Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಮಕ್ಕಳಿಗೆ ಯಾವಾಗ 'ನೋ' ಅಂತ ಹೇಳಬೇಕು?
ನೋ...ಇಲ್ಲ ಆಗಲ್ಲ ಎಂದು ಹೇಳುವ ಕಲೆ ಗೊತ್ತಿಲ್ಲದಿದ್ದರೆ ಜೀವನ ಮಾಡುವುದು ಕಷ್ಟವಾಗಿ ಬಿಡುತ್ತದೆ. ಅದರಲ್ಲೂ ಪೋಷಕರಿಗೆ ತಮ್ಮ ಮಕ್ಕಳ ಬೇಡಿಕೆಗಳಿಗೆ ಯಾವಾಗ ಆಗಲ್ಲ, ಯಾವಾಗ ಓಕೆ ಹೇಳಬೇಕೆಂದು ಗೊತ್ತಿದ್ದರೆ ಮಾತ್ರ ಮಕ್ಕಳನ್ನು ಹದ್ದುಬಸ್ತಿನಲ್ಲಿ ಬೆಳೆಸಲು ಸಾಧ್ಯ. ಹದ್ದುಬಸ್ತಿನಲ್ಲಿ ಅಂದರೆ ಅವರನ್ನು ಹೆದರಿಸಿ ಕೂರಿಸುವುದು ಎಂದು ಅರ್ಥ ಅಲ್ಲ, ಮಕ್ಕಳ ಒಳಿತಿಗಾಗಿ ಅವರನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು.
ಕೆಲವು ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಪ್ರೀತಿಸುತ್ತೇವೆ ಎಂದು ತುಂಬಾ ಮುದ್ದು ಮಾಡಿ ಹಾಳುಮಾಡಿ ಬಿಡುತ್ತಾರೆ.. ಇದರಿಂದ ಮಕ್ಕಳು ಹಠಮಾರಿಗಳಾಗಿ ಬೆಳೆಯಬಹುದು, ಹಿರಿಯರ ಮಾತಿಗೆ ಬೆಲೆಕೊಡದವರು ಆಗಬಹುದು. ಆದ್ದರಿಂದ ಮಕ್ಕಳ ಒಳಿತಿಗಾಗಿ ಪ್ರತಿಯೊಬ್ಬ ಪೋಷಕರು ಈ ಕೆಳಗಿನ ವಿಷಯಗಳಿಗೆ ನೋ ಹೇಳಿದರೆ ಒಳ್ಳೆಯದು.

ಆಹಾರದ ವಿಷಯದಲ್ಲಿ: ಹೆಚ್ಚಿನ ಮಕ್ಕಳಿಗೆ ಪೌಷ್ಠಿಕ ಆಹಾರ ಮಾಡಿಕೊಟ್ಟರೆ ತಿನ್ನುವುದಿಲ್ಲ. ಚಿಪ್ಸ್ ಈ ರೀತಿಯ ಜಂಕ್ಸ್ ಫುಡ್ಸ್ (ಕುರುಕುಲು ತಿಂಡಿ) ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ರೀತಿಯ ಆಹಾರಗಳಿಂದ ಮಕ್ಕಳ ಬೆಳವಣಿಗೆ ಸಾಧ್ಯವಿಲ್ಲ. ಆದ್ದರಿಂದ ಮಕ್ಕಳು ಊಟ ಮಾಡುವುದಿಲ್ಲ ಬರೀ ಅಂತಹ ತಿಂಡಿಗಳನ್ನು ಮಾಡಿ ಕೊಡದೆ ಅವುಗಳಿಗೆ ನೋ ಹೇಳಿ.
ಓದಿನ ವಿಷಯದಲ್ಲಿ: ಆಟ ಮಕ್ಕಳ ಶಾರೀರಿಕ ಬೆಳವಣಿಗೆಗೆ ಸಹಕಾರಿಯಾದರೆ ಪಾಠ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಕೆಲ ಮಕ್ಕಳು ಬರೀ ಆಟಕ್ಕೆ ಮಾತ್ರ ಆಸಕ್ತಿ ತೋರಿಸಿದರೆ ಆಗ ಅವರಿಗೆ ನೋ ಹೇಳಬೇಕು.ಹೇಗಾದರೂ ಮಾಡಿ ಅವರಿಗೆ ಓದಿನಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕು.
ಚಾಕಲೇಟ್: ಚಾಕಲೇಟ್ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಿತಿ ಮೀರಿ ತಿಂದರೆ ಸರಿಯಾಗಿ ಊಟ ಮಾಡುವುದಿಲ್ಲ ಮತ್ತು ಹಲ್ಲುಗಳು ಹಾಳಾಗುತ್ತವೆ. ಆದ್ದರಿಂದ ತುಂಬಾ ಚಾಕಲೇಟ್ ತಿನ್ನಲು ಕೊಡಬಾರದು. ಅದರ ಬದಲು ಅವರಿಗೆ ಇಷ್ಟವಾದ ಹಣ್ಣುಗಳನ್ನು ತಂದು ಕೊಟ್ಟು ಚಾಕಲೇಟ್ ಬದಲು ಅದನ್ನು ತಿನ್ನಲು ಹೇಳಿ.
ಒಡಹುಟ್ಟಿದವರ ಜಗಳ: ಚಿಕ್ಕ ಮಕ್ಕಳಿರುವಾಗ ಒಡಹುಟ್ಟಿದವರು ಪ್ರತಿಯೊಂದು ವಿಷಯಕ್ಕೆ ಜಗಳ ಆಡುವುದು ಸಾಮಾನ್ಯ. ಈ ರೀತಿಯ ಜಗಳ ವಿಪರೀತಕ್ಕೆ ಹೋದಾಗ ಅವರನ್ನು ಕಡಿವಾಣದಲ್ಲಿಡಬೇಕು. ತಪ್ಪು ಯಾರ ಕಡೆ ಇದೆ ಎಂದು ಹೇಳಿ ಅವರನ್ನು ತಿದ್ದಬೇಕು.
ಶಾಲೆ: ಕೆಲ ಮಕ್ಕಳು ಶಾಲೆಗೆ ಹೋಗುವುದಿಲ್ಲವೆಂದು ತುಂಬಾ ಹಠ ಹಿಡಿಯುತ್ತಾರೆ. ಆ ಸಂದರ್ಭದಲ್ಲಿ ಅವರ ಹಠಕ್ಕೆ ನೋ ಹೇಳದಿದ್ದರೆ ಅವರ ಭವಿಷ್ಯಕ್ಕೆ ತೊಂದರೆಯಾಗಬಹುದು.
ಮಕ್ಕಳು ಹಠ ಹಿಡಿಯುತ್ತಾರೆ ಎಂದು ಅವರನ್ನು ಅವರ ಪಾಡಿಗೆ ಬಿಡಬೇಡಿ, ಪ್ರತಿಯೊಂದು ವಿಷಯದಲ್ಲಿ ನಿಮ್ಮ ಮಾರ್ಗದರ್ಶನ ಇರಲಿ.



Click it and Unblock the Notifications