Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಡಬ್ಬಿಗಳ ಮುಚ್ಚಳ ಬಿಗಿಯಾಗಿ ಹಾಕುತ್ತಾನೆಂದು ವಿಚ್ಛೇದನ ಪಡೆದ ಪತ್ನಿ..!
ಮದುವೆ ಅನ್ನೋದು ಏಳೇಳು ಜನ್ಮದ ಬಂಧ ಎನ್ನಲಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ, ವಿಚ್ಛೇದನ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಈಗ ವಿಚ್ಛೇದನ ಪಡೆಯವುದು ನಡೆಯುತ್ತಲೇ ಇದೆ. ಅದ್ರಲ್ಲೂ ಯಾರು ಊಹಿಸದಂತಹ ಕಾರಣಗಳಿಗೆ ಈಗ ವಿಚ್ಛೇದನ ಪಡೆಯುತ್ತಿರುವುದನ್ನು ನಾವು ನೋಡಬಹುದು.
ಇತ್ತೀಚೆಗೆ ಮದುವೆಯಾದ ಒಂದು ವರ್ಷದೊಳಗೇ ವಿಚ್ಛೇದನಕ್ಕೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿದ್ಯಾವಂತರೇ ಇದರಲ್ಲಿ ಮುಂದಿರುತ್ತಾರೆ ಎನ್ನುವುದೂ ಕಹಿ ಸತ್ಯ. ಆದರೆ ಈ ನಡುವೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲೂ ಸಹ ಪತ್ನಿ ವಿಚಿತ್ರ ಕಾರಣಕ್ಕೆ ಪತಿಯಿಂದ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.

ಮನೆಯಲ್ಲಿರುವ ಉಪ್ಪಿನಕಾಯಿ ಡಬ್ಬಿಯ ಮುಚ್ಚಳವನ್ನು ಬಿಗಿಯಾಗಿ ಹಾಕುತ್ತಾನೆ ಎಂದು ಪತಿಯಿಂದ ವಿಚ್ಛೇದನ ಪಡೆಯಲು ಮುಂದಾಗಿರುವ ವಿಚಿತ್ರ ಘಟನೆ ವರದಿಯಾಗಿದೆ. ಹೌದು ನಿಮಗಿದು ಅಚ್ಚರಿ ಎನಿಸಬಹುದು. ಆದರೆ ಆಕೆಯ ಪತಿ ಉದ್ದೇಶ ಪೂರ್ವಕವಾಗಿಯೇ ಕೆಲವೊಂದು ಡಬ್ಬಿಗಳ ಮುಚ್ಚಳ ಬಿಗಿಯಾಗಿ ಹಾಕುತ್ತಿದ್ದನಂತೆ. ಅಂತಿಮವಾಗಿ ಪತಿಯಿಂದ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.
ಮೊದ ಮೊದಲು ಆಹಾರ, ವಸ್ತುಗಳು ಹೆಚ್ಚು ದಿನ ಬಾಳಿಕೆ ಬರಲಿ ಎಂಬ ಕಾರಣಕ್ಕೆ ಈ ರೀತಿ ಎಲ್ಲಾ ಡಬ್ಬಿಗಳ ಮುಚ್ಚಳ ಬಿಗಿಯಾಗಿ ಹಾಕುತ್ತಿದ್ದಾನೆ ಎಂದುಕೊಂಡಿದ್ದರಂತೆ. ಆದರೆ ಆತ ಉದ್ದೇಶ ಪೂರ್ವಕವಾಗಿಯೇ ಎಲ್ಲಾ ಬಾಟಲಿಗಳ ಮುಚ್ಚಳ ಬಿಗಿಯಾಗಿ ಹಾಕುತ್ತಿದ್ದನಂತೆ.
ರೆಡ್ ಇಟ್ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬರು ಈ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ. ಮೊದಲು ತನ್ನ ಪತಿಯ ಈ ರೀತಿಯ ವರ್ತನೆಯಿಂದಾಗಿ ಆಕೆ ಅನುಮಾನಗೊಂಡಿರಲಿಲ್ಲವಂತೆ. ಆದರೆ ಈ ರೀತಿಯ ಕೆಲಸ ಯಾವಾಗಲು ಮಾಡಲು ಮುಂದಾಗಿದ್ದರಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಯಾವಾಗಲು ಗಲಾಟೆ ನಡೆಯುತ್ತಿತ್ತಂತೆ. ಆಕೆ ತನ್ನಿಷ್ಟದ ಆಹಾರ ಅಥವಾ ಅಗತ್ಯ ವಸ್ತುಗಳಿಟ್ಟ ಡಬ್ಬದ ಮುಚ್ಚಳ ತೆಗೆಯಲು ಆಗುತ್ತಿರಲಿಲ್ಲವಂತೆ. ಇದರಿಂದ ಬೇಸತ್ತ ಆಕೆ ಅಂತಿಮವಾಗಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
ಕೆಲವೊಮ್ಮೆ ಅಡುಗೆಗೆ ಬೇಕಾದ ಅಗತ್ಯ ವಸ್ತುಗಳ ಡಬ್ಬಿಯ ಮುಚ್ಚಳ ತೆಗೆಯಲು ಆಕೆ ಅಕ್ಕಪಕ್ಕದ ಮನೆಯವರ ಸಹಾಯ ಪಡೆಯುತ್ತಿದ್ದಳಂತೆ. ಇದು ತಿಂಗಳುಗಳ ವರೆಗೆ ಮುಂದುವರೆದಿತ್ತು. ಆತ ಪ್ರತಿಯೊಂದು ಡಬ್ಬಿಯ ಮುಚ್ಚಳವನ್ನು ಎಷ್ಟು ಗಟ್ಟಿಯಾಗಿ ಹಾಕುತ್ತಿದ್ದ ಅಂದ್ರೆ ಅದನ್ನು ತೆರೆಯಲು ಗಂಟೆಗಳ ಕಾಲ ಹರಸಾಹಸ ಮಾಡಬೇಕಿತ್ತಂತೆ. ಇದರಿಂದ ಬೇಸತ್ತ ಆಕೆ ಕೊನೆಯದಾಗಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.
