Latest Updates
-
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್!
ಮಕ್ಕಳಿಗೆ ಬರುವ ಕಾಯಿಲೆಗಳು ಮತ್ತು ಮನೆಮದ್ದು

ಬೇಧಿ: ಈ ಕಾಯಿಲೆ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಬೇಧಿ ಉಂಟಾದರೆ ಅದನ್ನು ಹೋಗಲಾಡಿಸಲು ಮನೆಮದ್ದು ತಿಳಿದುಕೊಂಡಿರುವುದು ಒಳ್ಳೆಯದು. ಒಂದು ಗ್ಲಾಸ್ ಹದ ಬಿಸಿ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಕರಗಿಸಿ ಅದನ್ನು ಕುಡಿಸಿದರೆ ಬೇಧಿ ಕಡಿಮೆಯಾಗುತ್ತದೆ. ಈ ರೀತಿ ಮಾಡಿಯೂ ಬೇಧಿ ಕಡಿಮೆಯಾಗದಿದ್ದರೆ ಕೂಡಲೇ ವೈದ್ಯರನ್ನು ಕಂಡು ಔಷಧಿ ತೆಗೆದುಕೊಳ್ಳಬೇಕು.
ಜ್ವರ: ಸೋಂಕು, ಶೀತ ಇವುಗಳಿಂದ ಜ್ವರ ಉಂಟಾಗುತ್ತದೆ. ಜ್ವರ ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಂಡು ಔಷಧಿ ತೆಗದುಕೊಳ್ಳಬೇಕು.
ಶೀತ: ಶೀತ ಮತ್ತು ಕೆಮ್ಮು ಕಾಣಿಸಿಕೊಂಡರೆ ಒಂದು ಚಮಚ ತುಳಸಿ ರಸಕ್ಕೆ 2 ಕರಿಮೆಣಸನ್ನು ಪುಡಿ ಮಾಡಿ ಹಾಕಿ ಅದಕ್ಕೆ ಅರ್ಧ ಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ಕುಡಿಸಿದರೆ ಜ್ವರ ಕಡಿಮೆಯಾಗುತ್ತದೆ. ಈ ಮನೆ ಮದ್ದನ್ನು 6 ತಿಂಗಳಗಿಂತ ಚಿಕ್ಕ ವಯಸ್ಸಿನ ಮಗುವಿಗೆ ಕೊಡಬೇಡಿ. ವೈದ್ಯರ ಸಲಹೆ ಪಡೆಯದೆ ಔಷದಿ ಅಂಗಡಿಯಿಂದ ಔಷಧಿ ತಂದು ಕೊಡಬೇಡಿ.
ಹೊಟ್ಟೆಯ ಸಮಸ್ಯೆ: ಮಲಬದ್ಧತೆ, ಹೊಟ್ಟೆ ನೋವು, ಅಜೀರ್ಣ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ. ಮಗುವಿಗೆ ಹೊಟ್ಟೆ ನೋವು ಇದ್ದಾಗ ಸ್ವಲ್ಪ ಇಂಗನ್ನು ನೀರಿನಲ್ಲಿ ಕಲೆಸಿ ಕೊಟ್ಟರೆ ಹೊಟ್ಟೆ ನೋವು ಕಡಿಮೆಯಾಗುವುದು. ಹಾಗಲಕಾಯಿಯ ಎಲೆಯಿಂದ ರಸವನ್ನು ಇಂಡಿ ಅದನ್ನು ಮಕ್ಕಳಿಗೆ ಕುಡಿಸುವುದು ಒಳ್ಳೆಯದು. ಅಜೀರ್ಣ ಸಮಸ್ಯೆ ಕಂಡು ಬಂದರೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಕುಡಿಯಲು ಮತ್ತು ತಿನ್ನಲು ಕೊಡಬಾರದು.
ಕೆಂಪು ಗುಳ್ಳೆಗಳು: ಚಿಕ್ಕ ಮಕ್ಕಳಿಗೆ ಡಯಾಫರ್ ಹಾಕಿದಾಗ ಈ ರೀತಿಯ ಗುಳ್ಳೆಗಳು ಉಂಟಾಗುತ್ತದೆ. ಸೊಳ್ಳೆ ಕಚ್ಚಿ ಅಲರ್ಜಿ ಉಂಟಾಗುವುದು. ಡಯಾಫರ್ ಅಥವಾ ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.



Click it and Unblock the Notifications
