Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಬಾಹ್ಯಾಕಾಶಕ್ಕೆ ಹಂಸ ತೆಗೆದುಕೊಂಡು ಹೋಗಿದ್ಯಾಕೆ? ಶುಭಾಂಶು ಶುಕ್ಲಾ ಹೇಳಿದ್ದೇನು ಗೊತ್ತಾ?
ಆಕ್ಸಿಯಮ್ -4 ಮಿಷನ್ ಯಶಸ್ವಿ ಉಡಾವಣೆಯೊಂದಿಗೆ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದಾರೆ. ಅವರೊಂದಿಗೆ ಮೂವರು ಇನ್ನಿತರೆ ಗಗನಯಾತ್ರಿಗಳು ಕೂಡ ಬಾಹ್ಯಾಕಾಶ ನಿಲ್ದಾಣ ಸೇರಿದ್ದಾರೆ. ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿ ಹಾರಾಟದ ನಂತರ ಶುಭಾಂಶು ಶುಕ್ಲಾ ತಮ್ಮ ಮೊದಲ ಸಂದೇಶ ಹಂಚಿಕೊಂಡಿರು.
ಬಾಹ್ಯಾಕಾಶದಲ್ಲಿನ ತಮ್ಮ ಮೊದಲ ಅನುಭವವನ್ನು ಅವರು ಹಂಚಿಕೊಂಡಿರುವ ವಿಡಿಯೋ ಇದಾಗಿದೆ. ಈ ಫಾಲ್ಕನ್ 9 ರಾಕೆಟ್ ನಿಗಧಿಗಿಂತ 40 ನಿಮಿಷ ಮೊದಲೇ ಬಾಹ್ಯಾಕಾಶ ತಲುಪಿತ್ತು. ನಾಲ್ವರು ಗಗನಯಾತ್ರಿಗಳು ಯಶಸ್ವಿಯಾಗಿ ನಿಲ್ದಾಣ ತಲುಪಿದರು. ಈ ಮೂಲಕ ಭಾರತ ಕೂಡ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿತು.

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಗಿತ್ತು. ಪುತ್ರ ಶುಭಾಂಶು ಶುಕ್ಲಾರ ಗಗನಯಾನ ಕ್ಷಣವನ್ನು ಅವರ ಪೋಷಕರು, ಪತ್ನಿ ಕಣ್ತುಂಬಿಕೊಂಡರು. ಹಾಗೆ ಆವರು ಬಾಹ್ಯಾಕಾಶದಿಂದ ಮೊದಲ ಸಂದೇಶ ರವಾನಿಸಿರು. ಅಚ್ಚರಿಯಾಗಿ ಅವರು ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ತಂಡದ ನಾಯಕನನ್ನು ಪರಿಚಯಿಸುವುದು ನೋಡಬಹುದು.
ನಾನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ ಕ್ಷಣ... ಈ ಸಿಬ್ಬಂದಿ ನನಗೆ ತುಂಬಾ ಸ್ವಾಗತಾರ್ಹ ಭಾವನೆ ಮೂಡಿಸಿದ್ದಾರೆ. ನೀವು ಅಕ್ಷರಶಃ ನಮಗಾಗಿ ನಿಮ್ಮ ಮನೆಯ ಬಾಗಿಲುಗಳನ್ನು ತೆರೆದಂತೆ ಭಾಸವಾಯಿತು. ಈ ಸ್ವಾಗತ ನಿಜಕ್ಕೂ ಅದ್ಭುತವಾಗಿದೆ ಎಂದು ಅವರು ಬಾಹ್ಯಾಕಾಶ ನಿಲ್ದಾಣ ತಲುಪಿ ವಿಡಿಯೋ ಮೂಲಕ ಸಂದೇಶ ರವಾನಿಸಿದರು.
ಹಾಗೆ ಶುಭಾಂಶು ಶುಕ್ಲಾ ಅವರು ಬಿಳಿ ಬಣ್ಣದ ಹಂಸವೊಂದನ್ನು ಪರಿಚಯಿಸುವುದು ನೋಡಬಹುದು. ಅದರಲ್ಲೂ ಹಂಸವು ಏಕೆ ಮುಖ್ಯ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. 'ಇದು ನಿಜವಾಗಿಯೂ ಇಲ್ಲಿ ಮುದ್ದಾಗಿ ಕಾಣಿಸುತ್ತಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಮಗೆ ಹಂಸ ಬಹಳ ಮುಖ್ಯವಾಗಿದೆ. ಹಂಸ ಬುದ್ಧಿವಂತಿಕೆಯನ್ನು ಸಂಕೇತಿಸಲಿದೆ. ಇದು ಯಾವ ವಿಚಾರಗಳ ಮೇಲೆ ಗಮನ ಹರಿಸಬೇಕು? ಯಾವುದರ ಮೇಲೆ ಗಮನಹರಿಸಬಾರದು ಎಂಬುದನ್ನು ಗ್ರಹಿಸುವ ಸಾಮರ್ಥ್ಯ ಸಹ ಹೊಂದಿದೆ' ಎಂದು ಅವರು ಹೇಳಿದ್ದಾರೆ.
