Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನವೆಂಬರ್ 15ಕ್ಕೆ ಯಮದ್ವಿತೀಯ: ಈ ದಿನ ದೀರ್ಘಾಯುಷ್ಯಕ್ಕಾಗಿ ಏನು ಮಾಡಬೇಕು?
ನವೆಂಬರ್ 15ರಂದು ಯಮದ್ವಿತೀಯ ಆಚರಿಸಲಾಗುತ್ತಿದೆ, ಈ ದಿನಕ್ಕೆ ದೀಪಾವಳಿ ಆಚರಣೆ ಮುಕ್ತಾಯವಾಗುವುದು. ಇದನ್ನು ಉತ್ತರ ಭಾರತದ ಕಡೆ ಭಾಯಿ ದೂಜ್ ಎಂದು ಆಚರಿಸಲಾಗುವುದು. ಈ ದಿನ ಯಮಧರ್ಮನಿಗೆ ಪೂಜೆ ಸಲ್ಲಿಸಲಾಗುವುದು. ಈ ದಿನದ ವಿಶೇಷತೆಯೇನು ಎಂದು ನೋಡೋಣ ಬನ್ನಿ:
ಈ ದಿನದ ವಿಶೇಷತೆಯೇನು?
ಈ ದಿನದಂದು ಸಹೋದರ, ಸಹೋದರಿಯರನ್ನು ಮನೆಗೆ ಕರೆದು ಹಬ್ಬದ ಊಟ ಬಡಿಸಲಾಗುವುದು. ಈ ದಿನ ಈ ರೀತಿ ಸಹೋದರ ಸಹೋದರಿಯರಿಗೆ ಊಟ ಬಡಿಸುವುದರಿಂದ ಅವರ ಆಯುಷ್ಯ ಹೆಚ್ಚಾಗಲಿ ಎಂಬುವುದು ಈ ಆಚರಣೆಯ ಹಿಂದಿರುವ ಉದ್ದೇಶವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕತೆಯಿದೆ
ಯಮ ಎಂದರೆ ಪ್ರಾನವನ್ನು ತೆಗೆಯುವವನು ಎಂದು ಭಯಪಡುತ್ತಾರೆ. ಈ ಯಮಧರ್ಮರಾಜನಿಗೆ ಒಬ್ಬ ತಂಗಿ ಇರುತ್ತಾಳೆ ಅವಳ ಹೆಸರು ಯಮುನೆ. ಆಕೆಯನ್ನು ಮದುವೆ ಮಾಡಿ ಕೊಟ್ಟಿರುತ್ತಾನೆ ಯಮ. ಆದರೆ ತಂಗಿ ಮನೆಗೆ ಅವಳನ್ನು ವಿವಾಹ ಮಾಡಿ ಕೊಟ್ಟ ಮೇಲೆ ಒಂದು ದಿನವೂ ಹೋಗಿರಲಿಲ್ಲ, ಅವಳು ಕೂಡ ಅನೇಕ ಬಾರಿ ಕರೆದರೂ ಯಮ ಹೋಗಿರಲಿಲ್ಲ, ಆದರೆ ಒಮ್ಮೆ ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಯಮನು ತನ್ನ ತಂಗಿಯ ಮನೆಗೆ ಹೋಗುತ್ತಾನೆ. ದ್ವಿತೀಯ ಎಂದರೆ ಬಿದಿಗೆ ತಿಥಿ ಎಂದರ್ಥ, ಅಣ್ಣ ಮನೆಗೆ ಬಂದಿದ್ದಕ್ಕೆ ಸಂಭ್ರಮಪಟ್ಟ ತಂಗಿ ಅವನಿಗೆ ಹಬ್ಬದ ಅಡುಗೆ ಮಾಡಿ ಬಡಿಸುತ್ತಾಳೆ.
ಇದರಿಂದ ಖುಷಿಯಾದ ಯಮ ತಂಗಿ ಬಳಿ ನಿನಗೆ ಏನು ವರಬೇಕು ಎಂದು ಕೇಳಿದಾಗ ಯಮುನೆ ನನ್ನಂತೆ ಸಹೋದರನ್ನು ತುಂಬಾ ಪ್ರೀತಿಸುವ ಸಹೋದರಿಯ ಮನೆಗೆ ಬಂದು ರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಆಹಾರ ಸೇವಿಸಿದರಿಗೆ ದೀರ್ಘಾಯುಷ್ಯ ನೀಡು ಎಂದು ಕೇಳುತ್ತಾಳೆ. ಆವಾಗ ಯಮನು ಯಾರು ಸಹೋದರಿಯ ಕೈಯಿಂದ ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಸಹೋದರಿಯ ಮನೆಯಿಂದ ಆಹಾರ ಸೇವಿಸುತ್ತಾರೋ ಅವರು ಅಕಾಲಿಕ ಸಾವಿನಿಂದ ಪಾರಾಗುತ್ತಾರೆ. ಹಾಗಾಗಿ ಈ ದಿನವನ್ನು ಯಮದ್ವಿತೀಯ ಎಂದು ಕರೆಯಲಾಗುವುದು.
ಯಮದ್ವಿತೀಯ ದಿನಾಂಕ ಮತ್ತು ಸಮಯ
ನವೆಂಬರ್ 15
ಯಮ ದ್ವಿತೀಯ ಅಪರಾಹ್ನ ಮುಹೂರ್ತ: ಮಧ್ಯಾಹ್ನ 12:38ರಿಂದ 02:53ರವರೆಗೆ
ಯಮ ದ್ವಿತೀಯ ಮಹತ್ವ
ಯಮ ದ್ವಿತೀಯ ಆಚರಣೆಯಿಂದ ಸಹೋದರ-ಸಹೋದರಿ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ತವರು ಮನೆಯವರನ್ನು ಅದರಲ್ಲೂ ಅಣ್ಣನನ್ನು ಮನೆಗೆ ಕರೆದು ಹಬ್ಬದ ಅಡುಗೆ ಬಡಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಅಣ್ಣ ಮನೆಗೆ ಬಂದಾಗ ಅವನ್ನು ಬರಮಾಡಿ ಹಣೆಗೆ ತಿಲಕವನ್ನು ಇಟ್ಟು ಉಡುಗೊರೆ ನೀಡಲಾಗುವುದು. ಸಹೋದರನೂ ಈ ದಿನ ಸಹೋದರಿಗೆ ಉಡುಗೊರೆ ತಂದಿರುತ್ತಾನೆ, ಈ ದಿನ ರಕ್ಷಾಬಂಧನದಂತೆ ಅಣ್ಣ ತಂಗಿಯ ಬಾಂಧವ್ಯ ಗಟ್ಟಿಯಾಗಿಸುವ ದಿನ, ಅಲ್ಲದೆ ಸಹೋದರಿ ಮನೆಯಿಂದ ಹಬ್ಬದ ಅಡುಗೆ ಸವಿಯುವ ಸಹೋದರ ಆಯುಷ್ಯ ಕೂಡ ಹೆಚ್ಚಾಗುತ್ತೆ ಎಂಬ ನಂಬಿಕೆಯಿದೆ.



Click it and Unblock the Notifications
