Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
Year Ender 2025: ಮಹಾಕುಂಭ To ರಾಮಮಂದಿರ.. ಈ ವರ್ಷ ನಡೆದ ಭವ್ಯ ಧಾರ್ಮಿಕ ಕಾರ್ಯಕ್ರಮಗಳಿವು!
ಮಹಾಕುಂಭದಿಂದ ರಾಮ ಮಂದಿರ ಧ್ವಜಾರೋಹಣದವರೆಗೆ..! ಈ ವರ್ಷ (Year End 2025) ನಡೆದ ದೇಶದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ಪಕ್ಷಿನೋಟ ಇಲ್ಲಿದೆ. 2025ರ ವರ್ಷವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕವಾಗಿ ಭಾರತಕ್ಕೆ ಅತ್ಯಂತ ಮಹತ್ವದ ಅವಧಿಯಾಗಿತ್ತು. ಈ ವರ್ಷ ಹಲವಾರು ಬೃಹತ್ ಧಾರ್ಮಿಕ ಆಯೋಜನೆಗಳಿಗೆ ಸಾಕ್ಷಿಯಾಗಿದೆ. ದೇಶಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸಿದವು. ಮಹಾಕುಂಭ, ಜಗನ್ನಾಥ ರಥ ಯಾತ್ರೆ ಮತ್ತು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಧ್ವಜಾರೋಹಣ ಸಮಾರಂಭಗಳು ದೇಶ ಮತ್ತು ವಿದೇಶಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿ ಗಮನ ಸೆಳೆದವು.
ಹೌದು, ಈ ಪ್ರಮುಖ ಘಟನೆಗಳು ಕೇವಲ ಧಾರ್ಮಿಕ ಭಾವನೆಗಳನ್ನು ಉತ್ತೇಜಿಸುವುದಲ್ಲದೆ, ಸಾಮರಸ್ಯ ಮತ್ತು ಒಗ್ಗಟ್ಟಿನ ಪ್ರತೀಕಗಳಾಗಿ ರೂಪುಗೊಂಡವು. ಶ್ರದ್ಧಾ ಭಕ್ತಿ ಮತ್ತು ಸಾಂಸ್ಕೃತಿಕ ಸಮೃದ್ಧಿಯ ಸಂಕೇತವಾಗಿ, 2025 ಅನ್ನು ಭಾರತದ ಧಾರ್ಮಿಕ ಇತಿಹಾಸದಲ್ಲಿ ಸ್ಮರಣೀಯ ವರ್ಷವನ್ನಾಗಿ ಮಾಡಿದ ಪ್ರಮುಖ ಸಮಾರಂಭಗಳ (Top Spiritual Events 2025) ಪಕ್ಷಿನೋಟ ಇಲ್ಲಿದೆ.

ಮಹಾಕುಂಭ ಮೇಳ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 2025ರ ಮಹಾಕುಂಭ ಮೇಳವು (Mahakumbh Mela 2025) ವಿಶ್ವದ ಅತಿದೊಡ್ಡ ಧಾರ್ಮಿಕ ಸಮ್ಮಿಲನವಾಗಿ ನಡೆಯಿತು. ಜನವರಿ 13ರಿಂದ ಫೆಬ್ರವರಿ 26ರವರೆಗೆ, ಒಟ್ಟು 45 ದಿನಗಳ ಕಾಲ ಈ ಭವ್ಯ ಮೇಳವು ಆಯೋಜನೆಗೊಂಡಿತ್ತು.
ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮ) ಪವಿತ್ರ ಸ್ನಾನ ಮಾಡುವುದು ಇದರ ಪ್ರಮುಖ ಆಕರ್ಷಣೆಯಾಗಿತ್ತು. ಈ ಸ್ನಾನದಿಂದ ಪಾಪಗಳು ಕಳೆಯುತ್ತವೆ ಎಂಬ ಬಲವಾದ ನಂಬಿಕೆ ಲಕ್ಷಾಂತರ ಭಕ್ತರನ್ನು ಸೆಳೆಯಿತು.
ವರದಿಗಳ ಪ್ರಕಾರ, ಸುಮಾರು 6.6 ಕೋಟಿ ಭಕ್ತರು ಈ ಮಹಾಕುಂಭದಲ್ಲಿ ಪಾಲ್ಗೊಂಡಿದ್ದರು. ಈ ಬೃಹತ್ ಸಂಖ್ಯೆಯು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಮೇಳದ ಮಹತ್ವವನ್ನು ಎತ್ತಿ ತೋರಿಸಿತು. ಪುರಾತನ ಹನುಮಾನ್ ಮಂದಿರ ದರ್ಶನ, ಶಾಹಿ ಸ್ನಾನದ ದಿನಾಂಕಗಳು ಮತ್ತು ಗಂಗಾ ಆರತಿಯು ಭಕ್ತರನ್ನು ಅತ್ಯಂತ ಆಕರ್ಷಿಸಿದ ಇತರೆ ಅಂಶಗಳಾಗಿದ್ದವು.
