Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತ್ರಿವಳಿ ಮಕ್ಕಳಿಗೆ ಜನ್ಮ ನೀಡಿ ಮಹಿಳೆ ಸಾವು:ಅಚ್ಚರಿಯೆಂಬಂತೆ 45 ನಿಮಿಷದ ಬಳಿಕ ಮತ್ತೆ ಬದುಕಿದಳು!
ಆಯಸ್ಸು ಇದ್ದರೆ ಯಮ ಬಂದರೂ ಏನೂ ಮಾಡಕ್ಕಾಗಲ್ಲ ಎಂದು ಹೇಳುತ್ತಾರೆ, ಕೆಲವೊಂದು ಘಟನೆಗಳನ್ನು ನೋಡುವಾಗ ಅದು ನಿಜ ಅನಿಸುತ್ತದೆ, ಈ ಸ್ಟೋರಿಯೂ ಅಷ್ಟೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡುವಾಗ ಮಹಿಳೆ ತೀರಿ ಹೋಗುತ್ತಾಳೆ, ವೈದ್ಯರು ಕೂಡ ಆಕೆ ಸಾವನ್ನಪ್ಪಿರುವ ವಿಷಯ ದೃಢ ಪಡಿಸುತ್ತಾರೆ, ಆದರೆ ಅದಾಗಿ 45 ನಿಮಿಷದ ಬಳಿಕ ಹೋದ ಪ್ರಾಣ ಮರಳಿ ಬಂದಿದೆ.

ಈ ಘಟನೆ ನಡೆದಿರುವುದು ಟೆಕ್ಸಾಸ್ನಲ್ಲಿ
ಈ ಘಟನೆ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ, ಕೆಲವೊಂದು ಮಿರಾಕಲ್ ನಡೆಯುತ್ತೆ ಎಂಬುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ. ಆ ಮಹಿಳೆಯ ಹೆಸರು ಮರೇಸಾ ಕ್ರಿಸ್ಟೆ, ಅರಿಗೆ ಹರಿಗೆ ನೋವು ಬಂದು ಆಸ್ಪತ್ರೆಗೆ ದಾಖಲಾಗಿದ್ದರು, ತ್ರಿವಳಿ ಮಕ್ಕಳಿಗೆ ಜನ್ಮ ನೀಡುವಾಗ ಸಾವನ್ನಪ್ಪಿದ್ದರು, ಆದರೆ ಅದಾದ ಸ್ವಲ್ಪ ಸಮಯದಲ್ಲಿಯೇ ಹೋದ ಪ್ರಾಣ ಮರಳಿ ಬಂದಿದೆ. ಮಹಿಳೆಗೆ ಹೆರಿಗೆಯ ಬಳಿಕ ತೊಂದರೆಗಳು ಕಾಣಿಸಿಕೊಂಡಿದ್ದರಿಂದ ಸಾವು ಉಂಟಾಗಿತ್ತು, ಅದಾಗಿ 45 ನಿಮಿಷದ ಬಳಿಕ ಅವರಲ್ಲಿ ಮತ್ತೆ ಉಸಿರಾಟ ಕಂಡು ಬಂದಿದೆ. ಆಕೆಗೆ ಸಿ ಸೆಕ್ಷನ್ ಮಾಡಿ ಮಕ್ಕಳನ್ನು ಹೊರ ತೆಗೆಯಲಾಗಿತ್ತು,ಅದಾದ ಸ್ಲ್ಪ ಹೊತ್ತಿನಲ್ಲಿಯೇ ಕೈಗಳು ಬಿದ್ದು ಹೋದಂತೆ ಅನಿಸಲಾರಂಭಿಸಿತು, ಹೃದಯ ಬಡಿತ ನಿಂತು ಹೋಯ್ತು ಅಂತಾರೆ ಮರಿಸಾ.
45 ನಿಮಿಷದ ಬಳಿಕ ಮರಳಿದ ಉಸಿರಾಟ
ಮಹಿಳೆ ಸತ್ತು ಹೋಗಿದ್ದಳು, ವೈದ್ಯರು ಪರೀಕ್ಷೆ ಮಾಡಲಾಗಿ ಆಕೆಯ ಹೃದಯದ ಬಡಿತ ಸಂಪೂರ್ಣ ನಿಂತಿತ್ತು, ಅದಾಗಿ 45 ನಿಮಿಷದ ಬಳಿಕ ಆಕೆಯ ದೇಹದಲ್ಲಿ ಉಸಿರಾಟದ ಪ್ರಕ್ರಿಯೆ ಕಂಡು ಬಂದಾಗ ಎಲ್ಲರಿಗೂ ಅಚ್ಚರಿ, ಆದರೆ ಆಕೆಯ ಜೀವ ಮರಳಿ ಬಂದ ಮೇಲೆ ಒಂದು ವಾರದವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಮೂವರು ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂಬ ನೆನಪು ಕೂಡ ಆಕೆಗೆ ಪ್ರಜ್ಞೆ ಬಂದಾಗ ಇರಲಿಲ್ಲ, ಆ ಅನುಭವವೇ ಭಯಾನಕವಾಗಿತ್ತು ಅಂತಾರೆ ಮರೇಸಾ.
