Latest Updates
-
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್
ಸಫಾರಿಗೆ ಹೋದಾಗ ಸಿಂಹ ಸಿಕ್ರೆ ಅದು ಮನುಷ್ಯನ ಮೇಲೆ ದಾಳಿ ಮಾಡಲ್ಲ, ಏಕೆ?
ನೀವು ಸಫಾರಿ ಹೋಗಿದ್ದೀರಾ? ಹೋಗಿಲ್ಲ ಎನ್ನುವವರು ಸಫಾರಿ ವೀಡಿಯೋಗಳನ್ನು ನೋಡಿರುತ್ತೀರಾ, ಸಫಾರಿ ಗಾಡಿಯಲ್ಲಿ ಹೋಗುವಾಗ ಹುಲಿ, ಸಿಂಹ, ಆನೆ ಮುಂತಾದ ಅಪಾಯಕಾರಿ ಪ್ರಾಣಿಗಳು ಕಾಣ ಸಿಗುತ್ತವೆ, ಅದರಲ್ಲಿಯೂ ಸಿಂಹವನ್ನು ನೀವು ಗಮನಿಸಬಹುದು, ಅವು ನಿಮ್ಮತ್ತ ನೋಡುತ್ತವೆ, ಆದರೆ ಆಕ್ರಮಣ ಮಾಡಲು ಮುಂದಾಗುವುದಿಲ್ಲ. ಸಫಾರಿ ಗಾಡಿಯಲ್ಲಿ ಹೋಗುವಾಗ ಕಾಡಿನ ಸಿಂಹವೇಕೆ ದಾಳಿ ಮಾಡುವುದಿಲ್ಲ ಎಂದು ಯೋಚಿಸಿದ್ದೀರಾ? ಇಲ್ಲಿದೆ ಕೆಲ ಆಸಕ್ತಿಕರ ಸಂಗತಿಗಳು

ಸಿಂಹಣಿ ಮರಿಗಳ ಜೊತೆ ಇದ್ದರೆ ತುಂಬಾನೇ ಅಪಾಯಕಾರಿ
ಸಿಂಹ-ಸಿಂಹಣಿ ತುಂಬಾನೇ ಅಪಾಯಕಾರಿ, ಅದರಲ್ಲಿಯೂ ಮರಿಗಳ ಜೊತೆ ಇದ್ದರೆ ಅವುಗಳು ತುಂಬಾನೇ ಆಕ್ರಮಣಕಾರಿ, ಅದು ಆನೆಯಾದರೂ ಸರಿ, ಒಂಟಿ ಆನೆಗಿಂತ ಅಪಾಯಕಾರಿ ಮರಿ ಜೊತೆ ಬರುವ ಆನೆಗಳು. ಅವುಗಳಿಗೆ ಮನುಷ್ಯರನ್ನು ನೋಡಿದರೆ ಭಯವಾಗುತ್ತೆ, ಮನುಷ್ಯನಿಂದ ನಮ್ಮ ಮರಿಗಳಿಗೆ ಏನಾದರೂ ಅನಾಹುತ ಉಂಟಾಗುತ್ತೆ ಎಂಬ ಭಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿರುತ್ತದೆ. ಅದರಲ್ಲಿಯೂ ರಾತ್ರಿ ಹೊತ್ತು ತುಂಬಾನೇ ಅಪಾಯಕಾರಿ.
ಸಿಂಹವು ದಾಳಿಗೆ ಮುಂದಾಗುವ ಮುನ್ನ ಲೆಕ್ಕಾಚಾರ ಮಾಡಿ ದಾಳಿ ಮಾಡುತ್ತದೆ
ಸಾಮಾನ್ಯವಾಗಿ ಸಿಂಹವು ಮನುಷ್ಯನ ಕಂಡ ತಕ್ಷಣ ಆಹಾರ ಸಿಕ್ತು ಎಂದು ದಾಳಿ ಮಾಡುವುದಿಲ್ಲ, ಅವನು ಹೇಗೆ ವರ್ತಿಸುತ್ತಾನೆ ಎಂಬುವುದನ್ನು ಗಮನಿಸುತ್ತದೆ, ಮನುಷ್ಯ ಒಂಟಿಯಾಗಿದ್ದರೆ ದಾಳಿ ಮಾಡುತ್ತದೆ, ಇನ್ನು ವಯಸ್ಸಾದ ಅಥವಾ ಗಾಯವಾದ ಸಿಂಹಕ್ಕೆ ಬೇಟೆಯಾಡಲು ಕಷ್ಟವಾಗುವುದು ಅಂಥ ಸಿಂಹಗಳು ಮನುಷ್ಯ ಮೇಲೆ ದಾಳಿ ಮಾಡುತ್ತದೆ, ಸಿಂಹದ ಓಡಾಟ ಇರುವ ಕಡೆ ಮನುಷ್ಯ ಓಡಾಡುವುದು ಅಷ್ಟೊಂದು ಸುರಕ್ಷಿತವಲ್ಲ.
ಸಫಾರಿ ಗಾಡಿಯಲ್ಲಿ ಹೋಗುವಾಗ ದಾಳಿ ಮಾಡಲ್ಲ ಏಕೆ?
