Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಯಶೋದಾ ಜಯಂತಿ 2025: ಕೃಷ್ಣನ ಸಾಕುತಾಯಿಯ ಜಯಂತಿ ಆಚರಿಸೋದ್ಯಾಕೆ? ಇದರ ಕಥೆ ಗೊತ್ತಾ?
ಶ್ರೀಕೃಷ್ಣನ ತಾಯಿ ಯಶೋದೆಯ ಜಯಂತಿಯನ್ನು ದೇಶದಲ್ಲಿ ಆಚರಿಸುವುದು ನಿಮಗೆ ಗೊತ್ತಾ? ಇಂದು ಕೃಷ್ಣನ ತಾಯಿಯಾಗಿರುವ ಯಶೋದೆಯ ಜಯಂತಿಯಾಗಿದೆ. ಯಶೋದೆಯ ಜನನವು ಫಾಲ್ಗುಣಿ ಮಾಸದ ಕೃಷ್ಣ ಪಕ್ಷದ ಆರನೇ ದಿನದಂದು ಆಗಿದೆ ಎಂದು ನಂಬಲಾಗಿದೆ. ದೇವಕಿ ಕೃಷ್ಣನ ತಾಯಿಯಾಗಿದ್ದರೂ ಯಶೋದೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಯಶೋದೆ ಕೃಷ್ಣನ ಸಾಕು ತಾಯಿ.
ಈ ದಿನ ಉಪವಾಸ, ಪೂಜೆ ನೆರವೇರಿಸಲಾಗುತ್ತದೆ. ಹಾಗೆ ಕೃಷ್ಣನಂತಹ ಮಕ್ಕಳು ಜನಿಸಲಿ ಎಂಬ ಕಾರಣಕ್ಕೆ ವಿವಾಹವಾಗಿರುವ ಮಹಿಳೆ ವ್ರತ ಮಾಡುವುದು ಕೂಡ ನೋಡಬಹುದು. ಕಂಸನಿಂದ ಶ್ರೀಕೃಷ್ಣನನ್ನು ಕಾಪಾಡುವ ಉದ್ದೇಶದಿಂದ ಬಾಲಕನಾಗಿದ್ದ ಕೃಷ್ಣನನ್ನು ಆಶ್ರಮದಲ್ಲಿ ಯಶೋದೆ ಬಳಿ ಬಿಟ್ಟು ಹೋಗಲಾಗಿತ್ತು. ಯಶೋದೆ ಸಾಕು ತಾಯಿಯಾಗಿ ಕೃಷ್ಣನ ಬೆಳೆಸಿದಳು ಎಂದು ನಂಬಲಾಗಿದೆ.

ಯಶೋದಾ ಜಯಂತಿಯ ಉಪವಾಸ ಮಾಡುವುದರಿಂದ ಕೃಷ್ಣನಂತೆ ಗುಣವುಳ್ಳ ಮಕ್ಕಳು ಜನಿಸುತ್ತಾರೆ ಎಂದು ನಂಬಲಾಗಿದೆ. ಹಾಗೆ ಮಕ್ಕಳಿರುವ ತಾಯಂದಿರು ಈ ಉಪವಾಸ ಮಾಡುವುದು ಮಕ್ಕಳ ಆಯಸ್ಸು ಹೆಚ್ಚಾಗುತ್ತದೆ ಎಂದು ಸಹ ಹೇಳಲಾಗಿದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿಯಂದು ಯಶೋದಾ ಜಯಂತಿ ಆಚರಿಸಲಾಗುತ್ತದೆ. ಹೀಗಾಗಿ ಪ್ರತಿ ವರ್ಷವೂ ಈ ದಿನಾಂಕ ಬದಲಾಗುತ್ತದೆ. ಈ ವರ್ಷ ಫೆ.18ರಂದು ಆಚರಿಸಲಾಗುತ್ತಿದೆ.