ಹಾಗೆ ಭಾರತ ಮಾತ್ರವಲ್ಲ ಹಂಸವು ಹಂಗೇರಿ, ಪೋಲೆಂಡ್ನಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಇದು ಕಾಕತಾಳಿಯ ಅಲ್ಲ, ಇದು ಕೂಡ ನಮ್ಮ ಹೃದಯದಲ್ಲಿ ನೆಲೆಸಲಿದೆ ಎಂದಿದ್ದಾರೆ. ಇದನ್ನು ಝೀರೋ ಜೀ ಸೂಚಕವಾಗಿ ಮಾತ್ರವೇ ನಾವು ನೋಡುತ್ತಿಲ್ಲ ಎಂದಿದ್ದಾರೆ. ಈ ಹಂಸದ ಹೆಸರು ಜಾಯ್ ಎಂದು ಅವರು ಹೇಳಿಕೊಂಡಿದ್ದಾರೆ.
ಝೀರೋ ಜೀ ಸೂಚಕ ಎಂದರೆ ಬಾರವಿಲ್ಲದ, ಬಹಳ ಹಗುರವಾದ ಆಟಿಕೆಯಾಗಿದೆ. ಹಿಂದಿನಿಂದಲೂ ಬಾಹ್ಯಾಕಾಶ ಯಾನಿಗಳು ಈ ರೀತಿ ತೂಕವಿಲ್ಲದ ಆಟಿಕೆಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ. ಸದ್ಯ ಈಗ ಈ ಹಂಸವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲಾಗಿದೆ.
ಹಂಸವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?
ಭಾರತ, ಹಂಗೇರಿ, ಪೋಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುವ ಆಕ್ಸಿಯಮ್ -4 ಸಿಬ್ಬಂದಿ ಹಂಸವನ್ನೇ ತಮ್ಮ ಝೀರೋ ಜಿ ಸೂಚಕವಾಗಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಇದು ಬುದ್ದಿವಂತಿಕೆಯ ಹಾಗೆ ಹಿಂದೂ ಪುರಾಣಗಳ ಪ್ರಕಾರ ಸರಸ್ವತಿಯ ವಾಹನವೆಂದು ಪರಿಗಣಿಸಲಾಗುತ್ತದೆ. ಹಾಗೆ ಉಳಿದಂತೆ ಹಂಗೇರಿಯನ್ ಸಂಸ್ಕೃತಿ ಹಾಗೂ ಪೋಲೆಂಡ್ ಸಂಸ್ಕೃತಿಯಲ್ಲೂ ಕೂಡ ಹಂಸವನ್ನು ಪ್ರಮುಖ ಪಕ್ಷಿಯನ್ನಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಹ್ಯಾಕಾಶ ತಲುಪಿದ ಭಾರತೀಯ ತಿಂಡಿ
ಇನ್ನು ಇದೇ ಮೊದಲ ಬಾರಿಗೆ ಬಾಹ್ಯಾಕಾಶ ತಲುಪಿದ ಭಾರತೀಯ ಶುಭಾಂಶು ಶುಕ್ಲಾ ಅಲ್ಲಿ ಭಾರತೀಯ ತಿಂಡಿಯನ್ನು ಕೂಡ ತೆಗೆದುಕೊಂಡು ಹೋಗಿ ಹಂಚಿದ್ದಾರೆ. ಅವರು ಕ್ಯಾರೆಟ್ ಹಲ್ವಾ, ಮೂಂಗ್ ದಾಲ್ ಹಲ್ವಾ, ಮಾವಿನ ಕಾಯಿಯ ಮಕರ ಸೇರಿ ಜನಪ್ರಿಯ ಸಿಹಿ ತಿಂಡಿಯನ್ನು ತೆಗೆದುಕೊಂಡು ಹೋಗಿ ಹಂಚಿಕೊಂಡು ಸವಿದಿದ್ದಾರೆ.



Click it and Unblock the Notifications