮಾನಸಿಕ ಒತ್ತಡಕ್ಕೆ ಒಳಗಾದ ಮಕ್ಕಳು ದೊಡ್ಡವರಾದಾಗ ಗುಣ ಪಡಿಸಲಾಗದ ಮಾನಸಿಕ ಮತ್ತು ದೈಹಿಕ ನೋವನ್ನು ಅನುಭವಿಸುತ್ತಾರೆ ಅನ್ನುವುದು ಕ್ಯಾಲಿಫೋನಿರ್ಯಾ ಯೂನಿವರ್ಸಿಟಿಯಲ್ಲಿ ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.
ಕೌಟುಂಬಿಕ ಕಲಹಗಳು, ವಿಚ್ಛೇದನ ಇವೆಲ್ಲವೂ ಮಕ್ಕಳ ಮೇಲೆ ಅಧಿಕ ಪರಿಣಾಮವನ್ನು ಬೀರುತ್ತದೆ. ಕೌಟುಂಬಿಕ ಕಲಹದಿಂದಾಗಿ ಹೆಚ್ಚಿನ ತಾಯಿಂದಿರು ತಮ್ಮ ಮಕ್ಕಳ ಬೇಕು-ಬೇಡಗಳ ಕಡೆ ಗಮನ ಕೊಡಲು ಮರೆತು ಬಿಡುತ್ತಾರೆ. ಇದರಿಂದ ಮಕ್ಕಳ ಮೇಲೆ ಪ್ರಭಾವ ಮಾತ್ರ ತುಂಬಾ ಕೆಟ್ಟದ್ದು. ಮಕ್ಕಳು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಅವರ ಮುಂದಿನ ಬದುಕಿನ ಮೇಲೆ ಕೆಟ್ಟ ಪ್ರಭಾವ ಬೀರುವುದು.

ಚಿಕ್ಕ ಪ್ರಾಯದಲ್ಲಿ ಮಾನಸಿಕ ಒತ್ತಡ ಅನುಭವಿಸಿದರೆ ಬೆಳೆದಂತೆ ಮಾನಸಿಕ ನೋವಿನ ಜೊತೆ ದೈಹಿಕ ನೋವುಗಳು ಕಂಡು ಬರುವುದು. ಕೆಲವರಿಗೆ ಸ್ಟ್ರೋಕ್ ಬರುವ ಸಾಧ್ಯತೆ ಕೂಡ ಇದೆ. ಸ್ನಾಯು ಸೆಳೆತ ಕಂಡು ಬರುವುದು. ಯಾವುದೇ ಔಷಧಿಗಳು ಈ ನೋವನ್ನು ಕಡಿಮೆ ಮಾಡುವಲ್ಲಿ ವಿಫಲವಾಗುತ್ತವೆ. ಆ ವ್ಯಕ್ತಿ ಬದುಕಿದ್ದಷ್ಟು ಕಾಲ ನೋವನ್ನು ಅನುಭವಿಸಬೇಕಾಗುವುದು ಅನ್ನುವ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಮಾನಸಿಕ ಒತ್ತಡವು ಹಾರ್ಮೋನ್ ಗಳಲ್ಲಿ ಅಸಮತೋಲನವನ್ನು ಉಂಟು ಮಾಡುತ್ತದೆ. ಇದರಿಂಂದಾಗಿ ಉರಿಯೂತದ ಸಮಸ್ಯೆ, ಮೈ ಕೈ ನೋವು ಕಂಡು ಬರುವುದು. ಅಲ್ಲದೆ ಮಕ್ಕಳಲ್ಲಿ ಆತ್ಮವಿಶ್ವಾಸ ಕಮ್ಮಿಯಾಗುವ ಸಾಧ್ಯತೆ ಕೂಡ ಇದೆ.
ಬರೀ ಕೌಟುಂಬಿಕ ಜಗಳದಿಂದ ಮಾತ್ರವಲ್ಲ, ಕೆಲವೊಮ್ಮೆ ಪೋಷಕರು ಮತ್ತಿತರ ಕಾರಣಕ್ಕೆ ತುಂಬಾ ಒತ್ತಡ ಹಾಕುತ್ತಾರೆ. ನಿಮ್ಮ ಮಕ್ಕಳಿಗೆ ಮಾನಸಿಕ ಒತ್ತಡವನ್ನು ಹಾಕಬೇಡಿ. ಕೆಲ ಪೋಷಕರು ತಮ್ಮ ಮಕ್ಕಳಿಗೆ ಓದಿನ ವಿಷಯದಲ್ಲಿ ತುಂಬಾ ಮಾನಸಿಕ ಒತ್ತಡ ಹಾಕುತ್ತಾರೆ. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬರದಿದ್ದರೆ ಹೊಡೆಯುವುದು, ಬೈಯ್ಯುವುದು ಮಾಡುತ್ತಾರೆ. ಇವೆಲ್ಲಾ ಮಕ್ಕಳ ಮನಸ್ಸಿನ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.
ಮಕ್ಕಳಿಗೆ ಓದು ಎಂದು ಜೋರು ಮಾಡಿ ಹೇಳುವ ಬದಲು ನಯವಾಗಿ, ಉಪಾಯವಾಗಿ ಹೇಳಿ, ಆಗ ಮಕ್ಕಳು ಓದಿನ ಕಡೆ ಗಮನ ಹರಿಸಲು ಪ್ರಾರಂಭಿಸುತ್ತಾರೆ.
ಮಕ್ಕಳು ಮಾನಸಿಕ ಒತ್ತಡದಿಂದ ಮುಕ್ತರಾಗಲಿ, ಉತ್ತಮ ಬದುಕು ಕಾಣಲಿ.



Click it and Unblock the Notifications