Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಚಾರ್ ಸಾಥಿ ಅಪ್ಲಿಕೇಶನ್ ಏಕೆ ಕಡ್ಡಾಯ? ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಆನ್ಲೈನ್ ವಂಚನೆಯಂತಹ ಕೃತ್ಯವನ್ನು ತಡೆಯುವ ಉದ್ದೇಶದಿಂದ ಸರ್ಕಾರವು ಹಲವು ರೀತಿಯ ನಿಯಮಗಳ ತರಲು ಮುಂದಾಗಿದೆ. ಈಗಾಗಲೆ ವಾಟ್ಸಾಪ್ ಕುರಿತಾದ ಹೊಸ ನಿಯಮ ಜಾರಿ ಮಾಡಲು ಮುಂದಾಗಲಾಗಗಿದೆ. ಹಾಗೆ ಈಗ ವಂಚನೆ ತಡೆಯುವ ಉದ್ದೇಶದಿಂದ ಹಾಗೆ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.
ಹಾಗೆ ಹೊಸ ಮೊಬೈಲ್ಗಳು ಕಡ್ಡಾಯವಾಗಿ ಈ ಸಂಚಾರ್ ಸಾಥಿ ಆಪ್ಲಿಕೇಶನ್ ಅನ್ನು ಪ್ರಿ ಇನ್ಸ್ಸ್ಟಾಲ್ ಮಾಡಿ ಬಳಿಕ ಗ್ರಾಹಕರಿಗೆ ನೀಡುವಂತೆ ಸೂಚಿಸಲಾಗಿದೆ. ಆದ್ರೆ ಈ ಅಪ್ಲಿಕೇಶನ್ ಈಗೀಗ ಆರಂಭಗೊಂಡಿದ್ದಲ್ಲ ಬದಲಿಗೆ ಇದು 2023ರಿಂದಲೂ ಬಳಕೆಯಲ್ಲಿದೆ. ಈಗಾಗಲೇ ಮಿಲಿಯನ್ಗೂ ಅಧಿಕ ಬಳಕೆದಾರರು ಬಳಸುತ್ತಿದ್ದಾರೆ.

ಈ ಆಪ್ಲಿಕೇಶನ್ ಅನ್ನು ತೆಗೆದು ಹಾಕದಂತೆ ಫೋನ್ನಲ್ಲಿ ನಿರ್ಬಂಧ ವಿಧಿಸಲು ತಿಳಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಹಳೆಯ ಫೋನ್ಗಳಿಗೂ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಈ ಆ್ಯಪ್ ಅನ್ನು ಕಳುಹಿಸಿಕೊಡುವಂತೆ ಟೆಲಿಕಾಂ ಇಲಾಖೆ ಸೂಚಿಸಿದೆ. ಸದ್ಯ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್ನಲ್ಲಿ ಮಿಲಿಯನ್ಗೂ ಅಧಿಕ ಡೌನ್ಲೋಡ್ ಆಗಿದೆ.
ಸಂಚಾರ್ ಸಾಥಿ ಬಳಸಿ ಏನು ಮಾಡಬಹುದು?
ಸಂಚಾರ ಸಾಥಿ ಸರ್ಕಾರಿ ಅಪ್ಲಿಕೇಶನ್ ಆಗಿದೆ. ಇದು ವಂಚನೆ ತಡೆಯುವ ಉದ್ದೇಶದಿಂದ ಹಾಗೆ ಗ್ರಾಹಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲು ಮುಂದಾಗಲಾಗಿದೆ. ಭಾರತದಲ್ಲಿ ಬಳಸಲು ಉದ್ದೇಶಿಸಲಾದ ಮೊಬೈಲ್ ಫೋನ್ ಗಳ ಎಲ್ಲಾ ತಯಾರಕರು ಮತ್ತು ಆಮದುದಾರರು ಈ ನಿರ್ದೇಶನಗಳನ್ನು ನೀಡಿದ 120 ದಿನಗಳ ಒಳಗೆ ಟೆಲಿಕಾಂ ಇಲಾಖೆಗೆ ಅನುಸರಣಾ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ವಂಚನೆ ಕರೆ ಅಥವಾ ಸಂದೇಶ
ನೀವು ವಂಚನೆ ಸಂಬಂಧಿತ ಕರೆ ಅಥವಾ ಮೆಸೇಜ್ ಅನ್ನು ಪಡೆದಿದ್ದರೆ ಅದನ್ನು ಈ ಅಪ್ಲಿಕೇಶನ್ ಮೂಲಕ ದೂರನ್ನು ಸಲ್ಲಿಸಬಹುದು, ಇಲ್ಲವೆ ರಿಪೋರ್ಟ್ ಮಾಡಬಹುದು. ಚಕ್ಷು ಎಂಬ ಆಪ್ಷನ್ ಮೇಲ್ ಕ್ಲಿಕ್ ಮಾಡಿ ನಿಮಗೆ ವಂಚನೆ ಕರೆ ಅಥವಾ ಸಂದೇಶ ಬಂದಿದೆಯೇ ಎಂಬುದನ್ನು ಸೆಲೆಕ್ಟ್ ಮಾಡಬೇಕು. ಅನಂತರ ಮೊಬೈಲ್ ಸಂಖ್ಯೆ ಹಾಕಬೇಕು. ಆ ಕರೆ ಅಥವಾ ಸಂದೇಶ ಯಾವುದಕ್ಕೆ ಸಂಬಂಧಿಸಿದೆ ಎಂಬುದನ್ನು ವಿವರಿಸಬೇಕು. ಹಾಗೆ ಅದರ ಸ್ಕ್ರೀನ್ ಶಾಟ್ ದಾಖಲಿಸಬೇಕು. ನಂತರ ಸಮಯ ಹಾಗೂ ದಿನಾಂಕ ಸೂಚಿಸಬೇಕು. ಹಾಗೆ ನೀವು ಆ ಕುರಿತಾಗಿ ಮಾಹಿತಿ ಬರೆಯಬಹುದು. ಅನಂತರ ನಿಮ್ಮ ಹೆಸರು ಸರಿ ಇದೆಯೇ ಎಂಬುದನ್ನು ಪರೀಕ್ಷಿಸಿ ಬಳಿಕ ಸಬ್ಮಿಟ್ ಮಾಡಬೇಕು.
