Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಯಶೋದಾ ಜಯಂತಿ 2025: ಕೃಷ್ಣನ ಸಾಕುತಾಯಿಯ ಜಯಂತಿ ಆಚರಿಸೋದ್ಯಾಕೆ? ಇದರ ಕಥೆ ಗೊತ್ತಾ?
ಶ್ರೀಕೃಷ್ಣನ ತಾಯಿ ಯಶೋದೆಯ ಜಯಂತಿಯನ್ನು ದೇಶದಲ್ಲಿ ಆಚರಿಸುವುದು ನಿಮಗೆ ಗೊತ್ತಾ? ಇಂದು ಕೃಷ್ಣನ ತಾಯಿಯಾಗಿರುವ ಯಶೋದೆಯ ಜಯಂತಿಯಾಗಿದೆ. ಯಶೋದೆಯ ಜನನವು ಫಾಲ್ಗುಣಿ ಮಾಸದ ಕೃಷ್ಣ ಪಕ್ಷದ ಆರನೇ ದಿನದಂದು ಆಗಿದೆ ಎಂದು ನಂಬಲಾಗಿದೆ. ದೇವಕಿ ಕೃಷ್ಣನ ತಾಯಿಯಾಗಿದ್ದರೂ ಯಶೋದೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಯಶೋದೆ ಕೃಷ್ಣನ ಸಾಕು ತಾಯಿ.
ಈ ದಿನ ಉಪವಾಸ, ಪೂಜೆ ನೆರವೇರಿಸಲಾಗುತ್ತದೆ. ಹಾಗೆ ಕೃಷ್ಣನಂತಹ ಮಕ್ಕಳು ಜನಿಸಲಿ ಎಂಬ ಕಾರಣಕ್ಕೆ ವಿವಾಹವಾಗಿರುವ ಮಹಿಳೆ ವ್ರತ ಮಾಡುವುದು ಕೂಡ ನೋಡಬಹುದು. ಕಂಸನಿಂದ ಶ್ರೀಕೃಷ್ಣನನ್ನು ಕಾಪಾಡುವ ಉದ್ದೇಶದಿಂದ ಬಾಲಕನಾಗಿದ್ದ ಕೃಷ್ಣನನ್ನು ಆಶ್ರಮದಲ್ಲಿ ಯಶೋದೆ ಬಳಿ ಬಿಟ್ಟು ಹೋಗಲಾಗಿತ್ತು. ಯಶೋದೆ ಸಾಕು ತಾಯಿಯಾಗಿ ಕೃಷ್ಣನ ಬೆಳೆಸಿದಳು ಎಂದು ನಂಬಲಾಗಿದೆ.

ಯಶೋದಾ ಜಯಂತಿಯ ಉಪವಾಸ ಮಾಡುವುದರಿಂದ ಕೃಷ್ಣನಂತೆ ಗುಣವುಳ್ಳ ಮಕ್ಕಳು ಜನಿಸುತ್ತಾರೆ ಎಂದು ನಂಬಲಾಗಿದೆ. ಹಾಗೆ ಮಕ್ಕಳಿರುವ ತಾಯಂದಿರು ಈ ಉಪವಾಸ ಮಾಡುವುದು ಮಕ್ಕಳ ಆಯಸ್ಸು ಹೆಚ್ಚಾಗುತ್ತದೆ ಎಂದು ಸಹ ಹೇಳಲಾಗಿದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿಯಂದು ಯಶೋದಾ ಜಯಂತಿ ಆಚರಿಸಲಾಗುತ್ತದೆ. ಹೀಗಾಗಿ ಪ್ರತಿ ವರ್ಷವೂ ಈ ದಿನಾಂಕ ಬದಲಾಗುತ್ತದೆ. ಈ ವರ್ಷ ಫೆ.18ರಂದು ಆಚರಿಸಲಾಗುತ್ತಿದೆ.
