Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಉದ್ದಿನ ವಡೆ ಮಧ್ಯದಲ್ಲಿ ತೂತು ಇರುವುದು ಏಕೆ? ನೀವು ಎಂದಾದ್ರು ಯೋಚಿಸಿದ್ದೀರಾ?
ದಕ್ಷಿಣ ಭಾರತದ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದ್ರಲ್ಲೂ ದೋಸೆ, ಇಡ್ಲಿ, ವಡೆ, ಪೊಂಗಲ್, ಪೂಳಿಯೋಗೆ, ಅಪ್ಪಂ, ನೀರ್ ದೋಸೆ, ರೊಟ್ಟಿ, ಮುದ್ದೆ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಹಾಗೆ ಈ ಎಲ್ಲಾ ರುಚಿ ರುಚಿಯ ಖಾದ್ಯಗಳನ್ನು ನಿತ್ಯ ಮಾಡಿ ಸವಿಯೋದನ್ನು ನೋಡಬಹುದು. ಅದ್ರಲ್ಲೂ ಕೆಲ ತಿಂಡಿಗಳು ಹೋಟೆಲ್, ರೆಸ್ಟೋರೆಂಟ್ನಲ್ಲಿ ದುಬಾರಿ ಬೆಲೆಗೆ ಹಾಗೆ ಅದನ್ನೇ ಸವಿಯಲು ಜನರು ಸಾಲು ಗಟ್ಟಿ ಗಂಟೆಗಟ್ಟಲೆ ನಿಂತು ಖರೀದಿಸುತ್ತಾರೆ.
ಇಂತಹ ರುಚಿಕರ ಹಾಗೆ ವಿಶೇಷ ಖಾದ್ಯದಲ್ಲಿ ವಡೆ ಕೂಡ ಒಂದು. ಉದ್ದಿನ ಬೇಳೆ ಬಳಸಿ ಮಾಡುವ ವಡೆ ಇಡ್ಲಿ ಜೊತೆ ಸವಿಯಲು ಬಹುತೇಕರು ಇಷ್ಟಪಡುತ್ತಾರೆ. ಹಾಗೆ ವಡೆ ಮುಳುಗುವಷ್ಟು ಸಾಂಬಾರ್ ಹಾಕಿಕೊಂಡು ಸವಿಯುವುದು ಹಲವರ ಇಷ್ಟದ ಬ್ರೇಕ್ ಫಾಸ್ಟ್. ಇನ್ನು ವಡೆ ಸಹ ದಕ್ಷಿಣ ಭಾರತದ ಬಹಳ ಇಷ್ಟದ ಹಾಗೆ ಬಹಳ ರುಚಿಕರ ತಿಂಡಿ.

ಆದ್ರೆ ಈ ವಡೆಯನ್ನು ಹಲವು ಬಗೆಯಲ್ಲಿ ಹಲವು ರೀತಿಯಲ್ಲಿಯೂ ಮಾಡಿ ಸವಿಯಬಹುದು. ಆದ್ರೆ ಎಲ್ಲಾ ಉದ್ದಿನ ವಡೆಗಳು ಒಂದೇ ರೀತಿ ಆಕಾರದಲ್ಲಿ ಇರುವುದು ಕಾಮನ್. ವೃತ್ತಾಕಾರವಾಗಿ ಹಾಗೆ ಮಧ್ಯದಲ್ಲಿ ಒಂದು ತೂತು ಸಹ ಇರುವುದು ಸಾಮಾನ್ಯವಾಗಿ ಕಂಡುಬರುವ ರಚನೆಯಾಗಿದೆ. ಆದ್ರೆ ನೀವು ಎಂದಾದ್ರು ಆಲೋಚಿಸಿದ್ದೀರಾ? ಈ ವಡೆಗೆ ಮಧ್ಯದಲ್ಲಿ ತೂತು ಇರುವುದು ಏಕೆ? ಈ ರೀತಿಯ ರಚನೆಯ ವಡೆಯನ್ನೇ ಏಕೆ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಾ?
ವಡೆ ಮಧ್ಯದಲ್ಲಿ ತೂತು ಇರುವುದು ಆಕೆ ಅನ್ನೋದು ಹಲವರಿಗೆ ತಿಳಿದಿರುವುದಿಲ್ಲ. ಇದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಆಕಾರ ಎಂದು ಹಲವರು ಭಾವಿಸಿದ್ದಾರೆ. ಹಾಗೆ ಈ ತೂತು ಇರುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಆಕಾರ ಎಂದು ಹೇಳಲಾಗಿದೆ. ಆದ್ರೆ ಇದರ ಹಿಂದೆ ದೊಡ್ಡ ಉದ್ದೇಶವಿದೆ ಎಂಬುದು ನಿಮಗೆ ಗೊತ್ತಾ?
