Latest Updates
-
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ತರಕಾರಿ ಮಾರುಕಟ್ಟೆಯಲ್ಲಿ ಈ ಮಹಿಳೆಯೇ ದೃಷ್ಟಿಗೊಂಬೆ..! ಯಾರು ಈ ಮಹಿಳೆ.?
ನೀವು ಮಾರುಕಟ್ಟೆಗೆ ಹೋದಾಗ ಅಲ್ಲಿ ವಿವಿಧ ರೀತಿಯ ತರಕಾರಿ, ಹಣ್ಣು ಹಂಪಲು ನೋಡುತ್ತೀರಿ. ಜೊತೆಗೆ ನಿಮಗೆ ಇಷ್ಟವಾದ ತರಕಾರಿಯೋ ಅಥವಾ ಹಣ್ಣು ಮನೆಗೆ ತರುತ್ತೀರಿ. ಆದ್ರೆ ಮಾರುಕಟ್ಟೆಯಲ್ಲಿ ಯಾವಾತ್ತಾದ್ರು ಈ ರೀತಿ ಮಹಿಳೆಯ ಫೋಟೋ ಹಾಕಿರೋದನ್ನ ನೋಡಿದ್ದೀರಾ?
ಬೆಂಗಳೂರಿನ ಸ್ಥಳೀಯ ತರಕಾರಿ ಅಂಗಡಿಯಲ್ಲಿ ಈ ಮಹಿಳೆಯ ಫೋಟೋವೊಂದು ನೇತಾಡುತ್ತಿದೆ. ದೊಡ್ಡ ದೊಡ್ಡ ಕಣ್ಣುಗಳ ತೆರೆದಿರುವ ಫೋಟೋ ಅದಾಗಿದೆ. ಈ ಫೋಟೋವನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದ್ದು, ಜನರಿಗೆ ಇದ್ಯಾಕೆ ಹಾಕಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸವಾಲು ಎದುರಾಗಿದೆ.
ನಿಹಾರಿಕಾ ಎಂಬುವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಟೊಮೆಟೋ ರಾಶಿಯ ಮೇಲೆ ಈ ಮಹಿಳೆಯ ಫೋಟೋ ಹಾಕಿರುವುದು ಕಾಣಬಹುದು. ಅಲ್ಲಿ ಮಹಿಳೆಯ ಚಿತ್ರ ರಾರಾಜಿಸುತ್ತಿದೆ. ಸಿಸಿಟಿವಿಯಂತೆ ಆ ಫೋಟೋ ಟೊಮೆಟೋ ರಾಶಿಯನ್ನೇ ದಿಟ್ಟಿಸಿ ನೋಡುತ್ತಿದೆ.

ಈ ಫೋಟೋವನ್ನ ಅಂಗಡಿ ಮುಂದೆ ಏಕೆ ಹಾಕಿದ್ದಾರೆ? ಅಸಲಿಗೆ ಈ ಫೋಟೋ ಯಾರದ್ದು? ಅದರ ಉದ್ದೇಶ ಏನು? ಎಂಬುದು ಜನರ ಪ್ರಶ್ನೆಯಾಗಿದೆ.
ಬೆಂಗಳೂರಿನ ಹಲವು ಮಾರುಕಟ್ಟೆಯಲ್ಲಿ ಈ ಮಹಿಳೆಯ ಫೋಟೋ ರಾರಾಜಿಸುತ್ತಿದೆ. ಹಲವರು ಗ್ರಾಹಕರ ಸೆಳೆಯಲು ಈ ಫೋಟೋ ಬಳಸುತ್ತಿದ್ದಾರಂತೆ. ಇನ್ನು ಕೆಲವರು ವ್ಯಾಪಾರದ ಮೇಲೆ ಯಾರು ಕಣ್ಣು ಬೀಳದಿರಲಿ ಎಂಬ ಕಾರಣಕ್ಕೆ ಈ ಫೋಟೋ ಹಾಕುತ್ತಿದ್ದಾರಂತೆ.
