Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಿಂದೂ ಧರ್ಮದಲ್ಲಿ ಸತ್ತಾಗ Rest in Peace ಬದಲು ಸದ್ಗತಿ ಎಂದು ಹೇಳಬೇಕು ಯಾಕೆ?
ಪ್ರತಿ ಧರ್ಮದಲ್ಲೂ ಹುಟ್ಟು-ಸಾವಿಗೆ ಸಂಬಂಧಿಸಿದಂತೆ ಬೇರೆಯದ್ದೇ ಕಲ್ಪನೆಗಳು ಇರುತ್ತದೆ. ಕೆಲವು ಧರ್ಮದಲ್ಲಿ ಸತ್ತವರು ಮತ್ತೆ ಹುಟ್ಟಿ ಬರುತ್ತಾರೆ ಅಂತ ಹೇಳಿದ್ರೆ, ಇನ್ನೂ ಕೆಲವು ಧರ್ಮದಲ್ಲಿ ಮನುಷ್ಯನಿಗೆ ಹುಟ್ಟು-ಸಾವು ಒಂದೇ ಸಲ ಬರೋದು ಅಂತಾನೂ ಹೇಳಲಾಗುತ್ತದೆ.

ಬೇರೆ ಧರ್ಮಗಳಿಗೆ ಹೋಲಿಕೆ ಮಾಡಿದ್ರೆ ಹಿಂದೂ ಧರ್ಮದಲ್ಲಿ ಮರಣದ ಬಗ್ಗೆ ಬೇರೆಯದ್ದೇ ಕಲ್ಪನೆಗಳಿದೆ. ಒರ್ವ ವ್ಯಕ್ತಿ ಸತ್ತ ಮೇಲೆ ಆತನಿಗೆ "ರೆಸ್ಟ್ ಇನ್ ಪೀಸ್"(Rest in Peace) ಅಂತ ಹೇಳುವುದುಂಟು. ಅಂದ್ರೆ ಶಾಂತಿಯಿಂದ ವಿಶ್ರಾಂತಿಸಿ ಅಥವಾ ಸ್ವರ್ಗ ಅಂತ ಅರ್ಥ ಆಗುತ್ತದೆ. ಆದರೆ ಹಿಂದೂ ಧರ್ಮದಲ್ಲಿ "ಸದ್ಗತಿ" ಅಂತ ಹೇಳುತ್ತಾರೆ. ಅಷ್ಟಕ್ಕೂ ಹಿಂದೂ ಧರ್ಮದಲ್ಲಿ ಯಾಕೆ ಸತ್ತಾಗ ಸದ್ಗತಿ ಅಂತ ಹೇಳೋದು ಅನ್ನೋದನ್ನು ತಿಳಿಯೋಣ.
ಸಾವು ಎನ್ನುವುದು ಬಟ್ಟೆ ಬದಲಾಯಿಸಿದಂತೆ!
ಭಗವದ್ಗೀತೆ, ಕಠೋಪನಿಷತ್, ಶಿವ ಆಗಮಗಳು, ಪುರಾಣಗಳು ಸೇರಿದಂತೆ ಎಲ್ಲಾ ಪ್ರಮುಖ ಹಿಂದೂ ಪವಿತ್ರ ಗ್ರಂಥಗಳು ಹಾಗೂ ಕಾನೂನುಗಳ ಪ್ರಕಾರ ಜೀವಾತ್ಮವನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಜೀವಾತ್ಮ ಎನ್ನುವುದು ಪರಮಾತ್ಮದ ಪ್ರತಿಬಿಂಬವಾಗಿದೆ. ಅದು ಕರ್ಮ ಮತ್ತು ಮಾಯೆಯಿಂದ ಬಂಧಿತವಾಗಿದೆ. ಮತ್ತು ಅಂತಿಮ ವಿಮೋಚನೆಯ ಕಡೆಗೆ ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ.
