Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ವಿಡಿಯೋಗಾಗಿ ನವಜಾತ ಶಿಶುವಿನ ಹೊಕ್ಕುಳ ಬಳ್ಳಿ ಕತ್ತರಿಸಿದ ಯ್ಯೂಟೂಬರ್ ತಂದೆ..! ಆಮೇಲೆ ಆಗಿದ್ದೇನು ಗೊತ್ತಾ?
ಸಾಮಾಜಿಕ ಜಾಲತಾಣ ಬೆಳವಣಿಗೆ ಹೊಂದಿದಷ್ಟು ಅದರಿಂದ ಅನುಕೂಲಕ್ಕಿಂತಲೂ ಅನಾನುಕೂಲವೇ ಹೆಚ್ಚಾಗುತ್ತಿದೆ. ಕೆಲವರು ಆನ್ಲೈನ್ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಡೆಯುತ್ತಲೇ ಇದೆ. ಹಲವು ಬಾರಿ ಚಿತ್ರ ವಿಚಿತ್ರ ಘಟನೆಗಳು ನಡೆಯುವುದನ್ನು ಕೂಡ ನಾವು ನೋಡಿರುತ್ತೇವೆ. ಕೆಲವರು ಆನ್ಲೈನ್ನಲ್ಲಿ ವಿಡಿಯೋ ನೋಡಿಕೊಂಡು ಅತ್ಯುತ್ತಮ ಸ್ಕಿಲ್ಗಳ ಕಲಿಯುತ್ತಾರೆ. ಆದ್ರೆ ಮತ್ತೆ ಕೆಲವರು ಇದರಿಂದ ಸಮಾಜಕ್ಕೆ ಹಾನಿಯಾಗುವಂತಹ ಪ್ರಯೋಗಗಳ ಮಾಡಲು ಮುಂದಾಗುತ್ತಾರೆ.
ಇಲ್ಲಿಯೂ ಕೂಡ ಒಬ್ಬ ಯ್ಯೂಟೂಬರ್ ಲೈಕ್, ವೀವ್ಸ್ ಗಾಗಿ ಯಾರು ಮಾಡದ ಕೆಲಸ ಮಾಡಿ ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಆತ ತನ್ನ ಹೆಂಡತಿಯ ಹೆರಿಗೆಯ ವೇಳೆ ವಿಚಿತ್ರ ವಿಡಿಯೋ ಮಾಡಿ ಈಗ ಸುದ್ದಿಯಾಗಿದ್ದಾರೆ. ಆತ ತನ್ನ ಹೆಂಡತಿ ಹಾಗೂ ನವಜಾತ ಮಗುವಿನ ನಡುವಿನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ಅದರ ವಿಡಿಯೋ ಮಾಡಿ ಅಪ್ಲೋಡ್ ಮಾಡಿರುದು ಕೆಂಗಣ್ಣಿಗೆ ಗುರಿಯಾಗಿದೆ.

ಫುಡ್ ವ್ಲಾಗರ್ ಆಗಿರುವ ಇರ್ಫಾನ್ ಎಂಬ ತಮಿಳುನಾಡಿನ ಚೆನ್ನೈನ ಯುವಕ ತನ್ನ ಮಡದಿಗೆ ಹೆರಿಗೆಯಾದಾಗ ಆಪರೇಷನ್ ಥಿಯೇಟರ್ನಲ್ಲಿಯೇ ವಿಡಿಯೋ ಮಾಡಿದ್ದಾನೆ. ಹಾಗೂ ನವಜಾತ ಶಿಶುವಿನ ಹೊಕ್ಕಳು ಬಳ್ಳಿಯನ್ನು ಆತನೆ ಕತ್ತರಿಯಿಂದ ಕತ್ತರಿಸಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಹಾಗೂ ವೈದಕೀಯ ಸಂಸ್ಥೆಗಳ ಕಣ್ಣು ಕೆಂಪಾಗಿಸಿದೆ.
