Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಕೊಡಗಿನ 7ನೇ ಹೊಸಕೋಟೆಯಲ್ಲಿ ಕಾಡಾನೆಗೆ ಗೇಟ್ ತೆಗೆದ ಯುವಕ, ನಿಂತಿದ್ದ ಕಾರಿಗೆ ಹಾನಿ: ಕಾಡಾನೆ ಪುಂಡಾಟದ ವೀಡಿಯೋ
ಕೊಡಗು ಪ್ರಕೃತಿ ರಮಣೀಯ ನಾಡು, ಕರ್ನಾಟಕದ ಕಾಶ್ಮೀರ ಎಂದರೆ ಪ್ರಸಿದ್ಧ, ತನ್ನ ನೈಸರ್ಗಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ, ಆದರೆ ಈ ಸುಂದರ ಜಿಲ್ಲೆಯಲ್ಲಿ ಮನುಷ್ಯ ಮತ್ತು ಕಾಡಾನೆಗಳ ಸಂಘರ್ಷಕ್ಕೆ ಕೊನೆಯಿಲ್ಲ. ಆಹಾರವನ್ನರಿಸಿ ಕಾಡಿನಿಂದ ನಾಡಿಗೆ ಬಂದು ಲೂಟಿ ಮಾಡಿ ಹೋಗುವ ಕಾಡಾನೆಗಳನ್ನು ಪ್ರತಿದಿನ ನೋಡಬಹುದು.

ಕೊಡಗಿನ ಕೆಲವೊಂದು ಸ್ಥಳಗಳಲ್ಲಿ ಆನೆ ಎಷ್ಟೊತ್ತಿಗೆ ಬರುತ್ತದೆ, ಎಷ್ಟೊತ್ತಿಗೆ ಕಾಡಿಗೆ ಮತ್ತೆ ಹಿಂತಿರುಗುತ್ತದೆ ಎಂಬುವುದು ಅಲ್ಲಿರುವ ನಿವಾಸಿಗಳಿಗೆ ತುಂಬಾ ಚೆನ್ನಾಗಿರುತ್ತದೆ. ಉಳಿದೆಲ್ಲಾ ಸಮಯಕ್ಕಿಂತ ಈ ಹಲಸಿನಹಣ್ಣು, ಮಾವಿನಹಣ್ಣು, ಕಣಲೆ ಬರುವ ಈ ಸೀಸನ್ನಲ್ಲಿ ಕಾಡಾನೆಗಳ ಕಾಟ ತುಸು ಅಧಿಕವಿರುತ್ತದೆ.
ಕಾಡಾನೆಗಳು ನಾಡಿಗೆ ಬಂದು ಹೀಗೆ ಹಲಸು-ಬಾಳೆ ಅಂತ ನಾಶ ಮಾಡುತ್ತದೆ, ಆದರೆ ಸಾಮಾನ್ಯವಾಗಿ ಮನುಷ್ಯನ ತಂಟೆಗೆ ಹೋಗಲ್ಲ, ಆದರೆ ಅದು ಗಲಿಬಿಲಿಯಾದಾಗ ತುಂಬಾನೇ ಅಪಾಯಕಾರಿ. ಜನ ಅದರ ಮೇಲೆ ದಾಲಿ ಮಾಡಲು ಯತ್ನಿಸಿದಾಗ ಅದು ಮನುಷ್ಯರ ಮೇಲೆ ದಾಳಿ ಮಾಡುತ್ತದೆ.
7th Hoskote, Karnataka pic.twitter.com/jtWMq2F7Ol
— [email protected] (@reenamanjuks) June 10, 2024
ಕೊಡಗಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಆನೆ ಇದೆಯೇ ಎಂದು ಸೂಕ್ಷ್ಮವಾಗಿ ಪರಿಶೀಲಿಸಿ ಮತ್ತೆ ಕೆಲಸಕ್ಕೆ ಹೋಗುತ್ತಾರೆ, ಸಮೀಪದಲ್ಲಿ ಆನೆ ಬಂದಿದೆ ಎಂದಾದರೆ ತೋಟಕ್ಕೆ ಹೋಗುವುದಿಲ್ಲ. ಅದರಂತೆ ಇತ್ತೀಚೆಗೆ ಕೊಡಗಿನ 7ನೇ ಹೊಸಕೋಟೆಗೆ ಬಂದ ಕಾಡಾನೆ ವೀಡಿಯೋ ಗಮನ ಸೆಳೆದಿದೆ...
