ಲಂಕೆಯಿಂದ ಸೀತೆಯನ್ನು ಹನುಮ ಏಕೆ ಕರೆತರಲಿಲ್ಲ? ಈ ಅಚ್ಚರಿ ಕಥೆ ಗೊತ್ತಾ?

ನಾವು ಚಿಕ್ಕವರಾಗಿದ್ದಾಗಿನಿಂದ ರಾಮಾಯಣದ ಕಥೆಗಳ ಕೇಳಿದ್ದೇವೆ. ಆದರೆ ಕೆಲವು ಕಥೆಗಳು ಮಾತ್ರ ಎಲ್ಲಿಯೂ ಕೇಳಿಲ್ಲ, ಅಂತಹ ಕಥೆಗಳಲ್ಲಿ ಹನುಮಂತ ಏಕೆ ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲಿಲ್ಲ ಎಂಬ ಅಚ್ಚರಿಯ ಕಥೆಯಾಗಿದೆ. ಈ ಕಥೆಯನ್ನು ಎಲ್ಲಿಯೂ ನಾವು ಓದಿರಲು ಸಾಧ್ಯವಿಲ್ಲ. ಕೆಲವೇ ಕೆಲವು ಕಡೆ ಈ ಕಥೆ ವಿವರಣೆ ಇದೆ. ಹಾಗಾದ್ರೆ ಸೀತೆಯ ಕಂಡು ಹನುಮಂತ ಆಕೆಯನ್ನು ವಾಪಾಸು ಏಕೆ ಕರೆದುಕೊಂಡು ಬರಲಿಲ್ಲ ಗೊತ್ತಾ.? ಈ ಕಥೆ ಓದಿ.

ಅಶೋಕವನದಲ್ಲಿ ಸೀತೆಯನ್ನು ಭೇಟಿಯಾಗಿದ್ದ ಹನುಮಂತ ಆಕೆಯಿಂದ ಉಂಗುರವನ್ನು ಪಡೆದಿದ್ದ ಎಂಬುದು ನಮಗೆಲ್ಲಾ ತಿಳಿದಿದೆ. ಆದರೆ ಆತ ಏಕೆ ಸೀತೆಯನ್ನು ಅಲ್ಲಿಯೇ ಬಿಟ್ಟು ಬಂದಿದ್ದ? ಆತ ಪರಿಯಾಗಿ ಕೇಳಿಕೊಂಡರೂ ಸೀತೆ ಏಕೆ ಒಪ್ಪಲಿಲ್ಲ. ಶ್ರೀರಾಮನೇ ಬಂದು ಕರೆದೊಯ್ಯಲಿ ಎಂದು ಸೀತೆ ಹೇಳಿದ್ದಳು ಎಂಬುದಷ್ಟೇ ನಮಗೆ ಗೊತ್ತಿದೆ. ಆದರೆ ಇದರ ಹಿಂದೆ ಕಥೆಯೊಂದಿದೆ.

Sita And Hanuman

ಹನುಮನ ಬಲ ಅನುಮಾನಿಸಿದ್ದ ಸೀತೆ
ಹನುಮಂತ ಸೀತೆಯನ್ನು ಕರೆದೊಯ್ಯುವುದಾಗಿ ಹೇಳಿದಾಗ ಸೀತೆ ಅನುಮಾನಿಸಿದ್ದಳು. ಆತ ತೀರ ಚಿಕ್ಕವನಿದ್ದು ನನ್ನನ್ನು ಸಾವಿರ ಕಿ.ಮೀ ದೂರ ಹೇಗೆ ಕೊಂಡೊಯ್ಯುತ್ತಾನೆ ಎಂದು ಅನುಮಾನಿಸಿದ್ದಳು. ಇದನ್ನೇ ಹನುಮನ ಬಳಿಯೂ ಆಕೆ ಹೇಳಿದ್ದಳು.

ಹನುಮನ ವಿರಾಟ್ ಸ್ವರೂಪ

ಸೀತಾಮಾತೆಯ ಈ ಅನುಮಾನವನ್ನು ಸ್ಥಳದಲ್ಲಿಯೇ ಹನುಮ ನಿವಾರಿಸಿದ್ದನಂತೆ. ತನ್ನ ವಿರಾಟ್ ರೂಪ ದರ್ಶನವನ್ನು ಸೀತಾಮಾತೆಗೆ ಮಾಡಿಸುತ್ತಾನೆ. ಹನುಮನ ಶರೀರವು ಆ ಚಿಕ್ಕ ಗಾತ್ರದಿ೦ದ ಬೆಳೆಯುತ್ತಾ ಸಾಗಿ ಮೇರು ಪರ್ವತದಷ್ಟು ಎತ್ತರವಾಗುತ್ತದೆ. ಇದನ್ನು ಕ೦ಡ ಸೀತಾಮಾತೆಯು ಹನುಮನ ಸಾಮರ್ಥ್ಯವನ್ನು ಕೊ೦ಡಾಡುತ್ತಾಳೆಯಾದರೂ ಕೂಡ, ಆತನೊ೦ದಿಗೆ ಬರಲು ಒಪ್ಪುವುದಿಲ್ಲವಂತೆ.

ರಾಮನ ಬಿಟ್ಟು ಅನ್ಯರ ಜೊತೆ ಬರಲಾರೆ

ನೀನು ರಾಮನ ಬಂಟನೆ ಆಗಿರಬಹುದು, ಆದರೆ ರಾಮನ ಹೊರತು ಬೇರೆಯವರ ಜೊತೆ ನಾನು ಹೋಗುವುದಿಲ್ಲ ಎಂದು ಸೀತೆ ಪಟ್ಟು ಹಿಡಿಯುತ್ತಾಳೆ. ಅದೂ ಲಕ್ಷ್ಮಣನಾದರೂ ಸರಿಯೇ ಎಂದು ಸೀತೆ ವಾದಿಸುತ್ತಾಳೆ.

