Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾನ್ ಬುದ್ಧಿವಂತ ಚಾಣಕ್ಯನನ್ನು ಕೊಂದವರು ಯಾರು? ಆತನ ಹಿಂದೆ ಪಿತೂರಿ ಮಾಡಿದ್ಯಾಕೆ?
ಚಾಣಕ್ಯ ಪ್ರಾಚೀನ ಭಾರತದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಅವರ ರಾಜತಾಂತ್ರಿಕತೆ, ಆರ್ಥಿಕ ನೀತಿಗಳು ಮತ್ತು ಸಲಹೆಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅವರ ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿ ಅವರ ಕೀರ್ತಿಯನ್ನು ಕುಗ್ಗದಂತೆ ಕಾಪಾಡುವ ಪುಸ್ತಕಗಳು.
ತನ್ನ ಜಾಣ್ಮೆಯಿಂದ ಬೀದಿ ಹುಡುಗನೊಬ್ಬನನ್ನು ರಾಜನನ್ನಾಗಿ ಮಾಡಿ ದೊಡ್ಡ ಸಾಮ್ರಾಜ್ಯವನ್ನೇ ಸೃಷ್ಟಿಸಿದ. ಅನೇಕ ಗೌರವಗಳ ಆತ ಸಂಪಾದಿಸಿದ, ಆದರೆ ಅವರ ಸಾವು ಇನ್ನೂ ರಹಸ್ಯಗಳಿಂದ ತುಂಬಿದೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರ ಸಾವಿನ ರಹಸ್ಯವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಅವರ ಸಾವು ಹೇಗೆ ಸಂಭವಿಸಿರಬಹುದು ಎಂಬುದರ ಕುರಿತು ಎರಡು ವಿಭಿನ್ನ ಅಭಿಪ್ರಾಯಗಳಿವೆ. ಅವು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಚಾಣಕ್ಯನ ಸಾವು
ಚಾಣಕ್ಯನ ಸಾವಿನ ಹಿಂದೆ ಎರಡು ಆವೃತ್ತಿಗಳಿವೆ, ಒಂದರಲ್ಲಿ ಅವನು ಹಸಿವಿನಿಂದ ಸತ್ತನೆಂದು ಹೇಳಿದರೆ, ಇನ್ನೊಂದು ಅವನ ಸುತ್ತ ಹೆಣೆದ ಪಿತೂರಿಯಿಂದ ಅವನು ಕೊಲ್ಲಲ್ಪಟ್ಟನೆಂದು ಹೇಳುತ್ತದೆ. ಈ ಎರಡೂ ವಿಚಾರಗಳು ಆತನ ಸಾವಿಗೆ ಸಂಬಂಧಿಸಿರುವ ವೃತ್ತಾಂತಗಳಾಗಿವೆ.
ಚಾಣಕ್ಯನ ಉತ್ಸಾಹ
ನಂದಾದಾಸರ ಆಸ್ಥಾನದಲ್ಲಿ ತನಗೆ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬೀದಿ ಬೀದಿಗಳಲ್ಲಿ ಅಲೆದಾಡುತ್ತಿದ್ದ ಚಂದ್ರ ಗುಪ್ತನನ್ನು ದೊಡ್ಡ ಸಾಮ್ರಾಜ್ಯದ ರಾಜನನ್ನಾಗಿ ಮಾಡಿದರು. ಚಾಣಕ್ಯನ ಸಮರ್ಥ ಮಾರ್ಗದರ್ಶನದಲ್ಲಿ ಚಂದ್ರ ಗುಪ್ತನು ಮಹಾನ್ ಚಕ್ರವರ್ತಿ ಮತ್ತು ರಾಷ್ಟ್ರ ನಿರ್ಮಾತೃ ಎಂದು ಸಾಬೀತುಪಡಿಸಿದನು.
ಪಿತೂರಿ
ಚಾಣಕ್ಯ ಬಿಂದುಸಾರನ ಮುಖ್ಯ ಸಲಹೆಗಾರನಾಗಿ ಮುಂದುವರಿದ. ಬಿಂದುಸಾರನೊಂದಿಗೆ ಚಾಣಕ್ಯನ ಸಂಬಂಧವನ್ನು ಸಹಿಸಲಾಗದೆ, ಅವನ ಮತ್ತು ರಾಜನ ನಡುವೆ ದ್ವೇಷವನ್ನು ಉಂಟುಮಾಡಲು ಭಯಾನಕ ಸಂಚು ರೂಪಿಸಲಾಯಿತು. ಬಿಂದುಸಾರನ ಮಂತ್ರಿ ಸುಬಂದು ಈ ಷಡ್ಯಂತ್ರದ ಸೂತ್ರಧಾರ. ತನ್ನ ತಾಯಿಯನ್ನು ಕೊಂದವನು ಚಾಣಕ್ಯ ಎಂದು ಬಿಂದುಸಾರನನ್ನು ನಂಬುವಂತೆ ಮಾಡಿದನು. ಇದರಿಂದ ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು.
