Latest Updates
-
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು? -
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಫ್ಲಿಪ್ಕಾರ್ಟ್ GOAT ಸೇಲ್: ಮಳೆಗಾಲಕ್ಕೆ ಬೇಕಾದ ಹೋಮ್ ಸ್ಟೋರೇಜ್ ಐಟಂಗಳು ಈಗ ₹1,499 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತಿದೆಯೇ ಈ ಪಾನೀಯಗಳು? -
'ಆಲ್ಫಾ' ಸಿನಿಮಾದ ಸ್ಪೈ-ಕೋರ್ ಫ್ಯಾಷನ್ ಟ್ರೆಂಡ್: 1,499 ರೂ. ಒಳಗೇ ನೀವು ಹೀಗೆ ಸ್ಟೈಲಿಶ್ ಆಗಿ ಕಾಣಬಹುದು! -
ಅಮರನಾಥ ಯಾತ್ರೆ: ಸುರಕ್ಷಿತ ಪ್ರಯಾಣಕ್ಕಾಗಿ 12 ನಿಮಿಷದ ಈ ವ್ಯಾಯಾಮ ಮರೆಯದಿರಿ! -
ಅಸ್ಸಾಂ ಪ್ರವಾಹದ ಆತಂಕ: ನಿಮ್ಮ ಕುಟುಂಬದ ಸುರಕ್ಷತೆಗಾಗಿ ಇಂದೇ ಸಿದ್ಧಪಡಿಸಿಕೊಳ್ಳಿ ಈ ತುರ್ತು 'ಗೋ-ಬ್ಯಾಗ್'
ಮಕ್ಕಳು ಕಲಿಯಲೇಬೇಕಾದ ಜೀವನ ಪಾಠಗಳಿವು

ಕೆಲವು ಪೋಷಕರು ತಮಗೇ ಒಂದೇ ಮಗು ಎಂದು ಆ ಮಗುವನ್ನು ವಿಪರೀತ ಮುದ್ದು ಮಾಡಿ ಸಾಕುತ್ತಾರೆ. ಮಗು ಏನೇ ಗಲಾಟೆ ಮಾಡಿದರೂ, ಹಠ ಮಾಡಿದರೂ ಎನೂ ಹೇಳುವುದಿಲ್ಲ. ಆದರೆ ಈ ರೀತಿ ಬೆಳೆಸಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳು ಆದರ್ಶವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆ ರೀತಿ ಬೆಳೆಯಲು ಮಕ್ಕಳಿಗೆ ಈ ಕೆಳಗಿನ ಜೀವನ ಪಾಠಗಳನ್ನು ಕಡ್ಡಾಯವಾಗಿ ಹೇಳಿಕೊಡಬೇಕು.
1.ಹಿರಿಯರನ್ನು ಗೌರವಿಸುವುದು: ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ಕೊಟ್ಟು ನಡೆದುಕೊಳ್ಳುವುದನ್ನು ಕಲಿಸಬೇಕು. ಮಕ್ಕಳು ಈ ರೀತಿ ನಡೆದುಕೊಂಡರೆ ಜನರು ಪೋಷಕರನ್ನು ಹೊಗಳುತ್ತಾರೆ. ಇಲ್ಲದಿದ್ದರೆ ಮಕ್ಕಳು ಮಾಡುವ ತಪ್ಪುಗಳಿಗೆ ಈ ಸಮಾಜ ಪೋಷಕರನ್ನೇ ಹೊಣೆ ಮಾಡುತ್ತದೆ.
2. ಪ್ರಾಮಾಣಿಕತೆ: ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದನ್ನು ತಿಳಿಸಿ. ನೀತಿ ತೆಗಳನ್ನು ಹೇಳಿ. ಈ ಪಾಠಗಳು ಮುಂದೆ ಆ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ.
