Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
ಭಾರತದಲ್ಲಿ ಸ್ವಚ್ಚ್ ಭಾರತ್ ಅಭಿಯಾನ ಆರಂಭಿಸಿ ವರುಷಗಳೇ ಉರುಳಿವೆ. ಆದರೆ ಈವರೆಗೆ ಒಂದೂ ನಗರವನ್ನು ಸ್ವಚ್ಛತಾ ನಗರ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಹೆಸರಿಗೆ ಮಾತ್ರ ಸ್ವಚ್ಛ ನಗರ ಎಂಬ ಘೋಷಣೆ ಆ ನಗರಕ್ಕೆ ಸಿಗುತ್ತದೆ. ಆದ್ರೆ ಎಲ್ಲಿ ನೋಡಿದರು ಕಸ ಹಾಕುತ್ತಾರೆ, ಎಲ್ಲೆಂದರಲ್ಲಿ ಉಗುಳುತ್ತಾರೆ.
ಅದರಲ್ಲೂ ಪಾನ್ ಮಸಾಲ ಹಾಕುವ ಅಭ್ಯಾಸ ಇಟ್ಟುಕೊಂಡಿರುವ ಮಂದಿ ಎಲ್ಲೆಂದರಲ್ಲಿ ಉಗುಳುತ್ತಾರೆ. ಅದು ಸಾರ್ವಜನಿಕ ಸ್ಥಳವಾಗಿರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಶೌಚಾಲಯಗಳು ಅಷ್ಟೆ ಏಕೆ ಪ್ರವಾಸಿ ಸ್ಥಳಗಳೂ ಸೇರಿ ದೇವಾಲಯದಲ್ಲಿಯೂ ಜನ ಉಗಿಯುವುದನ್ನು ನಾವು ನೋಡಬಹುದು.

ಇದನ್ನು ತಪ್ಪಿಸಲೆಂದು ಸರ್ಕಾರ 'ಇಲ್ಲಿ ಉಗುಳಬಾರದು ಉಗುಳಿದರೆ ದಂಡ' ಎಂದು ಕಂಡ ಕಂಡಲ್ಲಿ ಬೋರ್ಡ್ ಹಾಕಿರುತ್ತದೆ ಇಷ್ಟಾದರು ಜನ ಮಾತ್ರ ತಮ್ಮ ನಡೆತೆಯನ್ನು ಸರಿ ಮಾಡಿಕೊಳ್ಳುವುದಿಲ್ಲ. ಯಾರಾದರು ಉಗುಳಿರುವ ಗುರುತು ಕಂಡರೆ ಸಾಕು ಅಲ್ಲಿಯೇ ಉಗುಳಲು ಆರಂಭಿಸುತ್ತಾರೆ. ಆ ಇಡೀ ಪ್ರದೇಶವನ್ನು ಹಾಳು ಮಾಡುತ್ತಾರೆ.
ಆದ್ರೆ ಇಲ್ಲೊಂದು ಕಡೆ ಜನ ಉಗುಳಿರುವ ಕಲೆಯನ್ನು ಸ್ವಚ್ಚ ಮಾಡುತ್ತಿರುವ ಸಿಬ್ಬಂದಿಯ ವಿಡಿಯೋವೊಂದು ವೈರಲ್ ಆಗಿದ್ದು, ಜನ ಈ ವಿಡಿಯೋ ನೋಡಿ ಪಾನ್ ಮಸಾಲ ಸೇವಿಸಿ ಎಲ್ಲೆಂದರಲ್ಲಿ ಉಗುಳುವ ಮಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? ಅಲ್ಲಿ ನಡೆದಿದ್ದೇನು ಎಂಬುದನ್ನು ನೋಡಿ.
