Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಬಾಹ್ಯಾಕಾಶಕ್ಕೆ ಹಂಸ ತೆಗೆದುಕೊಂಡು ಹೋಗಿದ್ಯಾಕೆ? ಶುಭಾಂಶು ಶುಕ್ಲಾ ಹೇಳಿದ್ದೇನು ಗೊತ್ತಾ?
ಆಕ್ಸಿಯಮ್ -4 ಮಿಷನ್ ಯಶಸ್ವಿ ಉಡಾವಣೆಯೊಂದಿಗೆ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದಾರೆ. ಅವರೊಂದಿಗೆ ಮೂವರು ಇನ್ನಿತರೆ ಗಗನಯಾತ್ರಿಗಳು ಕೂಡ ಬಾಹ್ಯಾಕಾಶ ನಿಲ್ದಾಣ ಸೇರಿದ್ದಾರೆ. ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿ ಹಾರಾಟದ ನಂತರ ಶುಭಾಂಶು ಶುಕ್ಲಾ ತಮ್ಮ ಮೊದಲ ಸಂದೇಶ ಹಂಚಿಕೊಂಡಿರು.
ಬಾಹ್ಯಾಕಾಶದಲ್ಲಿನ ತಮ್ಮ ಮೊದಲ ಅನುಭವವನ್ನು ಅವರು ಹಂಚಿಕೊಂಡಿರುವ ವಿಡಿಯೋ ಇದಾಗಿದೆ. ಈ ಫಾಲ್ಕನ್ 9 ರಾಕೆಟ್ ನಿಗಧಿಗಿಂತ 40 ನಿಮಿಷ ಮೊದಲೇ ಬಾಹ್ಯಾಕಾಶ ತಲುಪಿತ್ತು. ನಾಲ್ವರು ಗಗನಯಾತ್ರಿಗಳು ಯಶಸ್ವಿಯಾಗಿ ನಿಲ್ದಾಣ ತಲುಪಿದರು. ಈ ಮೂಲಕ ಭಾರತ ಕೂಡ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿತು.

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಗಿತ್ತು. ಪುತ್ರ ಶುಭಾಂಶು ಶುಕ್ಲಾರ ಗಗನಯಾನ ಕ್ಷಣವನ್ನು ಅವರ ಪೋಷಕರು, ಪತ್ನಿ ಕಣ್ತುಂಬಿಕೊಂಡರು. ಹಾಗೆ ಆವರು ಬಾಹ್ಯಾಕಾಶದಿಂದ ಮೊದಲ ಸಂದೇಶ ರವಾನಿಸಿರು. ಅಚ್ಚರಿಯಾಗಿ ಅವರು ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ತಂಡದ ನಾಯಕನನ್ನು ಪರಿಚಯಿಸುವುದು ನೋಡಬಹುದು.
ನಾನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ ಕ್ಷಣ... ಈ ಸಿಬ್ಬಂದಿ ನನಗೆ ತುಂಬಾ ಸ್ವಾಗತಾರ್ಹ ಭಾವನೆ ಮೂಡಿಸಿದ್ದಾರೆ. ನೀವು ಅಕ್ಷರಶಃ ನಮಗಾಗಿ ನಿಮ್ಮ ಮನೆಯ ಬಾಗಿಲುಗಳನ್ನು ತೆರೆದಂತೆ ಭಾಸವಾಯಿತು. ಈ ಸ್ವಾಗತ ನಿಜಕ್ಕೂ ಅದ್ಭುತವಾಗಿದೆ ಎಂದು ಅವರು ಬಾಹ್ಯಾಕಾಶ ನಿಲ್ದಾಣ ತಲುಪಿ ವಿಡಿಯೋ ಮೂಲಕ ಸಂದೇಶ ರವಾನಿಸಿದರು.
ಹಾಗೆ ಶುಭಾಂಶು ಶುಕ್ಲಾ ಅವರು ಬಿಳಿ ಬಣ್ಣದ ಹಂಸವೊಂದನ್ನು ಪರಿಚಯಿಸುವುದು ನೋಡಬಹುದು. ಅದರಲ್ಲೂ ಹಂಸವು ಏಕೆ ಮುಖ್ಯ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. 'ಇದು ನಿಜವಾಗಿಯೂ ಇಲ್ಲಿ ಮುದ್ದಾಗಿ ಕಾಣಿಸುತ್ತಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಮಗೆ ಹಂಸ ಬಹಳ ಮುಖ್ಯವಾಗಿದೆ. ಹಂಸ ಬುದ್ಧಿವಂತಿಕೆಯನ್ನು ಸಂಕೇತಿಸಲಿದೆ. ಇದು ಯಾವ ವಿಚಾರಗಳ ಮೇಲೆ ಗಮನ ಹರಿಸಬೇಕು? ಯಾವುದರ ಮೇಲೆ ಗಮನಹರಿಸಬಾರದು ಎಂಬುದನ್ನು ಗ್ರಹಿಸುವ ಸಾಮರ್ಥ್ಯ ಸಹ ಹೊಂದಿದೆ' ಎಂದು ಅವರು ಹೇಳಿದ್ದಾರೆ.
