Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅದಾನಿ ಮಗನ ಮದುವೆ ಈ ಕಾರಣಕ್ಕೆ ವಿಶೇಷವಾಗಿತ್ತು, ಮಾದರಿಯೂ ಹೌದು
ಅದಾನಿ ಅಂಬನಿ ಮಗ ಜೀತ್ ಅಂಬಾನಿ ಮದುವೆ ಫೆಬ್ರವರಿ 7ರಂದು ನಡೆಯಿತು, ಮದುವೆ ಅದ್ಧೂರಿಯಾಗಿ ನಡೆಯಿತು ಆದರೆ ಆ ಮದುವೆಯ ವಿಶೇಷತೆಯೆಂದರೆ ಅಲ್ಲಿ ಆಡಂಬರತನಕ್ಕೆ ಕಡಿವಾಣ ಇತ್ತು, ಆ ಮದುವೆ ಲಕ್ಷಾಂತರ ಜನರ ಬದುಕಿಗೆ ಬೆಳಕಾಯ್ತು ಹೀಗಾಗಿ ಈ ಮದುವೆ ತುಂಬಾನೇ ವಿಶೇಷವಾಗಿದೆ, ಅಲ್ಲದೆ ಅದಾನಿ ಅಂಬಾನಿ ಮದುವೆ ನಡೆದ ಶೈಲಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಗನ ಮದುವೆಯಂದು ಅದಾನಿ ದಾನ ಮಾಡಿದ್ದು ಒಂದಲ್ಲ, ಹತ್ತಲ್ಲ ಬರೋಬರಿ ಹತ್ತು ಕೋಟಿ ರುಪಾಯಿ
ಅದಾನಿ ಮನಸ್ಸು ಮಾಡಿದ್ದರೆ ಅಂಬಾರಿಯಂತೆಯೇ ದೇಶ ವಿದೇಶ ಸೆಲೆಬ್ರಿಟಿಗಳನ್ನು ಕೋಟಿ ರುಪಾಯಿಗಳನ್ನು ಸುರಿದು ಧಾಮ್ ಧೂಮ್ ಮದುವೆ ಮಾಡಬಹುದಿತ್ತು. ಇಲ್ಲ ಮುಖೇಶ್ ಅಂಬಾನಿ ಅಷ್ಟೊಂದು ಅದ್ಧೂರಿಯಾಗಿ ಮದುವೆ ಮಾಡಿದ್ದು ತಪ್ಪು ಎಂದು ಹೇಳುತ್ತಿಲ್ಲ, ಏಕೆಂದರೆ ಅದು ಅವರ ದುಡಿಮೆ, ಅವರ ದುಡ್ಡು ಅದನ್ನು ಅವರಿಗೆ ಇಷ್ಟ ಬಂದಂತೆ ಖರ್ಚು ಮಾಡುತ್ತಾರೆ, ಇದರ ಯಾರೂ ಪ್ರಶ್ನೆ ಮಾಡುವುದು ಸರಿಯಲ್ಲ, ಹಕ್ಕೂ ಇಲ್ಲ. ಈ ಹಣ ಎಂಬುವುದು ಎಲ್ಲರಿಗೂ ಒಂದೇ ರೀತಿ ಸಂಪಾದನೆ ಮಾಡಲು ಸಾಧ್ಯವಿಲ್ಲ, ಗಳಿಕೆಯಲ್ಲಿ ಒಂದಿಷ್ಟು ದಾನ ಧರ್ಮ ಮಾಡಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಇನ್ನು ವ್ಯರ್ಥ ಖರ್ಚಿಗಿಂತ ನಾವು ಹಣವನ್ನು ಇನ್ನಷ್ಟು ಬೆಟರ್ ಉತ್ತಮವಾಗಿ ಬಳಸಿಕೊಂಡರೆ ಅದರಿಂದ ಇಲ್ಲದವರ ಬದುಕು ಸುಂದರವಾಗುತ್ತೆ ಅಲ್ವಾ?
ಅದಾನಿ 1000 ಕೋಟಿ ದಾನ ಮಾಡಿ ಈ ಹಣವನ್ನು ಬಡ ಜನರ ಆರೋಗ್ಯಕ್ಕೆ, ಮೆಡಿಕಲ್ ಕಾಲೇಜ್ ಸ್ಥಾಪನೆಗೆ, ಸೌಕರ್ಯ ಕಡಿಮೆ ಇರುವ ಶಾಲೆಗಳ ಸೌಕರ್ಯ ಹೆಚ್ಚಿಸಲು ಹಾಗೂ NGOಗಳಿಗೆ ನೀಡಲಾಗಿದೆ. ಅಲ್ಲದೆ ಜೀತ್ ಅದಾನಿ ಮದುವೆಯಲ್ಲಿ ದೆಹಲಿ ಹಾಗೂ ಚೆನ್ನೈಯ ಕೈ ರಾಸಿ NGOಗಳು ಪ್ರಮುಖ ಪಾತ್ರ ಕೂಡ ವಹಿಸಿದ್ದೆವು. ಈ ಮದುವೆಗೆ ವಿಕಲ ಚೇತರನ್ನು ಆಹ್ವಾನಿಸಲಾಗಿತ್ತು.