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಬಳಸಲಾಗುತ್ತಿದೆ?
ನಿಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು ನಿಮ್ಮನ್ನು ಹೊರತು ಪಡಿಸಿ ಬೇರೆ ಯಾರಾದರು ಸಿಮ್ ಬಳಸುತ್ತಿದ್ದಾರೆಯೇ ಎಂಬುದನ್ನು ಕೂಡ ಇಲ್ಲಿ ತಿಳಿಯಬಹುದು. ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಮೂಲಕ ಲಾಗ್ ಇನ್ ಆದರೆ ಅದರಲ್ಲಿ ನಿಮ್ಮ ಹೆಸರಿನಲ್ಲಿ ಹಾಗೆ ನೀವು ಬಳಸುತ್ತಿರುವ ಮೊಬೈಲ್ನಲ್ಲಿರುವ ಸಿಮ್ ನಂಬರ್ಗಳ ಸೂಚಿಸುತ್ತದೆ. ನೀವು ಬಳಸದೆ ಇರುವ ಸಿಮ್ ಅನ್ನು ಸಿಷ್ಕ್ರಿಯ ಗೊಳಿಸಬಹುದು.
ಮೊಬೈಲ್ ಕಳೆದರೆ ಬ್ಲಾಕ್ ಮಾಡಿ
ನಿಮ್ಮ ಮೊಬೈಲ್ ಕಳೆದರೆ ಬ್ಲಾಕ್ ಮಾಡಿಸಬಹುದು, ಅಥವಾ ಕಳೆದ ಮೊಬೈಲ್ ಸಿಕ್ಕರೆ ಅದನ್ನು ಅನ್ಬ್ಲಾಕ್ ಮಾಡಬಹುದು. ಇದರಿಂದ ನೀವು ತಕ್ಷಣ ದೂರು ನೀಡುವ ಮುನ್ನವೇ ಆ ಮೊಬೈಲ್ ಮತ್ತೆಲ್ಲೂ ಬಳಕೆಯಾಗದಂತೆ ತಡೆಯಬಹುದು.
ನಿಮ್ಮ ಮೊಬೈಲ್ ಅಸಲಿಯೇ ಅಥವಾ ನಕಲಿಯೇ ಪರಿಶೀಲಿಸಿ
ನೀವು ಬಳಸುತ್ತಿರುವ ಮೊಬೈಲ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಕೂಡ ಈ ಅಪ್ಲಿಕೇಶನ್ ಮೂಲಕ ಪತ್ತೆ ಮಾಡಬಹುದು. ಇಎಂಇಐ ನಂಬರ್ ಅನ್ನು ನಮೂದಿಸುವ ಮೂಲಕ ಮೊಬೈಲ್ ಇತಿಹಾಸ ಪಡೆಯಬಹುದು.
ಅಂತಾರಾಷ್ಟ್ರೀಯ ಕರೆಯನ್ನು ತಡೆಯಬಹುದು
ವಂಚನೆ ಎಸಗಲು ಹಲವರು ಭಾರತೀಯ ನಂಬರ್ ಅನ್ನು ಬಳಸಿ ವಿದೇಶಿ ನೆಲದಲ್ಲಿ ಕುಳಿತು ಕರೆ ಮಾಡಬಹುದು. ಅಥವಾ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಇಂಟರ್ನೆಟ್, ವಾಟ್ಸಾಪ್ ಕರೆ ಮಾಡಬಹುದು. ಇದರಿಂದ ತಪ್ಪಿಸಿಕೊಳ್ಳಲು ಆ ಸಂಖ್ಯೆಯನ್ನು ಇಲ್ಲಿ ನಮೂದಿಸಬಹುದು.



Click it and Unblock the Notifications