ಜನ ಉಗುಳಿರುವುದರಿಂದ ಕಲೆಯಾಗಿರುವ ಸ್ಥಳವನ್ನು ಸ್ವಚ್ಛಗೊಳಿಸಲು ಸ್ವಚ್ಛತಾ ಸಿಬ್ಬಂದಿ ಹೆಣಗಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವೇಳೆ ಆ ಮಹಿಳೆ ಬಳಿ ತೆರಳಿದ ವ್ಯಕ್ತಿಯೊಬ್ಬ ಆಕೆಯನ್ನು ಮಾತನಾಡಿಸುತ್ತಿದ್ದಾನೆ. ಉಗುಳುವ ಕಲೆಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಆಕೆಗೆ ಹೇಗೆ ಅನಿಸುತ್ತದೆ ಎಂದು ಕೇಳುತ್ತಾರೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬುವರು ಹಂಚಿಕೊಂಡಿದ್ದಾರೆ. ಆಕೆಗೆ ನಿಮಗೆ ಈ ಉಗುಳಿದ ಕಲೆ ಸ್ವಚ್ಛ ಮಾಡುವಾಗ ಏನು ಅನಿಸುತ್ತದೆ ಎಂದು ಪ್ರಶ್ನಿಸಿದರೆ. ಆಕೆ ನನ್ನ ನಿತ್ಯದ ಕೆಲಸ ಇದಾಗಿದೆ. ಈ ಕಲೆಗಳನ್ನು ಸ್ವಚ್ಛ ಮಾಡಲು ಒತ್ತಾಯವಾಗಿ ಬರಬೇಕಾಗುತ್ತದೆ. ಜನರಿಗೆ ಎಷ್ಟು ಹೇಳಿದರು ಕೇಳುವುದಿಲ್ಲ, ಏನು ಮಾಡೋದು ಇದು ನನ್ನ ಕೆಲಸ ಎಂದು ಆಕೆ ಹೇಳುತ್ತಿದ್ದಾಳೆ.
ಆದರೆ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಹಂಚಿಕೊಂಡ ಬಳಿಕ ವೈರಲ್ ಆಗಿದೆ. ಜೊತೆಗೆ ದಯವಿಟ್ಟು ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಉಗಿಯಬೇಡಿ. ನಮ್ಮ ಸ್ಥಳಗಳನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ, ಅದನ್ನು ಹಾಳು ಮಾಡುವುದು ಕೊಳಕು ಮಾಡುವುದು ನಮ್ಮ ಕೆಲಸವಲ್ಲ. ಅದನ್ನು ಸ್ವಚ್ಛ ಮಾಡುವುದು ಅವರ ಕೆಲಸವಲ್ಲ. ಎಂದು ಬಳಕೆದಾರರು ಮನವಿ ಮಾಡಿಕೊಂಡಿದ್ದಾರೆ.
ಇದರ ಜೊತೆ ಸಾರ್ವಜನಿಕ ಸ್ಥಳದಲ್ಲಿ ಉಗುಳುವವ ವಿರುದ್ಧ ಕಠಿಣ ಕ್ರಮಕ್ಕೆ ಕಾನೂನು ತರಬೇಕು ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಉಗುಳುವವರನ್ನು ಗುರುತಿಸಿ ದಂಡ ಹಾಕಬೇಕು. ಆ ದಂಡದ ಹಣವನ್ನು ಸ್ವಚ್ಛಗೊಳಿಸುವ ಸಿಬ್ಬಂದಿಗೆ ನೀಡಬೇಕು ಹೇಳಿದ್ದಾರೆ.
ಇದಕ್ಕೂ ಮೊದಲು ಮೇ 2022ರಲ್ಲಿ ವಿಮಾನದ ಕಿಟಕಿಯ ಕೆಳಗೆ ಪಾನ್ ಮಸಾಲ ಹಾಕಿ ಉಗುಳಿದ ಚಿತ್ರವೊಂದು ಭಾರೀ ವೈರಲ್ ಆಗಿತ್ತು. ಜನ ಇತ್ತೀಚಿಗೆ ವಿಮಾನವನ್ನೂ ಬಿಡದೆ ಉಗಿಯುತ್ತಿರುವುದಕ್ಕೆ ಭಾರೀ ಆಕ್ರೋಶ ಕೇಳಿಬಂದಿತ್ತು. ಇಷ್ಟಾದರು ಜನ ಮಾತ್ರ ಇಂದಿಗೂ ತಮ್ಮ ಹಳೆ ಚಾಳಿ ಮುಂದುವರೆಸಿದ್ದು, ಎಲ್ಲೆಂದರಲ್ಲಿ ಉಗುಳುವುದನ್ನು ಮಾಡುತ್ತಲೇ ಇದ್ದಾರೆ. ಇನ್ನಾದರು ಜನ ಎಚ್ಚೆತ್ತು ಗಾಂಧೀಜಿ ಅವರ ಕನಸಾಗಿದ್ದ ಸ್ವಚ್ಛತೆ ಕಡೆಗೆ ಒಂದು ಹೆಜ್ಜೆ ಇಡಲಿ.



Click it and Unblock the Notifications