Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಡಿಯೋಗಾಗಿ ನವಜಾತ ಶಿಶುವಿನ ಹೊಕ್ಕುಳ ಬಳ್ಳಿ ಕತ್ತರಿಸಿದ ಯ್ಯೂಟೂಬರ್ ತಂದೆ..! ಆಮೇಲೆ ಆಗಿದ್ದೇನು ಗೊತ್ತಾ?
ಸಾಮಾಜಿಕ ಜಾಲತಾಣ ಬೆಳವಣಿಗೆ ಹೊಂದಿದಷ್ಟು ಅದರಿಂದ ಅನುಕೂಲಕ್ಕಿಂತಲೂ ಅನಾನುಕೂಲವೇ ಹೆಚ್ಚಾಗುತ್ತಿದೆ. ಕೆಲವರು ಆನ್ಲೈನ್ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಡೆಯುತ್ತಲೇ ಇದೆ. ಹಲವು ಬಾರಿ ಚಿತ್ರ ವಿಚಿತ್ರ ಘಟನೆಗಳು ನಡೆಯುವುದನ್ನು ಕೂಡ ನಾವು ನೋಡಿರುತ್ತೇವೆ. ಕೆಲವರು ಆನ್ಲೈನ್ನಲ್ಲಿ ವಿಡಿಯೋ ನೋಡಿಕೊಂಡು ಅತ್ಯುತ್ತಮ ಸ್ಕಿಲ್ಗಳ ಕಲಿಯುತ್ತಾರೆ. ಆದ್ರೆ ಮತ್ತೆ ಕೆಲವರು ಇದರಿಂದ ಸಮಾಜಕ್ಕೆ ಹಾನಿಯಾಗುವಂತಹ ಪ್ರಯೋಗಗಳ ಮಾಡಲು ಮುಂದಾಗುತ್ತಾರೆ.
ಇಲ್ಲಿಯೂ ಕೂಡ ಒಬ್ಬ ಯ್ಯೂಟೂಬರ್ ಲೈಕ್, ವೀವ್ಸ್ ಗಾಗಿ ಯಾರು ಮಾಡದ ಕೆಲಸ ಮಾಡಿ ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಆತ ತನ್ನ ಹೆಂಡತಿಯ ಹೆರಿಗೆಯ ವೇಳೆ ವಿಚಿತ್ರ ವಿಡಿಯೋ ಮಾಡಿ ಈಗ ಸುದ್ದಿಯಾಗಿದ್ದಾರೆ. ಆತ ತನ್ನ ಹೆಂಡತಿ ಹಾಗೂ ನವಜಾತ ಮಗುವಿನ ನಡುವಿನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ಅದರ ವಿಡಿಯೋ ಮಾಡಿ ಅಪ್ಲೋಡ್ ಮಾಡಿರುದು ಕೆಂಗಣ್ಣಿಗೆ ಗುರಿಯಾಗಿದೆ.

ಫುಡ್ ವ್ಲಾಗರ್ ಆಗಿರುವ ಇರ್ಫಾನ್ ಎಂಬ ತಮಿಳುನಾಡಿನ ಚೆನ್ನೈನ ಯುವಕ ತನ್ನ ಮಡದಿಗೆ ಹೆರಿಗೆಯಾದಾಗ ಆಪರೇಷನ್ ಥಿಯೇಟರ್ನಲ್ಲಿಯೇ ವಿಡಿಯೋ ಮಾಡಿದ್ದಾನೆ. ಹಾಗೂ ನವಜಾತ ಶಿಶುವಿನ ಹೊಕ್ಕಳು ಬಳ್ಳಿಯನ್ನು ಆತನೆ ಕತ್ತರಿಯಿಂದ ಕತ್ತರಿಸಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಹಾಗೂ ವೈದಕೀಯ ಸಂಸ್ಥೆಗಳ ಕಣ್ಣು ಕೆಂಪಾಗಿಸಿದೆ.
