Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಯಶೋದಾ ಜಯಂತಿ 2025: ಕೃಷ್ಣನ ಸಾಕುತಾಯಿಯ ಜಯಂತಿ ಆಚರಿಸೋದ್ಯಾಕೆ? ಇದರ ಕಥೆ ಗೊತ್ತಾ?
ಶ್ರೀಕೃಷ್ಣನ ತಾಯಿ ಯಶೋದೆಯ ಜಯಂತಿಯನ್ನು ದೇಶದಲ್ಲಿ ಆಚರಿಸುವುದು ನಿಮಗೆ ಗೊತ್ತಾ? ಇಂದು ಕೃಷ್ಣನ ತಾಯಿಯಾಗಿರುವ ಯಶೋದೆಯ ಜಯಂತಿಯಾಗಿದೆ. ಯಶೋದೆಯ ಜನನವು ಫಾಲ್ಗುಣಿ ಮಾಸದ ಕೃಷ್ಣ ಪಕ್ಷದ ಆರನೇ ದಿನದಂದು ಆಗಿದೆ ಎಂದು ನಂಬಲಾಗಿದೆ. ದೇವಕಿ ಕೃಷ್ಣನ ತಾಯಿಯಾಗಿದ್ದರೂ ಯಶೋದೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಯಶೋದೆ ಕೃಷ್ಣನ ಸಾಕು ತಾಯಿ.
ಈ ದಿನ ಉಪವಾಸ, ಪೂಜೆ ನೆರವೇರಿಸಲಾಗುತ್ತದೆ. ಹಾಗೆ ಕೃಷ್ಣನಂತಹ ಮಕ್ಕಳು ಜನಿಸಲಿ ಎಂಬ ಕಾರಣಕ್ಕೆ ವಿವಾಹವಾಗಿರುವ ಮಹಿಳೆ ವ್ರತ ಮಾಡುವುದು ಕೂಡ ನೋಡಬಹುದು. ಕಂಸನಿಂದ ಶ್ರೀಕೃಷ್ಣನನ್ನು ಕಾಪಾಡುವ ಉದ್ದೇಶದಿಂದ ಬಾಲಕನಾಗಿದ್ದ ಕೃಷ್ಣನನ್ನು ಆಶ್ರಮದಲ್ಲಿ ಯಶೋದೆ ಬಳಿ ಬಿಟ್ಟು ಹೋಗಲಾಗಿತ್ತು. ಯಶೋದೆ ಸಾಕು ತಾಯಿಯಾಗಿ ಕೃಷ್ಣನ ಬೆಳೆಸಿದಳು ಎಂದು ನಂಬಲಾಗಿದೆ.

ಯಶೋದಾ ಜಯಂತಿಯ ಉಪವಾಸ ಮಾಡುವುದರಿಂದ ಕೃಷ್ಣನಂತೆ ಗುಣವುಳ್ಳ ಮಕ್ಕಳು ಜನಿಸುತ್ತಾರೆ ಎಂದು ನಂಬಲಾಗಿದೆ. ಹಾಗೆ ಮಕ್ಕಳಿರುವ ತಾಯಂದಿರು ಈ ಉಪವಾಸ ಮಾಡುವುದು ಮಕ್ಕಳ ಆಯಸ್ಸು ಹೆಚ್ಚಾಗುತ್ತದೆ ಎಂದು ಸಹ ಹೇಳಲಾಗಿದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿಯಂದು ಯಶೋದಾ ಜಯಂತಿ ಆಚರಿಸಲಾಗುತ್ತದೆ. ಹೀಗಾಗಿ ಪ್ರತಿ ವರ್ಷವೂ ಈ ದಿನಾಂಕ ಬದಲಾಗುತ್ತದೆ. ಈ ವರ್ಷ ಫೆ.18ರಂದು ಆಚರಿಸಲಾಗುತ್ತಿದೆ.