ವೇದಗಳು ಮತ್ತು ಉಪನಿಷತ್ತುಗಳಲ್ಲಿ "ಏಕೋಹಂ ಬಹುಷ್ಯಂ" ಎಂದು ಹೇಳಲಾಗದೆ. ಆದ್ದರಿಂದ ಜೀವಾತ್ಮನಿಗೆ ಮರಣವು ಬಟ್ಟೆಯನ್ನು ಬದಲಾಯಿಸಿದಂತಿದೆ. ಜೀವಾತ್ಮವು ಒಂದು ದೇಹ ಮತ್ತು ಮನಸ್ಸಿನಿಂದ ಇನ್ನೊಂದಕ್ಕೆ ಪ್ರಯಾಣಿಸುತ್ತದೆ. ಮತ್ತು ತನ್ನ ಪ್ರಯಾಣವನ್ನು ಮುಂದುವರೆಸುತ್ತಲೇ ಇರುತ್ತದೆ. ನಂಬಿಕೆಗಳ ಪ್ರಕಾರ ಜೀವಾತ್ಮವು ತನ್ನ ಹಿಂದಿನ ಜನ್ಮದಲ್ಲಿ ಹೊಂದಿದ್ದ ಸಂದರ್ಭಗಳು ಮತ್ತು ಸಂಪನ್ಮೂಲಗಳನ್ನು ಮುಂದಿನ ಜನ್ಮದಲ್ಲೂ ಹೊಂದಿರುತ್ತಂತೆ.
ಎಷ್ಟೇ ಜನ್ಮ ಎತ್ತಿದರೂ ಕರ್ಮ ಕಳೆಯೋದಿಲ್ಲ!
ನಾವು ಹೇಗೆ ಕೊಳೆ ಬಟ್ಟೆಯನ್ನು ತೆಗೆದು ಹೊಸ ಬಟ್ಟೆಯನ್ನು ಧರಿಸುತ್ತೇವೆಯೋ ಅದೇ ರೀತಿ ಜೀವಾತ್ಮವು ಒಂದು ದೇಹವನ್ನು ಬಿಟ್ಟು ಮತ್ತೊಂದು ದೇಹವನ್ನು ಸೇರುತ್ತಂತೆ. ಜೀವವು ಒಂದು ದೇಹವನ್ನು ಬಿಟ್ಟು ಮುಂದಿನ ದೇಹಕ್ಕೆ ಹೋಗುವುದರಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಅದರ ಕರ್ಮವು ಹಿಂದಿನ ದೇಹ ಮತ್ತು ಮನಸ್ಸಿನಿಂದ ಮುಂದಿನದಕ್ಕೆ ವರ್ಗಾಯಿಸಲ್ಪಡುತ್ತದೆ.
ಜೀವಾತ್ಮವು ದೇಹವನ್ನು ತೊರೆಯುವಾಗ ಯಾವುದೇ ದುಃಖವನ್ನು ಅನುಭವಿಸುವುದಿಲ್ಲ. ಆದರೆ ಕೆಲವು ನಂಬಿಕೆಗಳ ಪ್ರಕಾರ ಜೀವಾತ್ಮವು ದೇಹವನ್ನು ಬಿಟ್ಟು ಹೋಗುವಾಗ ಮನುಷ್ಯ ಸಿಕ್ಕಾಪಟ್ಟೆ ನೋವು ಅನುಭವಿಸುತ್ತಾನೆಂದು ಹೇಳುವುದುಂಟು. ಜೀವವು ಒಂದು ದೇಹವನ್ನು ತೊರೆದಾಗ ಅದು ಮತ್ತೊಮ್ಮೆ ಆ ಜನ್ಮದ ಎಲ್ಲಾ ಶಕ್ತಿಯುತ ಅನುಭವಗಳ ಮೂಲಕ ಹಾದುಹೋಗುತ್ತಂತೆ.
"RIP" ಬದಲು ಸದ್ಗತಿ ಎಂದು ಹೇಳಬೇಕು ಯಾಕೆ?
