Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
'ಆಪರೇಷನ್ ಸಿಂಧೂರ್' ಎಂಬ ಹೆಸರು ಇಟ್ಟಿದ್ಯಾಕೆ? ಒಳಾರ್ಥವೇನು ಗೊತ್ತಾ?
ಪಹಲ್ಗಾಮ್ನಲ್ಲಿ ನಡೆದಿದ್ದ ವಿದ್ವಾಂಸ ಕೃತ್ಯಕ್ಕೆ ಭಾರತ ತಿರುಗೇಟು ನೀಡಲು ಮುಂದಾಗಿದೆ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೇ ಪಾಕಿಸ್ತಾನದ ಹಲವು ಕಡೆಗಳಲ್ಲಿ ವಾಯುದಾಳಿ ವರದಿಯಾಗುತ್ತಿದೆ. ಅದರಲ್ಲೂ ಅಡಗು ತಾಣಗಳ ಗುರಿಯಾಗಿಸಿಕೊಂಡು ಭಾರತೀ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕಾಗಿ ಆಪರೇಷನ್ ಸಿಂಧೂರ್ ಎಂದು ನಾಮಕರಣ ಮಾಡಲಾಗಿದೆ.
ರಾತ್ರಿಯಿಂದ ನಡೆದ ದಾಳಿಯಲ್ಲಿ ಪಾಕ್ ನೆಲೆಯಲ್ಲಿ ಬಹಳಷ್ಟು ಹಾನಿಯಾಗಿದೆ ಎಂದು ವರದಿಗಳಾಗಿವೆ. ಪಹಲ್ಗಾಮ್ನಲ್ಲಿ ನಡೆದಿದ್ದ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಭಾರತದಲ್ಲಿ ಮಾಕ್ ಡ್ರಿಲ್ ಮಾಡುವ ಕುರಿತಾದ ಸೂಚನೆ ನೀಡಿ ದಿಢೀರ್ ಪಾಕ್ ನೆಲೆಗಳ ಮೇಲೆ ದಾಳಿ ಮಾಡಿರುವುದು ಅಚ್ಚರಿ ಮೂಡಿಸಿದೆ.

ಹಾಗೆ ಈಗ ಪಾಕ್ ವಿರುದ್ಧ ಆರಂಭಗೊಂಡಿರುವ ಆಪರೇಷನ್ ಸಿಂಧೂರ್ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಹಾಗಾದ್ರೆ ಈ ಕಾರ್ಯಾಚರಣೆಗೆ ಸಿಂಧೂರ್ ಎಂದು ಹೆಸರು ಇಟ್ಟಿದ್ದು ಏಕೆ? ಇದರ ಹಿಂದಿರುವ ಅರ್ಥವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಿಂದಿಯಲ್ಲಿ ಸಿಂಧೂರ್ ಎಂದು ಹೇಳಲಾಗುತ್ತದೆ. ಹಾಗೆ ಕನ್ನಡದಲ್ಲಿ ಇದನ್ನು ಸಿಂಧೂರ ಎನ್ನಬಹುದು. ಹಣೆ ಮೇಲೆ ಅಗಲವಾಗಿ ಇಡುವ ಕುಂಕುಮವಾಗಿದೆ.
ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ 25 ಭಾರತೀಯರು ಹಾಗೆ ಓರ್ವ ನೇಪಾಳಿ ನಾಗರಿಕ ಮೃತಪಟ್ಟಿದ್ದರು. ಈ 25 ಮಂದಿ ಪುರುಷರು ಅವರ ಪತ್ನಿ, ಮಕ್ಕಳು, ಪೋಷಕರ ಮುಂದೆಯೇ ಪ್ರಾಣ ಕಳೆದುಕೊಂಡರು. ಅದರಲ್ಲೂ ಪತ್ನಿಯರನ್ನು ಬಿಟ್ಟು ಪತಿಯ ಮೇಲೆ ದಾಳಿ ಮಾಡಲಾಗಿತ್ತು. ಇದರಿಂದ ಪ್ರತಿಕಾರದ ರೂಪವಾಗಿ ಆಪರೇಷನ್ ಸಿಂಧೂರ್ ಎಂಬ ಹೆಸರು ನೀಡಲಾಗಿದೆ.
