Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮಗುವಿಗೆ ಡಯಾಪರ್ ಕಿರಿಕಿರಿಯಾಗದಿರಲಿ

ಆದ್ದರಿಂದ ಮಕ್ಕಳಿಗೆ ಡಯಾಪರ್ ಹಾಕಿದಾಗ ಗುಳ್ಳೆ, ತುರಿಕೆ ಉಂಟಾಗದಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
* ಮಕ್ಕಳಿಗೆ ಸ್ನಾನ ಮಾಡಿಸಿದ ಬಳಿಕ ಮಗುವಿನ ದೇಹವನ್ನು ಮೃದುವಾದ ಟವಲ್ ನಿಂದ ಮೃದುವಾಗಿ, ಚೆನ್ನಾಗಿ ಒರೆಸಬೇಕು. ತೊಡೆಯ ಸಂದುಗಳಲ್ಲಿ, ಹಿಂಭಾಗದಲ್ಲಿ ನೀರಿನ ಅಂಶ ಉಳಿಯದಂತೆ ಒರೆಸಬೇಕು. ನೀರಿನ ಅಂಶ ಉಳಿದರೆ ಬ್ಯಾಕ್ಟೀರಿಯಾದಿಂದಾಗಿ ಗುಳ್ಳೆಗಳು ಉಂಟಾಗುವುದು.
* ಮಕ್ಕಳಿಗೆ ನೆಗಡಿ, ಕೆಮ್ಮು, ಭೇದಿ ಮೂದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಕಾಯಿಲೆಗಳಿ ಮದ್ದು ಕೊಟ್ಟಾಗ ಕೆಲವೊಮ್ಮೆ ಶಿಲೀಂಧ್ರದ ಸೋಂಕು ಉಂಟಾಗಿ ಡಯಾಪರ್ ಗುಳ್ಳೆಗಳು ಬರುತ್ತದೆ.
* ಚರ್ಮ ಒದ್ದೆಯಾದರೆ ಈ ರೀತಿಯ ಗುಳ್ಳೆಗಳು ಕಂಡು ಬರುತ್ತದೆ. ಆದ್ದರಿಂದ ಮಕ್ಕಳ ಡಯಾಪರ್ಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ಮನೆಯಲ್ಲಿರುವಾಗ ಡಯಾಪರ್ ಬದಲು ಹತ್ತಿ ಬಟ್ಟೆ ಬಳಸಿ.
* ಮಕ್ಕಳು ಒದ್ದೆ ಅಥವಾ ಕೊಳೆ ಮಾಡಿಕೊಂಡರೆ ಬಟ್ಟೆಗಳನ್ನು ತಕ್ಷಣವೇ ಬದಲಿಸಿ. ಇದರಿಂದ ಮಗುವಿನ ಮೃದು ಚರ್ಮದಲ್ಲಿ ಕೆರೆತ, ಗಾಯ, ಗುಳ್ಳೆ ಉಂಟಾಗುವುದು ತಪ್ಪುತ್ತದೆ.
* ಡಯಾಪರ್ ಧರಿಸುವ ಪ್ರದೇಶವನ್ನು ಬೆಚ್ಚಗಿನ ನೀರಿನಲ್ಲಿ ದಿನಕ್ಕೆ 3-4 ಬಾರಿ ತೊಳೆಯಬೇಕು. ಆ ಜಾಗದಲ್ಲಿ ಹೆಚ್ಚು ಪೌಡರ್ ಬಳಸದಿರಿ.
* ಬಟ್ಟೆ ಕಟ್ಟುವುದಾದರೆ ತುಂಬಾ ಬಿಗಿಯಾಗಿ ಕಟ್ಟಬಾರದು. ಸ್ವಲ್ಪ ಸಡಿಲವಾಗಿ ಕಟ್ಟಿ, ಅದರಲ್ಲೂ ಹತ್ತಿ ಬಟ್ಟೆ ಮಾತ್ರ ಬಳಸಿ.
* ಒಂದು ವೇಲೆ ಗುಳ್ಳೆಗಳು ಉಂಟಾದರೆ ಚಂದನ, ಸ್ವಲ್ಪ ಅರಿಶಿಣ ಮತ್ತು ತುಪ್ಪವನ್ನು ಬೆರೆಸಿ ಹಚ್ಚಿದರೆ ಗಾಯ, ಗುಳ್ಳೆಗಳು ಒಣಗುತ್ತವೆ.
* ತುಪ್ಪದಲ್ಲಿ ಅರಿಶಿಣ ಮತ್ತು ಜಾಜಿಯ ಎಲೆ, ತುಳಸೀ ಎಲೆ, ಬೇವಿನ ಎಲೆಗಳನ್ನು ಹಾಕಿ ಕುದಿಸಿ, ಸೋಸಿ ಇಟ್ಟುಕೊಳ್ಳಬೇಕು. ಗುಳ್ಳೆಗಳು ಉಂಟಾದರೆ ಈ ತೈಲ ಹಚ್ಚಿದರೆ ಕಮ್ಮಿಯಾಗುವುದು. ಆದರೆ ಗಾಯವಾಗಿದ್ದರೆ ವೈದ್ಯರನ್ನು ಕಂಡು ಮಲಾಮು ಹಚ್ಚುವುದು ಒಳ್ಳೆಯದು.



Click it and Unblock the Notifications