ಯಾರಾದರೂ ಸತ್ತಾಗ ನೀವು "ಓಂ ಸದ್ಗತಿ" ಎಂದು ಹೇಳಿದರೆ ನೀವು ಜೀವಾತ್ಮವನ್ನು ಅದರ ಮುಂದಿನ ಜನ್ಮದಲ್ಲಿ ಉತ್ತಮ ಬದುಕನ್ನು ಕಂಡುಕೊಳ್ಳಲಿ ಪ್ರಾರ್ಥಿಸಿದಂತೆ. ಅಂತ್ಯ ಸಂಸ್ಕಾರವನ್ನು ಮಾಡಿ ಜೀವಕ್ಕೆ ಪೂರ್ಣತ್ವವನ್ನು ಪ್ರಾರ್ಥಿಸಿ. ಹಾಗೂ ಮುಕ್ತಿ ಪಡೆಯಲು "ಓಂ ಸದ್ಗತಿ" ಎಂದು ಹೇಳಿ. ಯಾವುದಾದರೂ ವ್ಯಕ್ತಿ ಸತ್ತಾಗ ಭಗವದ್ಗೀತೆ 14 ನೇ ಅಧ್ಯಾಯ ಮತ್ತು ಕಠೋಪನಿಷತ್ ಅನ್ನು ಪಠಿಸೋದು ಇದೇ ಕಾರಣಕ್ಕೆ.
ಇದನ್ನು ಪಠಿಸೋದ್ರಿಂದ ಜೀವಕ್ಕೆ ಅದರ ನಿಜವಾದ ಸ್ವರೂಪವನ್ನು ನೆನಪಿಸಲು ಸಾಧ್ಯವಾಗುತ್ತದೆ. ಈ ಪಠ್ಯಗಳು ಜೀವನ ಮತ್ತು ಮರಣದ ಬಗ್ಗೆ ಅತ್ಯಂತ ಪ್ರಮುಖವಾದ ಸತ್ಯಗಳನ್ನು ಮತ್ತು ಜೀವ ಆತ್ಮ ಮತ್ತು ಪರಮಾತ್ಮದ ನಿಜವಾದ ಸ್ವರೂಪವನ್ನು ಬಹಿರಂಗಪಡಿಸುತ್ತವೆ. ಜೀವವು ದೈವಿಕವೆಂದು ನಾವು ಎಷ್ಟು ನೆನಪಿಸಿಕೊಳ್ಳುತ್ತೇವೆಯೋ ಇದರಿಂದ ಆ ವ್ಯಕ್ತಿಗೆ ಮುಂದೆ ಉತ್ತಮವಾದ ಮುಂದಿನ ಜನ್ಮವನ್ನು ಪಡೆಯಲು ಸಾಧ್ಯವಾಗುತ್ತೆ ಎಂದು ನಂಬಲಾಗಿದೆ.
ಒಂದು ಜೀವವು ತನಗೆ ಬದುಕಲು ಒಂದೇ ಒಂದು ಜೀವನವಿದೆ ಎಂದು ನಂಬಿದರೆ ಆಗ ಅದು ದೀರ್ಘಕಾಲದವರೆಗೆ ಆ ಅಂಗದಲ್ಲಿ ಸಿಲುಕಿಕೊಂಡಿರುತ್ತದೆ. ಇನ್ನೊಂದು ದೇಹವನ್ನು ಸೇರುವ ಬಯಕೆ ಕೂಡ ಇರೋದಿಲ್ಲ. ಮುಂದಿನ ದೇಹದ ಬಗ್ಗೆ ಊಹಿಸಿಕೊಂಡಿರದೇ ಇರೋದ್ರಿಂದ ಮುಂದಿನ ಜನ್ಮದಲ್ಲಿ ಅತ್ಯತ್ತಮವಾದುದನ್ನು ಪಡೆಯಲು ಸಾಧ್ಯವಾಗುತ್ತದೆ. ನಾವು ಯಾರಿಗಾದರೂ "RIP" ಎಂದು ಹೇಳಿದರೆ ಅವರು ಪ್ರೇತಾತ್ಮವಾಗಿ ಉಳಿಯುತ್ತಾರಂತೆ. ಹೀಗಾಗಿ ಯಾರಾದರೂ ಸತ್ತಾಗ "ಸದ್ಗತಿ" ಎಂದು ಹೇಳಬೇಕು ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ.



Click it and Unblock the Notifications