ಈ ಫೋಟೋ ಹಂಚಿಕೊಂಡ ಬಳಿಕ 85 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ. ಜೊತೆಗೆ ಹತ್ತಾರು ಬಗೆಯ ಕಮೆಂಟ್ ಮಾಡಿದ್ದಾರೆ. ಈ ಫೋಟೋ ಕತ್ರಿಗುಪ್ಪೆ ಬಳಿಯ ಜಾಗದಲ್ಲಿ ಹಾಕಿದ್ದಾರೆಯೇ ಎಂದು ಒಬ್ಬರು ಕೇಳಿದ್ದಾರೆ. ಜೊತೆಗೆ ಇದು ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಹತ್ತಿರವೇ? ಎಂದು ಟ್ವಿಟ್ಟರ್ ಬಳಕೆದಾರೊಬ್ಬರು ಕೇಳಿದ್ದು, ಹೌದು, ಇದರ ಹಿಂದಿನ ಕಥೆ ನಿನಗೆ ಗೊತ್ತಾ?" ಎಂದು ನಿಹಾರಿಕಾ ಪ್ರಶ್ನಿಸಿದ್ದಾರೆ.
ಆದರೆ ಈ ಫೋಟೋ ಹಿಂದೆ ಯಾವುದೇ ಕಥೆಯಿಲ್ಲ tbh, ಇದು ದುಷ್ಟ ಕಣ್ಣುಗಳಿಂದ ದೂರವಿರಲು. ಈ ಫೋಟೋ ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ ಮತ್ತು ಅನೇಕ ಇತರ ಅಂಗಡಿಗಳಲ್ಲಿ ಇರಿಸಲಾಗಿದೆ ಎಂದು ಉತ್ತರಿಸಿದ್ದಾರೆ. ಈ ರೀತಿ ಹಲವು ಕಡೆ ಫೋಟೋಗಳ ಹಾಕಲಾಗಿದೆಯಂತೆ.
ಈ ಫೋಟೊ ನೋಡಿದ ಮಂದಿ ಒಂದೊಂದು ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಮಹಿಳೆ ಯಾರು? ಆಕೆ ಈ ಪೋಟೋವನ್ನ ನೋಡಿದ್ರೆ ನಿಜವಾಗ್ಲು ಇನ್ನು ಮುಂದೆ ಮಾರುಕಟ್ಟೆಗೆ ಕಾಲಿಡುವುದಿಲ್ಲ. ಆ ಮಹಿಳೆಗೆ ಈ ವಿಚಾರ ತಿಳಿದಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಈ ರೀತಿ ದೃಷ್ಟಿ ಗೊಂಬೆ ಈಗ ಮಾರುಕಟ್ಟೆಗೆ ಬಂದಿದೆ. ಅಂಗಡಿ ನೋಡುವ ಬದಲು ಜನ ಆ ಫೋಟೋ ಕಡೆಯೇ ಹೆಚ್ಚಾಗಿ ನೋಡುತ್ತಾರೆ. ಇದು ಒಳ್ಳೆಯ ಐಡಿಯಾ ಎಂದು ಕೆಲವರು ಹೇಳಿದ್ಧಾರೆ. ಇನ್ನು ಇದು ಸಿಸಿಟಿವಿ ಆವಿಷ್ಕಾರಕ್ಕೂ ಮೊದಲು ಇದ್ದ ಸಿಸಿಟಿವಿ ಎಂದು ಮತ್ತೊಬ್ಬರು ತಮಾಷೆಯ ಕಮೆಂಟ್ ಮಾಡಿದ್ದಾರೆ.
ಈ ಫೋಟೋವನ್ನು ನೋಡಿದಾಗ ನಿಮಗೆ ಏನು ನೆನಪಿಗೆ ಬರುತ್ತಿದೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನಾನು ಈ ಫೋಟೋ ನೋಡಿದ ತಕ್ಷಣ ದರ ಏರಿಕೆಯಿಂದ ಮಾರುಕಟ್ಟೆಗೆ ಬಂದು ತರಕಾರಿ ಖರೀದಿಸಲಾಗದ ಮಹಿಳೆಯ ನೋಟ ಇದೇ ರೀತಿ ಇರಲಿದೆ ಎಂಬುದನ್ನು ಈ ಫೋಟೋ ತೋರಿಸುತ್ತಿದೆ ಎಂದಿದ್ದಾರೆ.
ಈ ಫೋಟೋದಲ್ಲಿರುವ ಮಹಿಳೆ ಮುಂದೊಂದು ದಿನ ಭಾರತದ ಸೆಲೆಬ್ರಿಟಿ ಆದರೂ ಅಚ್ಚರಿಯಿಲ್ಲ. ಇತ್ತೀಚಿಗೆ ಆನ್ಲೈನ್ ಜಗತ್ತು ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂದು ಮತ್ತೊಬ್ಬರು ಅಚ್ಚರಿಯ ಕಮೆಂಟ್ ಮಾಡಿದ್ದಾರೆ.



Click it and Unblock the Notifications