Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಮಗುವಿಗೆ ಡಯಾಪರ್ ಕಿರಿಕಿರಿಯಾಗದಿರಲಿ

ಆದ್ದರಿಂದ ಮಕ್ಕಳಿಗೆ ಡಯಾಪರ್ ಹಾಕಿದಾಗ ಗುಳ್ಳೆ, ತುರಿಕೆ ಉಂಟಾಗದಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
* ಮಕ್ಕಳಿಗೆ ಸ್ನಾನ ಮಾಡಿಸಿದ ಬಳಿಕ ಮಗುವಿನ ದೇಹವನ್ನು ಮೃದುವಾದ ಟವಲ್ ನಿಂದ ಮೃದುವಾಗಿ, ಚೆನ್ನಾಗಿ ಒರೆಸಬೇಕು. ತೊಡೆಯ ಸಂದುಗಳಲ್ಲಿ, ಹಿಂಭಾಗದಲ್ಲಿ ನೀರಿನ ಅಂಶ ಉಳಿಯದಂತೆ ಒರೆಸಬೇಕು. ನೀರಿನ ಅಂಶ ಉಳಿದರೆ ಬ್ಯಾಕ್ಟೀರಿಯಾದಿಂದಾಗಿ ಗುಳ್ಳೆಗಳು ಉಂಟಾಗುವುದು.
* ಮಕ್ಕಳಿಗೆ ನೆಗಡಿ, ಕೆಮ್ಮು, ಭೇದಿ ಮೂದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಕಾಯಿಲೆಗಳಿ ಮದ್ದು ಕೊಟ್ಟಾಗ ಕೆಲವೊಮ್ಮೆ ಶಿಲೀಂಧ್ರದ ಸೋಂಕು ಉಂಟಾಗಿ ಡಯಾಪರ್ ಗುಳ್ಳೆಗಳು ಬರುತ್ತದೆ.
* ಚರ್ಮ ಒದ್ದೆಯಾದರೆ ಈ ರೀತಿಯ ಗುಳ್ಳೆಗಳು ಕಂಡು ಬರುತ್ತದೆ. ಆದ್ದರಿಂದ ಮಕ್ಕಳ ಡಯಾಪರ್ಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ಮನೆಯಲ್ಲಿರುವಾಗ ಡಯಾಪರ್ ಬದಲು ಹತ್ತಿ ಬಟ್ಟೆ ಬಳಸಿ.
* ಮಕ್ಕಳು ಒದ್ದೆ ಅಥವಾ ಕೊಳೆ ಮಾಡಿಕೊಂಡರೆ ಬಟ್ಟೆಗಳನ್ನು ತಕ್ಷಣವೇ ಬದಲಿಸಿ. ಇದರಿಂದ ಮಗುವಿನ ಮೃದು ಚರ್ಮದಲ್ಲಿ ಕೆರೆತ, ಗಾಯ, ಗುಳ್ಳೆ ಉಂಟಾಗುವುದು ತಪ್ಪುತ್ತದೆ.
* ಡಯಾಪರ್ ಧರಿಸುವ ಪ್ರದೇಶವನ್ನು ಬೆಚ್ಚಗಿನ ನೀರಿನಲ್ಲಿ ದಿನಕ್ಕೆ 3-4 ಬಾರಿ ತೊಳೆಯಬೇಕು. ಆ ಜಾಗದಲ್ಲಿ ಹೆಚ್ಚು ಪೌಡರ್ ಬಳಸದಿರಿ.
* ಬಟ್ಟೆ ಕಟ್ಟುವುದಾದರೆ ತುಂಬಾ ಬಿಗಿಯಾಗಿ ಕಟ್ಟಬಾರದು. ಸ್ವಲ್ಪ ಸಡಿಲವಾಗಿ ಕಟ್ಟಿ, ಅದರಲ್ಲೂ ಹತ್ತಿ ಬಟ್ಟೆ ಮಾತ್ರ ಬಳಸಿ.
* ಒಂದು ವೇಲೆ ಗುಳ್ಳೆಗಳು ಉಂಟಾದರೆ ಚಂದನ, ಸ್ವಲ್ಪ ಅರಿಶಿಣ ಮತ್ತು ತುಪ್ಪವನ್ನು ಬೆರೆಸಿ ಹಚ್ಚಿದರೆ ಗಾಯ, ಗುಳ್ಳೆಗಳು ಒಣಗುತ್ತವೆ.
* ತುಪ್ಪದಲ್ಲಿ ಅರಿಶಿಣ ಮತ್ತು ಜಾಜಿಯ ಎಲೆ, ತುಳಸೀ ಎಲೆ, ಬೇವಿನ ಎಲೆಗಳನ್ನು ಹಾಕಿ ಕುದಿಸಿ, ಸೋಸಿ ಇಟ್ಟುಕೊಳ್ಳಬೇಕು. ಗುಳ್ಳೆಗಳು ಉಂಟಾದರೆ ಈ ತೈಲ ಹಚ್ಚಿದರೆ ಕಮ್ಮಿಯಾಗುವುದು. ಆದರೆ ಗಾಯವಾಗಿದ್ದರೆ ವೈದ್ಯರನ್ನು ಕಂಡು ಮಲಾಮು ಹಚ್ಚುವುದು ಒಳ್ಳೆಯದು.



Click it and Unblock the Notifications