ಜಗನ್ನಾಥ ರಥ ಯಾತ್ರೆ
ಒಡಿಶಾದ ಪುರಿಯ ಶ್ರೀ ಜಗನ್ನಾಥ ಮಂದಿರದಲ್ಲಿ ಪ್ರತಿ ವರ್ಷದಂತೆ 2025ರಲ್ಲೂ ಭವ್ಯ ರಥ ಯಾತ್ರೆಯನ್ನು (Jagannath Rath Yatra 2025) ಆಯೋಜಿಸಲಾಯಿತು. ಇದು ಭಾರತದ ಅತ್ಯಂತ ದೊಡ್ಡ ಮತ್ತು ಪ್ರಾಚೀನ ರಥೋತ್ಸವಗಳಲ್ಲಿ ಒಂದಾಗಿದೆ. ಜೂನ್ 27 ರಿಂದ ಜುಲೈ 5 ರವರೆಗೆ ಈ ಪವಿತ್ರ ಯಾತ್ರೆ ನಡೆಯಿತು.
ಈ ಯಾತ್ರೆಯಲ್ಲಿ ಜಗನ್ನಾಥ ದೇವರು, ಅವರ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ಅವರು ರಥಾರೂಢರಾಗಿ ಭಕ್ತರಿಗೆ ದರ್ಶನ ನೀಡಿದರು. ಲಕ್ಷಾಂತರ ಭಕ್ತರು ಒಟ್ಟಾಗಿ ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ರಥ ಯಾತ್ರೆಯಲ್ಲಿ ಪಾಲ್ಗೊಂಡರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯು ಬಲವಾಗಿದ್ದು, ಸುಮಾರು 15 ಲಕ್ಷ ಭಕ್ತರು ಈ ಬಾರಿಯ ಯಾತ್ರೆಯಲ್ಲಿ ಭಾಗವಹಿಸಿದ್ದರು. ಇದರ ಭವ್ಯ ದೃಶ್ಯ ಮತ್ತು ಭಕ್ತಿಯುತ ಉತ್ಸಾಹವು ನಿಜಕ್ಕೂ ಸವಾಲಾಗಿತ್ತು.
ರಾಮ ಮಂದಿರದ ಧ್ವಜಾರೋಹಣ
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯ ನಂತರ, ನವೆಂಬರ್ 25, 2025 ರಂದು ಅದರ ಶಿಖರದ ಮೇಲೆ ನಡೆದ ಧ್ವಜಾರೋಹಣ ಸಮಾರಂಭವು ((Ram Mandir Dhwajarohan) ಈ ವರ್ಷದ ಅತ್ಯಂತ ಮಹತ್ವದ ಧಾರ್ಮಿಕ ಘಟನೆಗಳಲ್ಲಿ ಸೇರಿತ್ತು.
ಭಗವಾನ್ ರಾಮನ ಜನ್ಮಸ್ಥಳದಲ್ಲಿ ದಶಕಗಳ ಕಾಯುವಿಕೆಯ ನಂತರ ಮಂದಿರದ ಶಿಖರದ ಮೇಲೆ ಧರ್ಮ ಧ್ವಜವನ್ನು ಹಾರಿಸಿದ್ದು ಐತಿಹಾಸಿಕ ಕ್ಷಣವಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಧರ್ಮ ಧ್ವಜವನ್ನು ಹಾರಿಸಿದರು.
ಕೇಸರಿ ಬಣ್ಣದ ಈ ಧ್ವಜವು 20 ಅಡಿ ಉದ್ದ ಮತ್ತು 11 ಅಡಿ ಎತ್ತರವನ್ನು ಹೊಂದಿತ್ತು. ಅದರ ಮೇಲೆ 'ಓಂ', ಸೂರ್ಯ ಮತ್ತು ಕೋವಿದಾರ ಮರ ಅಥವಾ ಅರಳಿ ಮರದ (Kovidara Tree) ಚಿತ್ರಗಳನ್ನು ಕೆತ್ತಲಾಗಿತ್ತು. ಈ ಧಾರ್ಮಿಕ ಚಿಹ್ನೆಗಳು ಕೇವಲ ಭಕ್ತಿಯ ಪ್ರತೀಕಗಳಲ್ಲದೆ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಸಾರಿದವು.
ಒಟ್ಟಾರೆ, 2025ರಲ್ಲಿ ನಡೆದ ಈ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಭಾರತೀಯ ಸಮಾಜದಲ್ಲಿ ಧಾರ್ಮಿಕತೆ, ಶ್ರದ್ಧೆ ಮತ್ತು ಸಾಮರಸ್ಯದ ಭಾವನೆಗಳನ್ನು ಬಲಪಡಿಸಿದವು. ಮಹಾಕುಂಭದಲ್ಲಿ ಕೋಟಿಗಟ್ಟಲೆ ಜನರ ಭಾಗವಹಿಸುವಿಕೆ, ಜಗನ್ನಾಥ ರಥ ಯಾತ್ರೆಯ ಉತ್ಸಾಹ ಮತ್ತು ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ - ಈ ಎಲ್ಲವೂ 2025ರ ವರ್ಷವನ್ನು ಧಾರ್ಮಿಕ ಇತಿಹಾಸದಲ್ಲಿ ಒಂದು ಸ್ಮರಣೀಯ ವರ್ಷವನ್ನಾಗಿ ಗುರುತಿಸಿವೆ.



Click it and Unblock the Notifications