ಸೀತಾಮಾತೆಯ ಸ೦ಧಿಗ್ಧತೆ

ಹನುಮನು ಇ೦ತಹ ಮಾತುಗಳನ್ನಾಡಿದಾಗ, ಸೀತಾಮಾತೆಯು ಈಗ ನಿಜಕ್ಕೂ ಸ೦ಧಿಗ್ಧಕ್ಕೀಡಾಗುತ್ತಾಳೆ. ಅ೦ತಹ ಒ೦ದು ಪವಿತ್ರ ಬೇಡಿಕೆಯನ್ನು ಹೇಗೆ ತಿರಸ್ಕರಿಸುವುದೆ೦ದು ಆಕೆಗೆ ತೋಚದಾಗುತ್ತದೆ. ಹನುಮನು ಮು೦ದಿರಿಸಿರುವ ವಾದಕ್ಕೆ ಪ್ರತಿವಾದವಾಗಿ ಬಳಸಲು ಯಾವ ಹೇಳಿಕೆಯೂ ಅಲ್ಲಿ ಬಾಕಿ ಉಳಿದಿರುವುದಿಲ್ಲ. ಹೀಗಾಗಿ, ಆಕೆಯು ಅನ್ಯ ಮಾರ್ಗದ ಕುರಿತು ಚಿ೦ತಿಸತೊಡಗುತ್ತಾಳೆ.

ರಾಮನ ಬಗ್ಗೆ ಕಾಡಿತ್ತು ಚಿಂತೆ

ಪರಮ ವೀರ ರಾಮನ ಪತ್ನಿಗೆ ಮತ್ತೊಂದು ವಿಚಾರ ಕಾಡ ತೊಡಗಿತ್ತು. ಮಹಾರಾಜನಾಗಿದ್ದ ರಾಮ ಸ್ವತಃ ತನ್ನ ಪತ್ನಿಯನ್ನು ರಕ್ಷಿಸಲು ಪರರನ್ನು ಕಳುಹಿಸಿದ್ದಾನೆ ಎಂಬ ಕೆಟ್ಟ ಹೆಸರು ಬರಬಹುದು ಎಂದು ಯೋಚಿಸಿದ ಸೀತೆ ಹನುಮನ ಜೊತೆ ಬರಲು ನಿರಾಕರಿಸಿದ್ದಳು.

ಹನುಮನ ಒಪ್ಪಿಗೆ

ಸೀತೆಯು ತನ್ನ ತರ್ಕಬದ್ಧ ವಾದಸರಣಿಯನ್ನು ಈ ರೀತಿಯಾಗಿ ಮು೦ದಿರಿಸಿದಾಗ, ಹನುಮನು ಒಪ್ಪಿಕೊಳ್ಳುತ್ತಾನೆ. ಹಾಗೆ ಆಕೆಯ ನೆನಪಿಗಾಗಿ ಸೀತೆಯಿಂದ ಬಂಗಾರದ ಉಂಗುರವನ್ನು ಪಡೆದು ಅಶೋಕವನದಿಂದ ತೆರಳುತ್ತಾನೆ. ಭಗವಾನ್ ಶ್ರೀ ರಾಮಚ೦ದ್ರನಿಗೆ ಆಕೆಯ ಸ೦ದೇಶವನ್ನು ಅತೀ ಶೀಘ್ರವಾಗಿ ತಲುಪಿಸುವುದಾಗಿ ಆಕೆಗೆ ತಿಳಿಸುತ್ತಾನೆ.

ಸೀತೆಯ ಬಹುಮಾನ ನಿರಾಕರಿಸಿದ ಹನುಮ

ಸೀತೆಯನ್ನು ರಾವಣನಿಂದ ಕರೆತಂದ ಬಳಿಕ ಸೀತೆ ಹನುಮನಿಗೆ ಮುತ್ತಿನ ಹಾರವನ್ನು ಉಡುಗೊರೆಯಾಗಿ ನೀಡುತ್ತಾಳೆ. ಆದರೆ ಹನುಮ ಈ ಉಡುಗೊರೆಯನ್ನು ನಿರಾಕರಿಸಿದನಂತೆ. ಮುತ್ತಿನ ಹಾರದಲ್ಲಿ ಶ್ರೀರಾಮನ ಹೆಸರಿಲ್ಲ ಎಂಬ ಕಾರಣಕ್ಕೆ ಆತ ಉಡುಗೊರೆ ನಿರಾಕರಿಸಿದನಂತೆ. ರಾಮನ ಮೇಲೆ ಹನುಮನ ಭಕ್ತಿ ಅದಮ್ಯವಾಗಿತ್ತು ಮತ್ತು ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಇದನ್ನರಿತ ರಾಮನು ಹನುಮಂತನಿಗೆ ಉತ್ತಮ ಆರೋಗ್ಯವನ್ನು ಆಶೀರ್ವದಿಸುತ್ತಾರೆ.

English summary

Why Didn't Hanuma Bring Sita From Lanka? Do You Know This Amazing Story?

We all know that Hanuman met Sita in Ashokavana and got a ring from her. But why did he leave Sita there? Why did Sita not agree even though he asked as a pariah. All we know is that Sita said that Lord Rama should come and take her. But there is a story behind it.
Story first published: Thursday, December 28, 2023, 19:00 [IST]
X
Desktop Bottom Promotion