ಉದ್ದಿನ ಹಿಟ್ಟನ್ನು ಕೈಯಲ್ಲಿ ಹಿಡಿದು ಮಧ್ಯದಲ್ಲಿ ಸಣ್ಣ ತೂತು ಮಾಡಿ ಎಣ್ಣೆಯಲ್ಲಿ ಬಿಟ್ಟರೆ ವಡೆ ಚೆನ್ನಾಗಿ ಬೇಯುತ್ತದೆ. ಮಧ್ಯದಲ್ಲಿನ ರಂಧ್ರವು ಶಾಖವು ಎಲ್ಲಾ ಕಡೆ ತಾಕುವಂತೆ ಮಾಡಲಿದೆ. ಹಾಗೆ ವಡೆ ಒಳಗೂ ಸಹ ಚೆನ್ನಾಗಿ ಬೇಯಲು ಈ ತೂತು ಸಹಕಾರಿಯಾಗಲಿದೆ. ಮಧ್ಯದ ರಂಧ್ರವು ಶಾಖಕ್ಕೆ ಒಡ್ಡಿಕೊಳ್ಳುವ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತದೆ. ಇದು ವಡಾವನ್ನು ಒಳಗೆ ಮತ್ತು ಹೊರಗೆ ಸಮವಾಗಿ ಬೇಯಿಸಲು ಅನುವು ಮಾಡಿಕೊಡುತ್ತದೆ.
ವಡೆ ಮಧ್ಯ ಭಾಗದಲ್ಲಿ ದಪ್ಪ ರಚನೆ ಇರುವ ಕಾರಣ ಕಾದಿರುವ ಎಣ್ಣೆ ಮಧ್ಯಭಾಗ ತಲುಪಿ ಆ ಭಾಗ ಸಹ ಕರಿಯಬೇಕಾಗುತ್ತದೆ. ಹೀಗಾಗಿ ರಂಧ್ರವು ಎಣ್ಣೆಯ ಹರಿವನ್ನು ಸರಾಗಗೊಳಿಸಲು ಸಹಕಾರಿಯಾಗಲಿದೆ. ಇದರಿಂದ ವಡೆ ಎಲ್ಲಾ ಕಡೆಯೂ ಕ್ರಿಸ್ಪಿಯಾಗಿ ಬೇಯಲು ಅನುವು ಮಾಡಿಕೊಡಲಿದೆ. ವಡೆಯ ಒಳಗಿನ ಭಾಗ ಬೇಯುವುದು ಹಾಗೆ ಹೊರ ಭಾಗವು ಕರಿಕರಿಯಾಗಲು ನೆರವಾಗುತ್ತದೆ. ಹಾಗೆ ವಡೆ ವೃತ್ತಾಕಾರವಾಗಿ ಬರಲು ಕೂಡ ಈ ತೂತು ಸಹಾಯ ಮಾಡಲಿದೆ.
ಈ ಕಾರಣದಿಂದಾಗಿ ವಡೆಯ ರಚನೆಯಲ್ಲಿ ಮಧ್ಯದಲ್ಲಿ ತೂತು ನೋಡಬಹುದು. ಒಂದು ವೇಳೆ ತೂತು ಇಲ್ಲದೆ ಇದ್ದರೂ ವಡೆ ಮಾಡಬಹುದು. ಆದ್ರೆ ಬಹಳ ಸಮಯ ಎಣ್ಣೆಯಲ್ಲಿ ಕರಿಯಬೇಕಾಗಬಹುದು. ಇದು ಸಮಯ ಮತ್ತು ಎಣ್ಣೆಯ ನಷ್ಟಕ್ಕೆ ಕಾರಣವಾಗಲಿದೆ. ಹೀಗಾಗಿ ವಡೆಯ ಮಧ್ಯದಲ್ಲಿನ ತೂತು ಕೇವಲ ರಂಧ್ರವಲ್ಲ ಇದು ಹಲವು ರೀತಿಯಲ್ಲಿ ನಿಮಗೆ ಅನುಕೂಲಕರವಾಗಿದೆ. ವಡೆಯ ಈ ಆಕಾರವು ಈಗ ಎಲ್ಲಾ ಕಡೆ ಚಾಲ್ತಿಯಲ್ಲಿದೆ.



Click it and Unblock the Notifications