ಹಾಗೆ ಭಾರತ ಮಾತ್ರವಲ್ಲ ಹಂಸವು ಹಂಗೇರಿ, ಪೋಲೆಂಡ್ನಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಇದು ಕಾಕತಾಳಿಯ ಅಲ್ಲ, ಇದು ಕೂಡ ನಮ್ಮ ಹೃದಯದಲ್ಲಿ ನೆಲೆಸಲಿದೆ ಎಂದಿದ್ದಾರೆ. ಇದನ್ನು ಝೀರೋ ಜೀ ಸೂಚಕವಾಗಿ ಮಾತ್ರವೇ ನಾವು ನೋಡುತ್ತಿಲ್ಲ ಎಂದಿದ್ದಾರೆ. ಈ ಹಂಸದ ಹೆಸರು ಜಾಯ್ ಎಂದು ಅವರು ಹೇಳಿಕೊಂಡಿದ್ದಾರೆ.
ಝೀರೋ ಜೀ ಸೂಚಕ ಎಂದರೆ ಬಾರವಿಲ್ಲದ, ಬಹಳ ಹಗುರವಾದ ಆಟಿಕೆಯಾಗಿದೆ. ಹಿಂದಿನಿಂದಲೂ ಬಾಹ್ಯಾಕಾಶ ಯಾನಿಗಳು ಈ ರೀತಿ ತೂಕವಿಲ್ಲದ ಆಟಿಕೆಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ. ಸದ್ಯ ಈಗ ಈ ಹಂಸವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲಾಗಿದೆ.
ಹಂಸವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?
ಭಾರತ, ಹಂಗೇರಿ, ಪೋಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುವ ಆಕ್ಸಿಯಮ್ -4 ಸಿಬ್ಬಂದಿ ಹಂಸವನ್ನೇ ತಮ್ಮ ಝೀರೋ ಜಿ ಸೂಚಕವಾಗಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಇದು ಬುದ್ದಿವಂತಿಕೆಯ ಹಾಗೆ ಹಿಂದೂ ಪುರಾಣಗಳ ಪ್ರಕಾರ ಸರಸ್ವತಿಯ ವಾಹನವೆಂದು ಪರಿಗಣಿಸಲಾಗುತ್ತದೆ. ಹಾಗೆ ಉಳಿದಂತೆ ಹಂಗೇರಿಯನ್ ಸಂಸ್ಕೃತಿ ಹಾಗೂ ಪೋಲೆಂಡ್ ಸಂಸ್ಕೃತಿಯಲ್ಲೂ ಕೂಡ ಹಂಸವನ್ನು ಪ್ರಮುಖ ಪಕ್ಷಿಯನ್ನಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಹ್ಯಾಕಾಶ ತಲುಪಿದ ಭಾರತೀಯ ತಿಂಡಿ
ಇನ್ನು ಇದೇ ಮೊದಲ ಬಾರಿಗೆ ಬಾಹ್ಯಾಕಾಶ ತಲುಪಿದ ಭಾರತೀಯ ಶುಭಾಂಶು ಶುಕ್ಲಾ ಅಲ್ಲಿ ಭಾರತೀಯ ತಿಂಡಿಯನ್ನು ಕೂಡ ತೆಗೆದುಕೊಂಡು ಹೋಗಿ ಹಂಚಿದ್ದಾರೆ. ಅವರು ಕ್ಯಾರೆಟ್ ಹಲ್ವಾ, ಮೂಂಗ್ ದಾಲ್ ಹಲ್ವಾ, ಮಾವಿನ ಕಾಯಿಯ ಮಕರ ಸೇರಿ ಜನಪ್ರಿಯ ಸಿಹಿ ತಿಂಡಿಯನ್ನು ತೆಗೆದುಕೊಂಡು ಹೋಗಿ ಹಂಚಿಕೊಂಡು ಸವಿದಿದ್ದಾರೆ.



Click it and Unblock the Notifications