ಮಗನ ಮದುವೆಗೆ 2 ದಿನ ಮೊದಲಷ್ಟೇ ಮಂಗಳ ಸೇವೆಗೆ ಚಾಲನೆ
ಈಗಷ್ಟೇ ಮದುವೆಯಾಗಿರುವ 500 ವಿಕಲ ಚೇತರಿಗೆ ವಾರ್ಷಿಕವಾಗಿ 10ಲಕ್ಷ ಹಣವನ್ನು ನೀಡಲಾಯಿತು, ಅಲ್ಲದೆ ಮಗನ ಮದುವೆಯಲ್ಲಿ 21 ವಿಶೇಷ ಚೇತನ ಹೆಣ್ಮಕ್ಕಳನ್ನು ಹಾಗೂ ಅವರ ಸಂಗಾತಿ ಜೊತೆ ಮತನಾಡಿದರು.
ತಮ್ಮ ಮಗನ ಭವಿಷ್ಯ ಒಳಿತಾಗಲಿ ಎಂದು ಬಯಸುವುದರ ಜೊತೆಗೆ ಸಾಕಷ್ಟು ಹೆಣ್ಮಕ್ಕಳ ಬದುಕು ಹಸನಾಗಲಿ ಎಂದು ಬಯಸಿರುವುದು ದೊಡ್ಡ ಮನಸ್ಸೇ ಸರಿ
ಮಕ್ಕಳನ್ನು ಮದುವೆ ಮಾಡುವಾಗ ನಮ್ಮ ಮಕ್ಕಳು ಮುಂದೆ ಚೆನ್ನಾಗಿ ಬಾಳಬೇಕು ಎಂದು ಬಯಸುತ್ತೇವೆ, ಅವರ ಜೀವನ ಹಸನಾಗಲಿ ಎಂದು ಹಾರೈಸುತ್ತೇವೆ, ಅದಾನಿ ತಮ್ಮ ಮಗನ ಮದುವೆ ಸಂದರ್ಭದಲ್ಲಿ ವಿಕಲ ಚೇತನ ಹೆನ್ಮಕ್ಕಳ ಬದುಕು ಹಸನಾಗುವುದರ ಬಗ್ಗೆ ಚಿಂತೆ ಮಾಡಿರುವುದು ದೊಡ್ಡ ವಿಷಯವೇ. ಒಂದು ನೃತ್ಯಕ್ಕೆ ಕೋಟಿಗಟ್ಟಲೆ ಹಣಕೊಟ್ಟು ಸೆಲೆಬ್ರಟಿಗಳನ್ನು ಕರೆಸಿ ಕುಣಿಸುವುದಕ್ಕಿಂತ 10, 000 ಕೋಟಿ ಹಣ ಲಕ್ಷಾಂತರ ಬಡ ಜನರ ಬಾಳು ಬಂಗಾರವಾಗಲು ನೆರವಾಗಿದ್ದಾರೆ.
ಜೀತ್ ಅದಾನಿ ಕಿರುಪರಿಚಯ
ಜೀತ್ ಅದಾನಿ ಅದಾನಿ ದಂಪತಿಯ ಕಿರಿಯ ಪುತ್ರ, ಮೊದಲ ಮಗ ಕರಣ್ ಅದಾನಿ. ಜೀತ್ ಅದಾನಿ ಪೈಲೆಟ್ ಕೂಡ ಹೌದು, ಇವರು ಅದಾನಿ ಏರ್ಪೋರ್ಟ್ನ ಡೈರೆಕ್ಟರ್ ಕೂಡ ಆಗಿದ್ದಾರೆ. ಇವರ ಪತ್ನಿ ದಿವಾ ಶಾ ವಜ್ರದ ವ್ಯಾಪಾರಿ ಜೈಮಿನ್ ಶಾರ ಮಗಳು. ಇವರ ಮದುವೆ ದಾನ ಧರ್ಮದ ವಿಷಯದಲ್ಲಿ ದೊಡ್ಡ ಸುದ್ದಿ ಮಾಡಿದೆ, ಈ ನವ ದಂಪತಿ ಬಾಳು ಸದಾ ಚೆನ್ನಾಗಿರಲಿ, ಹಲವರ ಬಾಳಲ್ಲಿ ಬೆಳಕು ತಂದ ಇವರ ಮದುವೆ ಜೀವನ ತುಂಬಾನೇ ಚೆನ್ನಾಗಿರಲಿ ಎಂಬುವುದೇ ಹಾರೈಕೆ...



Click it and Unblock the Notifications