25 ಸ್ತ್ರೀಯರ ಜೀವನ ಕಸಿದುಕೊಂಡಿದ್ದರಿಂದ ಅವರಿಗೆ ನ್ಯಾಯ ಒದಗಿಸಿ ಕೊಡುವ ಉದ್ದೇಶದಿಂದ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂಬ ನಾಮಕರಣ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರವಾಸಿಗರ ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಅವರ ಹೆಸರು ಕೇಳಿದ ಬಳಿಕ ಗುಂಡು ಹಾರಿಸಲಾಗಿತ್ತು ಎಂದು ವರದಿಗಳಾಗಿವೆ. ಅದರಲ್ಲಿ ನವ ವಿವಾಹಿತರಿದ್ದರು. ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮೃತದೇಹದ ಪಕ್ಕದಲ್ಲಿ ನವವಿವಾಹಿತ ಹಿಮಾಂಶಿ ನರ್ವಾಲ್ ಕಣ್ಣೀರಿಡುತ್ತಿದ್ದ ದೃಶ್ಯಗಳು ವೈರಲ್ ಆಗಿದ್ದವು. ಇವರ ವಿವಾಹವಾಗಿ ಕೆಲವೇ ದಿನಗಳು ಕಳೆದಿದ್ದವು.
ಭಾರತೀಯ ಸಂಸ್ಕೃತಿಯಲ್ಲಿ ಸಿಂಧೂರಕ್ಕೆ ಇದೆ ಮಹತ್ವ
ಮಹಿಳೆ ಸಿಂಧೂರ ಇಡುವು ಆಕೆ ಮುತೈದೆ ಎಂಬುದನ್ನು ಪ್ರತಿನಿಧಿಸುತ್ತದೆ. 5 ಮುತ್ತುಗಳಿಂದ ತುಂಬಿರುವ ಹೆಸರನ್ನು ಇದು ಒಳಗೊಂಡಿದೆ. ಅದರಲ್ಲಿ ಈ ಹಣೆಯಲ್ಲಿ ಇಡುವ ಸಿಂಧೂರವೂ ಒಂದು. ಆಕೆ ಮದುವೆಯ ಬಳಿಕ ತಪ್ಪದೆ ಸಿಂಧೂರ ಇಡುವ ಸಂಪ್ರದಾಯ ರೂಢಿಯಲ್ಲಿದೆ. ಹಿಂದೂ ಪುರಾಣಗಳಲ್ಲಿ ಸಿಂಧೂರವು ಅಪಾರ ಮಹತ್ವವನ್ನು ಹೊಂದಿದೆ.
ಶಿವನ ಪತ್ನಿ ಪಾರ್ವತಿ ತನ್ನ ಪತಿಯ ಮೇಲಿನ ಭಕ್ತಿ ಸಂಕೇತವಾಗಿ ಹಣೆಯ ಮೇಲೆ ಸಿಂಧೂರವನ್ನು ಧರಿಸುತ್ತಿದ್ದಳು. ಆಕೆ ಶಿವನಿಂದ ಆಶೀರ್ವಾದ ಪಡೆಯುವ ಮುನ್ನ ಹಣೆಯಲ್ಲಿ ಸಿಂಧೂರ ಇಟ್ಟಿದ್ದಳು, ಹೀಗಾಗಿ ಸಿಂಧೂರವು ದೀರ್ಘ ಮತ್ತು ಆನಂದದಾಯಕ ದಾಂಪತ್ಯ ನೀಡಲಿದೆ ಎಂದು ಹೇಳಲಾಗಿದೆ. ಅಲ್ಲಿಂದ ಪಾರ್ವತಿ ಒಂದೂ ದಿನವೂ ಸಿಂಧೂರ ಇಡುವುದನ್ನು ತಪ್ಪಿಸಿರಲಿಲ್ಲವಂತೆ.
ಸಿಂಧೂರವು ದೈವಿಕ ಸೌಂದರ್ಯವನ್ನು ನೀಡುತ್ತದೆ. ಕೆಂಪು ಬಣ್ಣವನ್ನು ಪ್ರೀತಿ ಮತ್ತು ಉತ್ಸಾಹದ ಬಣ್ಣ ಎಂದೂ ಕರೆಯಲಾಗುತ್ತದೆ. ಸಿಂಧೂರವನ್ನು ಶಕ್ತಿ ದೇವತೆಗೂ ಹೋಲಿಸಲಾಗುತ್ತದೆ. ಆಪತ್ತಿನ ಕಾಲದಲ್ಲಿ ಸಿಂಧೂರವು ಮಹಿಳೆಯ ಕಾಪಾಡುತ್ತದೆ ಎಂಬ ನಂಬಿಕೆ ಇದೆ. ಹಾಗೆ ಪತಿಯ ಮರಣದ ನಂತರ ಆಕೆ ಸಿಂಧೂರ ಇಡುವುದನ್ನು ನಿಷೇಧಿಸಲಾಗಿದೆ. ಆಕೆ ತನ್ನ ಜೀವನದ ಒಂದು ಭಾಗ ಕಳೆದುಕೊಂಡಂತೆ ಎಂಬ ಸೂಚಕ ಇದಾಗಿರಲಿದೆ.



Click it and Unblock the Notifications