Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದೇಶದ 7 ಖಡಕ್ ಮಹಿಳಾ ಐಪಿಎಸ್ ಅಧಿಕಾರಿಗಳಿವರು.! ರಾಜಕಾರಣಿ ಕಪಾಳಕ್ಕೆ ಭಾರಿಸಿದ್ದ 'ನಾರಂಗ್' ಯಾರು ಗೊತ್ತಾ?
ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಹೆಸರು ಅಚ್ಚೊತ್ತುತ್ತಿದ್ದಾರೆ. ಪ್ರತಿಯೊಂದು ವಲಯದಲ್ಲೂ ಅವರು ಸಾಧನೆ ಮಾಡಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಉದ್ಯಮ ಹೀಗೆ ನೀವು ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಅಲ್ಲಿ ಮಹಿಳೆಯರ ಪಾಲು ಇದ್ದೇ ಇದೆ. ಹೀಗೆ ಸಾಧನೆ ಮಾಡಿರುವ ಮಹಿಳೆಯರನ್ನು ಗೌರವಿಸಿ ಅವರನ್ನು ನೆನೆಯಲು ನಾವು ಸಹ ಒಂದು ದಿನ ಸಮರ್ಪಿಸೋಣ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹತ್ತಿರಾಗುತ್ತಿರುವ ಈ ಸಮಯದಲ್ಲಿ ನಾವು ಇಂತಹ ಸ್ಫೂರ್ತಿದಾಯಕ ಮಹಿಳೆಯವರ ಕುರಿತು ತಿಳಿದುಕೊಳ್ಳೋಣ. ಇನ್ನು ಆಡಳಿತ ವಲಯದಲ್ಲಿ ಐಎಎಸ್, ಐಪಿಎಸ್ ಮಾಡಿ ದೇಶದ ಕೀರ್ತಿ ಹೆಚ್ಚಿಸಿರುವ ಭಾರತದ ಕೆಲವು ಮುಖ್ಯ ಮಹಿಳೆಯರ ಕುರಿತು ನಾವಿಂದು ತಿಳಿದುಕೊಳ್ಳೋಣ.
1. ವಿಮ್ಲಾ ಮೆಹ್ರಾ
ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ (AGMUT) ಕೇಡರ್ನ 1978ರ ಬ್ಯಾಚ್ IPS ಅಧಿಕಾರಿ ವಿಮ್ಲಾ ಮೆಹ್ರಾ ಅವರು ದೆಹಲಿ ಪೊಲೀಸ್ನಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು 2012ರಲ್ಲಿ ತಿಹಾರ್ ಜೈಲಿನ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯಲ್ಲಿ, ಅವರು ಉದ್ಯೋಗ-ಆಧಾರಿತ ಕೌಶಲ್ಯಗಳೊಂದಿಗೆ ಕೈದಿಗಳನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವ ವೃತ್ತಿಪರ ಕಾರ್ಯಕ್ರಮಗಳ ಪರಿಚಯ ಸೇರಿದಂತೆ ಹಲವಾರು ಬದಲಾವಣೆಗಳನ್ನು ತಂದರು. ಗಮನಾರ್ಹವಾಗಿ, ಅವರು ಮಹಿಳಾ ಕೈದಿಗಳು ಮತ್ತು ಅಂಡರ್ ಟ್ರಯಲ್ಗಳಿಗಾಗಿ ವಿದೇಶಿ ಭಾಷಾ ಕೋರ್ಸ್ಗಳನ್ನು ಪ್ರಾರಂಭಿಸಿದರು. ಮಹಿಳೆಯರ ವಿರುದ್ಧದ ಅಪರಾಧ ವಿಭಾಗದ ಮುಖ್ಯಸ್ಥೆಯಾಗಿ, ಅವರು ಮಹಿಳಾ ಸಹಾಯವಾಣಿಯನ್ನು (1091) ಆರಂಭಿಸಿದರು ಮತ್ತು ಮಹಿಳೆಯರಿಗೆ ರಕ್ಷಣಾ ತರಬೇತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.

