Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಸಲ್ಮಾನ್ ಹತ್ಯೆಗೆ ಪದೇ ಪದೇ ಯತ್ನ ಆಗುತ್ತಿರೋದೇಕೆ..? ಬಿಷ್ಣೋಯ್ ಗ್ಯಾಂಗ್ ದಶಕಗಳ ವೈರತ್ವವೇನು?
ಬಾಲಿವುಡ್ ಸೂಪರ್ ಸ್ಟಾರ್, ಬಾಕ್ಸ್ ಆಫಿಸ್ ಸುಲ್ತಾನ್ ಅಂತ ಕರೆಸಿಕೊಳ್ಳುವ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಸಲ್ಮಾನ್ ಖಾನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತೆ. ಆದರೆ ಅವರು ಜೀವನದಲ್ಲಿ ಹಲವು ಏಳು ಬೀಳುಗಳ ಕಂಡಿದ್ದಾರೆ. ಜೊತೆಗೆ ಒಂದಿಷ್ಟು ವಿವಾದಗಳಿಂದಲೂ ಸುದ್ದಿಯಾಗುತ್ತಾರೆ.
ಕಳೆದೆರಡು ದಿನದ ಹಿಂದೆ ಮುಂಬೈನಲ್ಲಿರುವ ಅವರ ನಿವಾಸ ಮೇಲೆ ಇಬ್ಬರು ಗುಂಡಿನ ದಾಳಿ ನಡೆಸಿದ್ದ ಘಟನೆ ನಡೆದಿತ್ತು. ಇದು ಖ್ಯಾತನಾಮರ ಭದ್ರತೆ ಕುರಿತು ಪ್ರಶ್ನೆ ಹುಟ್ಟುಹಾಕಿತ್ತು. ಬೈಕ್ನಲ್ಲಿ ಬಂದಿದ್ದ ಇಬ್ಬರು 5 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಆದರೆ ಘಟನೆಯಲ್ಲಿ ಯಾರಿಗೂ ಹಾನಿಯಾಗಿರಲಿಲ್ಲ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದರು. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದರು. ಇನ್ನು ಈ ಘಟನೆ ನಡೆದು ಒಂದು ದಿನದ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಇಬ್ಬರು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯವರು ಎಂದು ತಿಳಿದುಬಂದಿದೆ.
ಹಾಗಾದ್ರೆ ಈ ಲಾರೆನ್ಸ ಬಿಷ್ಣೋಯ್ ಯಾರು.? ಆತನಿಗೂ ಬಾಲಿವುಡ್ಗೂ ಏನು ನಂಟು? ಆತ ಸಲ್ಮಾನ್ ಹತ್ಯೆಗೆ ಮುಂದಾಗಿರುವುದಾದರು ಏಕೆ? ಏನಿದು ದಶಕಗಳ ಹಿಂದಿನ ದ್ವೇಷ ಎಂಬ ಕುರಿತ ಸಂಪೂರ್ಣ ಮಾಹಿತಿ ನಾವಿಂದು ತಿಳಿಯೋಣ.
ಸಲ್ಮಾನ್ ಖಾನ್ ಹತ್ಯೆಗೆ ಸಂಚು ಏಕೆ ಮಾಡುತ್ತಿದ್ದಾರೆ ಎಂದು ಹುಡುಕಲು ಮುಂದಾದರೆ ಈ ಕಥೆ 1998ಕ್ಕೆ ಕರೆದೊಯ್ಯುತ್ತೆ. ಹೌದು ಈ ಸಲ್ಮಾನ್ ಖಾನ್ ಮೇಲಿನ ದಾಳಿ, ಹತ್ಯೆಗೆ 1998ರಲ್ಲಿ ನಡೆದಿದ್ದ ಕೃಷ್ಣ ಮೃಗ ಬೇಟೆ. ಹೌದು ಸಲ್ಮಾನ್ ಖಾನ್ 1998ರಲ್ಲಿ ಎರಡು ಕೃಷ್ಣ ಮೃಗ ಬೇಟಿಯಾಡಿದ ಆರೋಪದಲ್ಲಿ ಜೈಲು ಸೇರಿದ್ದರು, ನ್ಯಾಯಾಲಯ ಅವರಿಗೆ 5 ವರ್ಷಗಳ ಸಜೆ ನೀಡಿತ್ತು. ಆದರೆ ಜಾಮೀನಿನ ಮೇಲೆ ಅವರು ಹೊರಬಂದಿದ್ದರು.
ಕೃಷ್ಣ ಮೃಗ ಬೇಟೆಗೂ ಲಾರೆನ್ಸ್ಗೂ ಇರೋ ಸಂಬಂಧವೇನು?