ಮೊದಲು ಆಕೆ ಈ ರೀತಿ ಮನೆಯ ಡಬ್ಬಿಗಳ ಮುಚ್ಚಳ ಬಿಗಿಯಾಗುತ್ತಿರುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕಾಗಿತ್ತು. ಅಲ್ಲದೆ ಇದಕ್ಕಾಗಿ ಪತಿ ಮೇಲೆ ಕಣ್ಣಿಟ್ಟಿದ್ದಳಂತೆ. ಈ ವೇಳೆ ಆತ ಜಾರ್ಗಳ ಮುಚ್ಚಳ ಎಷ್ಟು ಸಾಧ್ಯವೋ ಅಷ್ಟು ಬಿಗಿಯಾಗಿ ಹಾಕುತ್ತಿರುವುದು ಕಂಡುಬಂದಿತ್ತು.
ಇದೆಲ್ಲಾ ಆದ ಬಳಿಕ ಆಕೆ ವಿಚ್ಛೇದನ ಪಡೆಯಲು ನಿರ್ಧಾರ ಮಾಡಿ ವಕೀಲರ ನೇಮಿಸಿದ್ದಳಂತೆ. ಬಳಿಕ ವಕೀಲರು ಇಬ್ಬರ ನಡುವೆ ಮಾತುಕತೆಗೆ ಮುಂದಾಗಿದ್ದರಲ್ಲದೆ ಆಪ್ತ ಸಮಾಲೋಚನೆಗೆ ಮುಂದಾದರು. ಈ ವೇಳೆ ಪತಿ ತಾನು ಉದ್ದೇಶ ಪೂರ್ವಕವಾಗಿ ಜಾರ್ಗಳ ಮುಚ್ಚಳ ಬಿಗಿಯಾಗಿ ಹಾಕುತ್ತಿರುವುದಾಗಿ ಒಪ್ಪಿಕೊಂಡಿದ್ದ.
"ಅವನು ಉದ್ದೇಶಪೂರ್ವಕವಾಗಿ ಮುಚ್ಚಳಗಳನ್ನು ಬಿಗಿಗೊಳಿಸಿದ್ದಾನೆ ಎಂದು ಅವನು ಇನ್ನೂ ಒಪ್ಪಿಕೊಳ್ಳುವುದಿಲ್ಲ" ಎಂದು ಅವರು ಬರೆದಿದ್ದಾರೆ. "ಅವನು ಪ್ರತಿ ಜಾರ್ ಮುಚ್ಚಳವನ್ನು ಏಕೆ ಬಿಗಿಯಾಗಿ ಬಿಗಿಗೊಳಿಸುತ್ತಾನೆ ಎಂದು ನನಗೆ ತಿಳಿದಿಲ್ಲ, ನಾನು ಅದನ್ನು ತೆರೆಯಲು ಸಾಧ್ಯವಾಗಲಿಲ್ಲ. ಅವರು ನನಗೆ ಯಾವುದೇ ಕಾರಣ ನೀಡಿಲ್ಲ. ಅವನು ಉದ್ದೇಶಪೂರ್ವಕವಾಗಿ ಅದನ್ನು ಮಾಡಿದ್ದೇನೆ ಎಂದು ಅವನು ಇನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಮಹಿಳೆ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆ ಕಂಡ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಈ ರೀತಿ ವಿಚಿತ್ರ ಘಟನೆ ಎಂದಿಗೂ ಕೇಳಿರಲಿಲ್ಲ ಎಂದಿದ್ದಾರೆ. ಆದರೆ ಆಕೆ ಇದರಿಂದ ಎಷ್ಟು ಸಮಸ್ಯೆ ಎದುರಿಸಿರಬಹುದು ಎಂದು ಆಕೆಯ ಕುರಿತು ಜನರು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.



Click it and Unblock the Notifications