2. ಕಾಂಚನ್ ಚೌಧರಿ ಭಟ್ಟಾಚಾರ್ಯ
1947ರಲ್ಲಿ ಶಿಮ್ಲಾದಲ್ಲಿ ಜನಿಸಿದ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ಭಾರತೀಯ ಪೊಲೀಸ್ ಸೇವೆಯಲ್ಲಿ (IPS) ಟ್ರೇಲ್ಬ್ಲೇಜರ್ ಆಗಿದ್ದರು. ಭಾರತದಲ್ಲಿ ಐಪಿಎಸ್ ಅಧಿಕಾರಿಯಾದ ಎರಡನೇ ಮಹಿಳೆ ಮತ್ತ ಪೊಲೀಸ್ ಮಹಾನಿರ್ದೇಶಕ ಹುದ್ದೆಗೇರಿದ ಮೊದಲ ಮಹಿಳೆ ಇವರಾಗಿದ್ದಾರೆ. ಉತ್ತರ ಪ್ರದೇಶದ ಮೊದಲ ಐಪಿಎಸ್ ಅಧಿಕಾರಿಯೂ ಆಗಿದ್ದರು. 2004ರಲ್ಲಿ ಮೆಕ್ಸಿಕೋದ ಕ್ಯಾಂಕನ್ನಲ್ಲಿ ನಡೆದ ಇಂಟರ್ಪೋಲ್ ಸಭೆಯಲ್ಲಿ ಕಾಂಚನ್ ಭಾರತವನ್ನು ಪ್ರತಿನಿಧಿಸಿದರು. ಅವರು ಅಖಿಲ ಭಾರತೀಯ ಮಹಿಳಾ ಪೊಲೀಸ್ ಮತ್ತು ಉತ್ತರಾಖಂಡದ ಪೋಲಿಸ್ನ ಅಧ್ಯಕ್ಷರಾಗಿದ್ದರು. ಅವರು 1997 ಮತ್ತು 1989 ರಲ್ಲಿ ರಾಷ್ಟ್ರಪತಿ ಪದಕಗಳು, 2004 ರಲ್ಲಿ ರಾಜೀವ್ ಗಾಂಧಿ ಪ್ರಶಸ್ತಿ ಪಡೆದರು.
ಕಾಂಚನ್ 2007 ರಲ್ಲಿ ಸೇವೆಯಿಂದ ನಿವೃತ್ತರಾದರು ಮತ್ತು ದೀರ್ಘಕಾಲದ ಅನಾರೋಗ್ಯದ ನಂತರ 72ನೇ ವಯಸ್ಸಿನಲ್ಲಿ 2019ರಲ್ಲಿ ನಿಧನರಾದರು.
3. ಸೋನಿಯಾ ನಾರಂಗ್
ಚಂಡೀಗಢ ಮೂಲದ ಸೋನಿಯಾ ನಾರಂಗ್ ಅವರು ನಿವೃತ್ತ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮತ್ತು 2002ರ ಬ್ಯಾಚ್ ಐಪಿಎಸ್ ಅಧಿಕಾರಿಯ ಪುತ್ರಿಯಾಗಿದ್ದಾರೆ. ಅವರ ವೃತ್ತಿಜೀವನದ ಅವಧಿಯಲ್ಲಿ, ಅವರು ಕರ್ನಾಟಕದ ವಿವಿಧ ನಗರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2006ರಲ್ಲಿ ಘಟನೆಯೊಂದರಲ್ಲಿ ಎಂಪಿ ರೇಣುಕಾಚಾರ್ಯ ಅವರ ಕಪಾಳಕ್ಕೆ ಹೊಡೆದು ಭಾರೀ ಸುದ್ದಿಯಾಗಿದ್ದರು.