ಹಸಿವಿನಿಂದ ಸಾವು
ಚಾಣಕ್ಯನಿಗೆ ತಾನು ತುಂಬಾ ಪ್ರೀತಿಸುತ್ತಿದ್ದ ಬಿಂದುಸಾರನ ನಿರ್ಲಕ್ಷ್ಯವನ್ನು ಸಹಿಸಲಾಗಲಿಲ್ಲ. ಆದ್ದರಿಂದ, ಅವನು ಅರಮನೆಯನ್ನು ತೊರೆದು ಕಾಡಿಗೆ ತೆರಳಿದ್ದನು. ಈ ವೇಳೆ ಆತನಿಗೆ ಆಹಾರ ಸಿಗದೆ ಹಸಿವಿನಿಂದ ಸತ್ತನು ಎಂಬ ಮಾತಿದೆ.
ಆಹಾರದಲ್ಲಿ ವಿಷ
ಬಿಂದುಸಾರನ ತಂದೆ ಚಂದ್ರಗುಪ್ತನಿಗೆ ಹಲವು ಶತ್ರುಗಳಿದ್ದರು. ಆತನ ಸಾಯಿಸಲು ಆಹಾರದಲ್ಲಿ ವಿಷ ಬೆರಸುತ್ತಾರೆ ಎಂದು ಚಾಣಕ್ಯನಿಗೆ ಅನುಮಾನವಿತ್ತು. ಅದಕ್ಕೆ ಚಾಣಕ್ಯ ಚಂದ್ರಗುಪ್ತ ಸೇವಿಸುವ ಆಹಾರದಲ್ಲಿ ಸ್ವಲ್ಪ ಸ್ವಲ್ಪವಾಗಿ ವಿಷ ಬೆರಸಲು ಮುಂದಾಗಿದ್ದ. ಹೀಗೆ ಮಾಡುವುದರಿಂದ ಆತನ ಶರೀರ ವಿಷವನ್ನು ತಡೆದುಕೊಳ್ಳುವ ಶಕ್ತಿ ಪಡೆಯಲಿದೆ ಎಂದು ಆತ ನಂಬಿದ್ದ. ಆದರೆ ಒಂದು ದಿನ ಚಂದ್ರಗುಪ್ತನಿಗೆಂದು ಇಟ್ಟಿದ್ದ ಆಹಾರವನ್ನು ಗರ್ಭಿಣಿಯಾಗಿದ್ದ ರಾಣಿ ಸೇವಿಸಿ ಪ್ರಾಣಬಿಟ್ಟಳು.
ಈ ಸತ್ಯ ಬಿಂದುಸಾರನಿಗೆ ತಿಳಿದಾಗ ತನ್ನ ದೊಡ್ಡ ತಪ್ಪಿನ ಅರಿವಾಗಿತ್ತು. ತಾಯಿಯ ಸಾವಿಗೆ ಚಾಣಕ್ಯ ಕಾರಣವಲ್ಲ ಎಂದು ತಿಳಿದು ವಾಪಾಸು ಅರಮನೆಗೆ ಕರೆತರಲು ಮುಂದಾಗಿದ್ದ. ಚಾಣಕ್ಯ ಹಿಂದೆ ಬರಲು ನಿರಾಕರಿಸಿದನು ಮತ್ತು ಕಾಡಿನಲ್ಲೇ ಮುಂದುವರೆದನು. ಹೀಗೆ ಕಾಡಿನಲ್ಲಿ ಅಲೆಯುವಾಗ ಆತ ಪ್ರಾಣಿಗಳ ಬಾಯಿಗೋ ಇಲ್ಲ ಹಸಿವಿನಿಂದಲೋ ಪ್ರಾಣ ಬಿಟ್ಟಿದ್ದಾನೆ ಎಂದು ಒಂದು ಕಥೆ ಹೇಳುತ್ತದೆ.
ಮತ್ತೊಂದು ಸಿದ್ಧಾಂತವೆಂದರೆ ಸುಬಂದು ಚಾಣಕ್ಯನನ್ನು ಜೀವಂತವಾಗಿ ಸುಟ್ಟುಹಾಕಿದನೆಂದು ಹೇಳಲಾಗುತ್ತದೆ. ಬಿಂದುಸಾರನು ಸುಬಂದುವಿನ ದುಷ್ಟ ಯೋಜನೆಗಳನ್ನು ತಿಳಿದ ನಂತರ ಅವನನ್ನು ಕೊಂದನೆಂದು ಹೇಳಲಾಗುತ್ತದೆ. ಆದಾಗ್ಯೂ, ಚಾಣಕ್ಯನ ಸಾವಿನ ಸುತ್ತಲಿನ ನಿಗೂಢ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.



Click it and Unblock the Notifications