ಬಿಷ್ಣೋಯಿ ಸಮುದಾಯ ಈ ಕೃಷ್ಣ ಮೃಗವನ್ನು ದೇವರೆಂದೇ ಪರಿಗಣಿಸಿದೆ. ಹೀಗಾಗಿ ಅವರ ಸಮುದಾದಯದಲ್ಲಿ ಪ್ರಾಣಿ ವಧೆ ನಿಷೇಧ ಅದರಲ್ಲೂ ಕೃಷ್ಣ ಮೃಗವನ್ನು ಗೋವುಗಳಿಗಿಂತಲು ವಿಶೇಷವಾಗಿ ಅವರು ಪೂಜಿಸುತ್ತಾರೆ. ಈ ಕೃಷ್ಣ ಮೃಗವನ್ನು ನಟ ಸಲ್ಮಾನ್ ಖಾನ್ ಬೇಟೆಯಾಡಿದ್ದು ಆ ಸಮುದಾಯದ ಕೋಪಕ್ಕೆ ಕಾರಣವಾಗಿತ್ತು.
ಸಲ್ಮಾನ್ ಖಾನ್ ಹತ್ಯೆ ಖಚಿತ ಎಂದಿದ್ದ ಲಾರೆನ್ಸ್
ಲಾರೆನ್ಸ್ ಆಗಿನ್ನು ಸಣ್ಣ ಪುಟ್ಟ ಗಲಾಟೆ, ಗ್ಯಾಂಗ್ವಾರ್ಗಳಲ್ಲಿ ಭಾಗಿಯಾಗಿ ಜೈಲು ಪಾಲಾಗುತ್ತಿದ್ದ ಸಮಯ. ಈ ವೇಳೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಸಲ್ಮಾನ್ ಖಾನ್ ಒಂದು ದಿನ ನನ್ನ ಗ್ಯಾಂಗ್ನಿಂದ ಹತ್ಯೆಯಾಗುತ್ತಾನೆ ಎಂದು ಹೇಳಿಕೆ ನೀಡಿದ್ದ. 2018ರಲ್ಲಿ ಕೇಸ್ ಒಂದರಲ್ಲಿ ಲಾರೆನ್ಸ್ ಅರೆಸ್ಟ್ ಆಗುವಾಗ ''ನಾವೇನು ಮಾಡದಿದ್ದರೂ ನಮ್ಮನ್ನು ಅರೆಸ್ಟ್ ಮಾಡಲಾಗುತ್ತಿದೆ, ಮುಂದೊಂದು ದಿನ ನಾವು ಜೋದ್ಪುರದಲ್ಲಿ ಸಲ್ಮಾನ್ ಖಾನ್ ಹತ್ಯೆ ಮಾಡಿದಾಗ ಅವರಿಗೆ ತಿಳಿಯುತ್ತೆ. ನಾವೇನು ಮಾಡದಿದ್ದರೆ ನಮ್ಮನ್ನು ಇನ್ವಾಲ್ ಮಾಡಲಾಗ್ತಿದೆ''ಎಂದು ಹೇಳಿಕೆ ನೀಡಿದ್ದ. ಇದಾಗಿ 2023ರಲ್ಲಿ ಸಲ್ಮಾನ್ ಖಾನ್ ಹೆಸರಿಗೆ ಒಂದು ಬೆದರಿಕೆ ಪತ್ರ ಬಂದಿತ್ತು. ಅದರಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.
ಹೀಗಾಗಿ ಈಗ ಸಲ್ಮಾನ್ ಖಾನ್ಗೆ ಭದ್ರತೆ ಹಚ್ಚಿಸಲಾಗಿದೆ. ಲಾರೆನ್ಸ್ ಜೈಲಿನಲ್ಲಿದ್ದಾನೆ. ಆದರೆ ಆತನ ಸಹೋದರ ಈ ಕೆಲಸಕ್ಕೆ ಇಬ್ಬರನ್ನು ಕಳುಹಿಸಿದ್ದ ಎನ್ನಲಾಗಿದೆ. ಈ ಘಟನೆ ನಡೆದ ಬಳಿಕ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ ಲಾರೆನ್ಸ್ ಸಹೋದರ ಅನ್ಮೋಲ್ ಬಿಶ್ಣೋಯ್ ''ಇದಿನ್ನು ಟ್ರೈಲರ್ ಫಿಲ್ಮ್ ಇನ್ನೂ ಬಾಕಿ ಇದೆ'' ಎಂದು ಮತ್ತೆ ಬೆದರಿಕೆ ಹಾಕಿದ್ದಾನೆ. ಜೊತೆಗೆ ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದ ದಾಳಿಗೆ ನಾವೇ ಹೊಣೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ.



Click it and Unblock the Notifications