Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಇಂದು(ಸೆ.18) ಚಂದ್ರನನ್ನು ನೋಡಬಾರದು: ಒಂದು ವೇಳೆ ನೋಡಿದರೆ ಈ ಮಂತ್ರ ಪಠಿಸಿ
ಕನ್ನಡ ಬೋಲ್ಡ್ಸ್ಕೈ ಓದುಗರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಗಣೇಶ ನಿಮಗೆ ಸಂಪತ್ತು, ಸಮೃದ್ಧಿ, ಆರೋಗ್ಯ ನೀಡಲಿ, ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವಂತೆಯಾಗಲಿ.
ಸೆಪ್ಟೆಂಬರ್ 18,19ರಂದು ಗಣೇಶ ಚತುರ್ಥಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸೆಪ್ಟೆಂಬರ್ 18ರಂದು ಯಾವುದೇ ಕಾರಣಕ್ಕೆ ಚಂದ್ರನನ್ನು ನೋಡಬಾರದು ಎಂಬ ಧಾರ್ಮಿಕ ನಂಬಿಕೆಯಿದೆ. ಏಕೆ ಚಂದ್ರನನ್ನು ನೋಡಬಾರದು ಎಂದು ಹೇಳಲಾಗುವುದು, ಒಂದು ವೇಳೆ ನೋಡಿದರೆ ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಪೌರಾಣಿಕ ಕತೆ
ಧಾರ್ಮಿಕ ನಂಬಿಕೆ ಪ್ರಕಾರ ಶಿವನು ಭಾದ್ರಪದ ಮಾಸದ ನಾಲ್ಕನೇ ದಿನ (ಚೌತಿಯಂದು) ವಿನಾಯಕನಿಗೆ ಜಗತ್ತನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡುತ್ತಾನೆ. ಈ ಖುಷಿಯ ಸಂದರ್ಭ ಮೋದಕ, ಲಡ್ಡುಗಳು, ಮತ್ತಿತರ ಸಿಹಿ ತಿಂಡಿಗಳನ್ನು ತಯಾರಿಸಲಾಗುವುದು. ವಿನಾಯಕ ಖುಷಿಯಿಂದ ತುಂಬಾನೇ ಮೋದಕಗಳನ್ನು ಸವಿಯುತ್ತಾನೆ, ಕೆಲವೊಂದು ಸಿಹಿ ತಿಂಡಿಗಳನ್ನು ತನ್ನ ಮೋಷಿಕನಿಗೆ ನೀಡುತ್ತಾನೆ, ನಂತರ ಕೆಲವು ತಿಂಡಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕೈಲಾಸಕ್ಕೆ ಬರುತ್ತಾನೆ.
ತಂದೆ-ತಾಯಿಯನ್ನು ನೋಡಿ ಅವರಿಗೆ ಪ್ರಣಾಮ ಮಾಡಿ, ನಂತರ ಅವರ ಪಾದಗಳಿಗೆ ನಮಸ್ಕರಿಸಿದಾಗ, ಕೈ ಅವರ ಪಾದ ಮುಟ್ಟುವ ಬದಲಿಗೆ ಗಣಪನ ಹೊಟ್ಟೆ ನೆಲವನ್ನು ಮುಟ್ಟುತ್ತದೆ, ಇದನ್ನು ನೋಡಿ ಶಿವನ ತಲೆಯಲ್ಲಿರುವ ಚಂದ್ರ ಗಣೇಶನನ್ನು ನೋಡಿ ತಮಾಷೆ ಮಾಡಿ ನಗುತ್ತಾನೆ. ಚಂದ್ರನ ಹೀಯಾಳಿಕೆಯಿಂದಾಗಿ ಗಣೇಶನ ಹೊಟ್ಟೆ ಒಡೆದುಹೋಗುತ್ತದೆ. ಇದನ್ನು ನೋಡಿದಾಗ ಪಾರ್ವತಿಗೆ ಬೇಸರವಾಗುತ್ತೆ, ಆದ್ದರಿಂದ ಈ ದಿನ ಚಂದ್ರನನ್ನು ನೋಡಿದರೆ ಶಾಪ ತಗುಲುವುದು ಎಂದು ಹೇಳಲಾಗುವುದು. ನಂತರ ಬ್ರಹ್ಮ ಕೈಲಾಸಕ್ಕೆ ಬಂದು ಗಣೇಶನ ಹೊಟ್ಟೆಯನ್ನು ಸರಿಪಡಿಸಲಾಗುವುದು, ನಂತರ ಪಾರ್ವತಿ ಬಳಿ ಚಂದ್ರನನ್ನು ಶಾಪದಿಂದ ಮುಕ್ತ ಎಂದು ಬೇಡಿಕೊಳ್ಳುತ್ತಾನೆ. ಗಣೇಶ ಮೊದಲಿನಂತಾಗಿದ್ದನ್ನು ನೋಡಿ ಖುಷಿ ಪಡುವ ಪಾರ್ವತಿ ಚಂದ್ರನನ್ನು ಶಾಪಮುಕ್ತಳಾಗಿಸುತ್ತಾಳೆ, ಆದ್ದರಿಂದ ಚೌತಿಯಂದು ಚಂದ್ರನನ್ನು ನೋಡಬಾರದು ಎಂದು ಹೇಳಲಾಗುವುದು.
ಚೌತಿಯಂದು ಚಂದ್ರನನ್ನು ನೋಡಿದ ಕಾರಣ ಕೃಷ್ಣನಿಗೂ ಶಾಪ ತಗುಲಿತ್ತು, ಆತನ ಮೇಲೆ ಶಮಂತ ಮಣಿಯನ್ನು ಕದ್ದ ಆರೋಪ ಶ್ರೀಕೃಷ್ಣನ ಮೇಲೆ ಬೀಳುತ್ತದೆ, ನಂತರ ಶ್ರೀ ಗಣೇಶ ಕೃಷ್ಣನನ್ನು ಆ ಆರೋಪದಿಂದ ಮುಕ್ತನಾಗಿಸುತ್ತಾನೆ. ಆದ್ದರಿಂದ ಕೃಷ್ಣನಿಗೆ ಆ ರೀತಿಯಾದ ಕಾರಣ ಮನುಷ್ಯರಾದ ನಾವು ಚೌತಿಯಂದು ಚಂದ್ರನನ್ನು ನೋಡಿದರೆ ನಮ್ಮ ಮೇಲೆ ಆರೋಪಗಳು ಬರುವುದು ಎಂಬ ನಂಬಿಕೆ ಇದೆ.
ಇಂದು ಈ ಸಮಯದಲ್ಲಿ ಚಂದ್ರನನ್ನು ನೋಡಲೇಬೇಡಿ
ಸೆಪ್ಟೆಂಬರ್ 18 ರಾತ್ರಿ 08:44ವರೆಗೆ ಚಂದ್ರನನ್ನು ನೋಡಬಾರದು.
ಒಂದು ವೇಳೆ ಚಂದ್ರನನ್ನು ನೋಡಿದರೆ ಈ ಮಂತ್ರ ಪಠಿಸಿ
ಸಿಂಹ ಪ್ರಸೇನಮವಧೀತ್ಸಿಂಹೋ ಹಂಭವತಾ ಹತಃ!
ಸುಕುಮಾರಕ ಮಾರೋದಿ ತವಹ್ಯೇಷ ಸ್ಯಮ್ಮಂತಕಃ!!



Click it and Unblock the Notifications