Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಕ್ಕಳು ಕಲಿಯಲೇಬೇಕಾದ ಜೀವನ ಪಾಠಗಳಿವು

ಕೆಲವು ಪೋಷಕರು ತಮಗೇ ಒಂದೇ ಮಗು ಎಂದು ಆ ಮಗುವನ್ನು ವಿಪರೀತ ಮುದ್ದು ಮಾಡಿ ಸಾಕುತ್ತಾರೆ. ಮಗು ಏನೇ ಗಲಾಟೆ ಮಾಡಿದರೂ, ಹಠ ಮಾಡಿದರೂ ಎನೂ ಹೇಳುವುದಿಲ್ಲ. ಆದರೆ ಈ ರೀತಿ ಬೆಳೆಸಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳು ಆದರ್ಶವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆ ರೀತಿ ಬೆಳೆಯಲು ಮಕ್ಕಳಿಗೆ ಈ ಕೆಳಗಿನ ಜೀವನ ಪಾಠಗಳನ್ನು ಕಡ್ಡಾಯವಾಗಿ ಹೇಳಿಕೊಡಬೇಕು.
1.ಹಿರಿಯರನ್ನು ಗೌರವಿಸುವುದು: ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ಕೊಟ್ಟು ನಡೆದುಕೊಳ್ಳುವುದನ್ನು ಕಲಿಸಬೇಕು. ಮಕ್ಕಳು ಈ ರೀತಿ ನಡೆದುಕೊಂಡರೆ ಜನರು ಪೋಷಕರನ್ನು ಹೊಗಳುತ್ತಾರೆ. ಇಲ್ಲದಿದ್ದರೆ ಮಕ್ಕಳು ಮಾಡುವ ತಪ್ಪುಗಳಿಗೆ ಈ ಸಮಾಜ ಪೋಷಕರನ್ನೇ ಹೊಣೆ ಮಾಡುತ್ತದೆ.
2. ಪ್ರಾಮಾಣಿಕತೆ: ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದನ್ನು ತಿಳಿಸಿ. ನೀತಿ ತೆಗಳನ್ನು ಹೇಳಿ. ಈ ಪಾಠಗಳು ಮುಂದೆ ಆ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ.
3.ಸೋಲನ್ನು ಎದುರಿಸುವುದನ್ನು ಕಲಿಸಿ: ಇಲ್ಲಿ ತುಂಬಾ ಪೋಷಕರು ತಪ್ಪು ಮಾಡುತ್ತಾರೆ. ಮಕ್ಕಳ ಜಯವನ್ನು ಕಂಡು ಸಂತೋಷ ಪಟ್ಟು ಹುರಿದುಂಬಿಸಿ, ಸೋಲನ್ನು ಅನುಭವಿಸಿದಾಗ ಇತರ ಮಕ್ಕಳ ಜೊತೆ ಹೋಲಿಕೆ ಮಾಡಿ ಬೈಯ್ಯುವುದು, ಹೀಯಾಳಿಸುವುದು ಮಾಡುತ್ತಾರೆ. ಆದರೆ ಒಂದು ಪೋಷಕರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಬೈಯ್ಯದ್ದರೆ, ಹೀಯಾಳಿಸದರೆ ಮಕ್ಕಳು ಮತ್ತೆ ಜಯಗಳಿಸಿ ಬರುತ್ತಾರೆ ಅನ್ನುವುದು ತಪ್ಪು ಕಲ್ಪನೆ. ಯಾವುದಾದರೂ ವಿಷಯದಲ್ಲಿ ಸೋತಾಗ ಮಾನಸಿಕ ಧೈರ್ಯ ನೀಡಿ, ಸೋಲೇ ಗೆಲುವಿಗೆ ಮೆಟ್ಟಲು ಎಂದು ಸಮಧಾನಿಸಿ. ಈ ರೀತಿ ಮಾಡಿದರೆ ಮಕ್ಕಳು ಬದುಕಿನಲ್ಲ ಬರುವ ಕಷ್ಟಗಳನ್ನು, ಸೋಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ.
4. ಕರುಣೆ: ಮಕ್ಕಳಿಗೆ ಇತರರು ಕಷ್ಟದಲ್ಲಿರುವಾಗ ಸಹಾಯ ಮಾಡಬೇಕೆಂಬ ಪಾಠ ಕಲಿಸಿ. ಸಹಾಯ ಮಾಡಲು ಆಗದಿದ್ದರೂ ಕಷ್ಟದಲ್ಲಿರುವವರನ್ನು ಮತ್ತಷ್ಟು ನೋಯಿಸುವ ಕೆಲಸ ಮಾಡಬಾರದು ಎಂಬ ಪಾಠ ಕಲಿಸಿಕೊಡಬೇಕು.
5. ಹೊಂದಾಣಿಕೆ: ಮಕ್ಕಳಿಗೆ ಇತರ ಮಕ್ಕಳ ಜೊತೆ ಹೊಂದಾಣಿಕೆಯಿಂದ ಇರುವುದನ್ನು ಕಲಿಸಿದರೆ, ಮಕ್ಕಳು ಬೆಳೆದಾಗ ಎಂತಹ ಪರಿಸ್ಥಿತಿಗೂ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಾರೆ.
6. ಶ್ರಮ: ಮಕ್ಕಳ ಎಲ್ಲಾ ಕೆಲಸವನ್ನು ಪೋಷಕರೇ ಮಾಡದೇ ಅವರ ಕೆಲಸವನ್ನು ಅವರೇ ಮಾಡುವುದನ್ನು ಕಲಿಸಬೇಕು. ಕಷ್ಟಪಟ್ಟು ಓದಿ ಅಂತ ಪ್ರೋತ್ಸಾಹಿಸಬೇಕು. ಸೋಮರಿಗಳಾಗಿದ್ದರೆ ನೋಡಿ ಸುಮ್ಮನೆ ಇರದೆ ತಿಳಿ ಹೇಳಬೇಕು.
7. ಸಾವರ್ಜನಿಕ ಸ್ಥಳಗಳಲ್ಲಿ ವರ್ತನೆ: ಇದನ್ನು ಮುಖ್ಯವಾಗಿ ಕಲಿಸಿರಬೇಕು. ಇಲ್ಲದಿದ್ದರೆ ಪೋಷಕರು ಅವಮಾನ ಎದುರಿಸಬೇಕಾಗುತ್ತದೆ. ಏಕೆಂದರೆ ಮಕ್ಕಳು ಸಮಾಜದಲ್ಲಿ ಹೇಗೆ ವರ್ತಿಸುತ್ತಾರೆ ಅನ್ನುವುದರ ಆಧಾರದ ಮೇಲೆ ದೊಡ್ಡವರಾದ ಮೇಲೆ ಸ್ಥಾನಮಾನ ದೊರೆಯುತ್ತದೆ.



Click it and Unblock the Notifications