Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಮಗುವಿಗೆ ಡಯಾಪರ್ ಕಿರಿಕಿರಿಯಾಗದಿರಲಿ

ಆದ್ದರಿಂದ ಮಕ್ಕಳಿಗೆ ಡಯಾಪರ್ ಹಾಕಿದಾಗ ಗುಳ್ಳೆ, ತುರಿಕೆ ಉಂಟಾಗದಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
* ಮಕ್ಕಳಿಗೆ ಸ್ನಾನ ಮಾಡಿಸಿದ ಬಳಿಕ ಮಗುವಿನ ದೇಹವನ್ನು ಮೃದುವಾದ ಟವಲ್ ನಿಂದ ಮೃದುವಾಗಿ, ಚೆನ್ನಾಗಿ ಒರೆಸಬೇಕು. ತೊಡೆಯ ಸಂದುಗಳಲ್ಲಿ, ಹಿಂಭಾಗದಲ್ಲಿ ನೀರಿನ ಅಂಶ ಉಳಿಯದಂತೆ ಒರೆಸಬೇಕು. ನೀರಿನ ಅಂಶ ಉಳಿದರೆ ಬ್ಯಾಕ್ಟೀರಿಯಾದಿಂದಾಗಿ ಗುಳ್ಳೆಗಳು ಉಂಟಾಗುವುದು.
* ಮಕ್ಕಳಿಗೆ ನೆಗಡಿ, ಕೆಮ್ಮು, ಭೇದಿ ಮೂದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಕಾಯಿಲೆಗಳಿ ಮದ್ದು ಕೊಟ್ಟಾಗ ಕೆಲವೊಮ್ಮೆ ಶಿಲೀಂಧ್ರದ ಸೋಂಕು ಉಂಟಾಗಿ ಡಯಾಪರ್ ಗುಳ್ಳೆಗಳು ಬರುತ್ತದೆ.
* ಚರ್ಮ ಒದ್ದೆಯಾದರೆ ಈ ರೀತಿಯ ಗುಳ್ಳೆಗಳು ಕಂಡು ಬರುತ್ತದೆ. ಆದ್ದರಿಂದ ಮಕ್ಕಳ ಡಯಾಪರ್ಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ಮನೆಯಲ್ಲಿರುವಾಗ ಡಯಾಪರ್ ಬದಲು ಹತ್ತಿ ಬಟ್ಟೆ ಬಳಸಿ.
* ಮಕ್ಕಳು ಒದ್ದೆ ಅಥವಾ ಕೊಳೆ ಮಾಡಿಕೊಂಡರೆ ಬಟ್ಟೆಗಳನ್ನು ತಕ್ಷಣವೇ ಬದಲಿಸಿ. ಇದರಿಂದ ಮಗುವಿನ ಮೃದು ಚರ್ಮದಲ್ಲಿ ಕೆರೆತ, ಗಾಯ, ಗುಳ್ಳೆ ಉಂಟಾಗುವುದು ತಪ್ಪುತ್ತದೆ.
* ಡಯಾಪರ್ ಧರಿಸುವ ಪ್ರದೇಶವನ್ನು ಬೆಚ್ಚಗಿನ ನೀರಿನಲ್ಲಿ ದಿನಕ್ಕೆ 3-4 ಬಾರಿ ತೊಳೆಯಬೇಕು. ಆ ಜಾಗದಲ್ಲಿ ಹೆಚ್ಚು ಪೌಡರ್ ಬಳಸದಿರಿ.
* ಬಟ್ಟೆ ಕಟ್ಟುವುದಾದರೆ ತುಂಬಾ ಬಿಗಿಯಾಗಿ ಕಟ್ಟಬಾರದು. ಸ್ವಲ್ಪ ಸಡಿಲವಾಗಿ ಕಟ್ಟಿ, ಅದರಲ್ಲೂ ಹತ್ತಿ ಬಟ್ಟೆ ಮಾತ್ರ ಬಳಸಿ.
* ಒಂದು ವೇಲೆ ಗುಳ್ಳೆಗಳು ಉಂಟಾದರೆ ಚಂದನ, ಸ್ವಲ್ಪ ಅರಿಶಿಣ ಮತ್ತು ತುಪ್ಪವನ್ನು ಬೆರೆಸಿ ಹಚ್ಚಿದರೆ ಗಾಯ, ಗುಳ್ಳೆಗಳು ಒಣಗುತ್ತವೆ.
* ತುಪ್ಪದಲ್ಲಿ ಅರಿಶಿಣ ಮತ್ತು ಜಾಜಿಯ ಎಲೆ, ತುಳಸೀ ಎಲೆ, ಬೇವಿನ ಎಲೆಗಳನ್ನು ಹಾಕಿ ಕುದಿಸಿ, ಸೋಸಿ ಇಟ್ಟುಕೊಳ್ಳಬೇಕು. ಗುಳ್ಳೆಗಳು ಉಂಟಾದರೆ ಈ ತೈಲ ಹಚ್ಚಿದರೆ ಕಮ್ಮಿಯಾಗುವುದು. ಆದರೆ ಗಾಯವಾಗಿದ್ದರೆ ವೈದ್ಯರನ್ನು ಕಂಡು ಮಲಾಮು ಹಚ್ಚುವುದು ಒಳ್ಳೆಯದು.



Click it and Unblock the Notifications