4. ಸೌಮ್ಯ ಸಾಂಬಶಿವನ್
ಶಿಮ್ಲಾದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಸೌಮ್ಯಾ ಸಾಂಬಶಿವನ್ ಅವರು ಮಹಿಳೆಯರ ಸುರಕ್ಷತೆಗೆ ಶ್ರಮಿಸಿದವರು. ಸ್ಥಳೀಯವಾಗಿ ಅವರೇ ಸ್ಪ್ರೇ ಒಂದನ್ನು ಕಂಡುಹಿಡಿದು ಮಹಿಳೆಯರು ತಮ್ಮ ಸುರಕ್ಷೆತೆಗಾಗಿ ಬಳಸುವಂತೆ ಕರೆ ನೀಡಿದರು. ಈ ಮೂಲಕ ಅವರು ಭಾರಿ ಸುದ್ದಿಯಾಗಿದ್ದರು.
5. ಡಾ.ರುವೇದ ಸಲಾಂ
ಡಾ.ರುವೇದಾ ಸಲಾಂ ಕಾಶ್ಮೀರ ಕಣಿವೆಯ ಮೊದಲ ಐಪಿಎಸ್ ಅಧಿಕಾರಿಯಾದರು, ಐಪಿಎಸ್ ಸೇರುವ ತನ್ನ ತಂದೆಯ ಕನಸನ್ನು ನನಸಾಗಿಸಿದರು. ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದ ಅವರು ಐಪಿಎಸ್ ಆಗುವ ದಾರಿ ಆಯ್ಕೆ ಮಾಡಿಕೊಂಡಿದ್ದರು. ಎರಡು ಬಾರಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಅವರು IPS ಕೇಡರ್ಗೆ ಸೇರಿಕೊಂಡರು. ಅವರು ಚೆನ್ನೈನಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಆಗಿ ನೇಮಿಕವಾಗಿದ್ದರು.
6. ಸಂಗೀತಾ ಕಾಲಿಯಾ
ಫತೇಹಾಬಾದ್ ಪೋಲೀಸ್ನಲ್ಲಿ ನಿವೃತ್ತ ಬಡಗಿಯೊಬ್ಬರ ಮಗಳು 2009ರಲ್ಲಿ ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ IPS ಆದರು. ಆಕೆಯ ಮೊದಲ ಪೋಸ್ಟಿಂಗ್ ಅದೇ ಇಲಾಖೆಯಲ್ಲಿ ಎಸ್ಪಿ ಆಗಿತ್ತು. IPS ಸಂಗೀತಾ ಕಾಲಿಯಾ ಅವರ ತಂದೆ ಧರಂಪಾಲ್ ಅವರು ಫತೇಹಾಬಾದ್ ಪೊಲೀಸ್ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು 2010 ರಲ್ಲಿ ನಿವೃತ್ತರಾದರು.
7. ಸಂಜುಕ್ತ ಪರಾಶರ್
ಅಸ್ಸಾಂನ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಸಂಜುಕ್ತಾ ಪರಾಶರ್ 16 ಉಗ್ರರನ್ನು ಹೊಡೆದುರುಳಿಸಿದ ಧೀರ ಅಧಿಕಾರಿಯಾಗಿದ್ದಾರೆ. ಅಸ್ಸಾಂನಲ್ಲಿ ತನ್ನ 15 ತಿಂಗಳ ಅವಧಿಯಲ್ಲಿ ಉಗ್ರರನ್ನು ಸೆರೆಹಿಡಿದಿದ್ದರು. ಉದಲ್ಗುರಿಯಲ್ಲಿ ಬೋಡೋ ಮತ್ತು ಅಕ್ರಮ ಬಾಂಗ್ಲಾದೇಶಿ ಉಗ್ರಗಾಮಿಗಳ ನಡುವಿನ ಜನಾಂಗೀಯ ಹಿಂಸಾಚಾರವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಅವರು ಹೊತ್ತಿದ್ದರು.



Click it and Unblock the Notifications