ಕೆಲವೊಂದು ಸಫಾರಿ ಗಾಡಿಯಲ್ಲಿ ಗ್ರಿಲ್ಡ್ ಹಾಕಿ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿರುತ್ತದೆ, ಆದರೆ ಈ ವೈಲ್ಡ್ಲೈಫ್ ಫೋಟೋಗ್ರಫಿ ಮಾಡುವವರು ಅಥವಾ ಕಾಡಿನ ಬಗ್ಗೆ ಅಧ್ಯಯನ ಮಾಡಲು ಹೋಗುವ ಸಫಾರಿ ಗಾಡಿ ಓಪನ್ ಇರುತ್ತದೆ, ಆದರೂ ಸಿಂಹವೇಕೆ ಅವರ ಮೇಲೆ ದಾಳಿ ಮಾಡಲ್ಲ ಎಂಬ ಪ್ರಶ್ನೆ ಮೂಡುತ್ತದೆ.
ಮನುಷ್ಯ ಸಿಂಹಕ್ಕೆ ಲೆಕ್ಕವಲ್ಲ, ಆದರೆ ಅವನು ಗಾಡಿಯೊಳಗಡೆ ಇರುವ ನನಗೆ ಆಹಾರ ಸಿಗುವ ಸಾಧ್ಯತೆ ಬಗ್ಗೆ ಲೆಕ್ಕಾಚಾರ ಮಾಡುತ್ತೆ, ಗಾಡಿ ನೋಡಿದಾಗ ಇದರಿಂದ ನನಗೆ ಹಾನಿಯಾಗಬಹುದ ಎಂದು ಹಹೆದರಿ ದಾಳಿ ಮಾಡಲು ಬರುವುದಿಲ್ಲ. ಸಾಮಾನ್ಯವಾಗಿ ಸಿಂಹ ದೊಡ್ಡ ಗಾತ್ರದ ಪ್ರಾಣಿ ಉದಾಹರಣೆಗೆ ಆನೆ ಇದರ ಮೇಲೆ ಅಷ್ಟು ಸುಲಭವಾಗಿ ದಾಳಿ ಮಾಡುವುದಿಲ್ಲ. ಏಕೆಂದರೆ ದಾಳಿ ಮಾಡಿದರೆ ಅವುಗಳಿಂದ ನನಗೆ ತೊಂದರೆಯಾಗಬಹುದು ಎಂದು ಸಾಮಾನ್ಯವಾಗಿ ದೊಡ್ಡ ಗಾತ್ರದ ಪ್ರಾಣಿಗಳ ತಂಟೆಗೆ ಹೋಗುವುದಿಲ್ಲ. ಇದೇ ಕಾರಣದಿಂದಲೇ ಸಫಾರಿ ಗಾಡಿ ಸಮೀಪ ಕೂಡ ಹೋಗುವುದಿಲ್ಲ.
ಆದರೂ ನಮ್ಮ ಸುರಕ್ಷತೆ ಕಡೆಗೆ ಗಮನಹರಿಸಬೇಕು
ಸಫಾರಿ ಟೂರ್ ನೀಡುವಾಗ ಎಲ್ಲಾ ಸುರಕ್ಷತೆ ಕ್ರಮಕ ತೆಗೆದುಕೊಂಡೇ ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಕೆಲವೊಂದು ಪ್ರದೇಶದಲ್ಲಿ ಇಳಿಯಬವಾರದೆಂದು ಮಾಹಿತಿ ನೀಡಿರುತ್ತಾರೆ, ಅಲ್ಲಿ ಇಳಿಯಲು ಪೋಟೋ ತೆಗೆಯಲು ಬಿಡುವುದಿಲ್ಲ, ಲೋಕಲ್ ಗೈಡ್ಗೆ ಸಾಮಾನ್ಯವಾಗಿ ಈ ಬಗ್ಗೆ ಒಳ್ಳೆಯ ಅರಿವು ಇರುತ್ತದೆ. ಅಲ್ಲದೆ ಸಫಾರಿ ಹೋದಾಗ ಕಾಡು ಪ್ರಾಣಿಗಳು ಎದುರಾದರೆ ಅವುಗಳ ತಂಟೆಗೆ ಹೋಗಬಾರದು.
ಸಫಾರಿಗೆ ಹೋಗುವಾಗ ಈ ನಿಯಮಗಳನ್ನು ಪರಿಶೀಲಿಸುವುದು ಒಳ್ಳೆಯದು
ಗಾಡಿ ಬಿಟ್ಟು ಕೆಲಗೆ ಇಳಿಯಬಾರದು
ಗಾರಿ ಹೊರಗಡೆ ಕೈ ಹಾಕುವುದು, ಅದರ ಹೊರಗಡೆ ಇಣುಕಿ ನೋಡುವುದು ಮಾಡಬಾರದು
ಪ್ರಾಣಿಗಳ ಸಮೀಪ ಗಾಡಿ ಹೋಗಬಾರದು
ಗಾಡಿಯ ವಿಂಡೋ ಓಪನ್ ಮಾಡಬಾರದು
ಗಾಡಿನಲ್ಲಿ ನಡೆಯುವುದಾದರೆ ಸೂ ಅಥವಾ ಗಂಬೂಟ್ ಧರಿಸಿ
ರಾತ್ರಿ ಹೊತ್ತು ಕಾಡಿನಲ್ಲಿ ಟೆಂಟ್ ಹಾಕುವುದು ಸುರಕ್ಷಿತವಲ್ಲ.



Click it and Unblock the Notifications