Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಗುವಿಗೆ ಡಯಾಪರ್ ಕಿರಿಕಿರಿಯಾಗದಿರಲಿ

ಆದ್ದರಿಂದ ಮಕ್ಕಳಿಗೆ ಡಯಾಪರ್ ಹಾಕಿದಾಗ ಗುಳ್ಳೆ, ತುರಿಕೆ ಉಂಟಾಗದಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
* ಮಕ್ಕಳಿಗೆ ಸ್ನಾನ ಮಾಡಿಸಿದ ಬಳಿಕ ಮಗುವಿನ ದೇಹವನ್ನು ಮೃದುವಾದ ಟವಲ್ ನಿಂದ ಮೃದುವಾಗಿ, ಚೆನ್ನಾಗಿ ಒರೆಸಬೇಕು. ತೊಡೆಯ ಸಂದುಗಳಲ್ಲಿ, ಹಿಂಭಾಗದಲ್ಲಿ ನೀರಿನ ಅಂಶ ಉಳಿಯದಂತೆ ಒರೆಸಬೇಕು. ನೀರಿನ ಅಂಶ ಉಳಿದರೆ ಬ್ಯಾಕ್ಟೀರಿಯಾದಿಂದಾಗಿ ಗುಳ್ಳೆಗಳು ಉಂಟಾಗುವುದು.
* ಮಕ್ಕಳಿಗೆ ನೆಗಡಿ, ಕೆಮ್ಮು, ಭೇದಿ ಮೂದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಕಾಯಿಲೆಗಳಿ ಮದ್ದು ಕೊಟ್ಟಾಗ ಕೆಲವೊಮ್ಮೆ ಶಿಲೀಂಧ್ರದ ಸೋಂಕು ಉಂಟಾಗಿ ಡಯಾಪರ್ ಗುಳ್ಳೆಗಳು ಬರುತ್ತದೆ.
* ಚರ್ಮ ಒದ್ದೆಯಾದರೆ ಈ ರೀತಿಯ ಗುಳ್ಳೆಗಳು ಕಂಡು ಬರುತ್ತದೆ. ಆದ್ದರಿಂದ ಮಕ್ಕಳ ಡಯಾಪರ್ಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ಮನೆಯಲ್ಲಿರುವಾಗ ಡಯಾಪರ್ ಬದಲು ಹತ್ತಿ ಬಟ್ಟೆ ಬಳಸಿ.
* ಮಕ್ಕಳು ಒದ್ದೆ ಅಥವಾ ಕೊಳೆ ಮಾಡಿಕೊಂಡರೆ ಬಟ್ಟೆಗಳನ್ನು ತಕ್ಷಣವೇ ಬದಲಿಸಿ. ಇದರಿಂದ ಮಗುವಿನ ಮೃದು ಚರ್ಮದಲ್ಲಿ ಕೆರೆತ, ಗಾಯ, ಗುಳ್ಳೆ ಉಂಟಾಗುವುದು ತಪ್ಪುತ್ತದೆ.
* ಡಯಾಪರ್ ಧರಿಸುವ ಪ್ರದೇಶವನ್ನು ಬೆಚ್ಚಗಿನ ನೀರಿನಲ್ಲಿ ದಿನಕ್ಕೆ 3-4 ಬಾರಿ ತೊಳೆಯಬೇಕು. ಆ ಜಾಗದಲ್ಲಿ ಹೆಚ್ಚು ಪೌಡರ್ ಬಳಸದಿರಿ.
* ಬಟ್ಟೆ ಕಟ್ಟುವುದಾದರೆ ತುಂಬಾ ಬಿಗಿಯಾಗಿ ಕಟ್ಟಬಾರದು. ಸ್ವಲ್ಪ ಸಡಿಲವಾಗಿ ಕಟ್ಟಿ, ಅದರಲ್ಲೂ ಹತ್ತಿ ಬಟ್ಟೆ ಮಾತ್ರ ಬಳಸಿ.
* ಒಂದು ವೇಲೆ ಗುಳ್ಳೆಗಳು ಉಂಟಾದರೆ ಚಂದನ, ಸ್ವಲ್ಪ ಅರಿಶಿಣ ಮತ್ತು ತುಪ್ಪವನ್ನು ಬೆರೆಸಿ ಹಚ್ಚಿದರೆ ಗಾಯ, ಗುಳ್ಳೆಗಳು ಒಣಗುತ್ತವೆ.
* ತುಪ್ಪದಲ್ಲಿ ಅರಿಶಿಣ ಮತ್ತು ಜಾಜಿಯ ಎಲೆ, ತುಳಸೀ ಎಲೆ, ಬೇವಿನ ಎಲೆಗಳನ್ನು ಹಾಕಿ ಕುದಿಸಿ, ಸೋಸಿ ಇಟ್ಟುಕೊಳ್ಳಬೇಕು. ಗುಳ್ಳೆಗಳು ಉಂಟಾದರೆ ಈ ತೈಲ ಹಚ್ಚಿದರೆ ಕಮ್ಮಿಯಾಗುವುದು. ಆದರೆ ಗಾಯವಾಗಿದ್ದರೆ ವೈದ್ಯರನ್ನು ಕಂಡು ಮಲಾಮು ಹಚ್ಚುವುದು ಒಳ್ಳೆಯದು.



Click it and Unblock the Notifications