ಸತ್ತು ಹೋದವರು ಜೀವನಕ್ಕೆ ಮರಳಿ ಬಂದಿರುವುದು ಇದೇ ಮೊದಲಲ್ಲ
ಸತ್ತು ಹೋದರು ಎಂದು ಭಾವಿಸಿದ್ದ ವ್ಯಕ್ತಿ ಜೀವನಕ್ಕೆ ಮರಳಿರುವುದು ಇದೇ ಮೊದಲಲ್ಲ, ತುಂಬಾ ಘಟನೆಗಳ ನಡೆದಿದೆ. ಶವ ಸಂಸ್ಕಾರ ಕ್ರಿಯೆ ನಡೆಯುವಾಗ ಎದ್ದು ಕುಳಿತಿರುವ ಘಟನೆಗಳಿವೆ, ವೈದ್ಯರು ತೀರಿ ಹೋಗಿದೆ ಎಂದ ಮಗುವನ್ನು ಮನೆಗೆ ತಂದಾಗ ಮತ್ತೆ ಮಗುವಿನಲ್ಲಿ ಉಸಿರಾಟ ಕಂಡು ಬಂದಿರುವ ಘಟನೆಗಳಿವೆ. ಕೆಲವು ಕಡೆ ವೈದ್ಯರ ನಿರ್ಲಕ್ಷ್ಯ ಎಂದು ಗಲಾಟೆ ಮಾಡಿದರೆ ಇನ್ನು ಕೆಲವು ಕಡೆ ಇದನ್ನು ಚಮತ್ಕಾರ ಎಂದು ಭಾವಿಸಿದ್ದು ಇದೆ. ಮರೇಸಾ ಕುಟುಂಬ ಇದು ವೈದ್ಯರ ನಿರ್ಲಕ್ಷ್ಯವಲ್ಲ, ಅವರ ಹೃದಯ ಸಂಪೂರ್ಣ ನಿಂತು ಹೋಗಿತ್ತು, ಅವರು ಮರಳಿ ಬಂದಿರುವುದು ಚಮತ್ಕಾರ ಎಂದು ನಂಬಿದ್ದಾರೆ.
ಇನ್ನು ಕೆಲವರು ಸತ್ತು ಹೋಗಿ ಸ್ವರ್ಗನೋಡಿ ಮತ್ತೆ ಜೀವನಕ್ಕೆ ಮರಳಿದಡೇರ್ರಿಯಲ್ ಪೆರ್ರಿ. ಇವರು ಸ್ವರ್ಗದ ಅನುಭವದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ,
ಅವುಗಳೆಂದರೆ ...
Book 1: Heavenly Encounters
Book 2: Messages from Heaven
Book 3: Transformed by Heaven
Book 4: A Love Beyond Words
Book 5: A Choir of Angels
Book 6: Scenes from Heaven
Book 7: A Joy Like No Other Book
8: A Glorious Light
ಪೆರಿ ಸ್ವರ್ಗದ ಅನುಭವದ ಬಗ್ಗೆ ಹೇಳುತ್ತಾ ನಾನು ಸ್ವರ್ಗದಲ್ಲಿ ನನ್ನ ಅಜ್ಜ, ಅಜ್ಜಿ, ಅಂಕಲ್ ಎಲ್ಲರನ್ನೂ ನೋಡಿದ ಆ ಸ್ಥಳ ತುಂಬಾನೇ ಶಾಂತವಾಗಿತ್ತು ಎಂಬುವುದಾಗಿ ಹೇಳಿದ್ದಾರೆ. ಆದರೆ ಪೆರ್ರಿ ಸತ್ತಿರಲಿಲ್ಲ, ಕೋಮಾದಲ್ಲಿದ್ದ, 11 ದಿನ ಕೋಮಾದಲ್ಲಿದ್ದ ಪೆರ್ರಿ ನಂತರ ನಿದ್ದೆಯಿಂದ ಎಚ್ಚರವಾದಂತೆ ಎಚ್ಚರವಾಗುತ್ತಾರೆ ಎಂಬುವುದಾಗಿ ಹೇಳಿದ್ದಾರೆ.



Click it and Unblock the Notifications