3.ಸೋಲನ್ನು ಎದುರಿಸುವುದನ್ನು ಕಲಿಸಿ: ಇಲ್ಲಿ ತುಂಬಾ ಪೋಷಕರು ತಪ್ಪು ಮಾಡುತ್ತಾರೆ. ಮಕ್ಕಳ ಜಯವನ್ನು ಕಂಡು ಸಂತೋಷ ಪಟ್ಟು ಹುರಿದುಂಬಿಸಿ, ಸೋಲನ್ನು ಅನುಭವಿಸಿದಾಗ ಇತರ ಮಕ್ಕಳ ಜೊತೆ ಹೋಲಿಕೆ ಮಾಡಿ ಬೈಯ್ಯುವುದು, ಹೀಯಾಳಿಸುವುದು ಮಾಡುತ್ತಾರೆ. ಆದರೆ ಒಂದು ಪೋಷಕರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಬೈಯ್ಯದ್ದರೆ, ಹೀಯಾಳಿಸದರೆ ಮಕ್ಕಳು ಮತ್ತೆ ಜಯಗಳಿಸಿ ಬರುತ್ತಾರೆ ಅನ್ನುವುದು ತಪ್ಪು ಕಲ್ಪನೆ. ಯಾವುದಾದರೂ ವಿಷಯದಲ್ಲಿ ಸೋತಾಗ ಮಾನಸಿಕ ಧೈರ್ಯ ನೀಡಿ, ಸೋಲೇ ಗೆಲುವಿಗೆ ಮೆಟ್ಟಲು ಎಂದು ಸಮಧಾನಿಸಿ. ಈ ರೀತಿ ಮಾಡಿದರೆ ಮಕ್ಕಳು ಬದುಕಿನಲ್ಲ ಬರುವ ಕಷ್ಟಗಳನ್ನು, ಸೋಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ.
4. ಕರುಣೆ: ಮಕ್ಕಳಿಗೆ ಇತರರು ಕಷ್ಟದಲ್ಲಿರುವಾಗ ಸಹಾಯ ಮಾಡಬೇಕೆಂಬ ಪಾಠ ಕಲಿಸಿ. ಸಹಾಯ ಮಾಡಲು ಆಗದಿದ್ದರೂ ಕಷ್ಟದಲ್ಲಿರುವವರನ್ನು ಮತ್ತಷ್ಟು ನೋಯಿಸುವ ಕೆಲಸ ಮಾಡಬಾರದು ಎಂಬ ಪಾಠ ಕಲಿಸಿಕೊಡಬೇಕು.
5. ಹೊಂದಾಣಿಕೆ: ಮಕ್ಕಳಿಗೆ ಇತರ ಮಕ್ಕಳ ಜೊತೆ ಹೊಂದಾಣಿಕೆಯಿಂದ ಇರುವುದನ್ನು ಕಲಿಸಿದರೆ, ಮಕ್ಕಳು ಬೆಳೆದಾಗ ಎಂತಹ ಪರಿಸ್ಥಿತಿಗೂ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಾರೆ.
6. ಶ್ರಮ: ಮಕ್ಕಳ ಎಲ್ಲಾ ಕೆಲಸವನ್ನು ಪೋಷಕರೇ ಮಾಡದೇ ಅವರ ಕೆಲಸವನ್ನು ಅವರೇ ಮಾಡುವುದನ್ನು ಕಲಿಸಬೇಕು. ಕಷ್ಟಪಟ್ಟು ಓದಿ ಅಂತ ಪ್ರೋತ್ಸಾಹಿಸಬೇಕು. ಸೋಮರಿಗಳಾಗಿದ್ದರೆ ನೋಡಿ ಸುಮ್ಮನೆ ಇರದೆ ತಿಳಿ ಹೇಳಬೇಕು.
7. ಸಾವರ್ಜನಿಕ ಸ್ಥಳಗಳಲ್ಲಿ ವರ್ತನೆ: ಇದನ್ನು ಮುಖ್ಯವಾಗಿ ಕಲಿಸಿರಬೇಕು. ಇಲ್ಲದಿದ್ದರೆ ಪೋಷಕರು ಅವಮಾನ ಎದುರಿಸಬೇಕಾಗುತ್ತದೆ. ಏಕೆಂದರೆ ಮಕ್ಕಳು ಸಮಾಜದಲ್ಲಿ ಹೇಗೆ ವರ್ತಿಸುತ್ತಾರೆ ಅನ್ನುವುದರ ಆಧಾರದ ಮೇಲೆ ದೊಡ್ಡವರಾದ ಮೇಲೆ ಸ್ಥಾನಮಾನ ದೊರೆಯುತ್ತದೆ.



Click it and Unblock the Notifications