ಕಾಡಾನೆಗೆ ಗೇಟ್ ತೆಗೆದುಕೊಟ್ಟು ವೀಡಿಯೋ ಚಿತ್ರೀಕರಣ ಮಾಡಿದ ಯುವಕ
ಈ ವೀಡಿಯೋವನ್ನು ಹೊಸಕೋಟೆಯ ರಫೀಕ್ ಎಂಬ ಯುವಕ ಚಿತ್ರೀಕರಿಸಿರುವುದು. ಆತ ಆನೆ ಬರುತ್ತಿರುವುದು ನೋಡಿದ್ದಾನೆ, ತಾನು ಗೇಟ್ ತೆಗೆಯದಿದ್ದರೆ ಗೇಟ್ ಅಥವಾ ಕಾಪೌಂಡ್ ಮುರಿಯುವುದು ಖಂಡಿತ ಅಂತ ಗೊತ್ತಾಗಿದೆ, ಹಾಗಾಗಿ ಆನೆ ಸುಲಭವಾಗಿ ಹೋಗಲಿ ಎಂದು ಗೇಟ್ ತೆರೆದು ಓಡಿದ್ದಾನೆ, ಇದು ಸ್ವಲ್ಪ ರಿಸ್ಕ್ ಕೂಡ ಹೌದು, ಆದರೂ ಸಾಹಸ ಮಾಡಿದ್ದಾನೆ, ಈ ಆನೆ ಆರಾಮವಾಗಿ ಓಡಾಡಿರುವುದು ಮಡಿಕೇರಿ ಮೈಸೂರಿನ ಹೆದ್ದಾರಿಯಲ್ಲಿ.
ಆನೆ ಬಂತೊಂದು ಆನೆ ...7th Hoskote, Karnataka pic.twitter.com/p4lVLY3Rng
— [email protected] (@reenamanjuks) June 10, 2024
ಆ ದಾರಿಯಲ್ಲಿ ಬಂದ ಬಿಳಿ ಕಾರಿನವ ಜಸ್ಟ್ ಮಿಸ್
5 ನಿಮಿಷದಲ್ಲಿ ನೂರಾರು ಗಾಡಿಗಳು ಓಡಾಡುವ ಜಾಗ, ಬೆಳಗ್ಗಿನ ಜಾವ ಆದ ಕಾರಣ ಗಾಡಿಗಳು ಕಡಿಮೆಯಿತ್ತು. ಆದರೆ ಆನೆ ಹೋಗುತ್ತಿರುವ ಅದೇ ದಾರಿಯಲ್ಲಿ ಬಿಳಿ ಬಣ್ಣದ ಕಾರು ಬಂದು ಜಸ್ಟ್ ಪಾಸಾಗಿದೆ ಪುಣ್ಯಕ್ಕೆ ಆನೆ ಏನೂ ಮಾಡಿಲ್ಲ.
ರಸ್ತೆ ಬದಿಯಲ್ಲಿ ನಿಂತಿದ್ದ ಗಾಡಿಗೆ ಹಾನಿ ಮಾಡಿದೆ
ಆನೆ ಸಾಗುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಚುಚ್ಚಿ ಹಾನಿ ಮಾಡಿದೆ, ಪುಣ್ಯಕ್ಕೆ ಅದರಲ್ಲಿ ಯಾರೂ ಇರಲಿಲ್ಲ, ಒಟ್ಟಿನಲ್ಲಿ ಈ ಕಾಡಾನೆಯ ಪುಂಡಾಟದ ವೀಡಿಯೋ ವೈರಲ್ ಆಗುತ್ತಿದೆ.
ಆನೆ ಮತ್ತು ಕಾಡಾನೆ ನಡುವಿನ ಸಂಘರ್ಷ ಇಲ್ಲಿಯ ಪ್ರತಿನಿತ್ಯದ ದೃಶ್ಯ
ಆಹಾರವನ್ನು ಹುಡುಕಿ ಬರುವ ಕಾಡಾನೆಯಿಂದ ತಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದೇ ಇಲ್ಲಿಯ ರೈತರಿಗೆ ತುಂಬಾನೇ ಸವಾಲಿನ ಕೆಲಸ, ಆನೆ ತಿಂದು ಅಥವಾ ತುಳಿದು ನಾಶ ಮಾಡಿ ಬಿಡುತ್ತದೆ. ಕಾಡುಗಳಲ್ಲಿ ಆಹಾರದ ಕೊರತೆ ಹಾಗಾಗಿ ನಾಡಿಗೆ ಬರುತ್ತಿದೆ. ಆದರೆ ಆನೆ ನಾಡಿಗೆ ಬಂದು ಬೆಳೆ ನಾಶ ಮಾಡಿದಾಗ ಆ ರೈತನ ಹೊಟ್ಟೆಪಾಡಿಗೆ ಕಷ್ಟವಾಗುತ್ತೆ, ಈ ಸಂಘರ್ಷಕ್ಕೆ ಹೊಣೆ ಯಾರು?



Click it and Unblock the Notifications