ಈ ದಿನದಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ತಲೆ ಸ್ನಾನ ಮಾಡಿ ನಂತರ ಶುಚಿ ಬಟ್ಟೆ ಧರಿಸಿ, ಆ ಕ್ಷಣದಿಂದ ಉಪವಾಸ ಮಾಡಬೇಕು. ಹಾಗೆ ಕೃಷ್ಣ ಮತ್ತು ಯಶೋದೆಯ ಫೋಟೋಗೆ ಪೂಜೆ ಮಾಡುವುದು ಈ ದಿನದ ವಿಶೇಷ. ಅದರಲ್ಲೂ ಬೆಣ್ಣೆ, ಶ್ರೀಗಂಧ, ಅಕ್ಷತೆ, ತುಪ್ಪದ ದೀಪ ಹಚ್ಚುವುದು ಪೂಜೆಯ ಸಾಮಾನ್ಯ ನಿಯಮವಾಗಿದೆ.
ಯಶೋದಾ ಜಯಂತಿಯಂದು ಪಠಿಸಬೇಕಾದ ಮಂತ್ರ
"ಓಂ ಕ್ಲೀಂ ಕೃಷ್ಣಾಯ ನಮಃ", "ಓಂ ನಮೋ ಭಗವತೇ ವಾಸುದೇವಾಯ" ಮತ್ತು "ಓಂ ಶ್ರೀ ಯಶೋದಾದೇವ್ಯೈ ನಮಃ" ಮುಂತಾದ ಮಂತ್ರಗಳನ್ನು ದೈವಿಕ ಆಶೀರ್ವಾದವನ್ನು ಪಡೆಯಲು ಹೇಳಲಾಗುತ್ತದೆ.
ಯಶೋದೆ ಕುರಿತ ಅಚ್ಚರಿಯ ವಿಚಾರಗಳು
ಯಶೋದೆ ಶ್ರೀಕೃಷ್ಣನ ಸಾಕು ತಾಯಿ. ಕೃಷ್ಣನು ದೇವಕಿ ಮತ್ತು ವಾಸುದೇವರಿಗೆ ಜನಿಸಿದ ಮಗು. ಆದರೆ ಗೋಕುಲದಲ್ಲಿ ಯಶೋದೆ ಬಳಿ ನಂದ ಮಹರಾಜರ ಬಳಿ ಬೆಳೆದಿದ್ದ. ಯಶೋದೆ ತನ್ನ ಸಾಕು ತಾಯಿ ಎಂದು ಕೃಷ್ಣನಿಗೂ ತಿಳಿದಿತ್ತು ಆದರೆ ಆತ ತಾಯಿಯಂತೆಯೇ ನೋಡಿದ್ದನು. ಶ್ರೀಕೃಷ್ಣ ಮೊದಲ ಬಾರಿಗೆ ತನ್ನ ವಿಶ್ವರೂಪ ತೋರಿದ್ದು ಈ ಯಶೋದೆಯ ಮುಂದೆ. ಆತ ತನ್ನ ಚೇಷ್ಠೆಯ ನಡುವೆ ಬಾಯಿಯಲ್ಲಿ ಗೋಲಿಯ ಹಾಕಿಕೊಂಡು ಹೊರೆತೆಗೆಯಲು ನಿರಾಕರಿಸಿದಾಗ ಯಶೋದೆ ಬಂದು ಗದರಿಸಿದಳು. ಆತ ಆತ ಬಾಯಿ ತೆರೆದಾಗ ವಿಶ್ವವೇ ಕಂಡಿತು ಎಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಜೀವನ ಪಾಠ ಮಾಡಿದ್ದು ಕೂಡ ಯಶೋದೆಯೇ.
ಹಾಗೆ ಈ ದಿನದಂದು ಮಥುರಾ, ವೃಂದಾವನ, ನಂದಗಾಂವ್, ಗೋಕುಲ ಮತ್ತು ದ್ವಾರಕದಂತಹ ಇತಿಹಾಡಸ ಪ್ರಸಿದ್ಧ ಸ್ಥಳಗಳಿಗೆ ಭಕ್ತರು ಭೇಟಿ ನೀಡುತ್ತಾರೆ, ಇಲ್ಲಿ ಕೃಷ್ಣ ಹಾಗೂ ಯಶೋದೆಯ ಹಲವು ನೆನಪುಗಳನ್ನು ನೋಡಬಹುದು.



Click it and Unblock the Notifications