ಎರಡು ದಿನದಲ್ಲಿ ಈ ವಿಡಿಯೋ ಬರೋಬ್ಬರಿ 1.4 ಮಿಲಿಯನ್ ವೀಕ್ಷಣೆ ಕಂಡಿದೆ. ಈ ನಡುವೆ ಈ ವಿಡಿಯೋ ವೈದ್ಯಕೀಯ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಗಮನಕ್ಕೂ ಬಂದಿದೆ. ತಮಿಳುನಾಡು ಆರೋಗ್ಯ ಇಲಾಖೆ ವೈದ್ಯರು ಮತ್ತು ಖಾಸಗಿ ಆಸ್ಪತ್ರೆ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಆಪರೇಷನ್ ಥಿಯೇಟರ್ ಒಳಗೆ ಇಂತಹ ಕೃತ್ಯಗಳಿಗೆ ಅವಕಾಶ ನೀಡಿದ ವೈದ್ಯರ ಮೇಲೂ ನಿಷೇಧ ಹೇರಬೇಕು ಎಂದು ಒತ್ತಾಯಿಸಲಾಗಿದೆ.
ಇರ್ಫಾನ್ ಮತ್ತು ಆಸ್ಪತ್ರೆ ಎರಡೂ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು ರಾಜ್ಯ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಸಹ ಹೇಳಿದ್ದಾರೆ . ಹಾಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆದರೆ ವೈದ್ಯರ ಪ್ರಕಾರ ಇರ್ಫಾನ್ ಒತ್ತಾಯ ಪೂರ್ವಕವಾಗಿ ತಾನೇ ಕರುಳ ಬಳ್ಳಿ ಕತ್ತರಿಸುವುದಾಗಿ ವಿನಂತಿ ಮಾಡಿದ್ದನಂತೆ. ವಿಡಿಯೋ ಮಾಡುವ ಉದ್ದೇಶದಿಂದ ಆತ ಈ ರೀತಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಘಟನೆ ಕುರಿತಂತೆ ಇರ್ಫಾನ್ ಸಹ ಕ್ಷಮೆಯಾಚಿಸಿದ್ದಾರೆ. ಆದರೆ ಈ ಸಂಬಂಧ ದೂರು ದಾಖಲಾಗಿದ್ದು ಆತನ ಮೇಲೆ ಕ್ರಮವಾಗಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಈ ವಿಡಿಯೋ ನೋಡಿದ ಮಂದಿ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ಎಂತಹ ಮನುಷ್ಯನೇ ಆದರೂ ಈ ಸಮಯದಲ್ಲಿ ವಿಡಿಯೋ ಮಾಡುವ ಸಾಹಸ ಮಾಡುವುದಿಲ್ಲ. ಅದರಲ್ಲೂ ಇದು ನಿಯಮ ಉಲ್ಲಂಘನೆ ಮಾಡಿ ಆತ ಈ ರೀತಿಯ ವಿಡಿಯೋಗಳ ಮಾಡಿರುವುದು ತಪ್ಪು, ಮುಂದೆ ಮತ್ತೊಂದಿಷ್ಟು ಜನ ಇದೇ ರೀತಿ ಹುಚ್ಚುತನ್ನಕೆ ಮುಂದಾಗುತ್ತಾರೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಹೊಕ್ಕುಳ ಬಳ್ಳಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುತ್ತದೆ, ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಮಗುವಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗೆ ಹೊಕ್ಕುಳ ಬಳ್ಳಿಯ ಸರಿಯಾದ ಆರೈಕೆ ಇಲ್ಲದಿದ್ದರೆ ಸೋಂಕು ಉಂಟಾಗುವ ಹಲವು ಪ್ರಕರಣವನ್ನ ನಾವು ನೋಡಿರುತ್ತೇವೆ. ಈ ಬಳ್ಳಿಯಲ್ಲಿ ಉಂಟಾಗುವ ಸೋಂಕು ಇಡೀ ದೇಹಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಹಾಗೆ ಇದಕ್ಕೆ ಕಡಿವಾಣ ಹಾಕುವುದು ಕೂಡ ಕಷ್ಟವಾಗಲಿದೆ.



Click it and Unblock the Notifications