ಈ ದಿನದಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ತಲೆ ಸ್ನಾನ ಮಾಡಿ ನಂತರ ಶುಚಿ ಬಟ್ಟೆ ಧರಿಸಿ, ಆ ಕ್ಷಣದಿಂದ ಉಪವಾಸ ಮಾಡಬೇಕು. ಹಾಗೆ ಕೃಷ್ಣ ಮತ್ತು ಯಶೋದೆಯ ಫೋಟೋಗೆ ಪೂಜೆ ಮಾಡುವುದು ಈ ದಿನದ ವಿಶೇಷ. ಅದರಲ್ಲೂ ಬೆಣ್ಣೆ, ಶ್ರೀಗಂಧ, ಅಕ್ಷತೆ, ತುಪ್ಪದ ದೀಪ ಹಚ್ಚುವುದು ಪೂಜೆಯ ಸಾಮಾನ್ಯ ನಿಯಮವಾಗಿದೆ.
ಯಶೋದಾ ಜಯಂತಿಯಂದು ಪಠಿಸಬೇಕಾದ ಮಂತ್ರ
"ಓಂ ಕ್ಲೀಂ ಕೃಷ್ಣಾಯ ನಮಃ", "ಓಂ ನಮೋ ಭಗವತೇ ವಾಸುದೇವಾಯ" ಮತ್ತು "ಓಂ ಶ್ರೀ ಯಶೋದಾದೇವ್ಯೈ ನಮಃ" ಮುಂತಾದ ಮಂತ್ರಗಳನ್ನು ದೈವಿಕ ಆಶೀರ್ವಾದವನ್ನು ಪಡೆಯಲು ಹೇಳಲಾಗುತ್ತದೆ.
ಯಶೋದೆ ಕುರಿತ ಅಚ್ಚರಿಯ ವಿಚಾರಗಳು
ಯಶೋದೆ ಶ್ರೀಕೃಷ್ಣನ ಸಾಕು ತಾಯಿ. ಕೃಷ್ಣನು ದೇವಕಿ ಮತ್ತು ವಾಸುದೇವರಿಗೆ ಜನಿಸಿದ ಮಗು. ಆದರೆ ಗೋಕುಲದಲ್ಲಿ ಯಶೋದೆ ಬಳಿ ನಂದ ಮಹರಾಜರ ಬಳಿ ಬೆಳೆದಿದ್ದ. ಯಶೋದೆ ತನ್ನ ಸಾಕು ತಾಯಿ ಎಂದು ಕೃಷ್ಣನಿಗೂ ತಿಳಿದಿತ್ತು ಆದರೆ ಆತ ತಾಯಿಯಂತೆಯೇ ನೋಡಿದ್ದನು. ಶ್ರೀಕೃಷ್ಣ ಮೊದಲ ಬಾರಿಗೆ ತನ್ನ ವಿಶ್ವರೂಪ ತೋರಿದ್ದು ಈ ಯಶೋದೆಯ ಮುಂದೆ. ಆತ ತನ್ನ ಚೇಷ್ಠೆಯ ನಡುವೆ ಬಾಯಿಯಲ್ಲಿ ಗೋಲಿಯ ಹಾಕಿಕೊಂಡು ಹೊರೆತೆಗೆಯಲು ನಿರಾಕರಿಸಿದಾಗ ಯಶೋದೆ ಬಂದು ಗದರಿಸಿದಳು. ಆತ ಆತ ಬಾಯಿ ತೆರೆದಾಗ ವಿಶ್ವವೇ ಕಂಡಿತು ಎಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಜೀವನ ಪಾಠ ಮಾಡಿದ್ದು ಕೂಡ ಯಶೋದೆಯೇ.
ಹಾಗೆ ಈ ದಿನದಂದು ಮಥುರಾ, ವೃಂದಾವನ, ನಂದಗಾಂವ್, ಗೋಕುಲ ಮತ್ತು ದ್ವಾರಕದಂತಹ ಇತಿಹಾಡಸ ಪ್ರಸಿದ್ಧ ಸ್ಥಳಗಳಿಗೆ ಭಕ್ತರು ಭೇಟಿ ನೀಡುತ್ತಾರೆ, ಇಲ್ಲಿ ಕೃಷ್ಣ ಹಾಗೂ ಯಶೋದೆಯ ಹಲವು ನೆನಪುಗಳನ್ನು ನೋಡಬಹುದು.



Click it and Unblock the Notifications