ಎರಡು ದಿನದಲ್ಲಿ ಈ ವಿಡಿಯೋ ಬರೋಬ್ಬರಿ 1.4 ಮಿಲಿಯನ್ ವೀಕ್ಷಣೆ ಕಂಡಿದೆ. ಈ ನಡುವೆ ಈ ವಿಡಿಯೋ ವೈದ್ಯಕೀಯ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಗಮನಕ್ಕೂ ಬಂದಿದೆ. ತಮಿಳುನಾಡು ಆರೋಗ್ಯ ಇಲಾಖೆ ವೈದ್ಯರು ಮತ್ತು ಖಾಸಗಿ ಆಸ್ಪತ್ರೆ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಆಪರೇಷನ್ ಥಿಯೇಟರ್ ಒಳಗೆ ಇಂತಹ ಕೃತ್ಯಗಳಿಗೆ ಅವಕಾಶ ನೀಡಿದ ವೈದ್ಯರ ಮೇಲೂ ನಿಷೇಧ ಹೇರಬೇಕು ಎಂದು ಒತ್ತಾಯಿಸಲಾಗಿದೆ.
ಇರ್ಫಾನ್ ಮತ್ತು ಆಸ್ಪತ್ರೆ ಎರಡೂ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು ರಾಜ್ಯ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಸಹ ಹೇಳಿದ್ದಾರೆ . ಹಾಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆದರೆ ವೈದ್ಯರ ಪ್ರಕಾರ ಇರ್ಫಾನ್ ಒತ್ತಾಯ ಪೂರ್ವಕವಾಗಿ ತಾನೇ ಕರುಳ ಬಳ್ಳಿ ಕತ್ತರಿಸುವುದಾಗಿ ವಿನಂತಿ ಮಾಡಿದ್ದನಂತೆ. ವಿಡಿಯೋ ಮಾಡುವ ಉದ್ದೇಶದಿಂದ ಆತ ಈ ರೀತಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಘಟನೆ ಕುರಿತಂತೆ ಇರ್ಫಾನ್ ಸಹ ಕ್ಷಮೆಯಾಚಿಸಿದ್ದಾರೆ. ಆದರೆ ಈ ಸಂಬಂಧ ದೂರು ದಾಖಲಾಗಿದ್ದು ಆತನ ಮೇಲೆ ಕ್ರಮವಾಗಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಈ ವಿಡಿಯೋ ನೋಡಿದ ಮಂದಿ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ಎಂತಹ ಮನುಷ್ಯನೇ ಆದರೂ ಈ ಸಮಯದಲ್ಲಿ ವಿಡಿಯೋ ಮಾಡುವ ಸಾಹಸ ಮಾಡುವುದಿಲ್ಲ. ಅದರಲ್ಲೂ ಇದು ನಿಯಮ ಉಲ್ಲಂಘನೆ ಮಾಡಿ ಆತ ಈ ರೀತಿಯ ವಿಡಿಯೋಗಳ ಮಾಡಿರುವುದು ತಪ್ಪು, ಮುಂದೆ ಮತ್ತೊಂದಿಷ್ಟು ಜನ ಇದೇ ರೀತಿ ಹುಚ್ಚುತನ್ನಕೆ ಮುಂದಾಗುತ್ತಾರೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಹೊಕ್ಕುಳ ಬಳ್ಳಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುತ್ತದೆ, ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಮಗುವಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗೆ ಹೊಕ್ಕುಳ ಬಳ್ಳಿಯ ಸರಿಯಾದ ಆರೈಕೆ ಇಲ್ಲದಿದ್ದರೆ ಸೋಂಕು ಉಂಟಾಗುವ ಹಲವು ಪ್ರಕರಣವನ್ನ ನಾವು ನೋಡಿರುತ್ತೇವೆ. ಈ ಬಳ್ಳಿಯಲ್ಲಿ ಉಂಟಾಗುವ ಸೋಂಕು ಇಡೀ ದೇಹಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಹಾಗೆ ಇದಕ್ಕೆ ಕಡಿವಾಣ ಹಾಕುವುದು ಕೂಡ ಕಷ್ಟವಾಗಲಿದೆ.



Click it and Unblock the Notifications










