Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಇಂದು(ಸೆ.18) ಚಂದ್ರನನ್ನು ನೋಡಬಾರದು: ಒಂದು ವೇಳೆ ನೋಡಿದರೆ ಈ ಮಂತ್ರ ಪಠಿಸಿ
ಕನ್ನಡ ಬೋಲ್ಡ್ಸ್ಕೈ ಓದುಗರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಗಣೇಶ ನಿಮಗೆ ಸಂಪತ್ತು, ಸಮೃದ್ಧಿ, ಆರೋಗ್ಯ ನೀಡಲಿ, ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವಂತೆಯಾಗಲಿ.
ಸೆಪ್ಟೆಂಬರ್ 18,19ರಂದು ಗಣೇಶ ಚತುರ್ಥಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸೆಪ್ಟೆಂಬರ್ 18ರಂದು ಯಾವುದೇ ಕಾರಣಕ್ಕೆ ಚಂದ್ರನನ್ನು ನೋಡಬಾರದು ಎಂಬ ಧಾರ್ಮಿಕ ನಂಬಿಕೆಯಿದೆ. ಏಕೆ ಚಂದ್ರನನ್ನು ನೋಡಬಾರದು ಎಂದು ಹೇಳಲಾಗುವುದು, ಒಂದು ವೇಳೆ ನೋಡಿದರೆ ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಪೌರಾಣಿಕ ಕತೆ
ಧಾರ್ಮಿಕ ನಂಬಿಕೆ ಪ್ರಕಾರ ಶಿವನು ಭಾದ್ರಪದ ಮಾಸದ ನಾಲ್ಕನೇ ದಿನ (ಚೌತಿಯಂದು) ವಿನಾಯಕನಿಗೆ ಜಗತ್ತನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡುತ್ತಾನೆ. ಈ ಖುಷಿಯ ಸಂದರ್ಭ ಮೋದಕ, ಲಡ್ಡುಗಳು, ಮತ್ತಿತರ ಸಿಹಿ ತಿಂಡಿಗಳನ್ನು ತಯಾರಿಸಲಾಗುವುದು. ವಿನಾಯಕ ಖುಷಿಯಿಂದ ತುಂಬಾನೇ ಮೋದಕಗಳನ್ನು ಸವಿಯುತ್ತಾನೆ, ಕೆಲವೊಂದು ಸಿಹಿ ತಿಂಡಿಗಳನ್ನು ತನ್ನ ಮೋಷಿಕನಿಗೆ ನೀಡುತ್ತಾನೆ, ನಂತರ ಕೆಲವು ತಿಂಡಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕೈಲಾಸಕ್ಕೆ ಬರುತ್ತಾನೆ.
ತಂದೆ-ತಾಯಿಯನ್ನು ನೋಡಿ ಅವರಿಗೆ ಪ್ರಣಾಮ ಮಾಡಿ, ನಂತರ ಅವರ ಪಾದಗಳಿಗೆ ನಮಸ್ಕರಿಸಿದಾಗ, ಕೈ ಅವರ ಪಾದ ಮುಟ್ಟುವ ಬದಲಿಗೆ ಗಣಪನ ಹೊಟ್ಟೆ ನೆಲವನ್ನು ಮುಟ್ಟುತ್ತದೆ, ಇದನ್ನು ನೋಡಿ ಶಿವನ ತಲೆಯಲ್ಲಿರುವ ಚಂದ್ರ ಗಣೇಶನನ್ನು ನೋಡಿ ತಮಾಷೆ ಮಾಡಿ ನಗುತ್ತಾನೆ. ಚಂದ್ರನ ಹೀಯಾಳಿಕೆಯಿಂದಾಗಿ ಗಣೇಶನ ಹೊಟ್ಟೆ ಒಡೆದುಹೋಗುತ್ತದೆ. ಇದನ್ನು ನೋಡಿದಾಗ ಪಾರ್ವತಿಗೆ ಬೇಸರವಾಗುತ್ತೆ, ಆದ್ದರಿಂದ ಈ ದಿನ ಚಂದ್ರನನ್ನು ನೋಡಿದರೆ ಶಾಪ ತಗುಲುವುದು ಎಂದು ಹೇಳಲಾಗುವುದು. ನಂತರ ಬ್ರಹ್ಮ ಕೈಲಾಸಕ್ಕೆ ಬಂದು ಗಣೇಶನ ಹೊಟ್ಟೆಯನ್ನು ಸರಿಪಡಿಸಲಾಗುವುದು, ನಂತರ ಪಾರ್ವತಿ ಬಳಿ ಚಂದ್ರನನ್ನು ಶಾಪದಿಂದ ಮುಕ್ತ ಎಂದು ಬೇಡಿಕೊಳ್ಳುತ್ತಾನೆ. ಗಣೇಶ ಮೊದಲಿನಂತಾಗಿದ್ದನ್ನು ನೋಡಿ ಖುಷಿ ಪಡುವ ಪಾರ್ವತಿ ಚಂದ್ರನನ್ನು ಶಾಪಮುಕ್ತಳಾಗಿಸುತ್ತಾಳೆ, ಆದ್ದರಿಂದ ಚೌತಿಯಂದು ಚಂದ್ರನನ್ನು ನೋಡಬಾರದು ಎಂದು ಹೇಳಲಾಗುವುದು.
ಚೌತಿಯಂದು ಚಂದ್ರನನ್ನು ನೋಡಿದ ಕಾರಣ ಕೃಷ್ಣನಿಗೂ ಶಾಪ ತಗುಲಿತ್ತು, ಆತನ ಮೇಲೆ ಶಮಂತ ಮಣಿಯನ್ನು ಕದ್ದ ಆರೋಪ ಶ್ರೀಕೃಷ್ಣನ ಮೇಲೆ ಬೀಳುತ್ತದೆ, ನಂತರ ಶ್ರೀ ಗಣೇಶ ಕೃಷ್ಣನನ್ನು ಆ ಆರೋಪದಿಂದ ಮುಕ್ತನಾಗಿಸುತ್ತಾನೆ. ಆದ್ದರಿಂದ ಕೃಷ್ಣನಿಗೆ ಆ ರೀತಿಯಾದ ಕಾರಣ ಮನುಷ್ಯರಾದ ನಾವು ಚೌತಿಯಂದು ಚಂದ್ರನನ್ನು ನೋಡಿದರೆ ನಮ್ಮ ಮೇಲೆ ಆರೋಪಗಳು ಬರುವುದು ಎಂಬ ನಂಬಿಕೆ ಇದೆ.
ಇಂದು ಈ ಸಮಯದಲ್ಲಿ ಚಂದ್ರನನ್ನು ನೋಡಲೇಬೇಡಿ
ಸೆಪ್ಟೆಂಬರ್ 18 ರಾತ್ರಿ 08:44ವರೆಗೆ ಚಂದ್ರನನ್ನು ನೋಡಬಾರದು.
ಒಂದು ವೇಳೆ ಚಂದ್ರನನ್ನು ನೋಡಿದರೆ ಈ ಮಂತ್ರ ಪಠಿಸಿ
ಸಿಂಹ ಪ್ರಸೇನಮವಧೀತ್ಸಿಂಹೋ ಹಂಭವತಾ ಹತಃ!
ಸುಕುಮಾರಕ ಮಾರೋದಿ ತವಹ್ಯೇಷ ಸ್ಯಮ್ಮಂತಕಃ!!



Click it and Unblock the Notifications