Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ 15ಕ್ಕೆ ಯಮದ್ವಿತೀಯ: ಈ ದಿನ ದೀರ್ಘಾಯುಷ್ಯಕ್ಕಾಗಿ ಏನು ಮಾಡಬೇಕು?
ನವೆಂಬರ್ 15ರಂದು ಯಮದ್ವಿತೀಯ ಆಚರಿಸಲಾಗುತ್ತಿದೆ, ಈ ದಿನಕ್ಕೆ ದೀಪಾವಳಿ ಆಚರಣೆ ಮುಕ್ತಾಯವಾಗುವುದು. ಇದನ್ನು ಉತ್ತರ ಭಾರತದ ಕಡೆ ಭಾಯಿ ದೂಜ್ ಎಂದು ಆಚರಿಸಲಾಗುವುದು. ಈ ದಿನ ಯಮಧರ್ಮನಿಗೆ ಪೂಜೆ ಸಲ್ಲಿಸಲಾಗುವುದು. ಈ ದಿನದ ವಿಶೇಷತೆಯೇನು ಎಂದು ನೋಡೋಣ ಬನ್ನಿ:
ಈ ದಿನದ ವಿಶೇಷತೆಯೇನು?
ಈ ದಿನದಂದು ಸಹೋದರ, ಸಹೋದರಿಯರನ್ನು ಮನೆಗೆ ಕರೆದು ಹಬ್ಬದ ಊಟ ಬಡಿಸಲಾಗುವುದು. ಈ ದಿನ ಈ ರೀತಿ ಸಹೋದರ ಸಹೋದರಿಯರಿಗೆ ಊಟ ಬಡಿಸುವುದರಿಂದ ಅವರ ಆಯುಷ್ಯ ಹೆಚ್ಚಾಗಲಿ ಎಂಬುವುದು ಈ ಆಚರಣೆಯ ಹಿಂದಿರುವ ಉದ್ದೇಶವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕತೆಯಿದೆ
ಯಮ ಎಂದರೆ ಪ್ರಾನವನ್ನು ತೆಗೆಯುವವನು ಎಂದು ಭಯಪಡುತ್ತಾರೆ. ಈ ಯಮಧರ್ಮರಾಜನಿಗೆ ಒಬ್ಬ ತಂಗಿ ಇರುತ್ತಾಳೆ ಅವಳ ಹೆಸರು ಯಮುನೆ. ಆಕೆಯನ್ನು ಮದುವೆ ಮಾಡಿ ಕೊಟ್ಟಿರುತ್ತಾನೆ ಯಮ. ಆದರೆ ತಂಗಿ ಮನೆಗೆ ಅವಳನ್ನು ವಿವಾಹ ಮಾಡಿ ಕೊಟ್ಟ ಮೇಲೆ ಒಂದು ದಿನವೂ ಹೋಗಿರಲಿಲ್ಲ, ಅವಳು ಕೂಡ ಅನೇಕ ಬಾರಿ ಕರೆದರೂ ಯಮ ಹೋಗಿರಲಿಲ್ಲ, ಆದರೆ ಒಮ್ಮೆ ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಯಮನು ತನ್ನ ತಂಗಿಯ ಮನೆಗೆ ಹೋಗುತ್ತಾನೆ. ದ್ವಿತೀಯ ಎಂದರೆ ಬಿದಿಗೆ ತಿಥಿ ಎಂದರ್ಥ, ಅಣ್ಣ ಮನೆಗೆ ಬಂದಿದ್ದಕ್ಕೆ ಸಂಭ್ರಮಪಟ್ಟ ತಂಗಿ ಅವನಿಗೆ ಹಬ್ಬದ ಅಡುಗೆ ಮಾಡಿ ಬಡಿಸುತ್ತಾಳೆ.
ಇದರಿಂದ ಖುಷಿಯಾದ ಯಮ ತಂಗಿ ಬಳಿ ನಿನಗೆ ಏನು ವರಬೇಕು ಎಂದು ಕೇಳಿದಾಗ ಯಮುನೆ ನನ್ನಂತೆ ಸಹೋದರನ್ನು ತುಂಬಾ ಪ್ರೀತಿಸುವ ಸಹೋದರಿಯ ಮನೆಗೆ ಬಂದು ರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಆಹಾರ ಸೇವಿಸಿದರಿಗೆ ದೀರ್ಘಾಯುಷ್ಯ ನೀಡು ಎಂದು ಕೇಳುತ್ತಾಳೆ. ಆವಾಗ ಯಮನು ಯಾರು ಸಹೋದರಿಯ ಕೈಯಿಂದ ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಸಹೋದರಿಯ ಮನೆಯಿಂದ ಆಹಾರ ಸೇವಿಸುತ್ತಾರೋ ಅವರು ಅಕಾಲಿಕ ಸಾವಿನಿಂದ ಪಾರಾಗುತ್ತಾರೆ. ಹಾಗಾಗಿ ಈ ದಿನವನ್ನು ಯಮದ್ವಿತೀಯ ಎಂದು ಕರೆಯಲಾಗುವುದು.
ಯಮದ್ವಿತೀಯ ದಿನಾಂಕ ಮತ್ತು ಸಮಯ
ನವೆಂಬರ್ 15
ಯಮ ದ್ವಿತೀಯ ಅಪರಾಹ್ನ ಮುಹೂರ್ತ: ಮಧ್ಯಾಹ್ನ 12:38ರಿಂದ 02:53ರವರೆಗೆ
ಯಮ ದ್ವಿತೀಯ ಮಹತ್ವ
ಯಮ ದ್ವಿತೀಯ ಆಚರಣೆಯಿಂದ ಸಹೋದರ-ಸಹೋದರಿ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ತವರು ಮನೆಯವರನ್ನು ಅದರಲ್ಲೂ ಅಣ್ಣನನ್ನು ಮನೆಗೆ ಕರೆದು ಹಬ್ಬದ ಅಡುಗೆ ಬಡಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಅಣ್ಣ ಮನೆಗೆ ಬಂದಾಗ ಅವನ್ನು ಬರಮಾಡಿ ಹಣೆಗೆ ತಿಲಕವನ್ನು ಇಟ್ಟು ಉಡುಗೊರೆ ನೀಡಲಾಗುವುದು. ಸಹೋದರನೂ ಈ ದಿನ ಸಹೋದರಿಗೆ ಉಡುಗೊರೆ ತಂದಿರುತ್ತಾನೆ, ಈ ದಿನ ರಕ್ಷಾಬಂಧನದಂತೆ ಅಣ್ಣ ತಂಗಿಯ ಬಾಂಧವ್ಯ ಗಟ್ಟಿಯಾಗಿಸುವ ದಿನ, ಅಲ್ಲದೆ ಸಹೋದರಿ ಮನೆಯಿಂದ ಹಬ್ಬದ ಅಡುಗೆ ಸವಿಯುವ ಸಹೋದರ ಆಯುಷ್ಯ ಕೂಡ ಹೆಚ್ಚಾಗುತ್ತೆ ಎಂಬ ನಂಬಿಕೆಯಿದೆ.



Click it and Unblock the Notifications