ಈ ದಿನದಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ತಲೆ ಸ್ನಾನ ಮಾಡಿ ನಂತರ ಶುಚಿ ಬಟ್ಟೆ ಧರಿಸಿ, ಆ ಕ್ಷಣದಿಂದ ಉಪವಾಸ ಮಾಡಬೇಕು. ಹಾಗೆ ಕೃಷ್ಣ ಮತ್ತು ಯಶೋದೆಯ ಫೋಟೋಗೆ ಪೂಜೆ ಮಾಡುವುದು ಈ ದಿನದ ವಿಶೇಷ. ಅದರಲ್ಲೂ ಬೆಣ್ಣೆ, ಶ್ರೀಗಂಧ, ಅಕ್ಷತೆ, ತುಪ್ಪದ ದೀಪ ಹಚ್ಚುವುದು ಪೂಜೆಯ ಸಾಮಾನ್ಯ ನಿಯಮವಾಗಿದೆ.
ಯಶೋದಾ ಜಯಂತಿಯಂದು ಪಠಿಸಬೇಕಾದ ಮಂತ್ರ
"ಓಂ ಕ್ಲೀಂ ಕೃಷ್ಣಾಯ ನಮಃ", "ಓಂ ನಮೋ ಭಗವತೇ ವಾಸುದೇವಾಯ" ಮತ್ತು "ಓಂ ಶ್ರೀ ಯಶೋದಾದೇವ್ಯೈ ನಮಃ" ಮುಂತಾದ ಮಂತ್ರಗಳನ್ನು ದೈವಿಕ ಆಶೀರ್ವಾದವನ್ನು ಪಡೆಯಲು ಹೇಳಲಾಗುತ್ತದೆ.
ಯಶೋದೆ ಕುರಿತ ಅಚ್ಚರಿಯ ವಿಚಾರಗಳು
ಯಶೋದೆ ಶ್ರೀಕೃಷ್ಣನ ಸಾಕು ತಾಯಿ. ಕೃಷ್ಣನು ದೇವಕಿ ಮತ್ತು ವಾಸುದೇವರಿಗೆ ಜನಿಸಿದ ಮಗು. ಆದರೆ ಗೋಕುಲದಲ್ಲಿ ಯಶೋದೆ ಬಳಿ ನಂದ ಮಹರಾಜರ ಬಳಿ ಬೆಳೆದಿದ್ದ. ಯಶೋದೆ ತನ್ನ ಸಾಕು ತಾಯಿ ಎಂದು ಕೃಷ್ಣನಿಗೂ ತಿಳಿದಿತ್ತು ಆದರೆ ಆತ ತಾಯಿಯಂತೆಯೇ ನೋಡಿದ್ದನು. ಶ್ರೀಕೃಷ್ಣ ಮೊದಲ ಬಾರಿಗೆ ತನ್ನ ವಿಶ್ವರೂಪ ತೋರಿದ್ದು ಈ ಯಶೋದೆಯ ಮುಂದೆ. ಆತ ತನ್ನ ಚೇಷ್ಠೆಯ ನಡುವೆ ಬಾಯಿಯಲ್ಲಿ ಗೋಲಿಯ ಹಾಕಿಕೊಂಡು ಹೊರೆತೆಗೆಯಲು ನಿರಾಕರಿಸಿದಾಗ ಯಶೋದೆ ಬಂದು ಗದರಿಸಿದಳು. ಆತ ಆತ ಬಾಯಿ ತೆರೆದಾಗ ವಿಶ್ವವೇ ಕಂಡಿತು ಎಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಜೀವನ ಪಾಠ ಮಾಡಿದ್ದು ಕೂಡ ಯಶೋದೆಯೇ.
ಹಾಗೆ ಈ ದಿನದಂದು ಮಥುರಾ, ವೃಂದಾವನ, ನಂದಗಾಂವ್, ಗೋಕುಲ ಮತ್ತು ದ್ವಾರಕದಂತಹ ಇತಿಹಾಡಸ ಪ್ರಸಿದ್ಧ ಸ್ಥಳಗಳಿಗೆ ಭಕ್ತರು ಭೇಟಿ ನೀಡುತ್ತಾರೆ, ಇಲ್ಲಿ ಕೃಷ್ಣ ಹಾಗೂ ಯಶೋದೆಯ ಹಲವು ನೆನಪುಗಳನ್ನು ನೋಡಬಹುದು.



Click it and Unblock the Notifications